ಕೊಮಿಡಿ ದಯಾನಂದ ಬಗ್ಗೆ ಮಂಡ್ಯರಮೇಶ್ ಬರಹ

ಕನಸುಗಾರ’ ಚಿತ್ರೀಕರಣ ಭರದಿಂದ ನಡೆದಿತ್ತು !ಆ ಹೊತ್ತಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ನಾನು ಸಮೀಪದಲ್ಲಿ ನೋಡಿದೆ.ನನ್ನನ್ನು ಕಂಡವರೇ ಹತ್ತಿರ ಕರೆದು, ಕುಳಿತು ಎಷ್ಟೋ ವರ್ಷಗಳ ಗೆಳೆಯ ಎಂಬಂತೆ ಮಾತನಾಡಿಸಿದರು.ರಂಗಭೂಮಿ, ಮಾಧ್ಯಮಗಳು ,ಸಾಮಾಜಿಕ ವರ್ತಮಾನ, ರಾಜಕೀಯ ,ಸಾಹಿತ್ಯ ..ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಲೇ ಹೋದರು.ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಪೋಷಕ ನಟ ಎಂದರೆ ಉಪ್ಪಿನಕಾಯಿ ಇದ್ದಹಾಗೆ! ಅಪರೂಪಕ್ಕೊಮ್ಮೆ ಬಂದು ಹೋಗುತ್ತೇವೆ ಅಷ್ಟೇ! ಶೂಟಿಂಗ್ನಲ್ಲಿ ತುಂಬಾ ಬಿಡುವು ಇರುತ್ತದೆ!.. ಆಗೆಲ್ಲ ಒಳ್ಳೆಯದನ್ನು ಕುರಿತು ಮಾತನಾಡುವ,, ಚರ್ಚೆಮಾಡಲು ಯಾರಾದರೂ ಸಿಕ್ಕದಿದ್ದರೆ ಅವನು ಬೋರ್ ಆಗುವುದಂತೂ ಗ್ಯಾರಂಟಿ

..ನನಗೆ ಕೆಲವೇ ಕ್ಷಣಗಳಲ್ಲಿ ಈ ವ್ಯಕ್ತಿ ಆಪ್ತನಾಗಿ ಬಿಟ್ಟರು. ಅವರ ಮಾತುಗಳಿಂದ ವಿಚಾರಗಳಿಂದ , ಸಾಧನೆಗಳಿಂದ, ಸಾಧ್ಯತೆಗಳಿಂದ ಪ್ರಭಾವಿತನಾದೆ ಆ ವ್ಯಕ್ತಿ ಕನ್ನಡದ ಹೆಮ್ಮೆಯ ಬಹುಮುಖ ಪ್ರತಿಭೆಯ #ಮಿಮಿಕ್ರಿ#ದಯಾನಂದ !ಈ ಟಿವಿಯಲ್ಲಿ ಅವರು ನಡೆಸಿಕೊಡುತ್ತಿದ್ದ ಏಕವ್ಯಕ್ತಿ ಪ್ರದರ್ಶನಗಳು ಮತ್ತು ರಾಜಕುಮಾರ್ ಅಪಹರಣವಾದಾಗ ಅವರು ಸೃಷ್ಟಿಸಿದ ಸಿ .ಡಿ, ಅವರ ಅನೇಕ ವಿಚಾರಪೂರ್ಣ ಮತ್ತು ಆಕರ್ಷಕ ಗುಣಗಳು ಎರಡೂ ಮೇಳವಿಸಿದ ಅಪರೂಪದ ಮಿಮಿಕ್ರಿ ಕಾರ್ಯಕ್ರಮಗಳು,ಮಜಾ ಟಾಕೀಸ್ ಒಡನಾಟ ,ಆಸ್ಟ್ರೇಲಿಯಾ ಪ್ರವಾಸ.. ನನ್ನನ್ನುಮತ್ತಷ್ಟು ಹತ್ತಿರಕ್ಕೆ ಸೆಳೆಯಲು ಕಾರಣವಾದವು.

ಗುರು ಕಾರಂತರು ಮಿಮಿಕ್ರಿ ಎಂದರೆ ಅಷ್ಟೇನೂ ಹತ್ತಿರಕ್ಕೆ ಬಿಟ್ಟು ಕೊಂಡವರಲ್ಲ !ಆದರೆ ಈ ವ್ಯಕ್ತಿಯ ಮಿಮಿಕ್ರಿ ಗಳು ಇತರರಿಗಿಂತ ಭಿನ್ನವಾಗಿದ್ದವು ಆ ಕಾರಣಕ್ಕಾಗಿ ದಯಾನಂದರದೆ ಒಂದು ವಿಶಿಷ್ಟ ಶೈಲಿ ಇತ್ತು. ನಟನ ಕಟ್ಟುವ ಆರಂಭದ ದಿನಗಳಲ್ಲಿ ಹಣದ ತೊಂದರೆಯಾಗಿ ನಾನು ಒದ್ದಾಡುತ್ತಿದ್ದ ನೋಡಿ ಒಮ್ಮೆ ಸಾಲ ಕೊಟ್ಟಿದ್ದರು! ಅದನ್ನು ಮರಳಿಸಿದೆ. ಪ್ರತಿವರ್ಷ ನಮ್ಮ ಮಕ್ಕಳ ಬೇಸಿಗೆ ರಂಗ ಶಿಬಿರ ರಜಾ-ಮಜಾಕ್ಕೆ ಆಗಮಿಸಿ, ಶಿಬಿರದ ಮಕ್ಕಳಿಗೆ ಧ್ವನಿಯ ಬಳಕೆ, ಏರಿಳಿತಗಳು, ಮಾತನಾಡುವ ಕಲೆಯನ್ನು ಕುರಿತು ವೈಶಿಷ್ಟ್ಯಪೂರ್ಣವಾಗಿ ತರಬೇತು ಗೊಳಿಸಿದರು. ಇವತ್ತಿಗೂ ಅವರೊಂದಿಗೆ ಮಾತನಾಡುತ್ತಿದ್ದರೆ, ಕಲಾವಿದನೊಬ್ಬನ ಯಾನವೊಂದನ್ನು ನವಿರಾದ ನಿರೂಪಣೆಯೊಂದಿಗೆ ಮನದಣಿಯೆ ಸವಿಯಬಹುದು.

ಸಾವಿರಾರು ಕಾರ್ಯಕ್ರಮಗಳು, ಅಸಂಖ್ಯ ವಿದೇಶ ಪ್ರವಾಸಗಳು, ಲಕ್ಷಾಂತರ ಅಭಿಮಾನಿಗಳು, ಎಲ್ಲವನ್ನು ಮೀರಿ ಮಾನವೀಯ ನೆಲೆಯಲ್ಲಿಯೇ ಮನದಣಿಯೆ ಅನುಭವಿಸುವ ಕಥನ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.ಕಾರ್ಯಕ್ರಮಗಳಿಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ, ಚೈತನ್ಯ ಬತ್ತಿಲ್ಲ!”ಮನೆಗೆ ಬಾ” ಅಂತ ಫೋನಾಯಿಸಿದರು! ಇವತ್ತು ಹೋದೆ, ಅವರನ್ನು ಜನಪ್ರೀತಿ ಮಾಡಿರುವ ರೀತಿ ನೋಡಿ ಬೆರಗಾದೆ .ನಟನದ ನಾಟಕಗಳಿಗೆ ಸಹಾಯವಾಗುವ ಅನೇಕ ಕೋಟು, ವಿಗ್ ಗಳನ್ನು ಕಾರಿನ ತುಂಬೆಲ್ಲ ಭರ್ತಿ ತುಂಬಿ ಬಿಟ್ಟರು.!ಸ್ನೇಹಕ್ಕೆ, ಮಾತು ಬಾರದಾಯಿತು!ಎದ್ದು ಬರುವ ಮುಂಚೆ “ಏನು ಬೇಕು”? ಎಂದರು . ಮೇಲಂತಸ್ತಿನಲ್ಲಿ #ಬಾಬಾಸಾಹೇಬರು ನಿಂತಿದ್ದರು.ಅಪರೂಪದ ಮೂರ್ತಿ.”ಅದು ಬೇಕು” ಅಂದೆ. ಪ್ರೀತಿಯಿಂದ “ತೆಗೆದುಕೋ” ಅಂತ ಕೊಟ್ಟರು.ಮರಳಿ ಬರುವಾಗ ಶಿಷ್ಯ ಜಗ್ಗಿ “ಅದೇನು ಸರ್ ಅಂಬೇಡ್ಕರ್ ತೆಗೆದುಕೊಂಡಿದ್ದು” ಅಂದ.”ನೀನ್ ಇವತ್ತು ನನ್ನ ಪಕ್ಕದಲ್ಲಿ ಇರೋದಕ್ಕೆ ಅವರೇ ಕಾರಣ” ಅಂದೆ ನಗುತ್ತಾ !’ನಟನ’ ದಲ್ಲಿ ಈಗಾಗಲೇ ಗಾಂಧಿ ಕೂತಿದ್ದಾರೆ.ಈಗ ನಿಂತ ಅಂಬೇಡ್ಕರ್ ಬಂದರು .ಒಳಗೆ ಬುದ್ಧ- ಬಸವಣ್ಣ ವಿವೇಕಾನಂದ ,ಕುವೆಂಪು- ಕಾರಂತರು ಇದ್ದಾರೆ ..”ಇವರ ಘರ್ಷಣೆಗಳಲ್ಲಿ- ಹೊಂದಾಣಿಕೆಯಲ್ಲಿನಾವು ಬದುಕಬೇಕು” ಅಂದೆ! ಮಗ ಶಿಶಿರ “ಕಷ್ಟ” ಅಂದ !.”ಗೊತ್ತು” ಎಂದು ನಕ್ಕೆ! ‘#ದಯೆ‘ಯಲ್ಲಿ ‘#ಆನಂದ‘ವಿದೆ !🙏 -ಮಂಡ್ಯ ರಮೇಶ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *