ಒಡೆದ ಚಿಗಳ್ಳಿ ಜಲಾಶಯ,ಹೆಚ್ಚಿದ ನೆರವಿನ ಮಹಾಪೂರ!

ಆರದ ದೀಪದಿಂದ ಪ್ರಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯ ಜಲಾಶಯ ಒಡೆದು ಸಾವಿರಾರು ಎಕರೆ ಬೆಳೆ ನಾಶವಾಗಿದೆ.
ಹುಬ್ಬಳ್ಳಿ-ಶಿರಸಿ ರಸ್ತೆಯ ಪಕ್ಕಕ್ಕಿರುವ ಚಿಗಳ್ಳಿಯ ಜಲಾಶಯ ಹಳೆ ಮಾದರಿಯ 40 ವರ್ಷಗಳ ಹಿಂದಿನ ಮಣ್ಣಿನ ನಿರ್ಮಾಣದ ಜಲಾಶಯ. ಈ ವರ್ಷದ ಮಳೆ ಈ ಜಲಾಶಯವನ್ನು ಒಡೆದಿದ್ದು ಇದರಿಂದ ಸಾವಿರಾರು ಎಕರೆ ಕೃಷಿಭೂಮಿಗೆ ಹಾನಿಯಾಗಿದ್ದರೆ, ಈ ಜಲಾಶಯದ ನೀರನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ ಜನಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂಡಗೋಡಿನ ನಾಲ್ಕೈದು ಜಲಾಶಯಗಳಲ್ಲಿ ಚಿಗಳ್ಳಿ ಜಲಾಶಯ ಒಡೆದಿದ್ದರೆ, ಈ ಜಲಾಶಯದಿಂದ 50-60 ಕಿ,ಮೀ ದೂರದ ಸಿದ್ಧಾಪುರದ ಭಾನ್ಕಳಿಯಲ್ಲಿ ಭೂಮಿಯೇ ಬಾಯಿತೆರದಿದೆ.
ಹೀಗೆ ಮಳೆ, ಮಹಾಪೂರ, ಆಕಸ್ಮಿಕಗಳಿಂದ ತೊಂದರೆಗೆ ಒಳಗಾದ ಉತ್ತರಕನ್ನಡ ಜಿಲ್ಲೆಯ ಜನರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕಳೆದ 2 ದಿವಸಗಳಿಂದ ಶಿರಸಿ-ಸಿದ್ಧಾಪುರದ ರಾಜಕಾರಣಿಗಳು,ಸಂಘ ಸಂಸ್ಥೆಗಳು, ಸಂಘಟನೆಗಳು ಸಂತೃಸ್ತರಿಗೆ ನೆರವು ನೀಡಲು ಮುಗಿಬೀಳುತಿದ್ದಾರೆ.
ನಿವೇದಿತ್ ಆಳ್ವ, ಉಪೇಂದ್ರಪೈ, ಭೀಮಣ್ಣ ನಾಯ್ಕ, ಸುನಿಲ್ ನಾಯ್ಕ ಸೇರಿದಂತೆ ಅನೇಕ ರಾಜಕಾರಣಿಗಳು, ಆಯ್.ಎಮ್.ಎ. ಸ್ಫಂದನ ಸಂಸ್ಥೆಯಂಥ ಸಂಘಟನೆಗಳು, ಶಿಕ್ಷಕರು, ದಾನಿಗಳು ಹೀಗೆ ಈ ವಾರದ ಪ್ರಾರಂಭದೊಂದಿಗೆ ನೆರವಿನ ಮಹಾಪೂರ ಪ್ರಾರಂಭವಾಗಿದೆ.

ಮುಗಿದ ಮಹಾಮಳೆ,ಒಡೆದ ಭೂಮಿ,ಮುರಿದುಬಿದ್ದ ತೂಗುಸೇತುವೆ, ಸಂತೃಸ್ತರಿಗೆ ಸಿಹಿಹಂಚಿ ಬೀಳ್ಕೊಡುಗೆ
ಸಿದ್ಧಾಪುರ,ಆ.12-ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ನಿಂತಿದ್ದು ಮಳೆ,ಪ್ರವಾಹಗಳ ಸಂತೃಸ್ತರು ಗಂಜಿ ಕೇಂದ್ರದಿಂದ ಮನೆಗೆ ಮರಳಿದ್ದಾರೆ. ಕರಾವಳಿಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕರಾವಳಿಯ ಬಹುತೇಕ ಕಡೆ ಪ್ರವಾಹ ಇಳಿದಿದ್ದು ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.
ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲವಿದ್ಯುತ್ ಯೋಜನೆ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಾದ ಹೆಗ್ಗಾರು, ಕಲ್ಲೇಶ್ವರ ಗಳಿಗೆ ಗಂಗಾವಳಿ ನದಿ ನೀರು ನುಗ್ಗಿ ಹಾನಿ ಮಾಡಿದೆ. ಈ ನಿರಾಶ್ರಿತರ ಕೇಂದ್ರಗಳಲ್ಲಿ ಇದೇ ವರ್ಷ ಮೊದಲ ಬಾರಿಗೆ ನೆಗಸುಬಂದಿದ್ದು ಒಮ್ಮೆ ಮನೆ,ಹೊಲ ಬಿಟ್ಟುಬಂದ ಇವರು ಮತ್ತೆ ಇಲ್ಲಿಂದ ಎತ್ತಂಗಡಿಯಾಗಬೇಕಾಗಬಹುದೆ? ಎನ್ನುವ ಆತಂಕದಲ್ಲಿದ್ದಾರೆ.
ಇದೇ ಯಲ್ಲಾಪುರ ತಾಲೂಕಿನ ಶಿರ್ಲೆ ಜಲಪಾತದಲ್ಲಿ ಸಿಲುಕಿ ಒಂದು ದಿನದ ನಂತರ ಅಗ್ನಿಶಾಮಕ ಸೇವೆಯ ಪ್ರಯತ್ನದಿಂದ ಮರಳಿಬಂದ 6 ಜನರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿದೆ.
ಶಿರಸಿಯ ಪ್ರತಿವರ್ಷದ ನೆರೆಪ್ರದೇಶ ಮೊಗವಳ್ಳಿಯಲ್ಲಿ ದೋಣಿ ಬಳಸುವ ಮೂಲಕ ಜಿಲ್ಲಾಡಳಿತ ಸ್ಥಳಿಯರನ್ನು ಬಚಾವು ಮಾಡಿದೆ. ಸಿದ್ಧಾಪುರ ತಾಲೂಕಿನ ಹಸರಗೋಡು ಪಂಚಾಯತ್ ಬಾಳೂರಿನ ತೂಗುಸೇತುವೆ ನೀರಿನ ಸೆಳೆತಕ್ಕೆ ಸಿಕ್ಕು ಹಾಳಾಗಿ ಬಳಕೆಗೆ ಅನುಪಯುಕ್ತವಾಗಿದೆ.
ತಾಲೂಕಿನಾದ್ಯಂತ ಅನೇಕ ಕಡೆ ಭೂಕುಸಿತವಾಗಿದೆ. ಭಾನ್ಕುಳಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು ರಾಮಚಂದ್ರ, ಕೃಷ್ಣ, ಲಕ್ಷ್ಮಣ ಎನ್ನುವವರ ಮನೆ,ತೋಟ-ಗದ್ದೆಗಳಿಗೆ ಹಾನಿಯಾಗಿದೆ.
ಹೆಮ್ಮನಬೈಲ್ ಸಂತೃಸ್ತರನ್ನು ಹಳ್ಳಿಬೈಲ್ ಹೈಸ್ಕೂಲ್‍ಗೆ ಸ್ಥಳಾಂತರಿಸಲಾಗಿದೆ. ಕಿಲವಳ್ಳಿಯ ಒಂದು ಕುಟುಂಬವನ್ನು ಪರಊರಿನ ಅವರ ಸಂಬಂಧಿಗಳ ಮನೆಗೆ ಸೇರಿಸಲಾಗಿದೆ.
ಅಕ್ಕುಂಜಿ, ಕಲ್ಯಾಣಪುರಗಳ ಸಂತೃಸ್ತರು ಇಂದು ಬೆಳಿಗ್ಗೆ ಮನೆ ಸೇರಿದ್ದಾರೆ. ಈ ಸಂತೃಸ್ತರೊಂದಿಗೆ ನಿಂತು ಸಹರಿಸಿದ್ದ ತಾ.ಪಂ. ಸದಸ್ಯ ನಾಶಿರ್‍ಖಾನ್ ಇಂದು ಬಕ್ರೀದ್ ಅಂಗವಾಗಿ ಸಂತೃಸ್ತರಿಗೆ ಸಿಹಿವಿತರಿಸಿ,ಸಂತೃಸ್ತರ ಕೇಂದ್ರದಿಂದ ಅವರನ್ನು ಬೀಳ್ಕೊಟ್ಟರು. ಸಂತ್ರಸ್ತರಿಗೆ ನಿರೀಕ್ಷೆ ಮೀರಿ ನೆರವು, ಸಹಾಯ, ಸಹಕಾರ ದೊರೆತಿರುವ ಮಾಹಿತಿ ಲಭ್ಯವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *