

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಬಳಿ ಟಿಪ್ಪರ್ ಬಡಿದ ಪರಿಣಾಮ ಬೈಕ್ ಮೇಲೆ ಬರುತಿದ್ದ ಇಬ್ಬರು ತೀವ್ರ ವಾಗಿ ಗಾಯಗೊಂಡಿದ್ದು ಅವರಿಬ್ಬರೂ ಶಿವಮೊಗ್ಗದ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇಂದು ಬೆಳಿಗ್ಗೆ ಕಾಲೇಜಿಗೆಂದು ಬಂದಿದ್ದ ಸೊರಬ ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿನಿ ಸೊರಬಾ ಚಿಕ್ಕಸಕುನದ ಗಾರೆ ಕೆಲಸ ಮಾಡುವ ಹುಡುಗನೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ಗಾರೆ ಕೆಲಸದ ಹುಡುಗನ ಬೈಕ್ ಚಲಾಯಿಸುತಿದ್ದ ಚಂದ್ರಗುತ್ತಿ ಚನ್ನಪಟ್ಟಣದ ಹುಡುಗಿ ಅದೃಷ್ಟ ಕೆಡಲು ಕಾರಣವಾಗಿದ್ದು ಎದುರಿನಿಂದ ಬರುತಿದ್ದ ಟಿಪ್ಪರ್. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಡೆದ ಈ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡ ಈ ಪ್ರೇಮಿಗಳನ್ನು ಶಿವಮೊಗ್ಗದ ಖಾಸಗಿ ಆಸ್ಫತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತ ನಡೆದದ್ದು ಸಿದ್ಧಾಪುರ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ. ಗಾಯಾಳುಗಳು ಸೊರಬಾ ತಾಲೂಕಿನವರು, ಅಪಘಾತ ಪಡಿಸಿದ ಕುಮಟಾ ಬಗ್ಗೋಣದ ಮೋಹನ ನಾಯ್ಕ ಪೊಲೀಸ್ ವಶದಲ್ಲಿದ್ದಾನೆ. ತೀವೃವಾಗಿ ಗಾಯಗೊಂಡ ಹುಡುಗಿ ಬಡ ಕುಟುಂಬದ ಅಸಹಾಯಕ ಪಾಲಕರ ಮಗಳಾಗಿದ್ದು ಈ ಅಪಘಾತದಿಂದಾಗಿ ಅನೇಕರಿಗೆ ತೊಂದರೆಯಾಗಿದೆ. ವಸತಿ ನಿಲಯದ ಹುಡುಗಿ ಕಾಲೇಜಿಗೆ ಹೋದವಳು ಅಪಘಾತಕ್ಕೀಡಾಗಿ ಆಸ್ಫತ್ರೆ ಸೇರಿರುವುದರಿಂದ ಕಾಲೇಜು,ವಸತಿ ನಿಲಯ ಸರ್ಕಾರಿ ವ್ಯವಸ್ಥೆಗೆ ಕೂಡಾ ಈ ಅಪಘಾತ ಗೋಳಾಗಿ ಪರಿಣಮಿಸಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
