ಇದು ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ಷೇತ್ರದ ಕತೆ- ಜನಪ್ರತಿನಿಧಿಗಳು ಯಾಕಿದ್ದೀರಿ?ಏನು ಮಾಡುತಿದ್ದೀರಿ?ಎಂದು ಪ್ರಶ್ನಿಸಿದ ವಿದ್ಯಾರ್ಥಿ


ಈ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಿದ್ದೀರಿ? ಜನಪ್ರತಿನಿಧಿಗಳಿಗೆ ಕಿಂಚಿತ್ ಕಾಳಜಿ ಇಲ್ಲವೆ? ಹೀಗೆಂದು ಪ್ರಶ್ನಿಸಿದವನು ಒಬ್ಬ ವಿದ್ಯಾರ್ಥಿ, ಈತ ಪ್ರಶ್ನಿಸಿದ್ದು ಸ್ನೇಹಿತರು, ಕುಟುಂಬಸ್ಥರ ಎದುರಿಗಲ್ಲ, ತಾಲೂಕಾ ಪಂಚಾಯತ್ ಕೆ.ಡಿ.ಪಿ.ಸಭೆಯಲ್ಲಿ.
ಇಂದು ಇಲ್ಲಿಯ (ಸಿದ್ಧಾಪುರ) ತಾ.ಪಂ. ಸಭಾಭವನದಲ್ಲಿ ತಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾಸಿಕ ಕೆ.ಡಿ.ಪಿ. ಸಭೆ ನಡೆಯಿತು. ಈ ಸಭೆಗೆ ತಮ್ಮ ಅಹವಾಲು ಹೇಳಿಕೊಳ್ಳಲು ಬಂದಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಭೆಯಲ್ಲಿ ಸೇರಿದ್ದರು.
ಇವರ ಪ್ರತಿನಿಧಿಯಾಗಿ ವೇದಿಕೆಗೆ ಬಂದ ವಿದ್ಯಾರ್ಥಿ ಹರೀಶ್ ನೀವೆಲ್ಲಾ ಏನು ಮಾಡುತಿದ್ದೀರಿ? ಕಳೆದ ಒಂದೆರಡು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ನಾವು ನಮ್ಮ ಬಸ್ ಅವ್ಯವಸ್ಥೆಯ ಸಮಸ್ಯೆ ಹೇಳುತ್ತಲೇ ಬರುತಿದ್ದೇವೆ. ಆದರೆ ನಿಮಗ್ಯಾರಿಗೂ ಈ ತೊಂದರೆ, ರಗಳೆ ಅರ್ಥವಾಗುವ ಹಾಗೆ ಕಾಣುವುದಿಲ್ಲ. ತಾಲೂಕಿನ ಏಕೈಕ ಸರ್ಕಾರಿ ಕಾಲೇಜಿಗೆ 8-10 ಕಿ.ಮೀ. ನಡೆದು ಬಂದು ಬಸ್ ಹತ್ತಿ ಅಧ್ಯಯನಕ್ಕೆ ಬರುವ ಅನೇಕ ವಿದ್ಯಾರ್ಥಿ,ವಿದ್ಯಾರ್ಥಿನಿ
ಗಳಿದ್ದೇವೆ. ನಮಗೆ ನಿತ್ಯ ನಿರಂತರ ಬಸ್ ಅವ್ಯವಸ್ಥೆಯ ತೊಂದರೆ, ಈ ಬಗ್ಗೆ ಅನೇಕ ಬಾರಿ ಮನವಿ ನೀಡಿ, ಪ್ರತಿಭಟನೆ ಮಾಡಿ ಬೇಡಿಕೆ ಇಟ್ಟರೂ ಪರಿಸ್ಥಿತಿ ಸುಧಾರಿಸಿಲ್ಲ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಹೋದರೆ ಪೊಲೀಸರು ದೂರು ದಾಖಲಿಸುತ್ತಾರೆ. ಇಂಥ ವ್ಯವಸ್ಥೆ ಯಾಕೆ? ಹೀಗಾದರೆ ನಾವು ಕೇಳುವುದ್ಯಾರನ್ನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರೀಯಿಸಿದ ತಾ.ಪಂ. ಅಧ್ಯಕ್ಷರು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದರು. ಈ ಸಮಯದಲ್ಲಿ ಪ್ರತಿಕ್ರೀಯಿಸಿದ ತಾ.ಪಂ. ಸದಸ್ಯ ನಾಸಿರ್‍ಖಾನ್ ಸಾರಿಗೆ ಸಂಸ್ಥೆ ನೌಕರರಿಗೆ ನಾವು ಹೇಳಿ ಸುಸ್ತಾಗಿದ್ದೇವೆ. ಈ ಅವ್ಯವಸ್ಥೆ ಸುಧಾರಿಸುವುದು ಕಷ್ಟ ಎಂದರು. ಇದಕ್ಕೆ ಪ್ರತಿಕ್ರೀಯಿಸಿದ ಸಾರಿಗೆ ಸಂಸ್ಥೆ ಪ್ರತಿನಿಧಿ ಎಂ.ಡಿ.ನಾಯ್ಕ ಸಭೆಯ ಅಭಿಪ್ರಾಯ, ಬೇಡಿಕೆ ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.
ಯಾಕೆ ಈ ಸ್ಥಿತಿ-
ನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜಕಾರಣಿಗಳ ಒಳಒಪ್ಪಂದದಿಂದಾಗಿ ಗ್ರಾ.ಪಂ. ಪ್ರದೇಶದಲ್ಲಿ ಸ್ಥಾಪನೆಯಾಗಿದೆ. ಈ ಕಾಲೇಜು, ಇಲ್ಲಿಯ ಸಮಸ್ಯೆ, ತೊಂದರೆಗಳ ಬಗ್ಗೆ ಈ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಅವರ ರಾಜಕೀಯ ಜೀವನದಲ್ಲಿ ಯಾವಾಗಲೂ ಕೇಳಿದ್ದಿಲ್ಲ, ಶಾಸಕರು, ಸಚಿವರು ಈಗ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂದಿನ ಅವಧಿಯಲ್ಲಿ ತಾನು ವಿರೋಧಿ ಪಕ್ಷದ ಶಾಸಕ ಹಾಗಾಗಿ ಈ ಸರ್ಕಾರದಲ್ಲಿ ನಮ್ಮ ಕೆಲಸ ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುತಿದ್ದರು. ಈಗ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿರುವ ಕಾಗೇರಿ ಕಳೆದ ವಾರ ಇದೇ ಸರ್ಕಾರಿ ಮಹಾವಿದ್ಯಾಲಯದ ಕಾರ್ಯಕ್ರಮಕ್ಕೆ ಬಂದವರು ಮತ್ತೆ ಭರವಸೆ ನೀಡಿ ತೆರಳಿದ್ದರು. ಹೀಗೆ ಶಾಸಕರ ಭರವಸೆ, ಅಧಿಕಾರಿಗಳ ಉಪೇಕ್ಷೆಯಿಂದ ನೊಂದ ವಿದ್ಯಾರ್ಥಿಗಳು ಕಳೆದ ವರ್ಷಕೂಡಾ ತಾ.ಪಂ. ಸಭೆಗೆ ಬಂದು ತಮ್ಮ ತೊಂದರೆ ಹೇಳಿಕೊಂಡಿದ್ದರು. ಈಗ ಮತ್ತೆ ತಾ.ಪಂ. ಸಭೆಗೆ ಬಂದು ತಾ.ಪಂ. ಸದಸ್ಯರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಶಾಸಕರ ಪಕ್ಷದವರು, ತಾ.ಪಂ. ಸ್ಥಾಯಿ ಸಮೀತಿ ಅಧ್ಯಕ್ಷರೂ ಆಗಿರುವ ಮಹಾಬಲೇಶ್ವರ ಹೆಗಡೆ ನಾವೂ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ನೀವು ಪ್ರತಿಭಟನೆ ಮಾಡುವುದಾದರೆ ನಾವೂ ಬರುತ್ತೇವೆ ಎಂದರು.
ಆಗ ಪ್ರತಿಕ್ರೀಯಿಸಿದ ವಿದ್ಯಾರ್ಥಿಗಳು ಬಸ್ ಬೇಡಿಕೆ ಹಿನ್ನೆಲೆಯಲ್ಲಿ ಪ್ರತಿಭಟಸಲು ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ.ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಕೇಳಿದರೆ ಪೊಲೀಸ್ ಪ್ರಕರಣ ದಾಖಲಿಸುವುದಾದರೆ ನಮ್ಮ ಭವಿಷ್ಯದ ಗತಿಯೇನು? ಎಂದರು. ಅಧ್ಯಕ್ಷರಾದಿಯಾಗಿ ತಾ.ಪಂ. ಸದಸ್ಯರು ನಾವು ವಿಧಾನಸಭಾಧ್ಯಕ್ಷರಿಗೆ,ಶಾಸಕರಿಗೆ ಹೇಳಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ತಪ್ಪು ಮಾಡಲಿಲ್ಲ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *