ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿರುವ ಗುಡುಂಕಲ್ ಜಲಪಾತ

ಕರೋನಾ, ಅಕಾಲಿಕ ಮಳೆಗಳಿಲ್ಲದಿದ್ದರೆ… ಈ ಅವಧಿಯಲ್ಲಿ ಜಲಪಾತ ನೋಡಿ, ದಣಿದು ಬಸವಳಿಯುವುದಿದೆಯಲ್ಲಾ… ಅದರ ಅನುಭವಕ್ಕೆ ಅದೇ ಸಾಟಿ. ನಮ್ಮ ಜಿಲ್ಲೆಯ ಜಲಪಾತಗಳನ್ನು ಅಲೆದು ಅನುಭವ ಪೇರಿಸಿಕೊಂಡ ಹೊರಗಿನವರಿಗೆ ಹೋಲಿಸಿಕೊಂಡರೆ ನಮಗೆ ಈ ಪ್ರಕೃತಿಯ ಸೊಬಗಿನ ಬಗ್ಗೆ ಮರುಕವೋ? ವಿಸ್ಮೃತಿಯೋ ತಿಳಿಯದ ಗೊಂದಲ.

ಮೊನ್ನೆ ಕೃಷಿ ಅಧಿಕಾರಿ ಪ್ರಶಾಂತ್ ಮಾಹಿತಿ ಆಧರಿಸಿ ಹಂದಿಮನೆಯ ಹೊಳೆಯ ಚಿಕ್ಕ ಜಲಪಾತ ನೋಡಿದಾಗ ಅದೇನೋ ಅಲ್ಹಾದ ಉಂಟಾದಂತಾಯಿತು. ಅಲ್ಲಿ ನಮಗೆ ಸಿಕ್ಕ ಸ್ಥಳಿಯರು ಕಾಣಿಸಿದ ಈ ಗುಡುಂಕಲ್ ಜಲಪಾತಕ್ಯಾದಗಿಯಿಂದ ಕುಮಟಾ ಮಾರ್ಗದಲ್ಲಿ 2 ಕಿ.ಮೀ. ನಂತರ ಹಂದಿಮನೆಯ ಹೊಳೆ ಸೃಷ್ಟಿಸಿರುವ ಸೊಬಗು. ರೈತರು ಈ ಹೊಳೆ ಕಟ್ಟಿ ಒಡ್ಡು ಮಾಡುವ ಸಂಕ್ರಾಂತಿಯ ಮೊದಲು ಕುಟುಂಬ ಸಹಿತ ಹೋಗಿ ನೋಡಿಬರಬಹುದಾದ ಹಂದಿಮನೆ, ಗುಡುಂಕಲ್ ಜಲಪಾತದ ವಿಶೇಷವೆಂದರೆ… ಶ್ರಮವೂ ಬೇಡ, ಅಪಾಯವೂ ಇಲ್ಲ. ಇಂಥ ಜಲಪಾತವನ್ನು ಆ ಭಾಗದ ಎಸ್,ಆರ್. ನಾಯ್ಕ, ಕೆ.ಟಿ. ನಾಯ್ಕರಂಥವರು ಸರ್ವ ಋತು ಜಲಪಾತವನ್ನಾಗಿಸಬಹುದಿತ್ತೇನೋ?ಒಂದು ಬ್ಯಾರೇಜ್ ಮಾದರಿಯ ನೀರು ಸಂಗ್ರಹದ ಚಿಕ್ಕ ಆಣೆಕಟ್ಟೆಮಾಡಿ, ಮಳೆಗಾಲದಲ್ಲಿ ನೀರು ಹರಿಯಬಿಟ್ಟು ಮಳೆಯ ನಂತರ ನೀರು ಸಂಗ್ರಹಿಸಿದರೆ ಜಲಪಾತದ ಸೊಬಗು ವೃದ್ಧಿಸುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಇದರಿಂದ ಅನುಕೂಲಗಳಾಗಬಹುದು.

ಇದು ಒಂದು ಸಲಹೆಯಾದರೆ ಈಗಿರುವ ಸ್ಥಿತಿಯಲ್ಲೇ ಈ ಜಲಪಾತಕ್ಕೆ ಸಣ್ಣ ರಸ್ತೆ, ಒಂದು ನಾಮಫಲಕ ಇಟ್ಟು ಮಕ್ಕಳಿಗೆ ಜಲಪಾತ ಭೇಟಿ, ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳು ಖುಷಿಪಡುತ್ತಾರೆ. ಈ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರಿಸಿದ್ದೇನೆ. ಇದೇ ಪಂಚಾಯತ್ ನ ಬುರುಡೆ ಜಲಪಾತದ ತಲೆ-ಬುಡ, ಬುರುಡೆ ಕಾಣದಂತೆ ಪ್ರವಾಸೋದ್ಯಮ ಇಲಾಖೆ ಬುರುಡೆ ಜಲಪಾತದ ಮುಖ ಕಟ್ಟಿದೆ. ಈ ಜಲಪಾತದಲ್ಲಿ ಸಾವು-ನೋವುಗಳಾಗದಂತೆ ತಡೆಯಲು ಅವಶ್ಯ ಕೆಲಸ ಮಾಡುವುದನ್ನು ಬಿಟ್ಟು ಅಪೂರ್ಣ ಮೆಟ್ಟಿಲು ಮಾಡಿ ವೀಕ್ಷಣೆಗೆ ನಿರ್ಬಂಧ ಹೇರಿರುವ ಜಲಪಾತವನ್ನು ನೋಡಲು ಬರುವವರಿಗೆ ನಿರಾಸೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನಮ್ಮ ನಾಡಿನ ಸೊಬಗನ್ನು ಹೊರಗಿನವರಿಗೆ ಪರಿಚಯಿಸಲು ಶ್ರಮಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಂದಿಗೆ ಸ್ಥಳಿಯರೂ ಬೇಸರಿಸಿದರು. ಸಿದ್ಧಾಪುರ, ಉತ್ತರ ಕನ್ನಡದ ಕಾಡು-ಜಲ ಗಳ ಸೊಬಗನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಬೇಕಾದ ನಾಯಕತ್ವ ಈ ಜಿಲ್ಲೆಗೆ ಶಾಪ ಎಂದೆನಿಸದೇ ಇರಲಿಲ್ಲ. ಈ ಗುಡುಂಕಲ್ ಮಕ್ಕಳ ಜಲಪಾತ, ಚಾರಿತ್ರಿಕ,ಪರಿಸರ ಮಹತ್ವದ ವಿಶ್ವವಿಖ್ಯಾತ ಬುರುಡೆ ಜಲಪಾತ ಸ್ಥಳಿಯರೊಂದಿಗೆ,ಪ್ರವಾಸಿಗರಿಗೂ ಹತ್ತಿರವಾಗಬೇಕಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *