ಬೊಗಳೆ ಮಾತುಗಳಿಗೆ ಸೀಮಿತವಾದ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ!

ಉತ್ತರ ಕನ್ನಡ ಜಿಲ್ಲೆಯ ವಿಶೇಶ ಎನ್ನುವಂತೆ ಸಿದ್ದಾಪುರದಲ್ಲಿ ಇಂದು ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ ನಡೆಯಿತು. ಈ ಸಮಾವೇಶದ ತಯಾರಿ, ಈ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಸಿದ್ಧತೆ, ನಿಶ್ಚಿತ ಉದ್ದೇಶಗಳಂತೆ ಸಂಘಟಕರು ಬಿ.ಜೆ.ಪಿ. ಹಿಂದುಳಿದ ಮೋರ್ಚಾ ಅಡಿ ಪರಿಶ್ರಮದಿಂದ ಈ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದ ಮೂಲಕ ವೈದಿಕ ಪಾರಮ್ಯದ ಬಿ.ಜೆ.ಪಿ.ಗೆ ಹಿಂದುಳಿದವರ ಶಕ್ತಿ, ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಸದಸ್ಯ ಕೆ.ಜಿ.ನಾಯ್ಕರ ಪ್ರಭಾವ ಪ್ರದರ್ಶಿಸುವ ಉದ್ದೇಶವೂ ಈ ಸಮಾವೇಶದ ಹಿಂದಿತ್ತು ಎನ್ನುವುದು ಬಹಿರಂಗ ಗುಟ್ಟು.

ಸಿದ್ಧಾಪುರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಅದರದ್ದೇ ಆದ ಮಹತ್ವ ಇದೆ. ಬಹುಹಿಂದೆ ಬಂಗಾರಪ್ಪ ಮಾರ್ಗದರ್ಶನದಲ್ಲಿ ಸಿದ್ಧಾಪುರದಲ್ಲಿ ನಡೆದ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಸಮಾವೇಶ ಬಂಗಾರಪ್ಪ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸಚಿವರಾಗಲು ಕಾರಣವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಹಿಂದುಳಿದವರ ಶಕ್ತಿ ಪ್ರದರ್ಶನದ ಮೂಲಕ ಕೆ.ಜಿ. ನಾಯ್ಕರಿಗೆ ಸೂಕ್ತ ಅವಕಾಶ, ಹುದ್ದೆ ಕೊಡಿಸುವ ಯೋಚನೆಯೂ ಇತ್ತು ಎಂದರೆ ಈ ಸಮಾವೇಶದ ಹಿನ್ನೆಲೆ ಅರಿಯಬಹುದು.

ಹಿಂದೆಲ್ಲಾ ನೂರು ಜನರಿಗೆ ಸೀಮಿತವಾಗುತಿದ್ದ ಬಿ.ಜೆ,ಪಿ, ಸಮಾವೇಶಗಳ ಬದಲು ಈ ಬಾರಿಯ ಬಿ.ಜೆ.ಪಿ. ಓಬಿ.ಸಿ.. ಸಮಾವೇಶ ಸಾವಿರ ತಲೆಗಳನ್ನು ಕಂಡಿದ್ದು ಈ ಕಾರ್ಯಕ್ರಮ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಬೇಗುದಿಗೆ ಸಾಕ್ಷಿ. ಆದರೆ ಈ ಕಾರ್ಯಕ್ರಮಕ್ಕೆ ಪ್ರಮುಖರಾದ ಹರತಾಳ ಹಾಲಪ್ಪ,ಸಚಿವ ಸುನಿಲ್‌ ಕುಮಾರ್‌, ಉತ್ತರ ಕನ್ನಡ ಉಸ್ತುವಾರಿ ಸಚಿವರು ಸೇರಿದಂತೆ ಯಾರೊಬ್ಬ ಶಾಸಕರೂ ಬಂದಿರಲಿಲ್ಲ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸಮಾಜಕಲ್ಯಾಣ ಸಚಿವ ಶ್ರೀನಿವಾಸ್‌ ಪೂಜಾರಿ ಮೋದಿ, ಅಮಿತ್‌ ಶಾ ಗುಣಗಾನ ಮಾಡಿದರೇ ವಿನ: ಹಿಂದುಳಿದ ವರ್ಗಗಳ ಪ್ರಾಮುಖ್ಯತೆ, ಬಿ.ಜೆ.ಪಿ. ಸರ್ಕಾರ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ಮಹತ್ವ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಪ್ರಾತಿನಿಧ್ಯಗಳಲ್ಲಿ ಹಿಂದುಳಿದವರ ಮಹತ್ವ-ಪ್ರಾಮುಖ್ಯತೆಗಳ ಬಗ್ಗೆ ಉಸಿರೇ ಒಡೆಯಲಿಲ್ಲ.

ಇಡೀ ಸಮಾವೇಶದಲ್ಲಿ ಬಿ.ಜೆ.ಪಿ.ಯಲ್ಲಿ ನಾಯಕರ ಆರಾಧನೆ ಇಲ್ಲ ಎನ್ನುವ ಪರಿವಾರದ ಲಾಗಾಯ್ತಿನ-ಸುಳ್ಳು-ಕಪಟನೀತಿಗಳನ್ನು ಪುನರುಚ್ಚರಿಸುತ್ತಾ ಪ್ರಧಾನಿ ಮೋದಿ,ಷಾ ಗಳ ಭಟ್ಟಂಗಿತನ ಮಾಡಿದ್ದು ಬಿಟ್ಟರೆ ಸಚಿವ ಶ್ರೀನಿವಾಸ ಪೂಜಾರಿ ಸಂಘದ ಗುಲಾಮಗಿರಿ ಮೀರಿ ಒಂದೆರಡು ಮಾತನಾಡದಿರುವುದು ಆ ಪಕ್ಷದ ಪಾಳೇಗಾರಿಕೆ ಪ್ರತಿಬಿಂಬಿಸುವಂತಿತ್ತು. ಹಿಂದುತ್ವದ ಆಧಾರದ ಪಕ್ಷದಲ್ಲಿ ವಿವಿಧ ಮೋರ್ಚಾಗಳು, ಸಂಕುಚಿತತೆ ಬಗ್ಗೆ ಲೇವಡಿ ಮಾಡಿದ ಸಂಸದ ಅನಂತಕುಮಾರ ಹೆಗಡೆಯ ಬೊಗಳೆ ಮಾತಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದ್ದು ಬಿ.ಜೆ.ಪಿ.ಯಲ್ಲಿರುವ ಕೆಳವರ್ಗಗಳ ಕಾರ್ಯಕರ್ತರು ನಾಯಕರ ಮೂರ್ಖತನವನ್ನು ಪ್ರತಿಬಿಂಬಿಸುವಂತಿತ್ತು. ಒಟ್ಟಾರೆ ಬಿ.ಜೆ.ಪಿ.ಯ ಬಹುನಿರೀಕ್ಷೆಯ ಹಿಂದುಳಿದ ವರ್ಗಗಳ ಸಮಾವೇಶ ಸಂಘಟಕರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದರೆ ಆಶಾಢಭೂತಿ ಮತಾಂಧ ಮುಖಂಡರ ಬೊಗಳೆ ಬಾಷಣ, ಮೋದಿ ಗುಣಗಾನದಿಂದ ಸಮಾವೇಶದ ಉದ್ದೇಶವೇ ತಲೆಕೆಳಗಾಗುವಂತಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಗೆ ಹಿಂದುಳಿದ ವರ್ಗಗಳ ಮತಗಳೇ ಆಧಾರ ಎನ್ನುವ ಸಂದೇಶ ನೀಡಲಾಯಿತಾದರೂ ಪಕ್ಷ ಹಿಂದುಳಿದ ವರ್ಗಗಳಿಗೆ ಕೊಟ್ಟ ಅವಕಾಶ, ಅನುಕೂಲ, ಮಹತ್ವಗಳನ್ನು ಚರ್ಚಿಸಲು ವಿಫಲವಾದ ಈ ಕಾರ್ಯಕ್ರಮ ಕೆಲವು ನಾಯಕರ ಗುಣಗಾನಕ್ಕೆ ಮೀಸಲಾದದ್ದು ಹಿಂದುಳಿದ ವರ್ಗಗಳ ಬೇಡಿಕೆ, ಹೋರಾಟಕ್ಕೆ ಪಕ್ಷ, ನಾಯಕರು ಕೊಟ್ಟ ಮರ್ಯಾದೆ ಎಂದರೆ ಅದು ಟೀಕೆಯಷ್ಟೇ ಅಲ್ಲ.

https://www.facebook.com/samaajamukhi.net/videos/pcb.421781402883534/193860446232261

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *