ಸಂತಾನಭಾಗ್ಯದ ತರಳಿಯಲ್ಲಿ ತಲೆಎತ್ತಲಿದೆ ಬೃಹತ್ ದೇವಾಲಯ

   


ತರಳಿ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಸರ್ವರನ್ನೂ ಸ್ವಾಗತಿಸುತ್ತಾ ನಾಡಿನ ಸಮಸ್ತರಿಗೆ ಮಹಾಶಿವರಾತ್ರಿ ಶುಭಾಶಯ ಕೋರುವವರು
ಸುಮಂಗಲಾ ವಸಂತ (ಜಿ.ಪಂ. ಸದಸ್ಯರು) ವಸಂತ ನಾಯ್ಕ ಮಳಲವಳ್ಳಿ
(ತಾ.ಪಂ. ಮಾಜಿ ಸ್ಥಾಯಿಸಮೀತಿಅಧ್ಯಕ್ಷರು)
ಹಾಗೂ ಕುಟುಂಬವರ್ಗ
ಮತ್ತು ಅಭಿಮಾನಿ ಬಳಗ,
ಸಿದ್ಧಾಪುರ (ಉ.ಕ.)

ಸಿದ್ದಾಪುರ ತಾಲೂಕಿನ ತರಳಿ ಕ್ಷೇತ್ರ ಈಗ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತಿದೆ.
ಸುಮಾರ 30 ವರ್ಷಗಳಿಗಿಂತ ಹಿಂದಿನಿಂದ ಪ್ರತಿವರ್ಷ ಇಲ್ಲಿ ಶಿವರಾತ್ರಿಯಂದು ಆಚರಿಸುವ ಶಿವರಾತ್ರಿ ಜಾತ್ರೆ ಈಗ ಸಾಂಸ್ಕೃತಿಕ ಉತ್ಸವವಾಗಿಯೂ ಗಮನ ಸೆಳೆಯುತ್ತಿದೆ.
ಬಿಳಗಿ ಅರಸರ ಕಾಲಕ್ಕಿಂತ ಹಿಂದಿನಿಂದಲೂ ಈ ಪ್ರದೇಶದಲ್ಲಿ ಜೈನ ಮತಾವಲಂಬಿಗಳ ವಾಸ್ತವ್ಯ, ಆರಾಧನೆಗಳ ಕೇಂದ್ರವಾಗಿದ್ದ ಈ ಸ್ಥಳ ಇತ್ತೀಚಿನ ವರ್ಷಗಳಲ್ಲಿ ದೀವರ ಶೃದ್ಧಾ ಕೇಂದ್ರವಾಗಿ ಬದಲಾಗಿದೆ.
ಪದ್ಮಾವತಿ, ವೆಂಕಟ್ರಮಣ, ಗಣಪತಿ ದೇವರುಗಳಿರುವ ಈ ಪ್ರದೇಶದಲ್ಲೇ ನಾಗಚೌಡೇಶ್ವರಿ ದೇವರನ್ನೂ ಕಾಣಬಹುದು. ಸಂತಾನ ಹೀನತೆಗೆ ಇಲ್ಲಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗುವ ಈ ಪ್ರದೇಶ ಇತ್ತೀಚಿನ 40 ವರ್ಷಗಳಿಂದೀಚೆ ತೆರೆದುಕೊಂಡಿದೆ.
ತರಳಿ ದೇವಸ್ಥಾನದ ಸಮೀತಿ, ಇತ್ತೀಚೆಗೆ ನೋಂದಾಯಿತ ತರಳಿ ಸಂಸ್ಥಾನ ಮಠ ಇವುಗಳ ಹಿಂದೆ ತರಳಿಯ ಹನುಮನಾಯ್ಕರು ಅವರ ಜೊತೆಗಿನ ಸ್ಥಳಿಯ ಮುಖಂಡರು ಅವರೊಂದಿಗೆ ತಾಲೂಕಿನ ಮುಖಂಡರು ಸೇರಿ ಪ್ರಾರಂಭಿಸಿದ ಈ ಕ್ಷೇತ್ರದ ಶಿವರಾತ್ರಿ ಉತ್ಸವ ಆಚರಣೆ ಈಗೀಗ ಸಾಂಸ್ಕೃತಿಕ ರೂಪವನ್ನು ಪಡೆದುಕೊಂಡಿದೆ.


ಹಿಂದುಳಿದವರ ಆರಾಧ್ಯ ನಾಯಕರಾದ ದೇವರಾಜ ಅರಸು ಸ್ಮರಣೆ, ಸಾಮಾಜಿಕ ಪರಿವರ್ತನಾಕಾರರಾದ ನಾರಾಯಣ ಗುರುಗಳ ಚಿಂತನೆ, ಜೊತೆಗೆ ದಿ. ಎಸ್.ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪ ಇವರೊಂದಿಗೆ ಈಗಿನ ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಸಮಾಜದ ಗಣ್ಯರು ಎಲ್ಲರ ದೂರದೃಷ್ಟಿಯ ಫಲವಾಗಿ ಇಲ್ಲಿ ನೂತನ (ಮಠ) ದೇವಾಲಯದ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿದೆ.
ಎನ್.ಡಿ.ನಾಯ್ಕರ ನೇತೃತ್ವದಲ್ಲಿ ಅವರ ಸಂಬಂಧಿಗಳಾದ ಡಿ.ಎಸ್.ವೀರಯ್ಯನವರ ನೆರವಿನಿಂದ ಇಲ್ಲಿ ಸಭಾಭವನ ವೊಂದನ್ನು ಸ್ಥಾಪಿಸಲಾಗಿದೆ. ಹೀಗೆ 50 ವರ್ಷಗಳ ಕಾಲಘಟ್ಟದಲ್ಲಿ ಈ ತರಳಿ ಸಂಸ್ಥಾನ ನಿಶ್ಚಿತ ಉದ್ದೇಶದೊಂದಿಗೆ ಗುರಿಮುಟ್ಟುವ ದಿಸೆಯಲ್ಲಿ ಕುಂಟುತಿದ್ದರೂ ಇತ್ತೀಚಿನ ಹೊಸ ಯೋಜನೆ, ಯೋಚನೆಗಳು ಈ ಮಠದ ಅಭಿವೃದ್ಧಿಯ ಮುನ್ಸೂಚನೆ ನೀಡುವಂತಿವೆ. ಪ್ರತಿವರ್ಷ ಇಲ್ಲಿ ಶಿವರಾತ್ರಿಗೆ ಸೇರುವ ಜನರು ಗಣ್ಯರು ಚಿಂತನ-ಮಂಥನ ನಡೆಸುತಿದ್ದು, ಈ ಧಾರ್ಮಿಕ,ಸಾಂಸ್ಕೃತಿಕ ಕೇಂದ್ರವನ್ನು ವಿದ್ಯಾಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೂ ಚಾಲನೆ ನೀಡಲಾಗಿದೆ. ತರಳಿ ಗ್ರಾಮದ ಹಿರಿಯರು, ಯುವಕರು ಗ್ರಾಮ ಅರಣ್ಯ ಸಮೀತಿ ಮತ್ತು ಯುವಕ ಸಂಘಗಳಡಿ ಕೆಲಸ ಮಾಡುತಿದ್ದು ತಮ್ಮ ಗ್ರಾಮದ ಚಾರಿತ್ರಿಕ ತರಳಿಮಠವನ್ನು ಪ್ರಸಿದ್ಧ ಕೇಂದ್ರವನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಅವರ ಪ್ರಯತ್ನ ಸಾಗಿದೆ.

ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗೆ ಅರಿವೇ ಪ್ರಮಾಣು ಆಯ್ಕೆ

2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕಾವ್ಯ ಕೃತಿ ಆಯ್ಕೆಯಾಗಿದೆ ಎಂದು ನವಚೇತನ ಸಾಂಸ್ಕøತಿಕ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *