ಶಿರಸಿಯಲ್ಲಿ ಜೀವವಾಯು ಸೋರಿಕೆ,ತಕ್ಷಣ ಸ್ಫಂದಿಸಿದ ಭೀಮಣ್ಣ ಮತ್ತು ಹೆಬ್ಬಾರ್

ಜನ, ವಾಹನ ಓಡಾಟ ಇಲ್ಲದ ಸಾಗರ, ಯಲ್ಲಾಪುರ ರಸ್ತೆಯಲ್ಲಿ ಇಂದು ಒಂದೇ ಸಮನೆ ಎಂಬುಲನ್ಸ್ ಗಳ ಓಡಾಟ ನೋಡಿದ ಜನರು ಕಂಗಾಲಾಗುವಂತಿತ್ತು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ ಆಸ್ಫತ್ರೆ ಗಳಲ್ಲಿ ಏನಾಯ್ತು ಎಂದು ಎಲ್ಲರೂ ವಿಚಾರಿಸುವ ಮೊದಲು ಹೊರಬಿದ್ದ ಸುದ್ದಿಯೆಂದರೆ… ಶಿರಸಿ ಸರ್ಕಾರಿ ಆಸ್ಫತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ ಜೀವವಾಯು ಪಡೆಯುತಿದ್ದ ಕೋವಿಡ್ ಸೋಂಕಿತರನ್ನು ನೆರೆಯ ಸಿದ್ಧಾಪುರ,ಯಲ್ಲಾಪುರ ಗಳಿಗೆ ಸಾಗಿಸುವ ಅನಿವಾರ್ಯತೆ.

……….ಇಂಥ ಅನಿವಾರ್ಯತೆಗಳಲ್ಲಿ ಸದಾ ಜನರೊಂದಿಗೆ ಸ್ಫಂದಿಸುತ್ತದೆ. ಅನಿವಾರ್ಯತೆ ಇರುವವರಿಗೆ ಕಿಟ್ ವ್ಯವಸ್ಥೆ, ಪಿ.ಪಿ.ಇ. ಕಿಟ್, ಆಮ್ಲಜನಕ ಪೂರೈಕೆ ಹೀಗೆ ಆಪತ್ತು,ಅವಗಢ ಸೇರಿದಂತೆ ಯಾವುದೇ ಸಮಯದಲ್ಲಿ ನಾವು ಜನಪರವಾಗಿ ಕೆಲಸ ಮಾಡಲು ಪಕ್ಷದ ನಿರ್ಧೇಶನವಿದೆ,ಅದರಂತೆ ನಡೆದುಕೊಳ್ಳುತ್ತೇವೆ. -ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ

ಕೋವಿಡ್ ಸೋಂಕಿತರಿಗೆ ಅಂತಿಮ ಹಂತದಲ್ಲಿ ಆಮ್ಲಜನಕ ಅಳವಡಿಕೆ, ಆಯ್.ಸಿ.ಯು. ಸೌಲಭ್ಯ ಕಲ್ಪಸುವ ಅನಿವಾರ್ಯತೆ ಇರುತ್ತದೆ. ಈ ಕಾರಣಕ್ಕಾಗಿ ತಾಲೂಕು ಆಸ್ಫತ್ರೆಗಳಿಂದ ಹಿಡಿದು ಜಿಲ್ಲೆ, ವಿಭಾಗೀಯ ಆಸ್ಫತ್ರೆಗಳಲ್ಲಿ ಈ ಅನುಕೂಲತೆ ಕಲ್ಪಿಸಲಾಗುತ್ತದೆ.

ಶಿರಸಿಗೆ ಹೊಸದಾಗಿರುವ ಆಮ್ಲಜನಕ ಪೂರೈಕೆ ಈಗ ಪ್ರಯೋಗ ಹಂತದಲ್ಲಿದೆ. ಈ ಪ್ರಾರಂಭಿಕ ವ್ಯವಸ್ಥೆಯ ಕೊಳವೆಯಲ್ಲಿ ಕಾಣಿಸಿಕೊಂಡ ಲೀಕೇಜ್ ನಿಂದ ರೋಗಿಗಳಿಗೆ ತೊಂದರೆ ಆಗಬಾರದೆಂದು ತಕ್ಷಣ ಅವರನ್ನು ಸಿದ್ಧಾಪುರ, ಯಲ್ಲಾಪುರ ತಾಲೂಕು ಆಸ್ಫತ್ರೆಗಳಿಗೆ ರವಾನಿಸಲಾಗಿದೆ.

ಈ ಬಗ್ಗೆ ಸಮಾಜಮುಖಿಗೆ ಪ್ರತಿಕ್ರೀಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾಂತ್ರಿ ತೊಂದರೆ ಯಿಂದ ಶಿರಸಿ ಸರ್ಕಾರಿ ಆಸ್ಫತ್ರೆಯ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ಕೋವಿಡ್ ಸೋಂಕಿತರಿಗೆ ತೊಂದೆಯಾಗಬಾದೆಂದು ತಕ್ಷಣ ಯಲ್ಲಾಪುರ, ಸಿದ್ಧಾಪುರ ಆಸ್ಪತ್ರೆಗಳಿಗೆ ಈ ರೋಗಿಗಳನ್ನು ಸಾಗಿಸಲಾಗಿದೆ. ಈ ಪ್ರಕರಣದಿಂದ ಯಾರಿಗೂ ತೊಂದರೆ ಆಗಿಲ್ಲ. ನಾಳೆ ಮಧ್ಯಾಹ್ನದ ವರೆಗೆ ಶಿರಸಿಯಲ್ಲಿ ಎಂದಿನಂತೆ ಸಕಲ ವ್ಯವಸ್ಥೆ, ಚಿಕಿತ್ಸೆಗೆ ಅವಶ್ಯವಿರುವ ಅನುಕೂಲಗಳನ್ನು ಕಲ್ಪಿಸುತ್ತೇವೆ. ಇವೆಲ್ಲಾ ಇಲ್ಲಿನ ವ್ಯವಸ್ಥೆಗೆ ಹೊಸತು ಮುಂದೆ ಇಂಥ ವ್ಯತ್ಯಾಸ,ತೊಂದರೆಗಳಾಗದಂತೆ ಜವಾಬ್ಧಾರಿ ವಹಿಸುತ್ತೇವೆ ಎಂದರು.

ತಕ್ಷಣ ಸ್ಪಂದಿಸಿದ ಭೀಮಣ್ಣ- ಶಿರಸಿಯಲ್ಲಿ ಆಮ್ಲಜನಕ ಸೋರಿಕೆಯಾದ ವಿಷಯ ತಿಳಿದ ಭೀಮಣ್ಣ ಸ್ಥಳಿಯ ಜನಪ್ರತಿನಿಧಿಗಳು ಬರುವ ಮೊದಲೇ ಧಾವಿಸಿದರು. ಘಟನಾ ಸ್ಥಳದ ಸ್ಥಿತಿ ಅವಲೋಕಿಸಿದ ಅವರು ಆಸ್ಫತ್ರೆ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಶಿರಸಿ ಸರ್ಕಾರಿ ಆಸ್ಫತ್ರೆಗೆ ಅವಶ್ಯವಿದ್ದ 5 ಜಂಬೋ ಸಿಲಿಂಡರ್ ಗಳನ್ನು ತಕ್ಷಣ ಪೂರೈಸಿದರು. ಈ ವೇಳೆಗಾಗಲೇ ತುರ್ತು ವ್ಯವಸ್ಥೆಗಾಗಿ ಎಲ್ಲಾ ರೋಗಿಗಳನ್ನು ಸಿದ್ಧಾಪುರ, ಯಲ್ಲಾಪುರಗಳಿಗೆ ಸಾಗಿಸಲಾಗಿತ್ತು.

ರಾಜ್ಯದ ಕೆಲವು ಕಡೆ ಆಕ್ಸಿಜನ್ ಸಮಸ್ಯೆಯಿಂದ ಅನೇಕರು ಜೀವ ತೆತ್ತಿದ್ದಾರೆ. ರೋಗಿಗಳು, ಅಸಹಾಯಕರ ಬಗ್ಗೆ ಬೇಜವಾಬ್ಧಾರಿತನ ಸರಿಯಲ್ಲ. ಸಂಬಂಧಿಸಿದ ವ್ಯವಸ್ಥೆ, ಅಧಿಕಾರಿಗಳು ಇಂಥ ಅವಗಢಗಳಾಗದಂತೆ ಜಾಗೃತಿ ವಹಿಸಬೇಕು. ಸ್ಥಳಿಯ ಜನಪ್ರತಿನಿಧಿಗಳು ಇಂಥ ಅವಶ್ಯ ವ್ಯವಸ್ಥೆ ಬಗ್ಗೆ ಕೂಡಾ ನಿರ್ಲಕ್ಷ ವಹಿಸುವುದು ಸರಿಯಲ್ಲ. ಕಾಂಗ್ರೆಸ್ ಇಂಥ ಅನಿವಾರ್ಯತೆಗಳಲ್ಲಿ ಸದಾ ಜನರೊಂದಿಗೆ ಸ್ಫಂದಿಸುತ್ತದೆ. ಅನಿವಾರ್ಯತೆ ಇರುವವರಿಗೆ ಕಿಟ್ ವ್ಯವಸ್ಥೆ, ಪಿ.ಪಿ.ಇ. ಕಿಟ್, ಆಮ್ಲಜನಕ ಪೂರೈಕೆ ಹೀಗೆ ಆಪತ್ತು,ಅವಗಢ ಸೇರಿದಂತೆ ಯಾವುದೇ ಸಮಯದಲ್ಲಿ ನಾವು ಜನಪರವಾಗಿ ಕೆಲಸ ಮಾಡಲು ಪಕ್ಷದ ನಿರ್ಧೇಶನವಿದೆ,ಅದರಂತೆ ನಡೆದುಕೊಳ್ಳುತ್ತೇವೆ. -ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *