ಉಲ್ಟಾಅಂಗಿ ಬಗ್ಗೆ ಸಾಹಿತಿ ಅರುಣಕುಮಾರ ಹಬ್ಬು ಅನಿಸಿಕೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನನ್ನ ಅಚ್ಚುಮೆಚ್ಚಿನ ಪ್ರದೇಶ. ಮಲೆನಾಡ ಸೊಗಡು, ಎತ್ತರೆತ್ತರ ಮರಗಳು, ಸಂಜೆಯಾದ ಕೂಡಲೇ ರೊಂಯ್ ರೊಂಯ್ ಎಂದು ಒರಲುವ ಮರ ಜಿರಲೆಗಳು, ಬೆಳಿಗಿನ ಮಂಜು ಹನಿಗಳು ಎಲೆಗಳ ಮೇಲೆ ಮುತ್ತಿನಂತೆ ಸೂರ್ಯನ ಬೆಳಕಿಗೆ ಹೊಳೆಯುವುದು, ಪಕ್ಷಿಗಳ ಕಲರವ. ನಿತ್ಯ ಇವೆಲ್ಲವನ್ನು ಅನುಭವಿಸಿ ಅಲ್ಲಿಯೇ ಬಾಲ್ಯ ಕಳೆದ ನನಗೆ ಮಲೆನಾಡೇ ಇಷ್ಟ.

ಮಂಚಿಕೆರೆ ಎಂಬ ಪುಟ್ಟ ಪೇಟೆಯೂ ಅಲ್ಲದ ಹಳ್ಳಿಯೂ ಅಲ್ಲದ ಊರಿನಲ್ಲಿಲ್ಲಿದ್ದ ಸರಕಾರಿ ಶಾಲೆ ಮತ್ತು ರಾಜರಾಜೇಶ್ವರಿ ಹೈಸ್ಕೂಲಿನಲ್ಲಿ ನನ್ನ ಶಿಕ್ಷಣ. ಅವೆಲ್ಲ ರೋಮಾಂಚಕ ಅನುಭವ. ಅಂಥ ತಾಲೂಕಿನ ಬೀಗಾರ ಗ್ರಾಮದ ತಮ್ಮಣ್ಣ ಅವರು ಒಬ್ಬ ಶಿಕ್ಷಕ ಮತ್ತು ಸಾಹಿತಿ. ಅವರ ಪರಿಚಯ ಆದದ್ದು ಫೇಸ್ಬುಕ್ನಲ್ಲಿ. ಅವರ ಬರೆಹಗಳಿಗೆ ನಾನು ಆಗಾಗ ಪ್ರತಿಕ್ರಿಯಿಸುತ್ತಿದ್ದು ಆತ್ಮೀಯತೆ ತಾನೇತಾನಾಗಿ ಬೆಳೆಯಿತು. ಅವರು ಶಾಲಾ ಶಿಕ್ಷಕರಾಗಿದ್ದರಿಂದ ಮಕ್ಕಳ ನಾಡಿ ಅವರಿಗೆ ಕರಗತ. ಹಾಗೆ ಬರೆಯುವ ಹವ್ಯಾಸವೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ.ಎಳೆದು ತಂದಿದೆ. ಅಂತೆಯೇ ಮಕ್ಕಳ ಬಾಲ್ಯದ ಎಲ್ಲ ಚಟುವಟಿಕೆಗಳು, ತುಂಟಾಟಗಳು, ಕುತೂಹಲಗಳು, ಹವ್ಯಾಸಗಳು ಅವರಿಗೆ ಕರತಲಾಮಲಕ.
ಈ ಹಿನ್ನೆಲೆಯಲ್ಲಿ ಅವರು ಮಕ್ಕಳಿಗಾಗೇ ಮೀಸಲಾದ ಉಲ್ಟಾ ಅಂಗಿ ಕಥಾ ಸಂಕನಲನವೊಂದನ್ನು ಹೊರತಂದಿದ್ದಾರೆ. ಅದನ್ನು ಓದುವ ಅವಕಾಶವನ್ನೂ ನನಗೆ ನೀಡಿದ್ದಾರೆ. ಈ ಉಲ್ಟಾ ಅಂಗಿಯ ಮರ್ಮ ಓದುತ್ತ ಹೋದಂತೆ ನನ್ನೆದುರು ತೆರೆದುಕೊಳ್ಳುತ್ತ ಹೋದಂತೆ ನನ್ನ ಬಾಲ್ಯವೇ ಮತ್ತೆ ಮರಳಿ ಬಂದಷ್ಟು ಸಾರ್ಥಕ ಮನೋಭಾವ ಉಂಟಾಯಿತು.
ಈ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚು. ಶಾಲೆಗೆ ಬಾರದ ಸುಬ್ಬು, ಹುಟ್ಟು ಹಬ್ಬಕ್ಕೆ ಚಾಕಲೇಟ್ ಹಂಚಲು ಪರದಾಡಿ ಸುಳ್ಳು ಹೇಳಿದ ಸೌಮ್ಯ, ಮರಹತ್ತಿ ಪಾರಿವಾಳವನ್ನು ಪಾರು ಮಾಡುವಾಗ ಅಂಗಿ ಹೊಲಸಾದರೂ ಉಲ್ಟಾ ಹಾಕಿದ್ದ ಅಂಗಿಯನ್ನು ಸೀದಾ ಮಾಡಿ ಗೆದ್ದ ಎಂಕಣ್ಣ,, ಗಣಪತಿ ಮುಳುಗಿಸುವ ಕುರಿತು ಸಾನ್ವಿಗೆ ಅರಿವು ಮೂಡಿಸುವ ರವಿ, ಎರಡು ತುಂಡಾದ ಎಲೆಗಳನ್ನು ಕೂಡಿಸುವಂತೆ ತಂದೆ ತಾಯಿಯನ್ನು ಒಂದು ಮಾಡುವ ಅಜ್ಜಿ . . . ಹೀಗೆ ಎಲ್ಲರೂ ಆಪ್ತವಾಗುತ್ತ ಸಾಗುತ್ತಾರೆ.
ಎಲ್ಲ ಮಕ್ಕಳಿಗೂ ತಿಳಿಯುವಂತೆ ಸರಳ ಭಾಷಾ ಪ್ರಯೋಗ, ಆದರೂ ಸುಂದರ ನಿರೂಪಣೆಯಿಂದ ಮಕ್ಕಳ ಅಷ್ಟೇ ಏಕೆ ನನ್ನಂಥ ಹಿರಿಯನ ಮನಸ್ಸೂ ಸೆರೆ ಹಿಡಿಯುತ್ತದೆ. ಸ್ನಾತಕೋತ್ತರ ಪದವೀಧರರಾಗಿರುವ ತಮ್ಮಣ್ಣ ಬೀಗಾರ ಈ ಕಥಾ ಸಂಕಲನದ ಮೂಲಕ ಎಲ್ಲ ಓದುಗರು ಮತ್ತು ಮಕ್ಕಳ ಮನ ಗೆದ್ದಿದ್ದಾರೆ. ನಾನು ಈ ಕಥೆಗಳನ್ನು ನನ್ನ ಪುಟ್ಟ ಮೊಮ್ಮಕ್ಕಳಿಗೂ ಓದಿ ತೋರಿಸಿದೆ. ಒಟ್ಟಾರೆ ಇದು ಮಕ್ಕಳ ಕಥಾ ಸಾಹಿತ್ಯದಲ್ಲಿ ಒಂದು ಉತ್ತಮ ಪ್ರಯೋಗ. ಇಂಥ ಮೌಲ್ವಿಕ ಸೃಷ್ಟಿ ನಿಮ್ಮಿಂದ ಇನ್ನಷ್ಟು ಬರಲಿ ತಮ್ಮಣ್ಣ.

ಅನುಗಾರ ಬೆನಕ,
ಸವಿಜೇನಿನ ಜನಕ
ತಾಲೂಕಿನ ಬೆಳ್ಳುಮನೆಯ ಬೆನಕ ಬಿಳಗಿ ಜೇನುಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಾತ್ಕಾಲಿಕ ಉದ್ಯೋಗಿ.
ಈ ಡಿ. ದರ್ಜೆಯ ಅನುಗಾರ
ಅಲ್ಲಿ ಕೆಲಸ ಮಾಡಿಕೊಂಡು ಇಲಾಖೆಯ ಜವಾಬ್ಧಾರಿ ನಿರ್ವಹಿಸುತ್ತಾ ಕಾಲ ಕಳೆದಿದ್ದರೆ ಬೆನಕ ನಿವೃತ್ತಿಯ ನಂತರವೂ ಸುದ್ದಿಯಾಗದೆ ಕಳೆದು ಹೋಗುತಿದ್ದ ಯಾಕೆಂದರೆ….. ಈತ ಅಲ್ಲಿಯ ಹಂಗಾಮಿ ನೌಕರ.
ಆದರೆ ಇದರಾಚೆ ತನ್ನ ಆಸಕ್ತಿ,ಸಾಧನೆಯಿಂದ
ಈತ ಅನುಗಾರ ಬೆನಕ ಸವಿಜೇನಿನ ಜನಕ ಎನ್ನುವ ಶೀರ್ಷಿಕೆಗೆ ಮಹತ್ವ ತಂದಿದ್ದಾನೆ. …..

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *