ಸುಳ್ಳಳ್ಳಿ ಕಿವುಡಳ್ಳಿಯಾದ ವ್ಯಥೆಯ ಅಂತರಾಷ್ಟ್ರೀಯ ಕತೆ!

ಈ ಟಿ.ವಿ. ಕನ್ನಡದ ಶುರುವಾತಿನಲ್ಲಿ ಕನ್ನಡಪ್ರಭದಿಂದ ಬಂದಿದ್ದ ಮನೋಹರ್ ಯಡವಟ್ಟಿ ಯುವ ತಂಡವೊಂದನ್ನು ಕಟ್ಟಿದ್ದರು. ಅದೇ ತಂಡ ಈಗ 1 ಟು 100,ಎ ಟು ಜಡ್ ಟಿ.ವಿ.ಗಳಲ್ಲಿ ಪ್ರಮುಖ ಹುದ್ದೆಗಳಲ್ಲಿದೆ. ಈ ಯಡವಟ್ಟಿಯವರ ನಂತರ ಕೆ.ಎಂ.ಮಂಜುನಾಥ್ ಎಂಬ ಕನಸುಗಾರ ಈ ಟಿ.ವಿ.ನ್ಯೂಸ್ ಗೆ ಹೊಸ ರೂಪ ಕೊಟ್ಟರು. ಅವರ ನಂತರ ಜಿ.ಎನ್. ಮೋಹನ್ ಈ.ಟಿ.ವಿ.ಗೆ ಸಮಾಜಮುಖಿಯ ರೂಪ ಕೊಟ್ಟರು.

ಮನೋಹರ್ ಯಡವಟ್ಟಿ ಮತ್ತು ಜಿ.ಎನ್.ಮೋಹನ್ ರಂಥ ಅನುಭವಿ ಸಮತಾವಾದಿಗಳ ನಡುವೆ ಈ ಟಿ.ವಿ. ಕನ್ನಡದ ಚುಕ್ಕಾಣಿ ಹಿಡಿದಿದ್ದವರು ಕೆ.ಎ.ಎಸ್. ಪಾಸುಮಾಡಿ ರಾಜೀನಾಮೆ ಒಗೆದು ಬಂದಿದ್ದ ಮಂಜುನಾಥ್.

ಕೆ.ಎಂ.ಮಂಜುನಾಥ್ ರಲ್ಲಿ ಸಾಹಸ ಮಾಡುವ ಉತ್ಸಾಹವಿತ್ತು. ತಂಡ ಕಟ್ಟುವ ಹುರುಪಿತ್ತು ಅದಕ್ಕಿಂತ ಹೆಚ್ಚಾಗಿ ದೋಸೆ ತಿರುವಿ ಹಾಕಿದಂತೆ ವ್ಯವಸ್ಥೆ ಬದಲಾಯಿಸಿಬಿಡುತ್ತೇನೆ ಎನ್ನುವ ಧಾವಂತವಿತ್ತು. ಮುಂದೆ ನಡೆದಿದ್ದೇ ಬೇರೆ.

ಈ ಅವಧಿಯಲ್ಲಿ ದಾಡಿ ಬಿಟ್ಟು, ಬಗಲಲ್ಲಿ ಒಂದು ಚೀಲ ನೇತು ಬಿಟ್ಟವರೆಲ್ಲಾ ಪತ್ರಕರ್ತರಲ್ಲ, ಕಾರ್ಪೋರೇಟ್ ಉದ್ಯೋಗಿಗಳ ರೀತಿ ಟೀಕುಟಾಕಾಗಿರುವವರೂ ಪತ್ರಕರ್ತರಾಗಬಹುದು ಎಂದು ನಿರೂಪಿಸಿದವರು ಮಂಜುನಾಥ್.

ಈ ಮಂಜುನಾಥ್ ನಮ್ಮ ಬಳಗದ ಶಾಸ್ತ್ರೀ ಎನ್ನುವ ಉದ್ಯೋಗಿಗೆ ಹೇಳಿದ ಕೆಲವು ಸತ್ಯಗಳ ಬಗ್ಗೆ ಹಿಂದೆದೋ ಬರೆದ ನೆನಪು. ಅದಿರಲಿ ಕೆ.ಎಂ. ಮಂಜುನಾಥ್ ಹುಬ್ಬಳ್ಳಿಯಲ್ಲಿ ನಮಗೆ ಸಭೆ ನಡೆಸಿ ವೈಯಕ್ತಿಕ ಸಂದರ್ಶನ ನಡೆಸಿದವರು ನಾನು ಹುಡುಕುತಿದ್ದ ಹುಡುಗ ಇಂದು ಸಿಕ್ಕ ಎಂದು ನನ್ನನ್ನು ಹೈದರಾಬಾದಿಗೆ ಕರೆಸಿಕೊಂಡಿದ್ದು ನಂತರ ಅಲ್ಲಿ ಮಂಜುನಾಥ್ ಅನುಪಸ್ಥಿತಿಯಲ್ಲಿ ನನಗಾದ ರಗಳೆ ಇವೆಲ್ಲಾ ಈಗ ಇತಿಹಾಸ.

ಮರೆಯುವ ಮುನ್ನ ಬರೆದೇ ಬಿಡಬೇಕೆಂದು ಕೊರೆಯುವ ಸತ್ಯವೊಂದನ್ನು ಗೀಚುವುದಕ್ಕಾಗಿ ಇದನ್ನೆಲ್ಲಾ ಸಾಂದರ್ಭಿಕವಾಗಿ ಹೇಳಬೇಕಾಯಿತು.

ಅಂದಹಾಗೆ….. ಉತ್ತರ ಕನ್ನಡದ ಮುಂಡಗೋಡಿನಲ್ಲಿ ಸುಳ್ಳಳ್ಳಿ ಎನ್ನುವ ಹಳ್ಳಿಯೊಂದಿದೆ. ಆ ಹಳ್ಳಿಯಲ್ಲಿ ಹಿಂದುಳಿದ ಸಮೂದಾಯದ ಕರೆ ಒಕ್ಕಲಿಗರ ಸಮೂದಾಯದ ಜನರೇ ಹೆಚ್ಚು. ಆ ಗ್ರಾಮಕ್ಕೆ ಕಿವುಡಳ್ಳಿ ಎನ್ನುವ ಅನ್ವರ್ಥಕ ನಾಮವೂ ಇತ್ತೀಚಿನ ವರ್ಷಗಳಲ್ಲಿ ಅಂಟಿಕೊಂಡಿದೆ. ಈ ಗ್ರಾಮದ ಮುಗ್ಧರನ್ನು ಬಳಸಿಕೊಂಡ ಅಂತರಾಷ್ಟ್ರೀಯ ಸೇವಾ ಸಂಸ್ಥೆಯೊಂದು ಬಿಲಿಯನ್ ಗಟ್ಟಳೆ ಹಣ ವ್ಯಯಿಸಿ ಇಲ್ಲಿಯ ಜನರ ಕಿವುಡತನ ನಿವಾರಿಸಿದ್ದೇವೆ ಎಂದು ಪ್ರಚಾರ ಪಡೆದಿತ್ತು.

ಹುಬ್ಬಳ್ಳಿ, ಮುಂಡಗೋಡಿನ ನಂಟಿದ್ದ ನನಗೆ ಈ ವಿಚಾರ ತಿಳಿಯಿತು. ಈಟಿ.ವಿ. ಮಂಜುನಾಥ್ ರಿಗೆ ಈ ವಿಷಯ ತಿಳಿಸಿ, ಬಹುಶ: ಸಿದ್ದೂ ಕಾಳೋಜಿ, ಕೇಶವ ಅಡಿ ಮಾರ್ಗದರ್ಶನದಲ್ಲಿ ಒಂದು ತನಿಖಾ ವರದಿ ತಯಾರಿಸಿದೆವು.

ವಿಶ್ವಮಾನ್ಯತೆಯ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸೇವೆಯ ದೆಸೆಯಿಂದಾಗಿ ಕುಗ್ರಾಮ ಸುಳ್ಳೊಳ್ಳಿಗೆ ಕಿವುಡಳ್ಳಿ ಎನ್ನುವ ಅಪಪ್ರಚಾರದಿಂದಾಗಿ ಆ ಹಳ್ಳಿಯ ಯುವಕರಿಗೆ ಪರ ಊರವರು ಹೆಣ್ಣು ಕೊಡದೆ ಈ ಸುಳ್ಳೊಳ್ಳಿಯ ಕನ್ಯೆಯರಿಗೆ ವರ ಸಿಗದ ರಾದ್ಧಾಂತವಾಗಿತ್ತು. ನಮ್ಮ ತನಿಖಾ ವರದಿ ಅಂತರಾಷ್ಟ್ರೀಯ ಸೇವೆಯ ಮುಖವಾಡ ಕಿತ್ತು ಬೋಳಿಗೆ ತಪರಾಕಿ ಬಿಗಿಯಲು ನೆರವಾಗಿತ್ತು. ನಂತರ ಈ ಗ್ರಾಮದ ಅರ್ಹ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ದೊರೆಯಿತು ಎನ್ನುವುದು ಸುದ್ದಿಯಾಗಲೇ ಇಲ್ಲ.

ಆದರೆ ಈ ವರದಿ ಮಾಡಿದ ಪರಿಣಾಮ ನಮಗೆ ಹಿತಶತ್ರುಗಳು ವೃದ್ಧಿಯಾಗುವಂತಾಯಿತು. ಇಂದು ನಾಗೇಶ್ ಹೆಗಡೆಯವರ ಲೇಖನ ಒಂದನ್ನು ಓದಿದ ಮೇಲೆ ಪ್ಲಾಶ್ಬ್ಯಾಕ್ ಸರಿದು ಹೋಯಿತು.ಈಗಾಗಲೇ ಮಾಧ್ಯಮಕ್ಷೇತ್ರದ ಮೌಲ್ಯದ ಮಳೆ ಸಾಕಷ್ಟು ಕೊಚ್ಚೆಯನ್ನು ತೊಳೆದುಹೋಗಿದೆ ಕೂಡಾ. ಗ್ರಾಮ ಪಂಚಾಯತ್ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಹಣ-ಕೀರ್ತಿ,ಅಧಿಕಾರ,ಅವಕಾಶ ಬಹಳಷ್ಟು ಒಳ್ಳೆಯದನ್ನು ಮಾಡಿದ್ದರೆ ಅದರೊಂದಿಗೇ ಸಾಕಷ್ಟು ರಾದ್ಧಾಂತಗಳೂ ನಡೆದಿರುತ್ತವೆ. ಆದರೆ ಯಾರದೋ ಕೀರ್ತಿ-ಹಣ, ಲಾಭ, ದುರಾಸೆಗೆ ಸುಳ್ಳಳ್ಳಿಯಂಥ ಮುಗ್ಧರು ಬಲಿಯಾಗಬಾರದು ಆ ಮನುಷ್ಯತ್ವ,ಒಳ್ಳೆ ಮನಸ್ಸು ಇಲ್ಲದಿದ್ದರೆ ಅಂಥವರು ಏನಾಗಿ ಏನಾಗಬೇಕು? -ನಿಮ್ಮ ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *