ತನುಮನ ತಣಿಸುವ ತಲ್ಲಣಗಳು

ಸಂಕ್ಷಿಪ್ತ ಪರಿಚಯ
ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದ ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಪ್ರಮುಖ ಪತ್ರಿಕೆಗಳಲ್ಲಿ ಕತೆ, ಕವಿತೆ, ಲೇಖನಗಳು ಪ್ರಕಟಗೊಂಡಿವೆ. ‘ಅರಿವಿನ ಹರಿಗೋಲು’ ಪ್ರಕಟಿತ ಕವನ ಸಂಕಲನ.

ತನುಮನ ತಣಿಸುವ ತಲ್ಲಣಗಳು
ಹೊರಗಡೆ ಸೋನೆ ಮಳೆ ಎಡಬಿಡದೆ ಹುಯ್ಯುತ್ತಿದ್ದರೂ ಎದೆಯೊಳಗೆ ಕುದಿಯುವ ಕೌತುಕಗಳು ತಣ್ಣನೆಯ ಸುಖಕೆ ಕೊಳ್ಳಿ ಇಕ್ಕಿದ್ದವು. ಮನದ ತಾಕಲಾಟವನು ತಾಳಲಾಗದೆ ತಂಗಾಳಿಯಂತಿದ್ದ ಗೆಳತಿಯ ಅಂಗಳದಲ್ಲಿ ಅದೊಂದು ದಿನ ಎಳೆಎಳೆಯಾಗಿ ಅಂತರಂಗವ ಹರವಿಕೊಂಡು ನಿರಾಳವಾದೆ, ಭಾರವಾದ ಹೃದಯ ಹಗುರವಾದಂತಾಯಿತು. ಆದರೆ ಮರುದಿನ ನನ್ನೆಲ್ಲಾ ಪಿಸುಮಾತುಗಳು ಬಣ್ಣ ಹಚ್ಚಿಕೊಂಡು ಊರತುಂಬ ಗರಿಗರಿಯಾಗಿ ಹರಿದಾಡಿದವು. ಬಾಯಿಂದ ಬಾಯಿಗೆ ಬದಲಾಗುತ್ತಾ ಹರಿದಾಡಿದವುಗಳೆಲ್ಲಾ ನಮ್ಮನ್ನೆ ಕಚ್ಚುವ ಹಾವುಗಳಂತಾದದ್ದು ಬಹುದೊಡ್ಡ ದುರಂತ.
ತಂಗಾಳಿಯಂತೆ ಸುಳಿದಾಡುತ್ತಿದ್ದ ಗೆಳತಿ ಅದೇಕೊ ಇದ್ದಕ್ಕಿದ್ದಂತೆ ಬಿರುಗಾಳಿಯಾಗಿ ಪಲ್ಲವಿಸಿ ನಮ್ಮ ಬದುಕನ್ನು ಚಲ್ಲಾಪಿಲ್ಲಿಯಾಗಿಸಿದಳು. ತುಂಬಾ ರಭಸವಾಗಿ ಬೀಸುವ ಆ ಗಾಳಿಯ ಹೊಡೆತಕ್ಕೆ ಮನೆಯ ಹೆಂಚುಗಳು ಹಾರಿಹೋದವು, ಅಂಗಳದಲ್ಲಿದ್ದ ಮರದ ರೆಂಬೆಯೂ ಮುರಿದು ಬಿತ್ತು, ಮುರಿದ ರೆಂಬೆಯ ಗೂಡೊಳಗಿದ್ದ ಹಕ್ಕಿಮರಿಗಳು ಕೆಳಗೆ ಸಿಕ್ಕು ಅನ್ಯಾಯವಾಗಿ ಅಸುನೀಗಿದವು. ಒಂದು ಅಥರ್Àದಲ್ಲಿ ನಮ್ಮ ಬದುಕು ಕೂಡಾ ಆ ಹಕ್ಕಿಮರಿಗಳಂತೆಯೇ ಆಗಿತ್ತು. ಈ ಘಟನೆ ಸಂಭವಿಸಿದ ಮೇಲೆಯೇ ನಾಸ್ತಿಕ ಭಾವ ನನ್ನೊಳಗೆ ಉಲ್ಬಣಿಸಿತು
ಪ್ರಾಯಶಃ ಗೆಳತಿಗೆ ತನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಕೇಳುವ ನೈತಿಕತೆ ಅವಳಿಗಿಲ್ಲ, ಕ್ಷಮಿಸುವ ಸ್ಥಿತಿಯಲ್ಲಿ ನಾವೂ ಇಲ್ಲ. ಅಸಲಿಗೆ ಅವಳಿರುವ ಊರೊಳಗೆ ಸಧ್ಯ ನಾವೇ ಇಲ್ಲ. ಇದೆಲ್ಲಾ ಗತಿಸಿ ವರ್ಷ ಉರುಳಿತ್ತು, ಗೆಳತಿ ಅದೊಂದು ದಿನ ನಾವಿರುವ ಪರಊರಿನ ಮುಖ್ಯರಸ್ತೆಯಲಿ ಕಾಣಿಸಿಕೊಂಡಳು! ಅವಳ ನೆರಳು ಕೂಡಾ ನನಗೆ ಸೋಕದಿರಲೆಂದು ತಲೆಯ ಮೇಲಿನ ಛತ್ರಿಯನ್ನು ಕೊಂಚ ಭಾಗಿಸಿಕೊಂಡು ನಡೆದು ನಿಟ್ಟುಸಿರುಬಿಟ್ಟೆ. ಪಕ್ಕದಲ್ಲಿಯೇ ಹಾವೊಂದು ಹರಿದು ಹೋದ ಅನುಭವವಾಯಿತು.
ನಂಬಿಕೆಗೆ ದ್ರೋಹವಾದ ನಂತರ ನನಗೆ ಅದೇನಾಯ್ತೋ.. ಏನೋ ಗೊತ್ತಿಲ್ಲ ಗೋವುಗಳೆಲ್ಲಾ ವ್ಯಾಘ್ರಗಳಂತೆ, ನಾಯಿಗಳು ಗುಳ್ಳೆನರಿಯಂತೆ, ಶತ್ರುಗಳು ಮಿತ್ರರಂತೆ, ಮಿತ್ರರು ಶತ್ರುಗಳಂತೆ, ಕೇಸರಿ ಕೆಂಪಂತೆ, ಕೆಂಪು ಕೇಸರಿಯಂತೆ ಹೀಗೆ ಹಲವುಗಳೆಲ್ಲಾ ಅದಲು ಬದಲಾಗುತ್ತಾ ಹೊಸ ಹೊಸ ಹೊಳುಹುಗಳನ್ನು ನನ್ನೊಳಗೆ ಹುರಿಗೊಳಿಸಿದವು. ಮೂಲಭೂತವಾದಿಗಳು ‘ಕಾಮಾಲೆ’ ಕಣ್ಣುಳ್ಳವನೆಂದು ಕರೆಯುತ್ತಿರಬಹುದು, ಕೋಮುವಾದಿಗಳು ‘ಕುರುಡ’ನೆಂದು ಜರಿಯುತ್ತಿರಬಹುದು ಆದರೆ ನನ್ನಂತರಂಗ ಹೇಳುತ್ತಿದೆ ‘ದೃಷ್ಠಿಕೋನ ಸರಿಯಾಗಿಯೇ ಇದೆ’ ಮುನ್ನುಗ್ಗು ಎಂದು.
ನಿನ್ನೆಯ ದಿನ ಮಕ್ಕಳೆದಿರು ನನ್ನ ಅನುಭವವನ್ನು ಹೀಗೆ ಹಂಚಿಕೊಂಡೆ ‘ಮುದ್ದು ಮಕ್ಕಳೆ, ನನ್ನನ್ನೂ ಸೇರಿ ಹಲವರು ಹೇಳುವುದನ್ನೆಲ್ಲಾ ಸತ್ಯವೆಂದು ತಕ್ಷಣಕ್ಕೆ ನಂಬಬೇಡಿ. ಪ್ರತಿ ಹೇಳಿಕೆಗಳನ್ನು ಪ್ರಶ್ನಿಸಬೇಕು, ಪ್ರಶ್ನಿಸುವುದರಿಂದಲೇ ಪರಿಶುದ್ಧ ಸತ್ಯದ ಮುಖಗಳು ಅನಾವರಣಗೊಳ್ಳುತ್ತವೆ. ನೀವು ಪ್ರಶ್ನಿಸದಿದ್ದರೆ ಸತ್ಯದ ವಾಸ್ತವ ಗೊತ್ತಾಗದೆ, ಸತ್ಯದ ವಿವಿಧ ರೂಪಗಳು ಗೊತ್ತಾಗುತ್ತವೆ. ತನ್ನಿಮಿತ್ಯ ಸತ್ಯ ಅರಿಯಲು ಪ್ರಶ್ನಿಸುವ, ತರ್ಕಿಸುವ, ಆಲೋಚಿಸುವ ಪ್ರಯತ್ನ ಈ ಕ್ಷಣದಿಂದಲೇ ರೂಢಿ ಮಾಡಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಮಾತಿನಲ್ಲಿಯೇ ಮೋಡಿ ಮಾಡಿ ಮತ;ಹಿತ ಏನೆಲ್ಲವನು ಕಿತ್ತುಕೊಂಡವರಿದ್ದಾರೆ ಈ ಜಗದಲಿ. ಒಳ್ಳೆಯವರೆಂದು ತಿಳಿದು ಗೆಳೆಯ, ಗೆಳತಿ, ಸಂಗಾತಿಗಳ ಬಳಿ ನಿಮ್ಮೊಳಗೆ ಗುಟ್ಟಾಗಿರುವ ಗೌಪ್ಯಗಳನ್ನೆಲ್ಲಾ ಬಿಚ್ಚಿಡಬೇಡಿ, ಒಂದಿಷ್ಟು ಬಚ್ಚಿಟ್ಟುಕೊಳ್ಳಿರಿ. ಹೀಗೆ ಬಚ್ಚಿಟ್ಟುಕೊಂಡ ಬೆಚ್ಚನೆಯ ನೆನಪುಗಳನ್ನು ಹೆಸರು, ಸ್ಥಳ ಬದಲಾಯಿಸಿ ಪದ ಪ್ರಾಸಗಳೊಂದಿಗೆ ರಸವತ್ತಾಗಿ ಕ(ವಿ)ತೆಯ ರೂಪದಲ್ಲಿ ಬರೆದಿಡಿ. ಒಂದಿಲ್ಲಾ ಒಂದುದಿನ ಈ ಲೋಕದೆದಿರು ನಿಮ್ಮ ತಲ್ಲಣಗಳೆ ತೆರೆದುಕೊಂಡು ತನುಮನವ ತಣಿಸಲಿವೆ.’
-ಕೆ.ಬಿ.ವೀರಲಿಂಗನಗೌಡ್ರ. ಸಿದ್ದಾಪುರ.
ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆ, ಸಿದ್ದಾಪುರ-581355. ಉತ್ತರಕನ್ನಡ ಜಿಲ್ಲೆ. ದೂ-9448186099

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *