ಕೊಂಡ್ಲಿ ಜಾತ್ರೆ ಯಶಸ್ವಿ, ಹುಚ್ಚೆದ್ದು ಕುಣಿದ ಹುಡುಗರು…

ಕಳೆದ ಮಾರ್ಚ್ 30 ರಿಂದ ಪ್ರಾರಂಭವಾಗಿ ಇಂದು ವಿದ್ಯುಕ್ತವಾಗಿ ಮುಗಿದ ಕೊಂಡ್ಲಿ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತೋ, ಇಲ್ಲವೋ ಎನ್ನುವ ಅನುಮಾನವಿತ್ತು. ಮೊದಮೊದಲು ಕೊಂಡ್ಲಿ ಶ್ರೀಮಾರಿಕಾಂಬಾ ಜಾತ್ರೆಯ ತಯಾರಿ ನಡೆದಿದ್ದಾಗ ಕೋವಿಡ್ ರಗಳೆ, ರಾಜಕೀಯಗಳ ಕಾರ್ಮೋಡದ ಅನುಮಾನವಿರಲಿಲ್ಲ. ಆಕಸ್ಮಿಕವಾಗಿ ಕೋವಿಡ್ ರಗಳೆ ಪ್ರಾರಂಭವಾಗಿ ರಾಜ್ಯಸರ್ಕಾರದ ಮಾರ್ಗಸೂಚಿ ಅನ್ವಯ ಜಾತ್ರೆ ನಡೆಸುವುದು ಕಷ್ಟವಿತ್ತು. ಮೊದಮೊದಲು ಬೆಂಬಲಿಸಿದ್ದ ಸಂಘ ರಾಜಕೀಯ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸಮೀತಿಯ ಅಧ್ಯಕ್ಷರ ಜೊತೆಗಿನ ಮುನಿಸಿನಿಂದ ಮತ್ತಷ್ಟು ಕೆರಳಿತ್ತು. ಈ ಕಾರಣಕ್ಕಾಗಿ ಮಾರಿಕಾಂಬಾ ಜಾತ್ರೆ ನಡೆಯುವುದೇ ಅನುಮಾನ ಎಂದಿದ್ದಾಗ ಜಾತ್ರಾ ಸಮೀತಿ ಮತ್ತು ದೇವಸ್ಥಾನ ಆಡಳಿತ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಸಿಡಿದೆದ್ದರು. ಅಧಿಕಾರಿಗಳು ತುಸು ಹೊಂದಾಣಿಕೆಗೆ ಮುಂದಾಗದಿದ್ದರೆ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಯಿತು. ಅಂತೂ ಪುರ್ವನಿಗದಿಯಂತೆ ಜಾತ್ರೆ ಪ್ರಾರಂಭವಾಗೇ ಬಿಟ್ಟಿತು. ಅಧಿಕಾರಿಗಳೂ ಲಿಬರಲ್ ಆದರು. ಜಾತ್ರೆಗೆ ನಿರೀಕ್ಷಿಸಿದ ಜನ, ಆದಾಯಕ್ಕೆ ಕೋವಿಡ್ ನಿಯಮಾವಳಿ ಅಡ್ಡವಾಗಿದ್ದು ಬಿಟ್ಟರೆ ಮತ್ಯಾವ ತೊಂದರೆಯೂ ಆಗಲಿಲ್ಲ.

ಮೃತ ಯೋಧನನ್ನು ನೋಡದ ಸ್ಥಳಿಯ ಜನಪ್ರತಿನಿಧಿಗಳು ಜಾತ್ರೆಗೆ ಬಂದು ಅಮ್ಮನ ಆಶೀರ್ವಾದ ಪಡೆದರು. ಕುಮಾರ ಬಂಗಾರಪ್ಪ, ಎನ್.ಡಬ್ಲೂ ಕೆ.ಎಸ್. ಆರ್.ಟಿ.ಸಿ. ಅಧ್ಯಕ್ಷ ವಿ.ಎಸ್. ಪಾಟೀಲ್, ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪೂಜೆ ನೆರವೇರಿಸಿದರು. ಕೊಂಡ್ಲಿ ಜಾತ್ರೆಯ ವ್ಯಾಪ್ತಿಯ ಒಂದು ಡಜನ್ ಗೂ ಹೆಚ್ಚಿನ ಹಳ್ಳಿಗಳ ಜನರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸೇರಿ ನಾನಾ ಹಣಕಾಸು ಸಂಸ್ಥೆಗಳಲ್ಲಿ 15 ಕೋಟಿರೂಪಾಯಿಗಳಿಗಿಂತ ಹೆಚ್ಚಿನ ಸಾಲದ ಹಣದಲ್ಲಿ ಕೊಂಡ್ಲಿಯ ಶ್ರೀ ಮಾರಿಕಾಂಬಾ ಜಾತ್ರೆ ಮಾಡಿರುವ ಮಾಹಿತಿ ಇದೆ.

ಇದರ ನಡುವೆ ಗಾಳಿಸುದ್ದಿ, ಭಯಗಳಿಂದ ಜಾತ್ರೆಯ ನೈಜ ಖುಷಿ ಅನುಭವಿಸದೆ ಕಾದಿದ್ದಂತಿದ್ದವರು ಮಾರಿಕಾಂಬಾ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಸ್ಟೆಪ್ ಹಾಕಿ ಸಂಬ್ರಮಿಸಿದರು. ಬುಧವಾರ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾಗಿ ಮಧ್ಯಾಹ್ನ 11-30 ರ ವರೆಗೆ ನಡೆದ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳಿದ್ದವು. ಈ ತಂಡಗಳ ತಾಳ-ರಾಗ, ಸಂಗೀತಕ್ಕೆ ತಕ್ಕಂತೆ ಕುಣಿದ ಸ್ಥಳಿಯ ಯುವಕರು ಇಡೀ ಜಾತ್ರೆಯ ಸೊಗಸನ್ನು ಒಂದೇ ದಿನ ಅನುಭವಿಸಿದವರಂತೆ ಕುಣಿದು ಸಂಬ್ರಮಿಸಿದರು.

ಈ ಮಾರಿ ವಿಸರ್ಜನೆಯ ಕುಣಿತ, ಮೋಜು ಮಸ್ತಿಯ ವಿಡಿಯೋ ತುಣುಕುಗಳು kanneshwarnaik,ಸಮಾಜಮುಖಿ ಕನ್ನೇಶ್ ಫೇಸ್ ಬುಕ್ ಪುಟಗಳಲ್ಲಿ ಹಾಗೂ samaajamukhi ಯೂ ಟೂಬ್ ಚಾನೆಲ್, samajamukhi.net ನ್ಯೂಸ್ ಪೋರ್ಟಲ್ ಹಾಗೂ samaajamukhi.net ಫೇಸ್ ಬುಕ್ ಪೇಜ್ ಗಳಲ್ಲಿ ಲಭ್ಯವಿವೆ. ಇದೆಲ್ಲವನ್ನೂ ನೋಡಿ, ಓದಿ ಆನಂದಿಸಿ samaajamukhi.net ಫೇಸ್ ಬುಕ್ ಪೇಜ್ ಮತ್ತು samajamukhi.net ಹಾಗೂ samaajamukhi ಯುಟ್ಯೂಬ್ ಚಾನೆಲ್ ಗಳಿಗೆ subscribe ಆಗಿ ಸಹಕರಿಸುವುದನ್ನು ಮರೆಯಬೇಡಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *