ಬೊಗಳೆ ಮಾತುಗಳಿಗೆ ಸೀಮಿತವಾದ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ!

ಉತ್ತರ ಕನ್ನಡ ಜಿಲ್ಲೆಯ ವಿಶೇಶ ಎನ್ನುವಂತೆ ಸಿದ್ದಾಪುರದಲ್ಲಿ ಇಂದು ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ ನಡೆಯಿತು. ಈ ಸಮಾವೇಶದ ತಯಾರಿ, ಈ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಸಿದ್ಧತೆ, ನಿಶ್ಚಿತ ಉದ್ದೇಶಗಳಂತೆ ಸಂಘಟಕರು ಬಿ.ಜೆ.ಪಿ. ಹಿಂದುಳಿದ ಮೋರ್ಚಾ ಅಡಿ ಪರಿಶ್ರಮದಿಂದ ಈ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದ ಮೂಲಕ ವೈದಿಕ ಪಾರಮ್ಯದ ಬಿ.ಜೆ.ಪಿ.ಗೆ ಹಿಂದುಳಿದವರ ಶಕ್ತಿ, ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಸದಸ್ಯ ಕೆ.ಜಿ.ನಾಯ್ಕರ ಪ್ರಭಾವ ಪ್ರದರ್ಶಿಸುವ ಉದ್ದೇಶವೂ ಈ ಸಮಾವೇಶದ ಹಿಂದಿತ್ತು ಎನ್ನುವುದು ಬಹಿರಂಗ ಗುಟ್ಟು.

ಸಿದ್ಧಾಪುರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಅದರದ್ದೇ ಆದ ಮಹತ್ವ ಇದೆ. ಬಹುಹಿಂದೆ ಬಂಗಾರಪ್ಪ ಮಾರ್ಗದರ್ಶನದಲ್ಲಿ ಸಿದ್ಧಾಪುರದಲ್ಲಿ ನಡೆದ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಸಮಾವೇಶ ಬಂಗಾರಪ್ಪ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸಚಿವರಾಗಲು ಕಾರಣವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಹಿಂದುಳಿದವರ ಶಕ್ತಿ ಪ್ರದರ್ಶನದ ಮೂಲಕ ಕೆ.ಜಿ. ನಾಯ್ಕರಿಗೆ ಸೂಕ್ತ ಅವಕಾಶ, ಹುದ್ದೆ ಕೊಡಿಸುವ ಯೋಚನೆಯೂ ಇತ್ತು ಎಂದರೆ ಈ ಸಮಾವೇಶದ ಹಿನ್ನೆಲೆ ಅರಿಯಬಹುದು.

ಹಿಂದೆಲ್ಲಾ ನೂರು ಜನರಿಗೆ ಸೀಮಿತವಾಗುತಿದ್ದ ಬಿ.ಜೆ,ಪಿ, ಸಮಾವೇಶಗಳ ಬದಲು ಈ ಬಾರಿಯ ಬಿ.ಜೆ.ಪಿ. ಓಬಿ.ಸಿ.. ಸಮಾವೇಶ ಸಾವಿರ ತಲೆಗಳನ್ನು ಕಂಡಿದ್ದು ಈ ಕಾರ್ಯಕ್ರಮ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಬೇಗುದಿಗೆ ಸಾಕ್ಷಿ. ಆದರೆ ಈ ಕಾರ್ಯಕ್ರಮಕ್ಕೆ ಪ್ರಮುಖರಾದ ಹರತಾಳ ಹಾಲಪ್ಪ,ಸಚಿವ ಸುನಿಲ್‌ ಕುಮಾರ್‌, ಉತ್ತರ ಕನ್ನಡ ಉಸ್ತುವಾರಿ ಸಚಿವರು ಸೇರಿದಂತೆ ಯಾರೊಬ್ಬ ಶಾಸಕರೂ ಬಂದಿರಲಿಲ್ಲ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸಮಾಜಕಲ್ಯಾಣ ಸಚಿವ ಶ್ರೀನಿವಾಸ್‌ ಪೂಜಾರಿ ಮೋದಿ, ಅಮಿತ್‌ ಶಾ ಗುಣಗಾನ ಮಾಡಿದರೇ ವಿನ: ಹಿಂದುಳಿದ ವರ್ಗಗಳ ಪ್ರಾಮುಖ್ಯತೆ, ಬಿ.ಜೆ.ಪಿ. ಸರ್ಕಾರ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ಮಹತ್ವ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಪ್ರಾತಿನಿಧ್ಯಗಳಲ್ಲಿ ಹಿಂದುಳಿದವರ ಮಹತ್ವ-ಪ್ರಾಮುಖ್ಯತೆಗಳ ಬಗ್ಗೆ ಉಸಿರೇ ಒಡೆಯಲಿಲ್ಲ.

ಇಡೀ ಸಮಾವೇಶದಲ್ಲಿ ಬಿ.ಜೆ.ಪಿ.ಯಲ್ಲಿ ನಾಯಕರ ಆರಾಧನೆ ಇಲ್ಲ ಎನ್ನುವ ಪರಿವಾರದ ಲಾಗಾಯ್ತಿನ-ಸುಳ್ಳು-ಕಪಟನೀತಿಗಳನ್ನು ಪುನರುಚ್ಚರಿಸುತ್ತಾ ಪ್ರಧಾನಿ ಮೋದಿ,ಷಾ ಗಳ ಭಟ್ಟಂಗಿತನ ಮಾಡಿದ್ದು ಬಿಟ್ಟರೆ ಸಚಿವ ಶ್ರೀನಿವಾಸ ಪೂಜಾರಿ ಸಂಘದ ಗುಲಾಮಗಿರಿ ಮೀರಿ ಒಂದೆರಡು ಮಾತನಾಡದಿರುವುದು ಆ ಪಕ್ಷದ ಪಾಳೇಗಾರಿಕೆ ಪ್ರತಿಬಿಂಬಿಸುವಂತಿತ್ತು. ಹಿಂದುತ್ವದ ಆಧಾರದ ಪಕ್ಷದಲ್ಲಿ ವಿವಿಧ ಮೋರ್ಚಾಗಳು, ಸಂಕುಚಿತತೆ ಬಗ್ಗೆ ಲೇವಡಿ ಮಾಡಿದ ಸಂಸದ ಅನಂತಕುಮಾರ ಹೆಗಡೆಯ ಬೊಗಳೆ ಮಾತಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದ್ದು ಬಿ.ಜೆ.ಪಿ.ಯಲ್ಲಿರುವ ಕೆಳವರ್ಗಗಳ ಕಾರ್ಯಕರ್ತರು ನಾಯಕರ ಮೂರ್ಖತನವನ್ನು ಪ್ರತಿಬಿಂಬಿಸುವಂತಿತ್ತು. ಒಟ್ಟಾರೆ ಬಿ.ಜೆ.ಪಿ.ಯ ಬಹುನಿರೀಕ್ಷೆಯ ಹಿಂದುಳಿದ ವರ್ಗಗಳ ಸಮಾವೇಶ ಸಂಘಟಕರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದರೆ ಆಶಾಢಭೂತಿ ಮತಾಂಧ ಮುಖಂಡರ ಬೊಗಳೆ ಬಾಷಣ, ಮೋದಿ ಗುಣಗಾನದಿಂದ ಸಮಾವೇಶದ ಉದ್ದೇಶವೇ ತಲೆಕೆಳಗಾಗುವಂತಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಗೆ ಹಿಂದುಳಿದ ವರ್ಗಗಳ ಮತಗಳೇ ಆಧಾರ ಎನ್ನುವ ಸಂದೇಶ ನೀಡಲಾಯಿತಾದರೂ ಪಕ್ಷ ಹಿಂದುಳಿದ ವರ್ಗಗಳಿಗೆ ಕೊಟ್ಟ ಅವಕಾಶ, ಅನುಕೂಲ, ಮಹತ್ವಗಳನ್ನು ಚರ್ಚಿಸಲು ವಿಫಲವಾದ ಈ ಕಾರ್ಯಕ್ರಮ ಕೆಲವು ನಾಯಕರ ಗುಣಗಾನಕ್ಕೆ ಮೀಸಲಾದದ್ದು ಹಿಂದುಳಿದ ವರ್ಗಗಳ ಬೇಡಿಕೆ, ಹೋರಾಟಕ್ಕೆ ಪಕ್ಷ, ನಾಯಕರು ಕೊಟ್ಟ ಮರ್ಯಾದೆ ಎಂದರೆ ಅದು ಟೀಕೆಯಷ್ಟೇ ಅಲ್ಲ.

https://www.facebook.com/samaajamukhi.net/videos/pcb.421781402883534/193860446232261

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *