Vittal bhandaari – ಡಾ. ವಿಠ್ಠಲ್ ಭಂಡಾರಿ ಮಾಸದ ಚಿತ್ರಗಳು,ಕೊನೆಯಾಗದ ನೆನಪು

ವಿಠ್ಠಲ್ ಸೇರಿದಂತೆ ನಮ್ಮ ಸಮತಾವಾದಿ ಗೆಳೆಯರು, ವಿಶೇಶವಾಗಿ ಅಣ್ಣಂದಿರೊಂದಿಗೆ ನನ್ನದು ಲಾಗಾಯ್ತಿನ ಜಗಳ. ಅವರ ಎಂಥ ಮಾರಾಯ ಎನ್ನುವುದರಿಂದ ಪ್ರಾರಂಭವಾಗುತಿದ್ದ ನಮ್ಮ ಜಗಳ ಜಗಳದಿಂದಲೇ ಅಂತ್ಯವಾಗುತಿತ್ತು. ಅಷ್ಟು ಜಗಳಕ್ಕೆ ಅರ್ಹರಾದ ವ್ಯಕ್ತಿಗಳಲ್ಲಿ ವಿಠ್ಠಲ್ ಸರ್ ಒಬ್ಬರು.

ವಿಠ್ಠಲ್ ಯಾರೆಂದು ತಿಳಿದಿರದ ಅವಧಿಯದು ನನ್ನ ಲೇಖನ ಒಂದನ್ನು ಓದಿದ ಡಾ. ಆರ್. ವಿ.ಭಂಡಾರಿ ನನಗೊಂದು ಪತ್ರ ಬರೆಯುತ್ತಾರೆ. ನಂತರ ಅವರು ಕರಾವಳಿ ಮುಂಜಾವು ಕಛೇರಿಯಲ್ಲಿ ಮೊದಲು ನನಗೆ ಭೇಟಿಯಾಗಿದ್ದು. ಆರ್.ವಿ. ಆಗ ದೊಡ್ಡ ಸಾಹಿತಿ ನನ್ನಂಥ ಹೊಸ ಹುಡುಗನನ್ನು ಕಂಡು ಮಾತನಾಡಿಸಿ, ಬೆನ್ನುತಟ್ಟುತ್ತಾರೆ. ಅಲ್ಲಿಂದ ಪ್ರಾರಂಭವಾದ ನನ್ನ ಕುತೂಹಲಕ್ಕೆ ಸಿಕ್ಕ ಆರ್. ವಿ.ಭಂಡಾರಿಯವರ ಕುಟುಂಬ ಸಾಹಿತ್ಯ, ಸಂಘಟನೆ ಇತ್ಯಾದಿ ವಿಡಂಬಾರಿಯವರಜೊತೆಗಿನ ಸ್ನೇಹದಿಂದ ಮನಸೊಳಗೆ ಇಳಿಯಿತು. ನಾನೂ ಅವರ ಕುಟುಂಬದ ಸಂಗಾತಿಯಾದೆ.

ಆಗ ಈ ವಿಠ್ಠಲ್ ಹೋರಾಟ, ಸಂಘಟನೆ ಎಂದು ಓಡಾಡಿಕೊಂಡಿದ್ದ ಹುಡುಗ. ನನಗಿಂತ ಎಂಟ್ಹತ್ತು ವರ್ಷ ಹಿರಿಯರಾಗಿದ್ದ ವಿಠ್ಠಲ್ ನನಗೆ ಆರ್. ವಿ. ಭಂಡಾರಿಯವರ ಮಗನಾಗಿ ದಕ್ಕಿದ್ದಕ್ಕಿಂತ ಹೆಚ್ಚು ನನ್ನ ಸಂಗಾತಿಯಾಗಿ, ಅಣ್ಣನಾಗಿ. ಸ್ನೇಹಿತನಾಗಿ.

ಇದಕ್ಕಿಂತ ಮೊದಲು ಅವರ ಪತ್ನಿ ಧೀರ ಹೆಣ್ಣು ಯಮುನಾ ನಮ್ಮ ಕಾಲೇಜು ದಿನಗಳ ಸಂಗಾತಿ. ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಇವರು ಇನ್ನೊಬ್ಬ ವಿಠ್ಠಲ್ ಎನ್ನುವ ಹೋರಾಟವನ್ನೇ ವರಿಸಿದ್ದರು. ಯಾರೂ ಹೊಟ್ಟೆಕಿಚ್ಚು ಪಡುವಂಥ ಜೋಡಿಯದು. ಸಾಹಿತ್ಯ. ಸಂಗೀತ, ಹೋರಾಟ, ಚಳವಳಿ, ಸುಧಾರಣೆ, ಬಂಡಾಯ ಎಲ್ಲೆಲ್ಲೂ ಸಲ್ಲುವ ಇಂಥ ಜೋಡಿ ಅಪರೂಪ. ಹೋರಾಟ, ಬದಲಾವಣೆಗಾಗಿ ಸಂಯೋಜನೆಗೊಂಡ ಜೋಡಿಯದು.

ಅಪ್ಪ ಡಾ ಆರ್.ವಿ. ವಿಠ್ಠಲ್, ಯಮುನಾ ಸೇರಿದ ನಮ್ಮಂಥ ಅನೇಕರಿಗೆ ಅಣ್ಣ. ಆ ಅಣ್ಣನ ಮಗ, ಶಿಷ್ಯನಾಗಿ ವಿಠ್ಠಲ್ ತುಳಿದ ಹಾದಿ ಅವರ ಬದುಕನ್ನು ಸಮರ್ಥಿಸುವಂತಿತ್ತು. ಸಂಘಟನೆ, ಹೋರಾಟ,ಸಾಹಿತ್ಯ, ಬಂಡಾಯ,ಸುಧಾರಣೆ ಇವೇ ಬದುಕು ಎಂದುಕೊಂಡಿದ್ದ ಅಪರೂಪದ ಅಣ್ಣ, ಮಗ,ಸಂಗಾತಿ, ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ವಿಠ್ಠಲ್ ಅವರ ಬದುಕಿನ ಕೊನೆ ಜಗಳ ಎಂಬಂತೆ ಇತ್ತೀಚೆಗೊಂದು ದಿನ ಶಿರಸಿ ಜಿಲ್ಲೆಯ ವಿಚಾರಕ್ಕೆ ವಾದಕ್ಕಿಳಿದಿದ್ದರು. ಉತ್ತರ ಕನ್ನಡ ಜಿಲ್ಲೆ ವಿಭಾಗವಾಗುವುದು ಬೇಡ ಎನ್ನುವುದು ಅವರ ಆಸೆ, ತರ್ಕ, ವಾದವಾದರೆ..

ನನ್ನದು ಎಂದಿನಂತೆ ಉಲ್ಟಾ! ಕೊನೆಗೆ ನಾನೇ ಶಿರಸಿ ಜಿಲ್ಲೆ ಪರವಾಗಿರುವವರು, ವಿರೋಧಿಸುವವರ ಒಂದು ಚರ್ಚೆ ನಡೆಸುತ್ತೇನೆ ಎಂದೆ. ಆದರೆ ಬರೀ ಹೋರಾಟದ ಏಕಮುಖದವರು ಬೇಡ ಸಾಧ್ಯಾಸಾಧ್ಯತೆ, ಕಾರ್ಯಕಾರಣಗಳ ಬಗ್ಗೆ ಚರ್ಚಿಸಬಲ್ಲ ಸಂಯಮಿಗಳು ಬೇಕು ಎಂದು ಮಾತು ಮುಗಿಸಿದ್ದರು. ಅಂದೂ ಕೂಡಾ ಎಂದಿನಂತೆ ಅವರ ಇಷ್ಟದ ಆಯುರ್ವೇದದ ಕಷಾಯ ಕುಡಿಸಿ ಕಳಿಸಿದ್ದರು.

ಅಂದಿನಂತೆ ಅದೆಷ್ಟೋ ಬಾರಿ ಮನೆಯೊಳಗೆ ಹೊರಗೆ ನಾವು ಸೇರಿದ್ದಿದೆ ಆದರೆ ಸ್ನೇಹಿತ ರಾಮಡಗಿ ಹೇಮಂತ,ವೀರಲಿಂಗನಗೌಡ್ರ ರವರೊಂದಿಗಿನ ನಮ್ಮ ನೆನಪು, ಜಗಳಗಳು ವಿಠ್ಠಲ್ ರನ್ನು ನಮ್ಮೊಳಗೆ ಜೀವಂತವಾಗಿರಿಸಬಲ್ಲವು. ಬದುಕಿದ್ದು ನಮ್ಮ ದೇಶ, ವಾತಾವರಣ ನೋಡಿ ಖುಷಿಪಡಲು ಕಾತರಿಸುತಿದ್ದ ಜೀವಂತಿಕೆಯ ಸಂಗಾತಿ ವಿಠ್ಠಲ್ ನಮ್ಮಂಥ ಅನೇಕರಲ್ಲಿ ಅನಾಥ ಭಾವ ಮೂಡಿಸಿದ್ದಾರೆ. ಹಲವರಿಗೆ ನೇರ ಗುರುವಾಗಿ ನಮ್ಮಂಥವರಿಗೆ ಮಾನಸ ಗುರುವಾಗಿ

ಅವರೊಂದಿಗಿನ ಸಹಯಾನ, ಸ್ನೇಹ, ಜಗಳ,ಪ್ರೀತಿ ನಮ್ಮದೆಯಲ್ಲಿ ನಿತ್ಯ ಹಸಿರು. ಮತ್ತೆ ಬಾ ಸಂಗಾತಿ, ಅಣ್ಣ ಎಂದು ನಮ್ಮಷ್ಟಕ್ಕೆ ನಾವು ಕರೆದುಕೊಳ್ಳುವ ವಿಧಿಗೆ,ಕರೋನಾಕ್ಕೆ ನನ್ನ ಜೀವಮಾನದ ಧಿಕ್ಕಾರ. ರೆಡ್ ಸೆಲೂಟ್, ಇಕ್ವಿಲಾಬ್ ಜಿಂದಾಬಾದ್.. ನಿಮ್ಮ ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *