Hrs poem -ನಿರೀಕ್ಷೆ

ಗೋಡೆಗಳೇ ಇಲ್ಲದ ದೇವರೊಬ್ಬ ಉದಯಿಸಲಿ
ತುಂಬು ಹುಣ್ಣಿಮೆಯ ತಂಪು ಚಂದಿರನಂತೆ
ಕಂಡ ಕಣ್ಣಲಿ ಕನಸಿನ ಹೂಟೆಯ ಮೀಟಲಿ
ಗುಡಿಸಿಲಿನ ಅಂಗಳದ ಅಂಬುಮಲ್ಲಿಗೆಗೂ
ಅರಮನೆಯ ಕಳಸಕ್ಕೂ ಒಂದೇ ಬೆಳಕ ಚೆಲ್ಲಲಿ

ದೇವಾ! ನೀನು ಸೆರೆಮನೆಯ ಕೈದಿಗಳ ಕಣ್ಣಲ್ಲಿಳಿದು
ಕಣ್ಣೀರ ಕರೆ, ಕದಡಿದ ಮನಸ್ಸುಗಳು ತಿಳಿಗೊಳ್ಳಲಿ
ಅನಾಥ ಮಕ್ಕಳ ಕೈಯಲ್ಲಾಡುವ ಆಟಿಕೆಯಾಗು
ಅವು ನಿನಗೆ ಕೀಲಿಕೊಟ್ಟು ಕಿಲಕಿಲನೆ ಕುಣಿಯಲಿ
ಬಿಗಿದ ಮನದಿ ಕಚಗುಳಿಯಿಟ್ಟು ಮನಬಿಚ್ಚಿ ನಗಲಿ

ಏಸುವಿನ ಕರುಣೆಯನ್ನೂ ನೋವನ್ನೂ ರಕ್ತವನ್ನೂ
ಪೈಗಂಬರರ ಸಾಧುಸಂತರ ದರ್ವೇಶಿಗಳ
ಹಳೆಯ ಬೇರುಗಳಲ್ಲುಳಿದ ಅವಮಾನಗಳನ್ನು ನುಂಗಿ ಕಾಮನಬಿಲ್ಲಿನ ಬಣ್ಣದ ಹೂವಂತೆ ಮಾತು ಹಗುರಾಗಲಿ
ಅವು
ಬುದ್ಧನ ಮೌನದ ಮುಗುಳು ನಗೆಯನ್ನು ಮರೆಯದೆ ಪೋಣಿಸಿಕೊಳ್ಳಲಿ

ಕುವೆಂಪು ಟಾಲಸ್ಟಾಯರ ರವೀಂದ್ರರ ಧ್ಯಾನದಲ್ಲಿ
ಶೇಕ್ಷಪೀಯರನ ರಾಜರ ರಕ್ತದಾಹವನಿಂಗಿಸು
ಗೊಮ್ಮಟನ ನಿರ್ವಾಣದಲ್ಲಿ ದಾಯಾದಿಯ ದಿಕ್ಕರಿಸು
ಗಾಂಧಿಯ ನಡಿಗೆಯಲಿ ಬಡವನುದ್ಧರಿಸು
ದಿನವಿಡೀ ಹೊಲಮನೆಯಲ್ಲಿ ಗೇದು ದಣಿದು
ಮಲಗಿದ ರೈತನಿಗೆ ನಡುಹಗಲಲ್ಲಿ ಮರದ ನೆರಳಾಗು….,

ನಂಬಿದ ದೇವರ ನೆಟ್ಟು ಬೆಳೆಸಿದ ದೇವನವನು
ನಿನ್ನ ನೆರಳಲ್ಲಿ ಸೊಂಪು ನಿದ್ದೆ ಆವರಿಸಲಿ
ಹಸಿದ ಹೊಟ್ಟೆಯನ್ನರಿತು ಬೆಳೆಸಾಗಲಿ
ಬೆಳಸು ಬಾಡದಂತೆ ಮಳೆರಾಯನಿಗೆ
ಕನಸಾಗಲಿ
ದುಡಿವ ಜೀವಗಳ ತುಂಬಿದ ಹೊಟ್ಟೆ ನೆಮ್ಮದಿಯ
ಕರೆದು ನಿದ್ರೆ ಕಣ್ತುಂಬಿಕೊಳ್ಳಲಿ

ಹೆಚ್. ಆರ್. ಸುಜಾತಾ
೧೮.೫.೧೯

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

ಸೈನಿಕ ಸುರೇಶ್‌ ನಾಯ್ಕ ಸಾವು

ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್.‌ ನಲ್ಲಿ ಸಹಾಯಕ ಸಬ್‌ ಇನ್ಫೆಕ್ಟರ್‌ ಆಗಿ ಸೇವೆಯಲ್ಲಿದ್ದ ಸುರೇಶ್‌ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *