Laxman kodse writes – ಮನಕಲಕುವ ಕಥಾನಕ-ಬೊಪ್ಪ ನನ್ನನ್ನು ಕ್ಷಮಿಸು

ಉದಯಕುಮಾರ್ ಹಬ್ಬು ಅವರ `ಬೊಪ್ಪ ನನ್ನನ್ನು ಕ್ಷಮಿಸು’ ಶೀರ್ಷಿಕೆಯಿಂದಲೇ ಸೆಳೆದುಕೊಳ್ಳುವ ಕಥಾನಕ. ಆತ್ಮಕತೆಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುವ ಕೃತಿ. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದ ಶಾನುಭೋಗ ಹಬ್ಬು ಅವರ ತತ್ವನಿಷ್ಠ ಬದುಕು ಕರುಣಿಸಿದ ಬಡತನವನ್ನು ಎದುರಿಸಿ ಬದುಕು ಕಟ್ಟಿಕೊಂಡ ಸಾಹಸಗಾಥೆ. ತಂದೆ ತಾಯಿ ಅಣ್ಣ ತಮ್ಮಂದಿರ ತುಂಬು ಕುಟುಂಬದಲ್ಲಿದ್ದರೂ ಬಾಲ್ಯದ ದಿನಗಳನ್ನು ಕಂಡವರ ಮನೆಗಳಲ್ಲಿ ಕಳೆಯಬೇಕಾದ ಪರಿಸ್ಥಿತಿಯನ್ನು ಉದಯಕುಮಾರ್ ಎಳೆಎಳೆಯಾಗಿ ಬಿಡಿಸಿ ಕೊಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಪಟೇಲರ ಮನೆಯಲ್ಲಿ, ನಂತರದ ಮೂರು-ನಾಲ್ಕು ವರ್ಷಗಳನ್ನು ಉಮ್ಮಚ್ಚಿ, ಹಳದೀಪುರ, ಬರಬಳ್ಳಿ ಎಂಬಲ್ಲಿ ಅಜ್ಜಿಯ ಮನೆ, ಸಂಬಂಧವೇ ಇಲ್ಲದ ಇನ್ನೊಬ್ಬ ಭಟ್ಟರ ಮನೆಯಲ್ಲಿ ಕಳೆದ ದಿನಗಳು ಮನಸ್ಸನ್ನು ಕಲಕುವ ಹೃದಯಸ್ಪರ್ಶಿ ಘಟನೆಗಳಿಂದ ಕೂಡಿವೆ. ಓದಿನ ನಿಮಿತ್ತ ಒಂಬತ್ತನೆಯ ವರ್ಷದಲ್ಲಿಯೇ ಅಪ್ಪ, ಅವ್ವ, ಅಣ್ಣ ತಮ್ಮ ಇದ್ದ ತುಂಬು ಕುಟುಂಬದಿಂದ ದೂರ ಹೋಗಿ ಪರ ಊರಿನಲ್ಲಿ ಪರದೇಸಿಯಂತೆ ಐದು ವರ್ಷಗಳನ್ನು ಕಳೆದಿದ್ದ ನನಗೆ ಹಬ್ಬು ಅವರ ಅಂದಿನ ದಿನಗಳ ಕಷ್ಟ ಕಾರ್ಪಣ್ಯಗಳು ನನ್ನದೇ ಅನುಭವಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದವು (ಬಹು ವರ್ಷಗಳ ಹಿಂದೆ ಓದಿದ್ದ ನೊಬಡಿಸ್ ಚೈಲ್ಡ್ ಇಂಗ್ಲಿಷ್ ಕೃತಿಯ ನೆನಪು ಕೂಡ ಬಂದಿತು).

ಬಡತನದ ಕಾರಣ ಎದುರಾಗುತ್ತಿದ್ದ ಅಪಮಾನ, ಅವಗಣನೆ, ತಿರಸ್ಕಾರಗಳ ನಡುವೆಯೂ ಶಿಕ್ಷಣವನ್ನು ಕೈಬಿಡಲಾಗದ ದಿಟ್ಟ ಸಂಕಲ್ಪ, ಅದಕ್ಕಾಗಿ ನೇಗಿಲು ಹಿಡಿದು ಗೆಯ್ಯುವ, ಅಂಗಡಿಯಲ್ಲಿ ದುಡಿಯುವ ಪರಿಸ್ಥಿತಿಗೆ ಒಯ್ಯುವುದನ್ನು ಅನುಕಂಪಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ನಿರ್ಲಿಪ್ತ ಭಾವದಲ್ಲಿ ನಿರೂಪಿಸಿರುವುದು ಹಬ್ಬು ಅವರ ಬರವಣಿಗೆಯ ಹೆಚ್ಚುಗಾರಿಕೆ.
ಉದಯಕುಮಾರ್ ಅವರ ಸೋದರರಲ್ಲಿ ಒಬ್ಬರಾದ ಅರುಣ ಕುಮಾರ್ ಹಬ್ಬು ಪ್ರಜಾವಾಣಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು. ನನ್ನೊಂದಿಗೆ ಒಂದೇ ಪಾಳಿಯಲ್ಲಿ ಕೆಲಸ ಮಾಡಿದ ಸಜ್ಜನರು. ಆದ್ದರಿಂದ ಈ ಕಥಾನಕ ಹೆಚ್ಚು ಆಪ್ತವಾಗಿ ನನ್ನನ್ನು ತಟ್ಟಿದೆ. ಉದಯಕುಮಾರ್ ಅವರು ಫೇಸ್ ಬುಕ್ ನಲ್ಲಿ ಹಾಕಿದ್ದ ದಾರಾಶಿಕೊ ಕುರಿತ ಕಾದಂಬರಿಯನ್ನು ಕುತೂಹಲದಿಂದ ಗಮನಿಸಿದ್ದವನಿಗೆ ಈ ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತ್ತು. ಅವರ ಈ ಆತ್ಮಕತೆಯ ವಿವರಗಳು ಮನಸ್ಸನ್ನು ಕಲಕುವಷ್ಟು ಭಾವತೀವ್ರತೆಯಿಂದ ಕೂಡಿವೆ.

ಉಡುಪಿ ಜಿಲ್ಲೆಯ ಮುಂಡ್ಕೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಉದಯಕುಮಾರ್ ಹಬ್ಬು ಸದ್ಯ ಕಿನ್ನಿಗೋಳಿಯಲ್ಲಿ ನೆಲೆಸಿ ಓದು ಬರವಣಿಗೆಯಲ್ಲಿ ನಿರತರಾಗಿ, ವರ್ತಮಾನದ ಸಂಗತಿಗಳಿಗೆ ಆರೋಗ್ಯಕರವಾಗಿ ಸ್ಪಂದಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಳ್ಳೆಯ ಓದಿನ ಕೃತಿಯನ್ನು ನೀಡಿದ ಹಬ್ಬು ಅವರಿಗೆ ಅಭಿನಂದನೆಗಳು..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *