ಕೃಷ್ಣಸರ್ಪ_ಮತ್ತು_ಅಂಧಶ್ರದ್ಧೆ!

ಚಿತ್ರ, ಲೇಖನ: Gururaj Sanil

“ಸರ್ ನಾವು ಉಡುಪಿಯ ಇಂಥ (ಊರಿನ ಹೆಸರು ಬೇಡ) ಗ್ರಾಮದಿಂದ ಮಾತಾಡ್ತಿದ್ದೇವೆ. ಇಲ್ಲಿ ನಮ್ಮ ಮನೆಯಂಗಳದಲ್ಲಿ ನಾಗರ ಹಾವಿನ ಮರಿಯೊಂದನ್ನು ಬೆಕ್ಕು ಹಿಡಿದು ಗಾಯಗೊಳಿಸಿಬಿಟ್ಟಿದೆ. ದಯವಿಟ್ಟು ನೀವು ಬಂದು ಅದನ್ನು ಚಿಕಿತ್ಸೆಗೆ ಕೊಂಡು ಹೋಗಬೇಕು!” ಎಂದು 20-01-2021ರಂದು ಸಂಜೆ ಒಬ್ಬ ಯುವಕ ಬಹಳ ಆತಂಕ ಮತ್ತು ಗೊಂದಲದಿಂದ ವಿನಂತಿಸಿದ. ನಾನು ಆಹೊತ್ತು ಪಶ್ಚಿಮಘಟ್ಟದ ಸ್ವರ್ಗಸುಖದಲ್ಲಿ ತಲ್ಲೀನನಾಗಿದ್ದೆನಾದರೂ ತಕ್ಷಣ ಬರುತ್ತೇನೆಂದು ಸೂಚಿಸಿದ ಬಳಿಕ ಆ ಹಾವಿನ ಬಗ್ಗೆ ವಿವರ ಕೇಳಿದೆ. ಅವನು ತಿಳಿಸಿದ ಮಾಹಿತಿಯಿಂದ ಅದು ನಾಗರಹಾವು ಅಲ್ಲ ಎಂದು ತಿಳಿಯಿತು. ಹಾಗಾಗಿ ಆ ಹಾವಿನ ಬಗ್ಗೆ ಅವನಿಗೆ ವಿವರಿಸಿದೆ. ಅದರಿಂದ ಅವನು ನಿರಾಳನಾಗಿ ಆ ಹಾವಿನ ಚಿತ್ರವನ್ನು ವಾಟ್ಸ್ಯಾಪ್ ಮಾಡಿದ. ಈ ಹಾವಿನ ಕನ್ನಡ ಹೆಸರು: ಡುಮೇರಿಲ್ಸ್ ಕಪ್ಪು ತಲೆಯ ಹಾವು.ತುಳು: ಕೊಡ್ಯಾಣಇಂಗ್ಲಿಷ್: ಡುಮೆರಿಲ್ಸ್ ಬ್ಲ್ಯಾಕ್ ಹೆಡ್ಡೆಡ್ ಸ್ನೇಕ್ (dumerils black headed snake)ವೈಜ್ಞಾನಿಕ: ಸಿಬಿನೋಫಿಸ್ ಸಬ್ ಪಂಕ್ಟಟಸ್ (sibynophis subpunctatus)ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಡ, ಒರಿಸ್ಸಾ, ಪಶ್ಚಿಮ ಬಂಗಾಲ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಈ ಹಾವುಗಳು ಕಂಡುಬರುತ್ತವೆ.

ಬೆಳೆಯುವ ಗರಿಷ್ಠ ಉದ್ದ: 40-45 ಸೆಂಟಿಮೀಟರ್. ಅಂದರೆ ಒಂದು, ಒಂದೂವರೆ ಅಡಿಗಳಷ್ಟು. ಇವು ರಾತ್ರಿ ಹಗಲು ಚಟುವಟಿಕೆಯಿಂದಿರುತ್ತ ಜನವಸತಿಗಳ ಆಸುಪಾಸು ಹೆಚ್ಚಾಗಿ ಜೀವಿಸುತ್ತವೆ.ಉಡುಪಿಜಿಲ್ಲೆ ಮತ್ತು ದಕ್ಷಿಣ ಕನ್ನಡಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾವುಗಳಿವು. ಆದರೆ ಇವುಗಳ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಸೂಕ್ತ ಮಾಹಿತಿಯಿಲ್ಲ ಮಾತ್ರವಲ್ಲದೇ ಇದು “ಕೃಷ್ಣ ಸರ್ಪ” ಎಂಬ ತಪ್ಪು ನಂಬಿಕೆಯೊಂದು ಬಲವಾಗಿ ಬೇರೂರಿಬಿಟ್ಟಿದೆ. ಈ ಹಾವುಗಳು ತಮ್ಮ ತಲೆಯ ಮೇಲೆ ಎರಡು ಬಿಳಿ ಅಥವಾ ಹಳದಿಬಣ್ಣದ ಚಿಹ್ನೆಗಳು ಮತ್ತು ಅದೇ ಬಣ್ಣಗಳ ಕತ್ತಿನ ಪಟ್ಟಿಯನ್ನು ಹೊಂದಿದ್ದು ಪಕ್ಕನೆ ಕಾಣುವಾಗ ನಾಗರ ಹಾವಿನ ಮರಿಯೆಂದು ತಪ್ಪುಗ್ರಹಿಕೆ ಹುಟ್ಟುವುದರಿಂದ ಯಾರೋ “ಕೃಷ್ಣಸರ್ಪ”ಎಂದು ನಾಮಕರಣ ಮಾಡಿರಬೇಕು.

ಆದರೆ ಇದು ನಾಗರ ಹಾವಿನ ಜಾತಿ ಮತ್ತು ಪ್ರಭೇದಕ್ಕೆ ಸೇರಿದ ಹಾವೇ ಅಲ್ಲ ಹಾಗೂ ವಿಷಕಾರಿ ಉರಗವೂ ಅಲ್ಲ!ಪ್ರತಿವರ್ಷ ಮೇ, ಜೂನ್ ತಿಂಗಳಲ್ಲಿ ಹುಟ್ಟುವ ಒಂದೆರಡು ತಿಂಗಳ ಮರಿ ನಾಗರ ಹಾವಿನ ಶರೀರ ಬಣ್ಣವು ಕಂದು ಮಿಶ್ರಿತ ನೀಲಿ ಬಣ್ಣದಿಂದ ಕೂಡಿ ಸೂರ್ಯನ ಬೆಳಕಿಗೆ ಫಳಫಳ ಹೊಳೆಯುವುದರಿಂದಲೂ, ಶ್ರೀ ಕೃಷ್ಣನ ಪರಮಾತ್ಮನ ಬಣ್ಣವೂ ಶ್ಯಾಮಲವರ್ಣದಿಂದ ಚಿತ್ರಿತವಾಗಿರುವುದರಿಂದಲೂ ಯಾರೋ ನಾಗರ ಮರಿಯನ್ನು ಕೃಷ್ಣಸರ್ಪವೆಂದು ಕರೆದಿರಬಹುದು ಹಾಗೂ ಉಡುಪಿಜಿಲ್ಲೆಯ ಕನ್ನಡ ಪ್ರದೇಶದ ಕೆಲವೆಡೆ ಕಾಳಿಂಗಸರ್ಪವನ್ನೂ ಕೃಷ್ಣಸರ್ಪ ಎಂದು ಕರೆಯುತ್ತಾರೆ. ಇದನ್ನು ಹೊರತುಪಡಿಸಿ “ಕೃಷ್ಣಸರ್ಪ” ಎಂಬ ಒಂದು ಜಾತಿ, ಪ್ರಭೇದದ ಹಾವು ಈವರೆಗೆ ಎಲ್ಲೂ ಪತ್ತೆಯಾಗಿಲ್ಲ!- ಎಂದು ನನಗೆ ಕರೆ ಮಾಡಿದ ಯುವಕನಿಗೆ ಕಾಳಜಿಯಿಂದ ವಿವರಿಸಿದೆ. ಆದ್ದರಿಂದ ಅವನು ನೆಮ್ಮದಿಯಿಂದ ಫೋನಿಟ್ಟ. ಆದರೆ ಐದು ನಿಮಿಷದ ಬಳಿಕ ಮತ್ತೆ ಕರೆ ಮಾಡಿದವನು, “ಸರ್ ತಪ್ಪು ತಿಳ್ಕೋಬೇಡಿ. ಇಲ್ಲಿ ಎಲ್ಲರೂ ಆ ಹಾವನ್ನು ಕೃಷ್ಣಸರ್ಪ ಎಂದೇ ಹೇಳುತ್ತಿದ್ದಾರೆ. ಹಾಗಾಗಿ ನೀವೇ ಬಂದು ನಮ್ಮವರಿಗೆ ತಿಳಿಹೇಳಬೇಕು. ನೀವು ಬಂದು ಹೋಗುವ ಖರ್ಚುವೆಚ್ಚ ಎಷ್ಟಾದರೂ ಕೊಡುತ್ತೇವೆ!” ಎಂದು ತಡವರಿಸುತ್ತ ವಿನಂತಿಸಿದ. ಆದರೆ ಅಷ್ಟು ದೂರ ಹೋಗುವುದು ನನಗೆ ಅನಿವಾರ್ಯವೆಂದು ತೋರದಿದ್ದುದರಿಂದ ಆತನಿಗೆ ಫೋನ್ ನ ಲೌಡ್ ಸ್ಪೀಕರ್ ಆನ್ ಮಾಡಲು ಹೇಳಿ, ಈ ಮೇಲಿನ ಮಾಹಿತಿಯನ್ನು ಮರಳಿ ಗಟ್ಟಿಯಾಗಿ ವಿವರಿಸಿದೆ. ಆಮೇಲೆ ಅಲ್ಲಿನವರು ಸುಮಾರಾಗಿ ಭಯದಿಂದ ಬಿಡುಗಡೆ ಹೊಂದಿದಂತೆ ತೋರಿತು.”ನಾಗದೋಷ” ಎಂಬ ಅಸಹಜ ಭಯವೊಂದು ನಮ್ಮ ಒಂದಷ್ಟು ಅಮಾಯಕ ಜನರಲ್ಲಿ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆ ಹಾಗೂ ನಮ್ಮ ಪೂರ್ವಜರ “ನಾಗಾರಾಧನೆ” ಎಂಬ ನಿಸರ್ಗದತ್ತ ಸುಂದರ ನೈಸರ್ಗಿಕ ಆಚರಣೆಯೊಂದು ಹೇಗೆ ಅಂಧಶ್ರದ್ಧೆಯಾಗಿ ಮಾರ್ಪಡುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಬಹುದು.

ಹಿಂದೂಧರ್ಮದ ಸಂಸ್ಕೃತಿ, ಸಂಪ್ರದಾಯ ಮತ್ತು‌ ಆಚರಣೆಗಳು ಯಾವುವೂ ಮೂಢನಂಬಿಕೆಯಿಂದ ಸೃಷ್ಟಿಯಾದುವುಗಳಲ್ಲ. ಅವೆಲ್ಲದಕ್ಕೂ ಆಳವಾದ ಅರ್ಥ ಮತ್ತು ಮಹತ್ವಗಳಿವೆ ಎಂದು ಈಗಿನ ವೈಜ್ಞಾನಿಕ ಯುಗದಲ್ಲೂ ಅದು ಸ್ಪಷ್ಟವಾಗಿ ದೃಢಪಟ್ಟಿದೆ. ಹೀಗಾಗಿ ನಮ್ಮ ಮೇರು ಧರ್ಮ, ನಂಬಿಕೆ ಮತ್ತು ಆಚರಣೆಗಳನ್ನು ನಶ್ವರ ಬದುಕಿನ ಕ್ಷಣಿಕ ಸ್ವಾರ್ಥಗಳಿಗಾಗಿ ತಿರುಚುವ, ಹಾನಿಗೊಳಿಸುವ ಪ್ರಮಾದವನ್ನು ಮಾಡದೆ ಕಾಪಾಡಿಕೊಂಡು ಮುಂದುವರೆಯುವುದು ನಮ್ಮೆಲ್ಲರ ಹೊಣೆಯಾಗಬೇಕಿದೆ.ಈ ಲೇಖನವನ್ನು ಸಾಧ್ಯವಾದಷ್ಟು ಜನರಿಗೆ ಹಂಚುವ ಮೂಲಕ ಈ ಹಾವಿನ ಕುರಿತು ಜಾಗ್ರತಿ ಮೂಡಿಸುವ ಕಾಯಕವೂ ನಮ್ಮದಾಗಲಿ ಎಂದು ನಮ್ರ ಅರಿಕೆ.ಇಲ್ಲಿನ ಮೂರು ಚಿತ್ರಗಳೂ ಒಂದೇ ಹಾವಿನದ್ದು. ಆದರೆ ಬೇರೆ ಬೇರೆ ಜಾಗ ಮತ್ತು ಬೆಳಕಿನಲ್ಲಿ ಕ್ಲಿಕ್ಕಿಸಿರುವುದರಿಂದ ತುಸು ಬಣ್ಣ ವ್ಯತ್ಯಾಸ ಕಾಣುತ್ತದೆಯಷ್ಟೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *