ಗುತ್ತಿಗೆ ನೌಕರರ ಗೋಳು ಭದ್ರತೆ,ವೇತನ ಕೇಳುವುದೇ ತಪ್ಪು!

ಆಸ್ಫತ್ರೆ ವೈದ್ಯೇತರ
ಗುತ್ತಿಗೆ ನೌಕರರ ಗೋಳು
ಭದ್ರತೆ,ವೇತನ ಕೇಳುವುದೇ ತಪ್ಪು!
ತಾಲೂಕಾ ಆಸ್ಫತ್ರೆಗಳಲ್ಲಿ ಸ್ವಚ್ಛತೆ, ಇನ್ನಿತರೆ ಕೆಲಸಗಳಿಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವರ ಗೋಳು ಹೇಳತೀರದಾಗಿದೆ.ಆಸ್ಫತ್ರೆ ಸ್ವಚ್ಛತೆ ಇನ್ನಿತರ ಕೆಳದರ್ಜೇಯ ಕೆಲಸ ಮಾಡುವ ಈ ನೌಕರರ ಮೇಲೆ ದಬ್ಬಾಳಿಕೆ ಹಿಂಸೆ ನಡೆದರೂ ಕೇಳುವವರಿಲ್ಲದ ಸ್ಥಿತಿ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಾ ಸರ್ಕಾರಿ ಆಸ್ಫತ್ರೆಗಳಲ್ಲಿರುವ ಈ ಕಾರ್ಮಿಕರು ವೇತನ ಕೇಳುವಂತಿಲ್ಲ. ತಮ್ಮ ಪಿ.ಎಫ್. ನೌಕರರ ಜೀವವಿಮೆ ವ್ಯವಸ್ಥೆ ಏನೂ ಪಡೆಯದ ಜೀತದ ಆಳುಗಳಂತೆ ಇವರನ್ನು ನಡೆಸಿಕೊಳ್ಳಲಾಗುತ್ತಿದೆ. ವಿದ್ಯಾವಂತರಲ್ಲದ, ಆರ್ಥಿಕ ಸ್ಥಿತಿ ಉತ್ತಮವಾಗಿರದ ಈ ನೌಕರರು ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಾರಾದರೂ ಅವರಿಗೆ ಅವರ ಹಕ್ಕು, ಸೌಲಭ್ಯಗಳ ಅರಿವಿಲ್ಲ. ಅವರ ಕೆಲಸ ಪಡೆಯುವ ಆಸ್ಫತ್ರೆಗಳು ಕೂಡಾ ಅವರ ಹಿತಾಸಕ್ತಿ ಗಮನಿಸುತ್ತಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ವೇತನ ದೊರೆಯದ ತೊಂದರೆ ಮತ್ತು ಸೇವಾ ಭದ್ರತೆ ಬಗ್ಗೆ ಮುಷ್ಕರ ನಡೆಸಿದ ಈ ಡಿ. ದರ್ಜೆಯ ನೌಕರರ ಅಹವಾಲು ಕೇಳುವವರಿರಲಿಲ್ಲ. ಈ ಸ್ಥಿತಿ ಬರೀ ಸಿದ್ಧಾಪುರ ತಾಲೂಕಾಆಸ್ಪತ್ರೆಯ ದುಸ್ಥಿತಿಯಲ್ಲ ಇಡೀ ಜಿಲ್ಲೆಯಲ್ಲಿ ಕಳೆದ ಅವಧಿಗೆ ಹೊರಗುತ್ತಿಗೆ ನೌಕರರನ್ನು ಪೂರೈಸಿದ್ದ ಕುಮಟಾ ಮೂಲದ ಮಧುರಾ ಎಂಟರ್ ಪ್ರೈಸಸ್ ಕಳೆದ ನಾಲ್ಕು ತಿಂಗಳುಗಳಿಂದ ಈ ಸಿಬ್ಬಂದಿಗಳಿಗೆ ವೇತನ ಪಾವತಿಸಿಲ್ಲ. ವಿಚಿತ್ರವೆಂದರೆ ಸರ್ಕಾರ ಈ ಮಧುರಾ ಎಂಟರ್ ಪ್ರೈಸಸ್ ಗೇ ಕಳೆದ 2018 ರ ಡಿಸೆಂಬರ್ ನಿಂದ ಹಣ ಪಾವತಿಸಿಲ್ಲ.
ಈ ನೌಕರರಿಗೆ ಪಿ.ಎಫ್. ಹಣ ಮತ್ತು ನೌಕರರ ವಿಮೆ ಹಣ ಪಾವತಿಸುವ ಬಗ್ಗೆ ದಾಖಲೆ ಇದೆ. ಆದರೆ, ಈ ಹಣ ಸಂಬಂಧಿಸಿದ ಇಲಾಖೆಗಳಿಗೆ ಜಮಾ ಆಗಿದೆಯೋ ? ಅದರ ಪ್ರಯೋಜನ ಈ ನೌಕರರಿಗೆ ದೊರೆಯುವುದೋ ಇವ್ಯಾವ ವಿಚಾರಗಳ ತಿಳುವಳಿಕೆಯೂ ಈ ನೌಕರರಿಗಿಲ್ಲ!
ಈ ಬಗ್ಗೆ ಕೇಳಿದರೆ ಕೆಲಸದಿಂದ ತೆಗೆಯುವ ಹೆದರಿಕೆ. ಸರ್ಕಾರ ಮತ್ತು ಹೊರಗುತ್ತಿಗೆ ಏಜೆನ್ಸಿಗಳ ತಪ್ಪಿನಿಂದ ಸಿದ್ಧಾಪುರದಲ್ಲಿ 12 ಜನರು ತೊಂದರೆಗೊಳಗಾಗಿದ್ದರೆ ಜಿಲ್ಲೆಯಾದ್ಯಂತ ಇಂಥ ನೂರಾರು ನೌಕರರಿದ್ದಾರೆ ಎನ್ನಲಾಗುತ್ತಿದೆ. ಈ ಹೊರಗುತ್ತಿಗೆ ನೌಕರರ ಜವಾಬ್ಧಾರಿ, ಮೇಲ್ವಚಾರಣೆ ಜಿಲ್ಲಾ ಅರೋಗ್ಯಾಧಿಕಾರಿಗಳ ಜವಾಬ್ಧಾರಿ. ಆದರೆ ಈ ಅಧಿಕಾರಿ ಯಾರ ಪೋನ್ ಕರೆ ಎತ್ತುವ ಆಸಾಮಿಯಲ್ಲ! ಒಂದೆಡೆ ಸರ್ಕಾರದ ರಗಳೆ ಮತ್ತೊಂದೆಡೆ ಏಜೆನ್ಸಿಯ ಕಣ್ಣುಮುಚ್ಚಾಲೆ ಇವರೊಂದಿಗೆ ಡಿ.ಎಚ್.ಓ. ಚೆಲ್ಲಾಟ. ಇಂಥ ದುಸ್ಥಿತಿಯಲ್ಲಿ ಸಿಲುಕಿ ನಲುಗುತ್ತಿರುವ ಈ ನೌಕರರ ತೊಂದರೆಗೆ ಸ್ಫಂದಿಸಲು ಅಸಂಘಟಿತ ನೌಕರರ ಸಂಘಟನೆಗಳೂ ಇಲ್ಲ. ಇಂಥ ತೊಂದರೆ, ರಗಳೆಗಳಿಂದ ನಲುಗಿರುವ ಉತ್ತರ ಕನ್ನಡ ಜಿಲ್ಲೆಯ ತಾಲೂಕಾಆಸ್ಫತ್ರೆಗಳ ಹೊರಗುತ್ತಿಗೆ ನೌಕರರು ನಾಳೆ ಶುಕ್ರವಾರ ಜಿ.ಪಂ. ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ನಿನ್ನೆ ಸಿದ್ದಾಪುರದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಿದ್ದ ಈ ನೌಕರರು ಇಂದು ಕೆಲಸ ಮಾಡದೆ ಮುಷ್ಕರ ನಡೆಸಿದರು. ಮುಷ್ಕರ ಹಕ್ಕೊತ್ತಾಯ ಮಾಡಿದರೆ ಕೆಲಸದಿಂದ ತೆಗೆಯುತ್ತಾರೆ ಎಂದು ಹೆದರಿಸುತ್ತಿರುವ ಈ ಅಸಹಾಯಕ ನೌಕರರ ನೆರವಿಗೆ ಬರುವವರ್ಯಾರು? ಎನ್ನುವುದೇ ಪ್ರಶ್ನೆಯಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *