ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿರುವ ಗುಡುಂಕಲ್ ಜಲಪಾತ

ಕರೋನಾ, ಅಕಾಲಿಕ ಮಳೆಗಳಿಲ್ಲದಿದ್ದರೆ… ಈ ಅವಧಿಯಲ್ಲಿ ಜಲಪಾತ ನೋಡಿ, ದಣಿದು ಬಸವಳಿಯುವುದಿದೆಯಲ್ಲಾ… ಅದರ ಅನುಭವಕ್ಕೆ ಅದೇ ಸಾಟಿ. ನಮ್ಮ ಜಿಲ್ಲೆಯ ಜಲಪಾತಗಳನ್ನು ಅಲೆದು ಅನುಭವ ಪೇರಿಸಿಕೊಂಡ ಹೊರಗಿನವರಿಗೆ ಹೋಲಿಸಿಕೊಂಡರೆ ನಮಗೆ ಈ ಪ್ರಕೃತಿಯ ಸೊಬಗಿನ ಬಗ್ಗೆ ಮರುಕವೋ? ವಿಸ್ಮೃತಿಯೋ ತಿಳಿಯದ ಗೊಂದಲ.

ಮೊನ್ನೆ ಕೃಷಿ ಅಧಿಕಾರಿ ಪ್ರಶಾಂತ್ ಮಾಹಿತಿ ಆಧರಿಸಿ ಹಂದಿಮನೆಯ ಹೊಳೆಯ ಚಿಕ್ಕ ಜಲಪಾತ ನೋಡಿದಾಗ ಅದೇನೋ ಅಲ್ಹಾದ ಉಂಟಾದಂತಾಯಿತು. ಅಲ್ಲಿ ನಮಗೆ ಸಿಕ್ಕ ಸ್ಥಳಿಯರು ಕಾಣಿಸಿದ ಈ ಗುಡುಂಕಲ್ ಜಲಪಾತಕ್ಯಾದಗಿಯಿಂದ ಕುಮಟಾ ಮಾರ್ಗದಲ್ಲಿ 2 ಕಿ.ಮೀ. ನಂತರ ಹಂದಿಮನೆಯ ಹೊಳೆ ಸೃಷ್ಟಿಸಿರುವ ಸೊಬಗು. ರೈತರು ಈ ಹೊಳೆ ಕಟ್ಟಿ ಒಡ್ಡು ಮಾಡುವ ಸಂಕ್ರಾಂತಿಯ ಮೊದಲು ಕುಟುಂಬ ಸಹಿತ ಹೋಗಿ ನೋಡಿಬರಬಹುದಾದ ಹಂದಿಮನೆ, ಗುಡುಂಕಲ್ ಜಲಪಾತದ ವಿಶೇಷವೆಂದರೆ… ಶ್ರಮವೂ ಬೇಡ, ಅಪಾಯವೂ ಇಲ್ಲ. ಇಂಥ ಜಲಪಾತವನ್ನು ಆ ಭಾಗದ ಎಸ್,ಆರ್. ನಾಯ್ಕ, ಕೆ.ಟಿ. ನಾಯ್ಕರಂಥವರು ಸರ್ವ ಋತು ಜಲಪಾತವನ್ನಾಗಿಸಬಹುದಿತ್ತೇನೋ?ಒಂದು ಬ್ಯಾರೇಜ್ ಮಾದರಿಯ ನೀರು ಸಂಗ್ರಹದ ಚಿಕ್ಕ ಆಣೆಕಟ್ಟೆಮಾಡಿ, ಮಳೆಗಾಲದಲ್ಲಿ ನೀರು ಹರಿಯಬಿಟ್ಟು ಮಳೆಯ ನಂತರ ನೀರು ಸಂಗ್ರಹಿಸಿದರೆ ಜಲಪಾತದ ಸೊಬಗು ವೃದ್ಧಿಸುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಇದರಿಂದ ಅನುಕೂಲಗಳಾಗಬಹುದು.

ಇದು ಒಂದು ಸಲಹೆಯಾದರೆ ಈಗಿರುವ ಸ್ಥಿತಿಯಲ್ಲೇ ಈ ಜಲಪಾತಕ್ಕೆ ಸಣ್ಣ ರಸ್ತೆ, ಒಂದು ನಾಮಫಲಕ ಇಟ್ಟು ಮಕ್ಕಳಿಗೆ ಜಲಪಾತ ಭೇಟಿ, ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳು ಖುಷಿಪಡುತ್ತಾರೆ. ಈ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರಿಸಿದ್ದೇನೆ. ಇದೇ ಪಂಚಾಯತ್ ನ ಬುರುಡೆ ಜಲಪಾತದ ತಲೆ-ಬುಡ, ಬುರುಡೆ ಕಾಣದಂತೆ ಪ್ರವಾಸೋದ್ಯಮ ಇಲಾಖೆ ಬುರುಡೆ ಜಲಪಾತದ ಮುಖ ಕಟ್ಟಿದೆ. ಈ ಜಲಪಾತದಲ್ಲಿ ಸಾವು-ನೋವುಗಳಾಗದಂತೆ ತಡೆಯಲು ಅವಶ್ಯ ಕೆಲಸ ಮಾಡುವುದನ್ನು ಬಿಟ್ಟು ಅಪೂರ್ಣ ಮೆಟ್ಟಿಲು ಮಾಡಿ ವೀಕ್ಷಣೆಗೆ ನಿರ್ಬಂಧ ಹೇರಿರುವ ಜಲಪಾತವನ್ನು ನೋಡಲು ಬರುವವರಿಗೆ ನಿರಾಸೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನಮ್ಮ ನಾಡಿನ ಸೊಬಗನ್ನು ಹೊರಗಿನವರಿಗೆ ಪರಿಚಯಿಸಲು ಶ್ರಮಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಂದಿಗೆ ಸ್ಥಳಿಯರೂ ಬೇಸರಿಸಿದರು. ಸಿದ್ಧಾಪುರ, ಉತ್ತರ ಕನ್ನಡದ ಕಾಡು-ಜಲ ಗಳ ಸೊಬಗನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಬೇಕಾದ ನಾಯಕತ್ವ ಈ ಜಿಲ್ಲೆಗೆ ಶಾಪ ಎಂದೆನಿಸದೇ ಇರಲಿಲ್ಲ. ಈ ಗುಡುಂಕಲ್ ಮಕ್ಕಳ ಜಲಪಾತ, ಚಾರಿತ್ರಿಕ,ಪರಿಸರ ಮಹತ್ವದ ವಿಶ್ವವಿಖ್ಯಾತ ಬುರುಡೆ ಜಲಪಾತ ಸ್ಥಳಿಯರೊಂದಿಗೆ,ಪ್ರವಾಸಿಗರಿಗೂ ಹತ್ತಿರವಾಗಬೇಕಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *