Lr act -ಭೂಮಿ ಹಕ್ಕಿನ ಪಯಣ…. ಜಿ.ಟಿ.ಸತ್ಯನಾರಾಯಣ ಬರಹ

ನಮ್ಮವರ ಜತೆ ಭೂಮಿ ಹಕ್ಕಿನ ಪಯಣ….

ಈಗ ಒಂದು ವರ್ಷಕೂ ಹಿಂದೆ 94 ಸಿ ಅಡಿಯಲ್ಲಿ ನಮ್ಮ ಊರಿನ ಹನುಮ ಲಮಾಣಿ ಸೇರಿ 7 ಕುಟುಂಬಗಳು ಅರ್ಜಿ ಸಲ್ಲಿಸಿದ್ದರು. ಅವರಿಗೆ ಹಕ್ಕು ಪತ್ರ ದೊರಕಿರಲಿಲ್ಲ. ಆದರೆ ಈಚೆಗೆ ವಿಲೇವಾರಿಯಾಗದೇ ಉಳಿದಿದ್ದ ಸಾಕಷ್ಟು ಕಡತಗಳನ್ನು ಸಾಗರದ ನೂತನ ತಹಸೀಲ್ದಾರ್ ಚಂದ್ರಶೇಖರ್ ಸಹಿ ಹಾಕಿ ವಿಲೇವಾರಿ ಮಾಡಿದ್ದಾರೆ. ಸಾಗರ ಶಾಸಕರು ಹಕ್ಕು ಪತ್ರ ವಿತರಣೆಗೆ ಕೋವಿಡ್ ಕಾರಣಕ್ಕೆ ಮೊನ್ನೆ ಮೊನ್ನೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದರು.

ಮಾಹಿತಿ ತಿಳಿದುಕೊಂಡು ನಾನು ನಮ್ಮೂರಿನ ಈ ಕುಟುಂಬಗಳಿಗೆ ಮಾಹಿತಿ ನೀಡಿ ಈ ದಿನ ಸಮಯ ನಿಗದಿ ಮಾಡಿಕೊಂಡು ಅಧಿಕಾರಿಗಳಿಗೆ ಮುನ್ನ ಮಾಹಿತಿ ನೀಡಿ ಈಗ ಹಕ್ಕು ಪತ್ರವನ್ನ ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆದರು. ಈ ಹಕ್ಕು ಪತ್ರ ಪಟ್ಟಿಯಲ್ಲಿ ನನ್ನದೂ ಒಂದು ಇತ್ತು ಎನ್ನುವುದು ಸತ್ಯ.ಒಂದು ಅಡಿ ಭೂಮಿಯ ಒಡೆತನ ಹೊಂದಿರದ ಹನುಮ ಲಮಾಣಿ, ಗಣಪತಿ, ಮಹಾಬಲೇಶ್ವರ, ಜಯಮ್ಮ, ಶಿವರಾಮ, ಫಿಲಿಪ್ ರವರಿಗೆ ತಮ್ಮ ವಾಸದ ಮನೆ ಹಕ್ಕು ಪತ್ರ ಪಡೆದ ಖುಷಿಗೆ ಜತೆಯಾದ ಸಾಕ್ಷಿಯಾದ ಕ್ಷಣ ಇದು. ನಮ್ಮ ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗರಾದ ರಾಘವೇಂದ್ರ ಮತ್ತು ಸಹಾಯಕರಾದ ಶ್ರೀಕಾಂತ್ ಮತ್ತು ಬಸವರಾಜ ಈ ಸೇವೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿರುವುದು ನಮಗೆ ಖುಷಿ ತಂದಿದೆ.

ಮಾನ್ಯ ಶಾಶಕರು ಹಕ್ಕು ಪತ್ರ ಶೀಘ್ರ ವಿಲೇವಾರಿಗೆ ಸೂಚನೆ ನೀಡಿರುವುದು ಇಲ್ಲಿ ಕೆಲಸ ಮಾಡಿದೆ. ಶಾಸಕರನ್ನ ಅಭಿನಂದಿಸುವೆ. ಮಾನ್ಯ ಶಾಸಕರಿಗೆ ನನ್ನದೊಂದು ವಿಶೇಷ ವಿನಂತಿ. ಶರಾವತಿ ನದಿ ದಂಡೆಯ ಬಹುತೇಕ ಗ್ರಾಮಗಳಲ್ಲಿ 94 ಸಿ ಹಕ್ಕು ಪತ್ರ ಕೊಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇಯ ಅಗತ್ಯ ಇದೆ. ಉದಾಹರಣೆಗೆ ತುಮರಿ ಗ್ರಾಮ ಪಂಚಾಯಿತಿಯ ವಳಗೆರೆ, ಕಳೂರು, ಚದರವಳ್ಳಿ ಗ್ರಾಮಗಳ ಸುಮಾರು 550 ಅರ್ಜಿ ವಿಲೇವಾರಿ ಆಗದೇ ಉಳಿದಿದೆ. ಇದಕ್ಕೆ ಕಾರಣ 1970 ರಲ್ಲಿ ಮಾಡಿರುವ ವನ್ಯಜೀವಿ ವಲಯ ನೋಟಿಫಿಕೇಶನ್ ತೊಡಕಗಳು. ಒಂದು ಗ್ರಾಮದಲ್ಲಿ ಒಂದಿಷ್ಟು ಭಾಗ ಅರಣ್ಯ ಬಂದರೂ ಜಂಟಿ ಸರ್ವೇ ಕಾರಣ ನೀಡಿ ಕಡತಗಳು ಬಾಕಿ ಉಳಿಸಲಾಗಿದೆ. ಜಂಟಿ ಸರ್ವೇ ಆಗುವುದಿಲ್ಲ. ಇವರಿಗೆ ಹಕ್ಕು ಪತ್ರ ಬರುವುದಿಲ್ಲ ಎನ್ನುವ ಹಾಗಿದೆ ಈ ಸ್ಥಿತಿ. ಜಂಟಿ ಸರ್ವೇ ಮಾಡಿ ಅರ್ಹರಿಗೆ ಹಕ್ಕು ಪತ್ರ ನೀಡಿ ಉಳಿದಂತೆ ಜನವಸತಿ ಪ್ರದೇಶ ಹೊರಗೆ ಇಡುವ ನೋಟಿಫಿಕೇಶನ್ ತಿದ್ದುಪಡಿಯ ಹೆಜ್ಜೆಯನ್ನು ಇಡಲು ಶಾಸಕರು ಮುಂದಾಗಬೇಕು ಎಂದು ವಿನಂತಿಸುವೆ.

ಹಕ್ಕು ಪತ್ರ ಪಡೆದ ಈ ಹೊತ್ತಲಿ
ಮಹತ್ತರ ಕಾನೂನು ಜಾರಿ ಮಾಡಿದ ಮತ್ತು ತಿದ್ದುಪಡಿ ಮಾಡಿದ ಸಿದ್ದರಾಮಯ್ಯ ಮತ್ತು ಕಾಗೋಡು ರವರನ್ನು ನೆನೆಯುತ್ತಾ ವಿರಮಿಸುವೆ. ಚೋಮನಿಗೆ ಇಂದು ಆತನ ವಾಸಿಸುವ ಮನೆಗೆ ಹಕ್ಕು ಬಂತು.

ಅಧಿಕಾರ ಗುರಿಯಲ್ಲ ಮಾರ್ಗ ಮಾತ್ರ
ಅದು ಇರಲಿ ಬಿಡಲಿ ನಾವು ಜನರ ಜತೆ

      -ಜಿ. ಟಿ ಸತ್ಯನಾರಾಯಣ ಕರೂರು.
        16-04-2021

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *