ಕೂರ್ಮಗಡ ಐಲ್ಯಾಂಡ್ – ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ – 27 ದೋಣಿಗಳಿಗೆ ಮಾತ್ರ ಅನುಮತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 28 ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಈ ಜಾತ್ರೆ ನೆರವೇರಲಿದೆ.ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18 ಟ್ರಾಲ್ ದೋಣಿಗಳು ಹಾಗೂ 9 ಪರ್ಸಿಯನ್ ದೋಣಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಷರತ್ತು ಬದ್ಧವಾಗಿ ಎಲ್ಲರಿಗೂ ಅನುಮತಿ ನೀಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ದೋಣಿಗಳು ಮರು ಪ್ರಯಾಣ ಮಾಡಬೇಕಿದೆ.ಕೂರ್ಮಗಡ ಜಾತ್ರೆಯು ಕಾರವಾರ ಸುತ್ತಮುತ್ತಲಿನ ಮೀನುಗಾರರಿಗೆ ವಿಶೇಷವಾಗಿದೆ. ಸಮುದ್ರದ ಮಧ್ಯೆ ಇರುವ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಧ್ಯಾಹ್ನ ವಾಪಸಾಗುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಬೈತಖೋಲ್ ಬಂದರಿನಿಂದ ತೆರಳುವ ದೋಣಿಗಳಿಗೆ ಬುಧವಾರವೇ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡರು.

ಕೂರ್ಮಗಡ ನರಸಿಂಹ ಜಾತ್ರೆಯೆಂದರೆ… ಕಾರವಾರ ಮತ್ತು ಹೊರಗಿನ ಜನರ ಆಕರ್ಷಣೆಯ ಕೇಂದ್ರ. ಕಾರವಾರದಿಂದ20 ಕಿ.ಮೀ. ದೂರದ ಈ ಕೂರ್ಮಗಡದಲ್ಲಿ ನರಸಿಂಹ ದೇವರ ವಾಸಸ್ಥಾನ ಎನ್ನುವ ನಂಬಿಕೆ ಈ ಜನರದ್ದು. ಕಾರವಾರದ ಕೋಡಬಾಗಿನ ಮೇತ್ರಿ ಕುಟುಂಬ ಹಾಗೂ ಅಲ್ಲಿಯ ಮೀನುಗಾರರು ಮತ್ತು ಕೊಮಾರಪಂಥ ಸಮೂದಾಯ ಈ ನರಸಿಂಹ ದೇವರನ್ನು ತಮ್ಮ ಕುಟುಂಬದ ದೇವರೆಂದು ಆರಾಧಿಸುತ್ತಾರೆ. ದೇವರ ವಸ್ತು- ಬಂಗಾರ ಇತ್ಯಾದಿ ಇಲ್ಲಿಯ ದೇವಸ್ಥಾನ ಮತ್ತು ಕುಳಾಯಿಗಳ ಮನೆಯಲ್ಲಿರುತ್ತದೆ. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಕುರ್ಮಗಡದಲ್ಲಿ ದೇವರ ಆರಾಧನೆ-ಪೂಜೆ ನಡೆಸಿ ಹಿಂದಿರುಗುವ ಕುಳಾಯಿಗಳು ದೇವರ ಪಲ್ಲಕ್ಕಿ ಒಯ್ದು ಸಾಯಂಕಾಲ ಮರಳಿ ತರುತ್ತಾರೆ. ನಂತರ ಕೋಡಿಬಾಗ ಸಾಯಿಕಟ್ಟಾದ ನರಸಿಂಹ ದೇವಸ್ಥಾನದಲ್ಲಿ ಸಂಜೆಯ ಜಾತ್ರೆ ನಡೆಸುತ್ತಾರೆ. ಪ್ರತಿವರ್ಷ ಜಲಸಾಹಸ, ಟ್ರ್ಯಾಕಿಂಗ್ ಜೊತೆಗೆ ದ್ವೀಪದಲ್ಲಿ ಪಿಕ್ ನಿಕ್ ಮಾದರಿಯ ಜಾತ್ರೆ ನಡೆಸುವ ಸ್ಥಳಿಯರೊಂದಿಗೆ ಪ್ರವಾಸಿಗಳು ಕೂಡಾ ಈ ಜಾತ್ರೆಯಲ್ಲಿ ದೋಣಿ-ಬೋಟುಗಳ ವಿಹಾರ ಮಾಡುತ್ತಾರೆ. ಬಹಳ ಹಿಂದಿನಿಂದ ವಿಶಿಷ್ಟ ಆಚರಣೆಯಾಗಿ ಬಂದ ಈ ಕೂರ್ಮಗಡ ಜಾತ್ರೆ ಕಳೆದ ವರ್ಷದ ಅವಗಡ ದಿಂದ ಜನರಲ್ಲಿ ಭಯ-ಭೀತಿಯನ್ನೂ ಹುಟ್ಟಿಸುವಂತಾಗಿದೆ. ಜಾತ್ರೆಯ ಅಂಗವಾಗಿ ನಡೆಯುತಿದ್ದ ಬಹಳಷ್ಟು ಆಚರಣೆಗಳು ಕರೋನಾ ಮತ್ತು ಜಿಲ್ಲಾಡಳಿತದ ಬಿಗುಕ್ರಮದಿಂದ ಸರಳವಾಗಿ, ಜಾಗೃತೆಯಿಂದ ನಡೆಯುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *