Wfh, s problem-ಹೆಸ್ಕಾಂ ಗೆ ಶಾಕ್ ನೀಡಲಿದ್ದಾರೆ ವರ್ಕಫ್ರಾಮ್ ಹೋಮ್ ಮಂದಿ

ಲೋಹಿತ್ ನಾಯ್ಕ ಮತ್ರ- ಹೆಸ್ಕಾಂ ಅವ್ಯವಸ್ಥೆಯಿಂದ ಕೆಲಸ ಕರೆದು ಕೊಳ್ಳುವ ಭೀತಿಯಲ್ಲಿ ” ವರ್ಕ್ ಫ್ರಮ್ ಹೋಮ್ ” ಯುವಕರು..

ಪ್ರತಿಷ್ಠಿತ MNC ಗಳಲ್ಲಿ ಕೆಲಸಮಾಡುತ್ತ ಪರೋಕ್ಷವಾಗಿ ದೇಶದ ಆರ್ಥಿಕತೆ ಕಟ್ಟುತ್ತಿರುವ ಜಿಲ್ಲೆಯ ಸಾವಿರಾರು ಯುವಕರು ಬೆಂಗಳೂರು ಮತ್ತು ಇತರ ಮಹಾನಗರಗಳನ್ನು ಬಿಟ್ಟು ತಮ್ಮ ಹಳ್ಳಿಯ ಮನೆಯಿಂದಲೇ WORK FROM HOME ಮಾಡುತ್ತಿದ್ದಾರೆ. ಆದರೆ ಅವರೀಗ ಹೆಸ್ಕಾಂ ನ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಳ್ಳಿಗಳಲ್ಲಿ ದಿನಕ್ಕೆ ಸರಾಸರಿಯಾಗಿ ಐದರಿಂದ ಹತ್ತು ಬಾರಿ ವಿಧ್ಯುತ್ ಕಡಿತ ವಾಗುತ್ತಿದ್ದು. ಕೆಲವೊಮ್ಮೆ ದಿನಗಟ್ಟಲೆ ವಿದ್ಯುತ್ ಇರುವುದಿಲ್ಲ, ಮಳೆಗಾಲದ ಸಮಯದಲ್ಲಂತೂ ಕೆಲವು ಊರುಗಳಿಗೆ ಒಂದು ವಾರ ವಿದ್ಯುತ್ ಇಲ್ಲದ ದಿನಗಳು ಸಹ ಇದೆ.


ಇಸ್ಟು ವರ್ಷಗಳ ಕಾಲ ಹಳ್ಳಿಗರು ಈ ವ್ಯವಸ್ಥೆಗೆ ಸೋತು ಹೊಂದಿಕೊಂಡಿದ್ದರು ಆದರೆ ಈಗ ಹೆಸ್ಕಾಂ ನ ಈ ಅವ್ಯವಸ್ಥೆಯಿಂದ ಯುವಕರ ಕೆಲಸಕ್ಕೆ ಕುತ್ತು ತರುವಂತಿದೆ. ಸಮಯಕ್ಕೆ ಸರಿಯಾಗಿ ಲಾಗಿನ್ ಆಗದೆ ಅಥವಾ ದಿನಕ್ಕೆ ಇಂತಿಷ್ಟು ತಾಸುಗಳು ಲಾಗಿನ್ ಆಗದಿದ್ದರೆ ಕಂಪನಿಯ ಮ್ಯಾನೇಜರ್ ಗಳು ಟೀಮ್ ಲೀಡರಗಳು ಆಯಾಯ ಎಕ್ಸಿಕ್ಯೂಟಿವ್ ಗಳನ್ನು ಮೊನಿಟರ್ ಮಾಡಿ ಮೀತಿ ಮೀರಿದಾಗ ಕಂಪನಿಯ H R ಗಳಿಗೆ ದೂರು ನೀಡಿ ಕೆಲಸಕ್ಕೆ ತೆಗೆಯಲು ಸೂಚಿಸುತ್ತಾರೆ. ಇಂತಹ ಕೆಲವು ಘಟನೆಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ.
ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದ ಕೆಲಸ ಕಳೆದು ಕೊಂಡರೆ ತಮ್ಮ ಭವಿಷ್ಯವೇ ಅತಂತ್ರವಾ ಗುವ ಭೀತಿಯಲ್ಲಿ ಯುವಕರಿದ್ದಾರೆ.

ಆ ಕಾರಣ ಈ ಸಮಸ್ಯೆಯ ಆಳವನ್ನು ಸರ್ಕಾರ ಕ್ಕೆ ಮನವರಿಕೆ ಮಾಡಲು ಒಂದು ಸಾಂಘಿ ಕ ಪ್ರಯತ್ನದ ಅಗತ್ಯವಿದೆ ..
ಸದ್ಯವೇ ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಕೊಡುವ ಮೂಲಕ ಪ್ರತಿಭಟನೆ ಹಂಬಿಕೊಳ್ಳಲಾಗುವುದು.
ಈ ಮೂಲಕ ವಿನಂತಿಸುವುದೇನೆಂದರೆ, ಈ ಸಮಸ್ಯೆಯಿಂದ ಕಷ್ಟ ಪಡುತ್ತಿರುವ ಯುವಕರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ ..

-ಲೋಹಿತ್ ನಾಯ್ಕ್ ಈರಗೊಪ್ಪ
ಸಾಮಾಜಿಕ ಕಾರ್ಯಕರ್ತರು. ಶಿರಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *