ಮಲೆನಾಡಿನ ಮಹರಾಯ ಕೊನೆಗೌಡ

ಮಲೆನಾಡಿನಲ್ಲೀಗ ಅಡಿಕೆ ತೋಟಗಳಲ್ಲೆಲ್ಲಾ ಸೊಂಯ್‌,ಟಪಕ್‌,ರಪಕ್‌ ಎನ್ನುವ ಶಬ್ಧ ಕೇಳಲಾರಂಭಿಸಿದೆ. ಇಂಥ ಶಬ್ಧ,ಗದ್ದಲ ಸೌಂಡುಗಳನ್ನು ಅರಸಿ ಹೊರಟರೆ ಅಡಿ ಕೆ ಮರಗಳ ಮೇಲೆ ಮಂಗನಂತೆ ಜಿಗಿಯುತ್ತಾ ನೆಗೆಯುತ್ತಾ ಅಡಿಕೆ ಕೊಯ್ಯುವ ಜನ ಕಾಣುತ್ತಾರೆ. ತಮ್ಮ ಪೂರ್ವಜರಾದ ವಾನರರನ್ನು ನೆನಪಿಸುವಂತೆ ಮರ ಏರಿ, ಮರದಿಂದ ಜಿಗಿದು,ನೆಗೆದು ಅಡಿಕೆ ಗೊನೆ ಕೀಳುವ ಈ ಮನುಷ್ಯರನ್ನು ಕೊನೆಗೌಡರು ಎನ್ನುತ್ತಾರೆ.


ಒಂದಾನೊಂದು ಕಾಲದಲ್ಲಿ ಕರಾವಳಿ ಭಾಗದಿಂದ ಮರ ಏರಿ ಮಾಡುವ ಸಾಹಸದ ಕೆಲಸಕ್ಕೆ ಮಲೆನಾಡಿಗೆ ಬಂದ ಗೌಡರನ್ನು ಕೊನೆಗೌಡ ಎಂದು ಕರೆಯುವುದು ರೂಢಿಯಾಯಿತು ಎನ್ನುವ ಮಾತಿದೆ. ಈ ಕೊನೆಗೌಡರು ಮಳೆಗಾಲದಲ್ಲಿ ಅಡಿಕೆ ಮರ ಏರಿ ಔಷಧಿ ಸಿಂಪಡಿಸಿದರೆ ಚಳಿಗಾಲದ ಪ್ರಾರಂಭದಲ್ಲಿ ಮರ ಏರಿ ಅಡಿಕೆ ಗೊನೆ ಕೆಳಗಿಳಿಸುತ್ತಾರೆ.
ನೂರಾರು ಅಡಿ ಎತ್ತರದ ಮರಗಳನ್ನು ಸರಾಗವಾಗಿ ಏರಿ ಮರದಿಂದ ಇನ್ನೊಂದು ಮರವನ್ನು ಬಾಗಿಸಿ ಕಟ್ಟಿ ಅಡಿಕೆ ಗೊನೆಯನ್ನುನೆಲಕ್ಕಿಳಿಸುವ ಈ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಸದೃಢವಾಗಿರುವ ಧೈರ್ಯಶಾಲಿಗಳು ಮಾತ್ರ ಮಾಡುವ ಈ ಸಾಹಸದ ಕೆಲಸ ಅಪಾಯಕಾರಿ ಕೂಡಾ.

ಮಲೆನಾಡಿನಲ್ಲಿ ಶ್ರಮಿಕ ವರ್ಗದವರೇ ಹೆಚ್ಚಾಗಿ ಮಾಡುವ ಈ ಕೆಲಸ ಸುಲಭ ಸಾಧ್ಯವಿಲ್ಲವಾದ್ದರಿಂದ ಈ ಕೊನೆಗೌಡರಿಗೆ ಹೆಚ್ಚಿನ ಬೇಡಿಕೆ. ನಿಗದಿತ ಮತ್ತು ನಿಯಮಿತ ವಯೋಮಾನದವರು ಮಾತ್ರ ಮಾಡುವ ಈ ಕೆಲಸವನ್ನು ಅಭ್ಯಾಸ ರೂಢಿಯಿಂದಾಗಿ ಕೆಲವು ಹಿರಿಯರೂ ಮಾಡುವುದುಂಟು ಆದರೆ ಈಗಿನ ತಲೆಮಾರು ಈ ಕೆಲಸ ಮಾಡಲು ಮುಂದಾಗುತ್ತಿಲ್ಲ. ವಿರಳವಾಗಿ ಈ ಕಾಯಕ ಮಾಡುವ ಕೊನೆಗೌಡರಿಗೆ ಅಡಿಕೆ ಸುಗ್ಗಿಯಲ್ಲಿ ಹೆಚ್ಚಿನ ಬೇಡಿಕೆ.ಒಂದೊಂದು ತಲೆಮಾರು ಮುಗಿಯುತ್ತಿದ್ದಂತೆ ಹೊಸ ತಲೆಮಾರು ಈ ಕೆಲಸಕ್ಕೆ ಮುಂದಾಗದಿರುವುದರಿಂದ ಕೆಲವು ಕಡೆ ಕೊನೆಗೌಡರಿಗೆ ಬದಲಾಗಿ ಯಂತ್ರಗಳನ್ನೂ ಬಳಸುವ ಹೊಸ ವಿಧಾನಗಳು ಈಗ ಪರಿಚಯವಾಗುತ್ತಿವೆ. ಆದರೆ ಕೊನೆಗೌಡಿಕೆಯ ಸಾಂಪ್ರದಾಯಿಕ ವಿಧಾನಕ್ಕೆ ಈವರೆಗೂ ಬೇಡಿಕೆ ಕಡಿಮೆಯಾಗಿಲ್ಲ. ಮನುಷ್ಯ ಮಾಡಬಹುದಾದ ಸಾಹಸದ ಕೆಲಸಗಳಲ್ಲಿ ಈ ಕಾಯಕವೂ ಒಂದಾಗಿರುವುದರಿಂದ ಮಲೆನಾಡಿನ ಕೊನೆಗೌಡರಿಗೆ ವಿಶೇಶ ಮಹತ್ವ. ಇವರ ಆರೋಗ್ಯ,ಇವರ ಕುಟುಂಬದ ಭವಿಷ್ಯಗಳ ಹಿನ್ನೆಲೆಯಲ್ಲಿ ಮಲೆನಾಡಿನ ಸಹಕಾರಿ ಸಂಘಗಳು ಈ ಕೊನೆಗೌಡರಿಗೆ ವಿಶೇಶ ಮಹತ್ವ ನೀಡಿ ಸೌಲಭ್ಯಗಳನ್ನೂ ಒದಗಿಸುತಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *