

ಸುಸಂಸ್ಕೃತ ಕುಟುಂಬ,ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಜಾತ್ಯಾತೀತತೆ,ಪ್ರಾಮಾಣಿಕತೆಗಳ ಮೂಲಕ ಜನಮಾನಸ ಗೆದ್ದಿದ್ದ ಬಳಗುಳಿ ಕುಟುಂಬದ ರವೀಂದ್ರ ಭಟ್ ಇಂದು ನಿಧನರಾದರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಪುರ ತಾಲೂಕು ವರದಿಗಾರರು ವಕೀಲರೂ ಆಗಿದ್ದ ರವೀಂದ್ರ ಭಟ್ ಸರಳತೆ,ಜಾತ್ಯಾತೀತೆ ಮೂಲಕ ಹೆಸರು ಮಾಡಿದ್ದರು. ಮೂಲತ: ಕತೆಗಾರರಾಗಿದ್ದ ರವೀಂದ್ರಭಟ್ ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಮತ್ತು ತಂದೆ ವಿ.ಜಿ.ಭಟ್ ರ ಪ್ರಭಾವದಿಂದ ಸಾಮಾಜಿಕ ಬದುಕಿನಲ್ಲಿ ಗುರುತಿಸಿಕೊಂಡರೂ ತನ್ನ ಅನನ್ಯ ವ್ಯಕ್ತಿತ್ವದಿಂದ ಸಮಾಜಮುಖಿಯಾಗಿ ಪ್ರಸಿದ್ಧರಾಗಿದ್ದರು.

ಕೆಲವು ದಿವಸಗಳಿಂದ ಕರುಳುಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ರವೀಂದ್ರ ಭಟ್ ಮಂಗಳೂರು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಭಟ್ ರ ನಿಧನಕ್ಕೆ ಪತ್ರಕರ್ತರು,ವಕೀಲರು ಸೇರಿದಂತೆ ಜಿಲ್ಲೆಯಾದ್ಯಂತ ಶೋಕ ವ್ಯಕ್ತವಾಗಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ತುಂಬ ಬೇಸರದ ಸಂಗತಿ ಕನ್ನೇಶ್