local & crime news-ಅವಿರೋಧ ಆಯ್ಕೆ, ಹೋಗಿದ್ದೀಯೆ, ಮತ್ತೆ ಬರಬೇಡ ಮಗಳೇ’!

ಸಿದ್ದಾಪುರ,
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಭಾನುವಾರ ನಡೆಯಿತು.
ಅನಂತ ವಿಘ್ನೇಶ್ವರ ಹೆಗಡೆ ಗೊಂಟನಾಳ,ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ, ಅಶೋಕ ಗಣಪತಿ ಹೆಗಡೆ ಹಿರೇಕೈ, ಅಶೋಕ ರಾಮಚಂದ್ರ ಹೆಗಡೆ ಹೀನಗಾರ, ನಾಗರಾಜ ಶೇಷಗಿರಿ ಹೆಗಡೆ ಹುಲಿಮನೆ, ಮಹಾಬಲೇಶ್ವರ ದೇವರು ಭಟ್ಟ ಅಗ್ಗೆರೆ, ಮಂಜುನಾಥ ಕೃಷ್ಣ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಹನುಮಂತ ಗೌಡ ಮಾದ್ಲಮನೆ,ಇಂದಿರಾ ಗಜಾನನ ಹೆಗಡೆ ಹಾರ್ಸಿಕಟ್ಟಾ, ಸುಮಾ ಮಂಜುನಾಥ ಹೆಗಡೆ ಹೊನ್ನೆಹದ್ದ, ನಾಗರಾಜ ಬಂಗಾರೇಶ್ವರ ಹೆಗಡೆ ಹೊಲಗದ್ದೆ, ಸುಧಾಕರ ಗಣಪ ಹರಿಜನ ಹೊನ್ನೆಹದ್ದ ಇವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿ ಆಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಸಿ.ಜಿ. ಕಾರ್ಯನಿರ್ವಹಿಸಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

ಸಿದ್ದಾಪುರ
ಕಲೆ ಹಾಗೂ ಕಲಾವಿದರು ಉಳಿಯಬೇಕಾದರೆ ಕಲಾ ಸಂಘಟಕರು ಮುಖ್ಯ. ಅದರಂತೆ ಕಲೆಯನ್ನು ಪ್ರೋತ್ಸಾಹಿಸುವವರು ಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಜೈಕುಮಾರ್ ನಾಯ್ಕ ಮೆಣಸಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಯಕ್ಷತರಂಗಿಣಿ ಕಲಾ ಸಂಘ ಮಕ್ಕಳಿಂದ ಆಯೋಜಿಸಿದ್ದ ಸೂರ್ಯರತ್ನ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಾವು ನಿರ್ವಹಿಸುವ ಪಾತ್ರದ ಕುರಿತು ಚಿಂತನೆ ನಡೆಸಬೇಕು. ನೃತ್ಯ ಮಾಡುವಾಗ ಪ್ರೇಕ್ಷರಿಂದ ಬರುವ ಚಪ್ಪಾಳೆ ಹಾಗೂ ಶಿಳ್ಳೆಗೆ ಮರುಳಾಗಬಾರದು. ಯಕ್ಷಗಾನದಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕೆಂದರು.
ಅಧ್ಯಕ್ಷತೆವಹಿಸಿದ್ದ ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್ ಮಾತನಾಡಿ ಮಕ್ಕಳಿಗೆ ಯಕ್ಷಗಾನದಿಂದ ಉತ್ತಮ ಸಂಸ್ಕಾರ ದೊರಕುತ್ತದೆ.ಯಕ್ಷಗಾನ ಕಲೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದರು.
ಅನಂತ ಶಾನಭಾಗ್ ಹಾರ್ಸಿಕಟ್ಟಾ, ಎಸ್.ಆರ್.ಹೆಗಡೆ ಕುಂಬಾರಕುಳಿ,ಅನಂತ ಹೆಗಡೆ ಹೊಸಗದ್ದೆ,ಆರ್.ಬಿ.ಗೌಡ ಹೊಸ್ಕೊಪ್ಪ, ರವೀಂದ್ರ ಹೆಗಡೆ ಹಿರೇಕೈ,ಆರ್.ಕೆ.ನಾಯ್ಕ ಹಾರ್ಸಿಕಟ್ಟಾ, ವೀಣಾ ಪಿ.ನಾಯ್ಕ,ಎ.ಆರ್.ಹೆಗಡೆ ಹೀನಗಾರ, ಎ.ಜಿ.ಹೆಗಡೆ ಹಿರೇಕೈ, ಸಿದ್ದಾರ್ಥ ಗೌಡರ್, ರಮೇಶ ಹಾರ್ಸಿಮನೆ, ಶಾಂತಕುಮಾರ ಪಾಟೀಲ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಅವರನ್ನು ಯಕ್ಷತರಂಗಿಣಿ ಸಂಸ್ಥಾಪಕ ನಂದನ ನಾಯ್ಕ ಸನ್ಮಾನಿಸಿದರು. ನಂತರ ಪ್ರದರ್ಶನಗೊಂಡ ಸೂರ್ಯರತ್ನ ಯಕ್ಷಗಾನದ ಜನಮನ ರಂಜಿಸಿತು. ಹಿಮ್ಮೇಳದಲ್ಲಿ ಕೃಷ್ಣ ಮರಾಠೆ, ವಿಠ್ಠಲ ಪೂಜಾರಿ ಹಾಗೂ ನಾರಾಯಣ ಕುಮಾರ ಸಹಕರಿಸಿದರು. ಅರ್ಚನಾ ನಾಯ್ಕ ತೆಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ವಿಶೇಷ ಕಾರ್ಯಕ್ರಮ

1 ರಿಂದ 5ನೇ ತರಗತಿ

1) ಶ್ರಾವ್ಯಾ ಗೌಡ – ಸ.ಹಿ.ಪ್ರಾ. ಶಾಲೆ ಮುಠ್ಠಳ್ಳಿ- ಪ್ರಥಮ
1) ಶರಧಿ ಹೆಗಡೆ -ಸ.ಹಿ.ಪ್ರಾ. ಶಾಲೆ ಕೋಡ್ಸರ(ಮುಠ್ಠಳ್ಳಿ) – ತೃತೀಯ

6 ಮತ್ತು 7ನೇ ತರಗತಿ
1) ಶ್ರೀರಕ್ಷಾ ವಿ. ಹೆಗಡೆ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ಪ್ರಥಮ
2) ದಿವ್ಯಶ್ರೀ ಜಿ. ನಾಯ್ಕ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ದ್ವಿತೀಯ
3) ಅನನ್ಯ ಎಮ್. ಭಟ್ಟ – ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ – ತೃತೀಯ

8 ರಿಂದ 10ನೇ ತರಗತಿ – ಅಶೋಕ ಪ್ರೌಢ ಶಾಲೆ ಹಾರ್ಸಿಕಟ್ಟಾ
1) ನಯನಾ ಕೆ. ಶೇಟ್ – ಪ್ರಥಮ
2) ಪೂರ್ಣಿಮಾ ಮರಾಠೆ – ದ್ವಿತೀಯ
3) ಐಶ್ವರ್ಯ ಹೆಗಡೆ – ತೃತೀಯ

ಉಪಸ್ಥಿತರಿದ್ದ ಸದಸ್ಯರು:-
1) ಶ್ರೀಮತಿ ಹನುಮಕ್ಕ ರಂಗಪ್ಪ ಭೋವಿ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
2) ಶ್ರೀಮತಿ ವಿಶಾಲಾಕ್ಷಿ ಮಂಜುನಾಥ ಹಸ್ಲರ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
3) ಶ್ರೀ ಶಾಂತಕುಮಾರ ಶಿವಾಜಿ ಪಾಟೀಲ್ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
4) ಶ್ರೀಮತಿ ಅಕ್ಷತಾ ಮಹೇಂದ್ರ ಮಡಿವಾಳ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
5) ಶ್ರೀಮತಿ ಸರೋಜಾ ರಾಜು ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
6) ಶ್ರೀಮತಿ ವಿದ್ಯಾ ಪ್ರಕಾಶ ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
7) ಶ್ರೀಮತಿ ಪ್ರೇಮಾ ಪರಮೇಶ್ವರ ನಾಯ್ಕ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
8) ಶ್ರೀ ಗೋಪಾಲಕೃಷ್ಣ ಮಂಜುನಾಥ ದೇವಾಡಿಗ ಗ್ರಾ.ಪಂ. ಸದಸ್ಯರು ಹಾರ್ಸಿಕಟ್ಟಾ
ಹಾಗೂ ಎಲ್ಲಾ ಶಾಲಾ ಶಿಕ್ಷಕರು, ಗ್ರಾ.ಪಂ. ಪಿಡಿಒ ರಾಜೇಶ ನಾಯ್ಕ,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಸ್.ಎಸ್.ಸಾಗರೇಕರ್ ನಿರ್ವಹಿಸಿದರು.

ಸಿದ್ದಾಪುರ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಡಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನದಕುರಿತುಜಾಗೃತಿ ಮೂಡಿಸುವಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆಗ್ರಾಮ ಪಂಚಾಯತ ಸದಸ್ಯಕೃಷ್ಣಮೂರ್ತಿ ಮಡಿವಾಳ ಚಾಲನೆ ನೀಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಸುರೇಶ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.ಮುಖ್ಯೋಧ್ಯಾಪಕಿ ಮಾಯಾ ಭಟ್, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಉಪಾಧ್ಯಕ್ಷೆ ಮಂಜುಳಾ ಪಟಗಾರ, ಸಹ ಶಿಕ್ಷಕರಾದ ಶಾಂತಲಾಗಾಂವಕರ್, ಕೇಶವ ನಾಯ್ಕಇದ್ದರು.

ಹೋಗಿದ್ದೀಯೆ, ಮತ್ತೆ ಬರಬೇಡ ಮಗಳೇ’! ನಟಿ ಜಯಶ್ರೀ ಸಾವಿಗೆ ನೊಂದ ಹಿತೈಶಿಯ ಸಂತಾಪ

ರೂಪದರ್ಶಿ, ನಟಿ ಜಯಶ್ರೀ ಬಾರದೂರಿಗೆ ತೆರಳಿದ್ದಾರೆ. ಆದರೆ ಸಹಜವಾಗಲ್ಲ, ಆತ್ಮಹತ್ಯೆಯ ಮೂಲಕ. ಇಂತಹ ಕೆಟ್ಟ ನಿರ್ಧಾರಕ್ಕೆ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯೇ ಕಾರಣವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

jayashree

ಬೆಂಗಳೂರು: ರೂಪದರ್ಶಿ, ನಟಿ ಜಯಶ್ರೀ ಬಾರದೂರಿಗೆ ತೆರಳಿದ್ದಾರೆ. ಆದರೆ ಸಹಜವಾಗಲ್ಲ, ಆತ್ಮಹತ್ಯೆಯ ಮೂಲಕ. ಇಂತಹ ಕೆಟ್ಟ ನಿರ್ಧಾರಕ್ಕೆ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯೇ ಕಾರಣವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ. 

ಅದೆಷ್ಟೇ ಪ್ರತಿಭೆಯಿದ್ದರೂ, ಮನಸ್ಸು ಗಟ್ಟಿಯಿರದಿದ್ದರೆ, ದಿಟ್ಟ ಗುರಿಯಿರದಿದ್ದರೆ ಆತ್ಮಹತ್ಯೆಯಂತಹ ಘಟನೆಗಳು ಜರುಗಿಬಿಡುತ್ತವೆ. ಜಯಶ್ರೀ ಜೀವನದಲ್ಲಿಯೂ ಇದೇ ಆಗಿದೆ.

100%

ತನಗೆ ಚಿಕ್ಕ ವಯಸ್ಸಿನಲ್ಲಿಯೇ ಆಗಬಾರದ್ದು ಆಗಿದೆ. ಮತ್ತೆ ಮತ್ತೆ ನೆನಪಾಗುವ ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಈ ಮೊದಲು ಆಕೆ ಹೇಳಿಕೊಂಡಿದ್ದರು. ಅದಲ್ಲದೆ ಆಸ್ತಿಗೆ ಸಂಬಂಧಿಸಿದ ಕುಟುಂಬ ಕಲಹಗಳು, ಮತ್ತೊಂದೆಡೆ ಅವಕಾಶಗಳ ಕೊರತೆ ಇವೆಲ್ಲವೂ ಜಯಶ್ರೀಯನ್ನು ಕಂಗೆಡಿಸಿತ್ತು.

100%

ನಿರ್ದೇಶಕಿ ರೇಖಾರಾಣಿಯವರ ಬಳಿ ತನ್ನ ಅಳಲನ್ನು ಜಯಶ್ರೀ ತೋಡಿಕೊಂಡಿದ್ದು, ರೇಖಾರಾಣಿ ಕೂಡ ಸಾಂತ್ವನ ಹೇಳಿದ್ದರು. ಇದೀಗ ಆತ್ಮಹತ್ಯೆ ವಿಚಾರ ತಿಳಿದುಬಂದ ನಂತರ “ಜಯಶ್ರೀಯ ಮನಸ್ಸು ಹಾಗೂ ದೇಹದ ಮೇಲೆ ಅತ್ಯಾಚಾರವಾಗಿದೆ. ಇದನ್ನು ನೋಡಿದಾಗ ಮನುಷ್ಯನೆಂಬ ಪ್ರಾಣಿಯ ಮೇಲೆ ಅಸಹ್ಯ ಹುಟ್ಟುತ್ತದೆ” ಎಂದು ರೇಖಾರಾಣಿ ಬರೆದುಕೊಂಡಿದ್ದಾರೆ.

“ಹೋಗಿದ್ದೀಯ. ಮತ್ತೆಂದೂ ಬರಬೇಡ ಮಗಳೆ. ಜಯಶ್ರೀ ರಾಮಯ್ಯ. ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು. ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ’ ಎಂದು ಹೇಳಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *