ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ ನಡೆಸಿ ಕೆಲವು ವಂಧಿಮಾಗಧ ಕಾರ್ಯಮರೆತ ಪತ್ರಕರ್ತರನ್ನು ಖುಷಿಪಡಿಸಿ ಪ್ರಚಾರದ ಹಣ ಉಳಿಸುವ ಕಾಗೇರಿ ಒಂದು ವಾರದ ಹಿಂದೆ ಶಿರಸಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕರನ್ನು ಹೊಗಳಿ ಸಿದ್ಧಾಪುರದ ಬಿ.ಜೆ.ಪಿ. ಆಡಳಿತದ ಪಟ್ಟಣ ಪಂಚಾಯತ್‌ ಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಭೀಮಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಿ.ಜೆ.ಪಿ. ಚುನಾಯಿತ ಸದಸ್ಯರ ಪ್ರೇಮ, ಪ್ರೀತಿ ಅಭಿನಂದನೆಗೆ ಅರ್ಹ ಆದರೆ….. ಅದೇ ಪ್ರೀತಿ-ವಿಶ್ವಾಸ, ಅನುರಾಗ ಶಿರಸಿ ನಗರಸಭೆಯ ಮೇಲೂ ಇಲ್ಲಿಯ ಸದಸ್ಯರ ಮೇಲೂ ಇದ್ದರೆ ಒಳ್ಳೆಯದು ಎಂದು ವ್ಯಂಗ್ಯ ವಾಡಿದ್ದರು. ಇದು ಕಾಗೇರಿ ವಿರೋಧಿಗಳನ್ನು ಹಾಡಿ-ಹೊಗಳುವ ಪರಿ!.

ಈ ಪ್ರಶಂಸೆ ಹಿಂದೆ ಸಿದ್ಧಾಪುರದ ವಿದ್ಯಮಾನವಿದೆ. ಶಾಸಕರಾಗಿ ಎರಡು ವರ್ಷ ಪೂರೈಸಿರುವ ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರಕ್ಕೆ ೩೮೨ ಕೋಟಿ ಅನುದಾನ ನೀಡಿದ್ದಾರೆ. ಬಹುತೇಕ ವಿಶೇಷ ಅನುದಾನವಾಗಿರುವ ಈಹಣ ಪಕ್ಷಬೇಧವಿಲ್ಲದೆ ಹಂಚಿಕೆಯಾಗಿದೆ.ಕಳೆದ ಮೂವತ್ತು ವರ್ಷಗಳಿಂದ ಶಾಸಕರು, ಸಂಸದರಿಂದ ಪುಕ್ಕಟ್ಟೆ ಪರಿವಾರದ ಸುಳ್ಳಿನ ಭಾಷಣ ಕೇಳಿದ್ದು ಬಿಟ್ಟರೆ… ಗ್ಯಾರಂಟಿ ದುಡ್ಡೂ ಇಲ್ಲ, ವಾರಂಟಿ ಹಣವೂ ಇಲ್ಲ. ಈಗಿನ ಸಂಸದ ಕಾಗೇರಿ ತಾನು ಸಭ್ಯ, ಪ್ರಾಮಾಣಿಕ ಎಂದು ಪೋಜು ಕೊಡುತ್ತಲೇ ಸಾವಿರಾರು ಕೋಟಿಯ ಒಡೆಯರಾಗುತ್ತಾರೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಹಿಂದುತ್ವದ ಹೆಸರಲ್ಲಿ ರಾತ್ರಿಯೂ ಕಾಮನಬಿಲ್ಲು ತೋರಿಸಿ ಸಾವಿರಾರು ಕೋಟಿ ಒಡೆಯರಾಗಿ ಈಗ ವಿದೇಶ ಸೇರಿದ್ದಾರೆ!

ಇವೆಲ್ಲವೂ ಕಾಣದ ಕುರುಡು ಕೊಳಚೆ ಭಕ್ತರಾಗಿರುವ ಹಿಂದುತ್ವವಾದಿಗಳು ತಮ್ಮ ತಲೆ ಕೆಟ್ಟಿರುವುದನ್ನು ಬಹರಂಗವಾಗಿ ಪ್ರದರ್ಶಿಸುತಿದ್ದಾರೆ. ಈ ಮತಾಂಧ ಹಿಂದುತ್ವವಾದಿ ಆಶಾಢಭೂತಿಳ ಕತೆ ಇದಾದರೆ…. ಕಾಂಗ್ರೆಸ್‌ ನಲ್ಲಿ ಭೀಮಣ್ಣ ನಾಯ್ಕ ಶಾಸಕರಾದ ಮೇಲೆ ಸಾವು-ನೋವುಗಳಿಗೆ ಸ್ಫಂದಿಸುತಿದ್ದಾರೆ. ಇವರ ಅವಧಿಯಲ್ಲೂ ಮೇಲ್ವರ್ಗದ ಜನರ ಮನೆಗಳಿಗೇ ರಸ್ತೆಗಳಾಗುತ್ತಿವೆ ಎನ್ನುವ ಆರೋಪ ಹೊರತು ಪಡಿಸಿದರೆ ಒಣ ಭಾಷಣದ ಹೆಗಡೆಗಳಿಗಿಂತ ಕೊಡುಗೈ ದಾನಿ ಭೀಮಣ್ಣ ಬೆಟರ್ರು ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ.

ಬಿ.ಜೆ.ಪಿ. ಸುಳ್ಳು ಹಿಂದುತ್ವ, ರಾಷ್ಟ್ರೀಯವಾದಗಳಿಗಿಂತ ಕಾಂಗ್ರೆಸ್‌ ನ ಜನಸ್ಫಂದನ ಒಳ್ಳೆಯದೆನ್ನುವ ಸಿದ್ಧಾಪುರದ ಪಟ್ಟಣ ಪಂಚಾಯತ್‌, ತಾಲೂಕಾ ಪಂಚಾಯತ್‌, ಜಿ.ಪಂ. ಹಾಲಿ, ಮಾಜಿ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕಾಂಗ್ರೆಸ್‌ ಸೇರಿ ಕೈ ಅಭ್ಯರ್ಥಿಗಳಾಗುವುದು ಪಕ್ಕಾ ಎನ್ನಲಾಗುತ್ತಿದೆ. ಅವರಲ್ಲಿ ಮಾರುತಿ ನಾಯ್ಕ, ಸುಧೀರ ನಾಯ್ಕ, ಮಾರುತಿ ಕಿಂದ್ರಿ, ಸುರೇಶ್‌ ನಾಯ್ಕ ಸೇರಿದ ಎರಡು ಡಜನ್‌ ನಾಯಕರಿದ್ದಾರೆ ಎನ್ನುವ ಗಾಳಿ ಸುದ್ದಿ ಇದೆ!.

ಮಠ- ಮಠಾಧೀಶರು, ಜಾತಿ ಸಂಘ- ಸ್ವಾಮಿಗಳ ಮೂಲಕ ಹಿಂದುತ್ವ ಪಠಣ ಮಾಡಿಸಿ ಒಳಗೆ ಜಾತಿ-ಪರಿವಾರದ ಷಡ್ಯಂತ್ರಗಳನ್ನು ಪೋಶಿಸುವ ಬಿ.ಜೆ.ಪಿ. ಮತ್ತದರ ಪರಿವಾರ ಯೋಗ್ಯತೆ ಇಲ್ಲದ ಅನಕ್ಷರಸ್ಥರನ್ನು ಓಲೈಸಿ ಹಣೆಗೆ ಕುಂಕುಮ, ಹೆಗಲಿಗೆ ಕೇಸರಿ ಶಾಲು ಹಾಕುತ್ತದೆ. ಹೀಗೆ ಈ ನಾಮ-ಶಾಲಿನ ಗುಲಾಮರಾದವರು ಧರ್ಮದ ಹೆಸರಲ್ಲಿ ಮನೆ-ಊರು ಹಾಳು ಮಾಡತೊಡಗುತ್ತಾರೆ.ಇಂಥ ಮನೆಹಾಳರೇ ತಮ್ಮ ಆಸ್ತಿ- ಗುರಿ ಎನ್ನುವ ಬಿ.ಜೆ.ಪಿ. ಹೀಗೆ ಕುರಿಗಳಾದ ಸಾವಿರಾರು ಮೂರ್ಖರನ್ನು ಜೈಲಿಗಟ್ಟಿದೆ. ಈ ಅಡ್ಡಕಸುಬಿಗಳಿಗೆ ಕೋರ್ಟನಲ್ಲಿ ವಾದಿಸಲು ವಕೀಲರನ್ನು ನೇಮಿಸುವ ಹಿಂದುತ್ವವಾದಿ ಪಕ್ಷ ಈ ಮತಿಗೆಟ್ಟವರಿಂದಲೇ ಅವರ ಪಕ್ಷದ ವಕೀಲರಿಗೆ ಶುಲ್ಕವನ್ನೂ ಕೊಡಿಸುತ್ತೆ!. ಇದು ಮಾತಾಂಧರ ಸ್ಟ್ಯಾಟಜಿ ಈ ಸ್ಟ್ಯಾಟಜಿ ಸರಿಯಾಗಿ ಬಳಸಿಕೊಳ್ಳುವ ಬಿ.ಜೆ.ಪಿ. ಲಾಭ ಮಾಡುವುದು ಪರಿವಾರದ ಮೇಲ್ವರ್ಗದವರಿಗೆ! ಈ ಸತ್ಯಗಳು ಶಿರಸಿ-ಭಟ್ಕಳ ಸೇರಿದಂತೆ ಮಲೆನಾಡು- ಕರಾವಳಿಯ ಜನರಿಗೆ ಅರ್ಥವಾಗುತ್ತಿದೆ. ಹಾಗಾಗಿ ಈಗ ಬಿ.ಜೆ.ಪಿ. ಎಂದರೆ ಅಡ್ಡಕಸುಬಿಗಳ ಅಡ್ಡೆ ಎನ್ನುವಂತಾಗಿದೆ ಇಂಥ ಪಕ್ಷ- ಅದಕ್ಕನುಗುಣವಾದ ಸುಳ್ಳುಬುರುಕರ ನಾಯಕತ್ವ ಬಿ.ಜೆ.ಪಿ.ಯನ್ನು ಮುಳುಗಿಸದೆ, ತೇಲಿಸಲು ಸಾಧ್ಯವೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *