ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-01-

ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗುತ್ತಿದೆ. ಯಾವ ಶ್ರಮವೂ ಇಲ್ಲದೆ ಎ.ಬಿ.ವಿ.ಪಿ.ಯಿಂದ ಬಿ.ಜೆ.ಪಿ.ಗೆ ಎಂಟ್ರಿ ಹೊಡೆದಿದ್ದ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗ್ರೆಸ್‌ ವಿಫಲತೆ, ಕಾಂಗ್ರೆಸ್‌ ನ ವೈದಿಕ ಮನುವಾದಿಗಳ ಅಂದರ್‌ ಕಿ ಮಚ್ಚುವಾಳ್ಳಿತನಗಳಿಂದ ಅನಾಯಾಸವಾಗಿ ಆಯ್ಕೆಯಾಗಿದ್ದು ಬರೀ ಒಂದೆರಡು ಬಾರಿಯಲ್ಲ… ಅನಾಮತ್ತು ೬ ಸಾರಿ,

ಆನಂತರ ಏಳನೇ ಬಾರಿ ಭೀಮಣ್ಣರೆದುರು ರೋಚಕ ಸೋಲಿಗೆ ಶರಣಾದ ಕಾಗೇರಿ ಮುಸ್ಲಿಂ ವಿರೋಧದಿಂದಲೇ ಆಯ್ಕೆಯಾಗುತಿದ್ದ ಅನಂತಕುಮಾರ ಹೆಗಡೆಯವರನ್ನು ಹಿಂದೆ ಸರಿಸಿ ಸಂಸದರಾಗಿಬಿಟ್ಟರು. ಹೀಗೆ ಸಂಸದರಾಗಲು ಸಜ್ಜನ ಕಾಗೇರಿ ಬಳಸಿದ್ದು ನೂರಾರು ಕೋಟಿ ಎಂದರೆ… ಬಿ.ಜೆ.ಪಿ., ಸಂಘ, ರಾಷ್ಟ್ರೀಯತೆಯ ಸೋಗಿನಲ್ಲಿ ಕಾಗೇರಿ ಗಳಿಸಿದ ಸಂಪತ್ತು ಎಷ್ಟಿರಬಹುದು ಎಂಬುದೂ ಊಹೆಗೂ ನಿಲುಕದ ವಿಚಾರ. ಹೀಗೆ ರಾಷ್ಟ್ರೀಯತೆ, ಹಿಂದುತ್ವ, ಪ್ರಾಮಾಣಿಕತೆಯ ಸೋಗಿನಲ್ಲಿ ಸಂಘಿಗಳು ಗಳಿಸಿರುವ ಹಣ ಇಡಿಗೆ ಸಿಗುವಂತಾದರೆ ಅದೂ ಭಾರತದ ಬಜೆಟ್ಟನ್ನೂ ಮೀರಿಸಬಹುದು ಆದರೆ ಸಂಘದ ನಯವಂಚಕ ನಂ೧ ಫೇಕು ಮತ್ತವರ ದುಷ್ಟಕೂಟ ಸಿ.ಬಿ.ಐ. ಇಡಿಗಳನ್ನು ದುಷ್ಟಸಂಘಿಗಳ ವಿರುದ್ಧ ಬಳಸಲ್ಲ!

ಇದು ಭಾರತದ ದುರಂತ… ಇಲ್ಲಿ ಮಹಾವಂಚಕ ದೇಶಪ್ರೇಮ, ಹಿಂದುತ್ವ, ರಾಷ್ಟ್ರೀಯತೆಯ ಸೋಗಿನಲ್ಲಿ ಹಗಲುದರೋಡೆ ಮಾಡಬಹುದು! ಸೇನೆ- ಸೈನಿಕರ ಪರವಾದ ಮೊಸಳೆಕಣ್ಣೀರಿನಿಂದ ಚುನಾವಣೆ ಗೆಲ್ಲಬಹುದು!!!! ಈ ವಿಶ್ವ ದುರಂತದೆದುರು ಉತ್ತರ ಕನ್ನಡ ಬಿ.ಜೆ.ಪಿ.ಯಲ್ಲಿ ಕ್ಷೋಭೆ ಭುಗಿಲೆದ್ದಿದೆ. ಕಾಗೇರಿಯವರ ಯಜಮಾನಿಕೆ, ಪಾಳೇಗಾರಿಕೆ, ವಿರೋಧಿಸುವ ಕಾರವಾರದ ರೂಪಾಲಿ ನಾಯ್ಕ ಕಾಗೇರಿಯ ಬ್ರಾಮ್ಹಣ ಲಾಭಿ ವಿರೋಧಿಸಿ ಯಡಿಯೂರಪ್ಪ ಕುಟುಂಬ ಬಳಸಿ ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷೆಯಾಗಿದ್ದಾರೆ. ಸಿದ್ಧಾಪುರದ ಕೆ.ಜಿ.ನಾಯ್ಕ ಕಾಗೇರಿವರು ಸಚಿವ-ಸಭಾಪತಿ ಆಗಿದ್ದಾಗಲೇ ಅವರ ವಿರುದ್ಧ ತೊಡೆ ತಟ್ಟಿ ಸಿದ್ಧಾಪುರದಲ್ಲಿ ನಿಮ್ಮ ಮನುವಾದಿ ಧೂರ್ತತನಕ್ಕೆ ಅವಕಾಶವಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.

ಈ ಕಾಗೇರಿ ವಿರೋಧಿ ಬಿ.ಜೆ.ಪಿ. ಬಣವನ್ನು ಪಳಗಿಸುತ್ತಿರುವ ಶಾಸಕ ಭೀಮಣ್ಣ ನಾಯ್ಕ ಪ್ರತಿನಿತ್ಯ ಅವರ ವಿಶ್ವಾಸ ಗಳಿಸುತ್ತಾ ಬಿ.ಜೆ.ಪಿ. ಕೋಟೆಯ ಕಲ್ಲು ಕೀಳುತಿದ್ದಾರೆ… ಈ ರಾಜಕೀಯ ಮೇಲಾಟಗಳ ನಡುವೆ ಬಿ.ಜೆ.ಪಿ.ಯಲ್ಲಿ ಆಂತರಿಕ ಕಲಹ ಪ್ರಾರಂಭವಾಗಿ ಸಂಸದ ಕಾಗೇರಿಯ ಹಿಂಬಾಲಕರೆಲ್ಲಾ ಒಬ್ಬೊಬ್ಬರಾಗಿ ಕೈ ವಶವಾಗುವ ಲಕ್ಷಣ ನಿಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.

ಕಾಗೇರಿ ಶಾಸಕ, ಸಚಿವ, ಸಂಸದರಾಗಿದ್ದಾಗಲೆಲ್ಲಾ ಎಲ್ಲರಿಗೂ ಭಾವನಾಗಿ ಮಾತನಾಡಿಸುತ್ತಾ ಎಲ್ಲರ ಮೂಗಿಗೂ ತುಪ್ಪ ಸವರುತಿದ್ದರು. ಈ ಸಂಘದ ಕುಟಿಲತೆ ಅರ್ಥಮಾಡಿಕೊಳ್ಳುತ್ತಿರುವ ಬಿ.ಜೆ.ಪಿ.ಯ ಅನೇಕರು ಮೂಗಿಗೆ ತುಪ್ಪ ಸವರುವವರಿಗಿಂತ ಮಾಂಸದೂಟ ಬಡಿಸುವವರೇ ಲೇಸು ಎನ್ನುತಿದ್ದಾರೆ ಈಗ.! (conti…….)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *