ಒಂದು ಚುನಾವಣೆಯಿಂದ ಮತದಾನ ಹೆಚ್ಚಲಿದೆ

ಒಂದು ರಾಷ್ಟ್ರ, ಒಂದು ಚುನಾವಣೆಯಿಂದ ಮತದಾನ ಹೆಚ್ಚಲಿದೆ: ತಜ್ಞರು

ನಗರದ ಶ್ರೀ ಕೃಷ್ಣ ದೇವರಾಯ ಕಲಾ ಮಂದಿರದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಸಂಬಂಧರಾಜ್ಯ ಬಿಜೆಪಿಯ ಕೆಲವು ತಜ್ಞರು ಸಭೆ ನಡೆಸಿದರು.

File image

‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು, ವಿಧಾನಸಭೆಯಲ್ಲಿ ಅಲ್ಲ: ಎಂ ಸಿ ನಾಣಯ್ಯ 

ಮೊನ್ನೆ ಗುರುವಾರ ಆರಂಭವಾದ ರಾಜ್ಯ ವಿಧಾನ ಮಂಡಲ ಕಲಾಪದಲ್ಲಿ ವಿಧಾನಸಭೆಯಲ್ಲಿ ಮೊದಲೆರಡು ದಿನ ಒಂದು ರಾಷ್ಟ್ರ, ಒಂದು ಚುನಾವಣೆ ಸಂಬಂಧವೇ ಚರ್ಚೆ ಮೀಸಲಾಗಿತ್ತು.

M C Nanaiah

ಬೆಂಗಳೂರು: ಮೊನ್ನೆ ಗುರುವಾರ ಆರಂಭವಾದ ರಾಜ್ಯ ವಿಧಾನ ಮಂಡಲ ಕಲಾಪದಲ್ಲಿ ವಿಧಾನಸಭೆಯಲ್ಲಿ ಮೊದಲೆರಡು ದಿನ ಒಂದು ರಾಷ್ಟ್ರ, ಒಂದು ಚುನಾವಣೆ ಸಂಬಂಧವೇ ಚರ್ಚೆ ಮೀಸಲಾಗಿತ್ತು.

ಆದರೆ ಮೊದಲೆರಡು ದಿನ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಕಾಂಗ್ರೆಸ್ ಶಾಸಕ ಸಂಗಮೇಶ್ ಸದನದಲ್ಲಿ ಶರ್ಟ್ ಬಿಚ್ಚಿದ್ದಕ್ಕೆ ಸ್ಪೀಕರ್ ಕೈಗೊಂಡ ಕಠಿಣ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ, ವಿರೋಧ, ಗದ್ದಲ, ಕೋಲಾಹಲಗಳಲ್ಲಿಯೇ ಎರಡು ದಿನ ಮುಕ್ತಾಯವಾಯಿತು. ವಾಸ್ತವವಾಗಿ ಹೇಳಬೇಕೆಂದರೆ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯಲೇ ಇಲ್ಲ.

ಈ ಬಗ್ಗೆ ಮಾಜಿ ಕಾನೂನು ಸಚಿವ, ಹಿರಿಯ ನಾಯಕ ಎಂ ಸಿ ನಾಣಯ್ಯ, ಇದೊಂದು ದೀರ್ಘ ಪ್ರಕ್ರಿಯೆಯಾಗಿದ್ದು ಈ ಬಗ್ಗೆ ಸಂಸತ್ತಿನಲ್ಲಿ ಮೊದಲು ಚರ್ಚೆಯಾಗಬೇಕೆ ಹೊರತು ರಾಜ್ಯ ವಿಧಾನಸಭೆಯಲ್ಲಿ ಅಲ್ಲ. ಚುನಾವಣೆಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲು ಮೊದಲು ಕೇಂದ್ರ ಸರ್ಕಾರ ಚುನಾವಣಾ ಸುಧಾರಣೆಗಳಲ್ಲಿ ಸಹಮತ ತಂದು ‘ಆಯ ರಾಮ್ ಗಯಾ ರಾಮ್’ ಸಂಸ್ಕೃತಿಯನ್ನು ಬಿಡಬೇಕು.

ಎಂ ಸಿ ನಾಣಯ್ಯ ಅವರು ವಿಧಾನ ಪರಿಷತ್ತಿಗೆ 5 ಬಾರಿ ಸದಸ್ಯರಾಗಿದ್ದರು. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ: 
ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಈ ಹಿಂದೆ ದೇಶಾದ್ಯಂತ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿದ್ದವು. ಆದರೆ ನಂತರ, ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಸಂವಿಧಾನದ 356 ನೇ ವಿಧಿಯಡಿ ಯಾವ ಪಕ್ಷ ಅಧಿಕಾರದಲ್ಲಿದ್ದರೂ (ಕೇಂದ್ರದಲ್ಲಿ) ತೆಗೆದುಹಾಕುವ ಅಥವಾ ಕೆಳಗಿಳಿಸುವ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಈಗಲೂ ಏನು ನಡೆಯುತ್ತಿದೆ ಮತ್ತು ಚುನಾಯಿತ ರಾಜ್ಯ ಸರ್ಕಾರಗಳು ಹೇಗೆ ಅಸ್ಥಿರಗೊಳ್ಳುತ್ತಿವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ವಿಷಯವನ್ನು ಕೇಂದ್ರದಲ್ಲಿ ಚರ್ಚಿಸಬೇಕಾಗಿದೆ, ಬಜೆಟ್ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ, ಅಗತ್ಯ ವಸ್ತುಗಳ ಬೆಲೆಗಳ ಏರಿಕೆ, ಇಂಧನ ಬೆಲೆ ಏರಿಕೆ, ಆರ್ಥಿಕ ಕುಸಿತ, ಕೋವಿಡ್-19 ಮುಂತಾದ ಹಲವಾರು ಗಂಭೀರ ವಿಷಯಗಳತ್ತ ತುರ್ತು ಗಮನ ಹರಿಸಬೇಕು.

ಇಂತಹ ಪರಿಕಲ್ಪನೆಯನ್ನು ಜಾರಿಗೆ ತರಲು ಇರುವ ಸವಾಲುಗಳೇನು?
ನಮ್ಮಲ್ಲಿ ಫೆಡರಲ್ ವ್ಯವಸ್ಥೆಯಿದೆ. ಏಕೀಕೃತ ಸರ್ಕಾರವಲ್ಲ. ಈ ವಿಷಯವನ್ನು ಮೊದಲು ಭಾರತದ ಚುನಾವಣಾ ಆಯೋಗ ಕೈಗೆತ್ತಿಕೊಳ್ಳಬೇಕಾಗಿದೆ. ಇದನ್ನು ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸಬೇಕಾಗಿದೆ ಮತ್ತು ಎಲ್ಲಾ ರಾಜ್ಯಗಳು ಸಹಮತ ತೆಗೆದುಕೊಂಡು ಕೇಂದ್ರವು ಒಟ್ಟಾಗಿ ಆತ್ಮಸಾಕ್ಷಿಯ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳಿರಬೇಕು. ಇದು ಸುದೀರ್ಘ ಪ್ರಕ್ರಿಯೆ ಮತ್ತು ಫೆಡರಲ್ ವ್ಯವಸ್ಥೆಯಲ್ಲಿ ಅಸಾಧ್ಯವೆಂದು ನಾನು ಭಾವಿಸುತ್ತೇನೆ.

ಪಕ್ಷಾಂತರಗಳಿಂದಾಗಿ ಆಗಾಗ್ಗೆ ಚುನಾವಣೆಗಳನ್ನು ನಡೆಸುವ ಬಗ್ಗೆ, ವಿಶೇಷವಾಗಿ ಉಪಚುನಾವಣೆಗಳನ್ನು ನಾವು ಹೇಗೆ ಪರಿಹರಿಸುತ್ತೇವೆ?
ಮೊದಲಿಗೆ, ನಾವು ಚುನಾವಣಾ ಸುಧಾರಣೆಗಳನ್ನು ತರಬೇಕು ಮತ್ತು ಪಕ್ಷಾಂತರ ವಿರೋಧಿ ಕಾನೂನನ್ನು ಬಲಪಡಿಸಬೇಕು. ನಿರ್ದಿಷ್ಟ ಪಕ್ಷದಿಂದ ಚುನಾಯಿತರಾದ ವ್ಯಕ್ತಿಯು ಆ ಪಕ್ಷದಲ್ಲಿ ಐದು ವರ್ಷಗಳ ಕಾಲ ಇರಬೇಕು ಮತ್ತು ಪಕ್ಷಾಂತರದ ಸಂದರ್ಭದಲ್ಲಿ ಅವರನ್ನು ಐದು ವರ್ಷಗಳವರೆಗೆ ಸ್ವಯಂಚಾಲಿತವಾಗಿ ಅನರ್ಹಗೊಳಿಸಬೇಕು. ಹರಿಯಾಣದಲ್ಲಿ ಮೊದಲು ಪ್ರಾರಂಭವಾದ “ಆಯಾ ರಾಮ್ ಗಯಾ ರಾಮ್” ಸಂಸ್ಕೃತಿಯನ್ನು (ಬದಲಾಗುತ್ತಿರುವ ಪಕ್ಷಗಳು) ಕೊನೆಗಾಣಿಸುವ ಅವಶ್ಯಕತೆಯಿದೆ. ಈಗ ಸ್ಪೀಕರ್ ಬಳಿ ಇರುವ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿರುವ ಅಧಿಕಾರಗಳನ್ನು ತೆಗೆದುಕೊಂಡು ಹೈಕೋರ್ಟ್ ನ್ಯಾಯಾಧೀಶರಿಗೆ ನೀಡಬೇಕಾಗಿದೆ. ಇದು ಈಗ ರಾಜಕೀಯ ನಿರ್ಧಾರವಾಗಿದೆ. ನಾನು ಇದನ್ನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಪಕ್ಷಾಂತರಗಳ ಸಮಸ್ಯೆಯನ್ನು ನಿಭಾಯಿಸಲು ನಮಗೆ ಸಾಧ್ಯವಾದರೆ, ವ್ಯವಸ್ಥೆಯಲ್ಲಿನ ಹೆಚ್ಚಿನ ದುಷ್ಪರಿಣಾಮಗಳನ್ನು ನಾವು ಕೊನೆಗಾಣಿಸಲು ಸಾಧ್ಯವಾಗುತ್ತದೆ.

“ಒಂದು ರಾಷ್ಟ್ರ, ಒಂದು ಚುನಾವಣೆ” ಪರಿಕಲ್ಪನೆಯ ಪರವಾದ ವಾದವೆಂದರೆ, ಚುನಾವಣೆಗಳು ಏಕಕಾಲದಲ್ಲಿ ನಡೆದರೆ ನಾವು ಸಾಕಷ್ಟು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಬಹುದು, ಸರ್ಕಾರಗಳು ಆಡಳಿತದತ್ತ ಗಮನ ಹರಿಸಬಹುದು ಎಂದು, ನೀವು ಅದನ್ನು ಒಪ್ಪುತ್ತೀರಾ?
-ನಾನು ಅದನ್ನು ಒಪ್ಪುತ್ತೇನೆ, ಆದರೆ ನಾವು ಅಂತಹ ಪರಿಸ್ಥಿತಿಯನ್ನು ತಲುಪಬೇಕಾದರೆ, ನಾವು ಮೊದಲು ಪಕ್ಷಾಂತರದ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಈಗಿರುವ ಕಾನೂನು ಸ್ವತಃ ದೋಷಯುಕ್ತವಾಗಿದೆ ಆದರೆ ಅದನ್ನು ಮಾಡಲು ಯಾರೂ ಸಿದ್ಧರಿಲ್ಲ. ಅದನ್ನು ಮಾಡಿದರೆ, ನಮಗೆ ಪಕ್ಷಾಂತರಗಳು ಅಥವಾ ಆಗಾಗ್ಗೆ ಚುನಾವಣೆಗಳು ಅಥವಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕಳೆದ ಸಮಯ ಇರುವುದಿಲ್ಲ. ನಾವು ಮಾತನಾಡುವ ಚುನಾವಣಾ ಸುಧಾರಣೆಗಳು ಬಹಳ ಸಮಯ ಮೀರಿದೆ.

ಅದನ್ನು ಉತ್ಸಾಹದಿಂದ ಮಾಡಬೇಕಾಗಿದೆ. ಪ್ರಜಾಪ್ರಭುತ್ವದ ಸ್ಥಾಪನೆಯಲ್ಲಿ, ಅದನ್ನು ಯಾವುದೇ ಒಂದು ಪಕ್ಷದಿಂದ ಮಾಡಲಾಗುವುದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ನಿರ್ಧಾರಕ್ಕೆ ಬಂದು ಒಮ್ಮತವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಬೇಕು.

ಬೆಂಗಳೂರು: ನಗರದ ಶ್ರೀ ಕೃಷ್ಣ ದೇವರಾಯ ಕಲಾ ಮಂದಿರದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಸಂಬಂಧರಾಜ್ಯ ಬಿಜೆಪಿಯ ಕೆಲವು ತಜ್ಞರು ಸಭೆ ನಡೆಸಿದರು.

ಸಂಸದ ತೇಜಸ್ವಿ ಸೂರ್ಯ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಸ್ವರಾಜ್ಯ ಆರ್ ಜಗನಾಥನ್ ಭಾಗವಹಿಸಿದ್ದರು.  ಒಂದು ರಾಷ್ಟ್ರದ ಒಂದು ಚುನಾವಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಾಂವಿಧಾನಿಕ ತಿದ್ದುಪಡಿಗಳು ಅಗತ್ಯ ಎಂದು ಹೇಳಿದ್ದಾರೆ.

ಇದು ರಾಷ್ಟ್ರೀಯ, ರಾಜ್ಯ, ನಿಗಮ ಮತ್ತು ಪಂಚಾಯತ್ ಮಟ್ಟದಲ್ಲಿ ಚುನಾವಣೆಗಳ ಏಕೀಕರಣಕ್ಕೆ ಅನುಕೂಲವಾಗಲಿದೆ ಎಂದು ಅವರು ಗಮನಸೆಳೆದರು.

ಆದರೆ ಈ ಬದಲಾವಣೆಗಳಿಗೆ ಪಕ್ಷಾಂತರ ವಿರೋಧಿ ಕಾನೂನು, ಅವಿಶ್ವಾಸ ನಿರ್ಣಯ ಮತ್ತು ಇತರ ನೀತಿಗಳ ಬಗ್ಗೆ ಮರುಚಿಂತನೆ ಅಗತ್ಯವಿರುತ್ತದೆ. ಇದು ನಾಗರಿಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆರ್ ಜಗನ್ನಾಥನ್ ವಿವರಿಸಿದರು.

ಇದು ಮತದಾರರ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಆಡಳಿತಕ್ಕೆ ಸಹಕಾರಿಯಾಗುತ್ತದೆ, ಏಕೆಂದರೆ ಪಕ್ಷಗಳು ರಾಷ್ಟ್ರೀಯ, ರಾಜ್ಯ ಮತ್ತು ನಗರ ಮಟ್ಟದ ಪ್ರಣಾಳಿಕೆಗಳನ್ನು ಸಂಪರ್ಕಿಸಲು ಒತ್ತಾಯಿಸಲ್ಪಡುತ್ತವೆ” ಎಂದು ಅವರು ಹೇಳಿದರು.

ಚುನಾವಣಾ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರವನ್ನು ತಡೆಯುವುದಲ್ಲದೇ ನನ್ನಂತಹ ಸರಳ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *