ಅಡಿಕೆ ಬೆಳೆಗಾರರ ಪರವಾಗಿ ನಿಂತ ಗುಂಜಗೋಡು ಕುಟುಂಬ

ಸಿದ್ಧಾಪುರ ತಾಲೂಕಿನಲ್ಲಿ ಗುಂಜಗೋಡು ಗ್ರಾಮ ಮತ್ತು ಗುಂಜಗೋಡು ಕುಟುಂಬಕ್ಕೆ ಮಹತ್ವದ ಸ್ಥಾನವಿದೆ. ತಾಲೂಕು ಕೇಂದ್ರದಿಂದ ತುಸುದೂರದ ಗುಂಜಗೋಡು ಲಾಯಾಯ್ತಿನಿಂದ ಸಮಾಜದ ಆಗುಹೋಗುಗಳೊಂದಿಗೆ ಸ್ಪಂದಿಸಿದೆ. ಸುಶಿಕ್ಷಿತ,ಸಮಾಜಮುಖಿ ಗ್ರಾಮವಾದ ಗುಂಜಗೋಡು ಈಗಲೂ ಬಿಳಗಿ ಸೀಮೆಯ ಪ್ರಸಿದ್ಧ ಗ್ರಾಮ. ಸ್ವಾತಂತ್ರ್ಯ ಹೋರಾಟ, ಧಾರ್ಮಿಕ ಕೆಲಸ, ಕಲೆ, ಸಾಂಸ್ಕೃತಿಕತೆ ಎಲ್ಲದರಲ್ಲೂ ಗುಂಜಗೋಡು ಗುರುತಿಸಿಕೊಂಡಿದೆ.

ಗುಂಜಗೋಡಿನ ಕೃಷಿ ಪ್ರಧಾನ ಕುಟುಂಬಗಳಲ್ಲಿ ಹಲವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹೆಸರು ಮಾಡಿ ದ್ದಾರೆ. ಅವರಲ್ಲಿ ಕೆಲವರು ಅಡಿಕೆ ವ್ಯಾಪಾರಿಗಳಾಗಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಹಕರಿಸಿದ್ದಾರೆ.

ಗುಂಜಗೋಡಿನ ಕೆಲವು ಅಡಿಕೆ ವರ್ತಕರಲ್ಲಿ ಈಗಿನ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆಯವರ ತಂದೆ ಎಮ್.ಎಸ್. ಹೆಗಡೆ ಗುಂಜಗೋಡು ಹೆಗಡೆ ಎಂದೇ ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಅಕ್ಟೋಬರ್ ಒಂದರಂದು ನಿಧನರಾಗಿದ್ದ ಎಮ್. ಎಸ್. ಹೆಗಡೆ ಸಿದ್ಧಾಪುರ ಪುರಸಭೆಯ ಸದಸ್ಯರಾಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂದೆ ಸೇವೆ ಸಲ್ಲಿಸಿದ್ದರು. ಇಂಥ ಸಾರ್ವಜನಿಕ ಸೇವೆಗೆ ಬರುವ ಮೊದಲು ಗುಂಜಗೋಡು ಹೆಗಡೆ ಅಡಿಕೆ ವ್ಯಾಪಾರಸ್ಥರಾಗಿ ಸಾಹಸ ಮಾಡಿದ ವ್ಯಾಪಾರಿ ಕೃಷಿಕ. 1970 ರ ದಶಕದ ಕಷ್ಟದ ದಿನಗಳಲ್ಲಿ ತಾಲೂಕಿನ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ವ್ಯಾಪಾರ ಮಾಡುತ್ತಾ ಗಣ್ಯ ವರ್ತಕರಾಗಿ ಬೆಳೆದದ್ದು ಅವರ ಸಾಧನೆ. ಕುಗ್ರಾಮದಂತಿದ್ದಗುಂಜಗೋಡಿನಿಂದ ತಮ್ಮ ಸಾಹಸದ ಪಯಣ ಪ್ರಾರಂಭಿಸಿದ ಎಮ್.ಎಸ್. ಹೆಗಡೆ ಕ್ರಮೇಣ ಸಿದ್ಧಾಪುರಕ್ಕೆ ತಮ್ಮವಾಸ್ತವ್ಯ ಬದಲಿಸಿ ಕೃಷಿ-ವ್ಯಾಪಾರದಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಸಿದ್ಧಾಪುರ ಭಾನ್ಕುಳಿಮಠದ ಆಸ್ತಿಯನ್ನು ಉಳಿಸುವಲ್ಲಿ ಹೆಗಡೆಯವರ ಪಾತ್ರ ಗುರುತವಾಗಿತ್ತು. ಎ.ಪಿ.ಎಂ.ಸಿ.ಯಾರ್ಡ್ ನಿರ್ಮಾಣ, ಭೂನ್ಯಾಯ ಮಂಡಳಿ ಸದಸ್ಯರಾಗಿ ಸಲ್ಲಿಸಿದ ಸೇವೆ ಅವರನ್ನು ಪ್ರಸಿದ್ಧರನ್ನಾಗಿಸಿತ್ತು.

ಇಂದು ಅವರಗುಪ್ಪಾದಲ್ಲಿ ನಡೆದ ಅವರ ವಾರ್ಷಿಕ ಸಂಸ್ಮರಣೆಯಲ್ಲಿ ಅವರ ಕುಟುಂಬಸ್ಥರು, ಹಿತೈಶಿಗಳು, ಗ್ರಾಮಸ್ಥರೆಲ್ಲಾ ಗುಂಜಗೋಡು ಹೆಗಡೆಯವರನ್ನು ಸ್ಮರಿಸಿದರು. ಸಿದ್ಧಾಪುರದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಅಡಿಕೆ ವರ್ತಕರ ಕುಟುಂಬದ ಎಮ್.ಎಸ್. ಹೆಗಡೆ, ಅವರ ಪುತ್ರ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ತಮ್ಮ ಕೃಷಿ-ವ್ಯಾಪಾರ, ವ್ಯವಹಾರಗಳೊಂದಿಗೆ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ ಅವರೂ ಕೂಡಾ ಸ್ಥಳೀಯತೆ, ಸಹಜತೆ ಅಳವಡಿಸಿಕೊಳ್ಳುವ ಹಿಂದೆ ಎಮ್.ಎಸ್. ಹೆಗಡೆಯವರ ಕುಟುಂಬದ ಕೊಡುಗೆ ಸ್ಮರಣೀಯ ಎಂದರು.

ಎಮ್.ಎಸ್. ಹೆಗಡೆಯವರ ಎರಡ್ಮೂರು ತಲೆಮಾರು ಕೃಷಿಕರು, ವರ್ತಕರೂ ಆಗಿ ಜನಮೆಚ್ಚುಗೆ ಪಡೆದಿದ್ದಾರೆ. ಹೊರ ಊರುಗಳಲ್ಲಿ ವಿದ್ಯಾಭ್ಯಾಸ,ಉದ್ಯೋಗ ಮಾಡಿ ಜನಮಾನಸದೊಂದಿಗೆ ಬೆರೆತ ಅವರ ಕುಟುಂಬದ ಕುಡಿಗಳೂ ಕೃಷಿ-ಅಡಿಕೆ ವ್ಯಾಪಾರಗಳ ಮೂಲಕ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಮ್.ಎಸ್. ಹೆಗಡೆಯವರ ಸಾಧನೆ, ಸಂಸ್ಮರಣೆಗಳ ಹಿಂದೆ ಅವರ ಗ್ರಾಮ, ಕುಟುಂಬ ಎಂದು ಮತ್ತೊಮ್ಮೆ ಅವರು ಸಾರ್ವಜನಿಕ ಸ್ಮೃತಿಯ ಭಾಗವಾಗಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *