pandu swaamy- ಕರೋನಾ ಸೇನಾನಿ ಪಾಂಡು ಸ್ವಾಮಿ

ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಭುದೇವ ಎನ್ನುವ ಬಿರುದಿಗೆ ಪಾತ್ರನಾಗಿದ್ದ ಸಿದ್ಧಾಪುರದ ಪಾಂಡು ಸ್ವಾಮಿ ನೇಪಥ್ಯದಲ್ಲಿದ್ದಂತಿದ್ದರು. ಕಳೆದ ವರ್ಷ ಮಾರಕ ಕರೋನಾ ಭೀತಿ ಪ್ರಾರಂಭವಾಯಿತು ನೋಡಿ ಆಗ ಕರೋನಾ ಸೇನಾನಿಗಳಿಗೆ ತನ್ನ ಸ್ವಂತ: ಖರ್ಚಿನಲ್ಲಿ ನೀರು, ಬಿಸ್ಕಟ್ ನೀಡುತ್ತಾ ಕರೋನಾ ಸೇನಾನಿಗಳಿಗೆ ನೆರವಾಗತೊಡಗಿದರು.

ಒಂದೆರಡು ತಿಂಗಳು ಈ ಕಾಯಕ ಮುಂದುವರಿಸಿದ ಪಾಂಡು ಸ್ವಾಮಿ ಪ್ರಚಾರ ಬಯಸಲಿಲ್ಲ, ಈ ಬಗ್ಗೆ ಯಾರಿಗೂ ಹೇಳಿಕೊಳ್ಳಲೂ ಇಲ್ಲ. ಕರೋನಾ ಮೊದಲ ಕಾಲದಿಂದಲೂ ತನ್ನ ಚಿತ್ರ ಬರೆಯುವಿಕೆ. ಪ್ಲೆಕ್ಸ್ ಕೆಲಸ, ಸ್ಟಿಕರ್ ಕಟ್ಟಿಂಗ್ ಎಂದು ಎಲೆಮರೆಯ ಕಾಯಿಯಂತೆ ಕೆಲಸಮಾಡುತಿದ್ದ ಪಾಂಡು ಸ್ವಾಮಿ ಕಳೆದ ವರ್ಷ ಕರೋನಾ ಸೇನಾನಿಯಾಗಿ ಅಸಹಾಯಕರು, ವೃದ್ಧರಿಗೆ ನೆರವು ನೀಡುವ, ತನ್ನ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸುವ ಕೆಲಸಮಾಡುತ್ತಲೇ ಕರೋನಾ ಸೇನಾನಿಗಳಿಗೆ ನೀರು- ಆಹಾರ ನೀಡುತ್ತಾ ತಮ್ಮ ಎಂದಿನ ತರಮರೆಯ ಕೆಲಸ ಮುಂದುವರಿಸಿದ್ದರು.

ಪ್ರಚಾರ, ಪ್ರಸಿದ್ಧಿ-ಲಾಭಗಳ ಹಂಗಿಗೆ ಬೀಳದ ಪಾಂಡುಸ್ವಾಮಿಯವರನ್ನು ಗುರುತಿಸಿದ್ದು ಪ್ರಜಾವಾಣಿ, ಎಲ್ಲಾ ಮಾಧ್ಯಮಗಳಂತೆ ಸುದ್ದಿ- ಲೇಖಲ ಮಾಡಿದ ಪ್ರಜಾವಾಣಿ 2021 ರ ಕರೋನಾ ಸೇನಾನಿಗಳ ಜೊತೆಗೆ ಸಮಾಜಸೇವೆಗಾಗಿ ಪಾಂಡುಸ್ವಾಮಿಯವರನ್ನೂ ಕರೆದು ಸನ್ಮಾನಿಸಿತು. ಅಷ್ಟರ ವರೆಗೆ ತನ್ನಷ್ಟಕ್ಕೆ ತಾನೇ ಮಾಡುತಿದ್ದ ಪಾಂಡು ಸೇವೆ ಪ್ರಸಿದ್ಧವಾಯಿತು. ಈಗಲೂ ಪ್ರಚಾರ ಬೇಡ ಎನ್ನುವ ಪಾಂಡು ಸ್ವಾಮಿ ಪ್ರಜಾವಾಣಿ ಗುರುತಿಸಿದ 12 ತಾಲೂಕುಗಳ 5 ಜನ ಕರೋನಾ ಸೇನಾನಿಗಳಲ್ಲಿ ಒಬ್ಬರು. ನೃತ್ಯಪಟು, ಕಲಾವಿದ, ಸಮಾಜಸೇವಕ ಆಗಿರುವ ಸಿದ್ಧಾಪುರ ಬಂಗ್ಲೆಗುಡ್ಡದ ಪಾಂಡುಸ್ವಾಮಿಯವರಿಗೆ ಅಭಿನಂದನೆಗಳೊಂದಿಗೆ ಸಮಾಜಮುಖಿ ಸಲಾಂ.

ಹಾರ್ಸಿಕಟ್ಟಾದಲ್ಲಿ ನುಡಿನಮನ….

ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾದಲ್ಲಿ ಸ್ಥಳೀಯ ಯಕ್ಷಗಾನ ಅಭಿಮಾನಿಗಳು, ಗೆಳೆಯರ ಬಳಗದವರು ಇತ್ತೀಚೆಗೆ ನಿಧನಹೊಂದಿದ ಪ್ರೊ.ಎಂ.ಹೆಗಡೆ ಅವರಿಗೆ ಗುರುವಾರ ಶೃದ್ಧಾಂಜಲಿ ಸಲ್ಲಿಸಿದರು.
ವಿ.ಚಂದ್ರಶೇಖರ ಭಟ್ಟ ಗಾಳಿಮನೆ ಮಾತನಾಡಿ ವಾಗ್ಮಿಗಳು, ವಿದ್ವಾಂಸರು, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರು ಬಹುಮುಖ ಪ್ರತಿಭೆ ಇದ್ದವರಾಗಿದ್ದರು ಎಂದು ಹೇಳಿದರು.
ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್ ಮಾತನಾಡಿ ಪ್ರೊ.ಎಂ.ಎ.ಹೆಗಡೆ ಅವರ ನೆನಪಿನಲ್ಲಿ ಪ್ರತಿ ವರ್ಷ ಒಂದು ಕಾರ್ಯಕ್ರಮ ನಡೆಸಬೇಕೆಂದರು.
ಅನಂತ ಶಾನಭಾಗ ಹಾರ್ಸಿಕಟ್ಟಾ, ಟಿಎಸ್‍ಎಸ್‍ನ ಮಾಜಿ ನಿರ್ದೇಶಕ ರವಿಂದ್ರ ಹೆಗಡೆ ಹಿರೇಕೈ, ಗೋಪಾಲ ಹೆಗಡೆ ಹುಲಿಮನೆ, ರಘುಪತಿ ಹೆಗಡೆ ಹೂಡೆಹದ್ದ, ಎಂ.ಆರ್.ಹೆಗಡೆ ದಂಟಕಲ್,ರಮೇಶ ಹೆಗಡೆ ಹಾರ್ಸಿಮನೆ ಶೃದ್ದಾಂಜಲಿ ನುಡಿಯನ್ನಾಡಿದರು.
ಶ್ರೀಧರ ಭಟ್ಟ ಮಾಣಿಕ್ಯನಮನೆ,ಶ್ರೀಕಾಂತ ಶಾನಭಾಗ, ಕಲ್ಯ ಮಡಿವಾಳ, ಗುರುಮೂರ್ತಿ ಶಾನಭಾಗ ಇತರರಿದ್ದರು.
ಕಾರ್ಯಕ್ರಮ ಪೂರ್ವದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *