ನೀರಿಂಗಿಸಿ ಮಾದರಿಯಾದ ತೆಂಗಿನಮನೆ ಡಿ.ಕೆ. ನಾಯ್ಕ

ಪ್ರಗತಿಪರ ರೈತ, ಕಾಳುಮೆಣಸು,ಮಿಶ್ರಬೇಸಾಯದ ಮೂಲಕ ಮಾದರಿ ಕೃಷಿಕನಾದ ಡಿ.ಕೆ. ನಾಯ್ಕ ತೆಂಗಿನಮನೆಯವರಿಗೆ ಈ ವರೆಗೆ ಯಾರೂ ಸನ್ಮಾನಿಸಿ, ಗೌರವಿಸಿ, ಅಭಿನಂದಿಸದಿರುವುದು ಸೋಜಿಗದ ಸಂಗತಿ. ಶ್ರಮಿಕರಲ್ಲದ ಅನೇಕರು ದಾಖಲೆ ಒದಗಿಸಿ ಪ್ರಗತಿಪರ ರೈತರು, ಕೃಷಿ ಪ್ರಶಸ್ತಿ ಪುರಸ್ಕೃತರು. ಕೃಷಿ-ತೋಟಗಾರಿಕೆ ಪಂಡಿತರಾಗಿರುವಾಗ ಸರ್ಕಾರ, ಜನಪ್ರತಿನಿಧಿಗಳ ಕಣ್ಣಿಗೆ ಬೀಳದ ಡಿ.ಕೆ. ನಾಯ್ಕ ಅರ್ಹತೆ, ಯೋಗ್ಯತೆ ಇದ್ದೂ ಪ್ರಶಸ್ತಿ,ಅಭಿನಂದನೆಯ ಗೌರವಾದರಗಳಿಂದ ವಂಚಿತರಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಉಳ್ಳವರ ಅಟ್ಟಹಾಸ, ರಾಜಕಾರಣಕ್ಕೊಂದು ತಾಜಾ ನಿದರ್ಶನ.

ಮಳೆ,ಪ್ರವಾಹದ ನೋವು ಉಂಡ ಮಲೆನಾಡಿನಲ್ಲಿ ನೀರೆಂದರೆ ಭಯ, ಆತಂಕದ ಸ್ಥಿತಿ ಈಗಿದೆ. ಆದರೆ ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕೂಡಾ ನೀರಿಗಾಗಿ ಹಾಹಾಕಾರ ಸಾಮಾನ್ಯ. ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರೈತರೊಬ್ಬರು ಬೇಸಿಗೆಯ ನೀರಿನ ಕೊರತೆ ನೀಗಿಸಿಕೊಂಡ ಪ್ರಯೋಗಶೀಲತೆ ಈ ಸ್ಟೋರಿಯ ಕತೆ.


ಪಕ್ಕಾ ಮಲೆನಾಡಿನ ಸಿದ್ಧಾಪುರದ ತೆಂಗಿನಮನೆಯ ರೈತ  ಡಿ.ಕೆ.ನಾಯ್ಕ ಕೆಲವು ವರ್ಷ ತಮ್ಮ ಅಡಿಕೆ ತೋಟಕ್ಕೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಿಂದ ಬೆಳೆ ನಾಶದ ಹಾನಿ ಅನುಭವಿಸಿದರು. ನಂತರ ಅವರು ತಮ್ಮ ಬೆಟ್ಟದಲ್ಲಿ ಒಂದಾದಮೇಲೆ ಒಂದರಂತೆ ಕಳೆದ ದಶಕದಲ್ಲಿ ನಾಲ್ಕು ಚಿಕ್ಕ ಕೆರೆಗಳನ್ನು ನಿರ್ಮಿಸಿದರು.
ತೋಟದಲ್ಲಿದ್ದ ಮೊದಲ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿದು ಬೆಳೆಗಳಿಗೆ ಹಾನಿ ಮಾಡಿದರೆ ಬೇಸಿಗೆಯಲ್ಲಿ ನೀರಿಲ್ಲದೆ ಬರಿದಾಗುತಿತ್ತು. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಹೋದ ನಾಯ್ಕರಿಗೆ ಬೆಟ್ಟದಿಂದ ಇಳಿದು ಬರುವ ಮಳೆ ನೀರನ್ನು ಹಂತ ಹಂತವಾಗಿ ನಿಲ್ಲಿಸಿದರೆ ಆ ಮಳೆನೀರು ಭೂಮಿಗೆ ಇಂಗಿ ಬೇಸಿಗೆಯಲ್ಲಿ ಬೆಳೆಗಳಿಗೆ ಜೀವಜಲವಾಗುವ ಯೋಚನೆಯಂತೆ. ತಮ್ಮ ಬೆಟ್ಟದಲ್ಲಿ ಮೂರು ಕೆರೆಗಳನ್ನು ನಿರ್ಮಿಸಿ ಪ್ರಯೋಗ ಮಾಡಿದರು.

ಹೀಗೆ ಎರಡ್ಮೂರು ಚಿಕ್ಕ ಕೆರೆ ನಿರ್ಮಿಸಿದ ಪರಿಣಾಮ  ಒಂದೆರಡು ವರ್ಷಗಳಲ್ಲೇ ಫಲನೀಡತೊಡಗಿತು. ಮಳೆಗಾಲದಲ್ಲಿ ಮಳೆ ನೀರಿನ ತೊಂದರೆ ತಪ್ಪಿದರೆ ಬೇಸಿಗೆಯಲ್ಲಿ ನೀರಿನ ತುಟಾಗ್ರತೆಯ ರಗಳೆ ಕಡಿಮೆಯಾಯಿತು.
ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತ್ತಿದ್ದ ಡಿ.ಕೆ.ನಾಯ್ಕರ ತೋಟ, ತೋಟದ ಕೆರೆಗಳು ಮೈತುಂಬಿಕೊಳ್ಳತೊಡಗಿದವು. ಮೂರು ಎಕರೆಗೆ ನೀರು ಪೂರೈಕೆ ಮಾಡಲಾಗದೆ ಗೋಳಾಡುತಿದ್ದ ನಾಯ್ಕರ ತೋಟ ಈಗ  ಐದಾರು ಎಕರೆಗೆ ವಿಸ್ತರಿಸಿದೆ. ಆದರೆ ಮಳೆಕೊಯ್ಲು ಮಾಡಿದ ಸಾಹಸದಿಂದಾಗಿ ಈಗ ನಾಯ್ಕರ ತೋಟಕ್ಕೆ ಇಡೀವರ್ಷ, ಎಲ್ಲಾ ಋತುಗಳಲ್ಲಿ ಜಲಭಾಗ್ಯ ಸಿಕ್ಕಂತಾಗಿದೆ.
ಮಲೆನಾಡಿನಲ್ಲಿ ಹೀಗೆ ಮಳೆಕೊಯ್ಲು, ನೀರಿಂಗಿಸುವ ವಿಧಾನದಿಂದ ಲಾಭ ಪಡೆಯಲು ಸರ್ಕಾರದಲ್ಲೂ ಯೋಜನೆಗಳಿವೆ. ಆದರೆ ಆಸಕ್ತಿ, ಪ್ರಯತ್ನದಿಂದ ತಮಗೆ ಪರಿಸರಕ್ಕೆ ಅನುಕೂಲ ಮಾಡಿಕೊಂಡವರ ಪ್ರಮಾಣ ಕಡಿಮೆ. ಈ  ಕೊರತೆಯ ನಡುವೆ ಡಿ.ಕೆ. ನಾಯ್ಕ ತೆಂಗಿನಮನೆ ಮಲೆನಾಡಿನ ಪ್ರಯೋಗಶೀಲ ರೈತನಾಗಿ ಯಶ ಸ್ಸು ಕಂಡಿದ್ದಾರೆ. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಸೇರಿದ ಮಿಶ್ರ ಬೇಸಾಯಕ್ಕೆ ಈ ಮಳೆಕೊಯ್ಲಿನ ಕೆರೆಗಳು ನೆರವಾಗಿವೆ ಎನ್ನುವುದು ಡಿ.ಕೆ. ನಾಯ್ಕರ ಸಮಾಧಾನದ ಮಾತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *