ಗೆಲುವಿನ ಗಾಳಿ ಕೈ ಬೀಸುತ್ತಿರುವ ಮುನ್ಸೂಚನೆ! ಈ ಬಾರಿಯೂ ಭೀಮಣ್ಣ ಎಡವಿದ್ದಾರೆಯೆ? ಬಿ.ಜೆ.ಪಿ.ಗೆ ಬಂಡಾಯದ ಬಿಸಿ ಮುಟ್ಟಿದೆಯೆ?

ವಿ.ಪ. ಚುನಾವಣೆಯ ಮತದಾನ ಮುಕ್ತಾಯದ ಹಂತ ತಲುಪಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಒಂದು ಘಂಟೆಯ ವೇಳೆಗೆ ಪ್ರತಿಶತ ೯೦ ರಷ್ಟು ಮತದಾನವಾಗಿರುವುದು ಗರಿಷ್ಠ ಮತದಾನದ ಮುನ್ಸೂಚನೆ ನೀಡಿದೆ.

ಮತದಾನೋತ್ತರ ಸಮೀಕ್ಷೆಯ ಅಂದಾಜಿನ ಪ್ರಕಾರ ಗೆಲ್ಲುವ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

ರಾಜ್ಯದಲ್ಲಿ ಆಡಳಿತಾರೂಢ ಬಿ.ಜೆ.ಪಿ. ೧೦ ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ನಿಚ್ಚಳ ವಾಗಿದೆ. ಜೆ.ಡಿಎಸ್.‌ ಮೂರು ಕ್ಷೇತ್ರಗಳಲ್ಲಿ ೨-೩ ಕ್ಷೇತ್ರಗಳಲ್ಲಿ ಸ್ವತಂತ್ರರು ಆಯ್ಕೆಯಾದರೆ ಉಳಿದ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವುದೆ? ಎನ್ನುವ ಪ್ರಶ್ನೆ ಈಗ ರಾಜ್ಯದ ಮುಂದಿರುವ ಒಗಟು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತು ಪಕ್ಷೇತರ ಅಭ್ಯರ್ಥಿ ಅಥವಾ ಬಿ.ಜೆ.ಪಿ. ಗೆಲ್ಲುವ ಸಾಧ್ಯತೆ ಕಂಡು ಬಂದಿದೆ.

ಬಿ.ಜೆ.ಪಿ. ಯ ಪ್ರಾಬಲ್ಯದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿ.ಜೆ.ಪಿ.ಗೆ ಪೂರಕ ವಾತಾವರಣವಿಲ್ಲದೆ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಅಭಿಪ್ರಾಯಗಳಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಜೆ.ಪಿ. ನಾಯಕರ ಪ್ರತಿಷ್ಠೆ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಮಾಡಿರುವಂತಿದೆ. ಬಿ.ಜೆ.ಪಿ. ಒಳಜಗಳದ ಲಾಭ, ಜಾತ್ಯಾತೀತ ಜನತಾದಳದ ಬೆಂಬಲ ಕಾಂಗ್ರೆಸ್‌ ಗೆ ದೊರೆತಿರುವ ಹಿನ್ನೆಲೆಗಳಲ್ಲಿ ಬಿ.ಜೆ.ಪಿ. ಯ ತವರು ಶಿವಮೊಗ್ಗದಲ್ಲಿ ಬಿ.ಜೆ.ಪಿ.ಯ ಕಚ್ಚಾಟದ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಸನ್ನಕುಮಾರ ಗೆಲುವು ನಿಶ್ಚಿತ ಎನ್ನಲಾಗಿದೆ.

ಉತ್ತರ ಕನ್ನಡ- ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಬಿ.ಜೆ.ಪಿ. ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ರ ವಿರುದ್ಧ ಹಿರಿಯ ಶಾಸಕರು, ಸಂಸದರು ಕೆಲಸ ಮಾಡಿರುವ ಸಾಧ್ಯತೆ ಕಂಡುಬಂದಿದೆ. ಇದೇ ಮೊದಲ ಬಾರಿ ಹೆಬ್ಬಾರ್‌ ನೇತೃತ್ವದಲ್ಲಿ ಬಿ.ಜೆ.ಪಿ. ಹಣದ ಹೊಳೆ ಹರಿಸಿದೆಯಾದರೂ ಬಿ.ಜೆ.ಪಿ.ಯ ಬಂಡಾಯ ಅಮಾಯಕ ಗಣಪತಿ ಉಳ್ವೇಕರ್‌ ರಿಗೆ ಮಾರಕವಾಗಬಹುದೆ? ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.

ಸರ್ಕಾರ ಮತ್ತು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ರಿಗೆ ಈ ಚುನಾವಣೆ ಪ್ರತಿಷ್ಠೆ ಆಗಿರುವುದರಿಂದ ಹೆಬ್ಬಾರ್‌ ಆಪ್ತರು ಬಿ.ಜೆ.ಪಿ ಅಭ್ಯರ್ಥಿ ಪರವಾಗಿ ಅಹರ್ನಿಸಿ ದುಡಿದಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಶಿರಸಿ ಕೇಂದ್ರಿತ ರಾಷ್ಟ್ರೀಯವಾದಿಗಳು ಹೆಬ್ಬಾರ್‌ ವಿರುದ್ಧ ಕೆಲಸಮಾಡುವ ಅಂಗವಾಗಿ ನಿರ್ಲಿಪ್ತರಾಗಿದ್ದು ವಿರೋಧಿ ಪಾಳಯದ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ನೆರವಾಗಿದ್ದಾರೆ ಎನ್ನಲಾಗುತ್ತಿದೆ.

ಭೀಮಣ್ಣ ನವರ ದೀವರ ಜಾತಿ, ಜೆ.ಡಿ.ಎಸ್.‌ ಮತಗಳ ಆಕರ್ಷಣೆ, ಎರಡೆರಡು ಕ್ಷೇತ್ರಗಳಲ್ಲಿ ಭೀಮಣ್ಣ ವೈಯಕ್ತಿಕವಾಗಿ ಹೊಂದಿರುವ ಸಂಪರ್ಕ,ಕಾಂಗ್ರೆಸ್‌ ನ ಮಾಜಿ ಶಾಸಕರು, ಸಚಿವರು ಒಗ್ಗಟ್ಟಾಗಿ ಭೀಮಣ್ಣ ಪರ ಕೆಲಸ ಮಾಡಿರುವ ಮಾಹಿತಿ ಭೀಮಣ್ಣ ನಾಯ್ಕ ಈ ಬಾರಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಮತ್ತು ಭೀಮಣ್ಣನವರಿಗೆ ಪೂರಕ ಅಂಶಗಳು ಹೆಚ್ಚಿದ್ದವು. ಈ ಲೆಕ್ಕಾಚಾರದಲ್ಲೇ ಮಾಜಿಗಳೆಲ್ಲಾ ಸೇರಿ ಭೀಮಣ್ಣರನ್ನು ಅಭ್ಯರ್ಥಿ ಮಾಡಿದರು ಎನ್ನುವ ಅಂಶಗಳ ಜೊತೆಗೆ ಕಾಂಗ್ರೆಸ್‌ ನ ಅವೈಜ್ಞಾನಿಕ ಚುನಾವಣಾ ತಂತ್ರ, ಚಿರಪರಿಚಿತ ಭೀಮಣ್ಣ ನಾಯ್ಕ ತಮ್ಮ ಪರವಾಗಿ ವೈಯಕ್ತಿಕವಾಗಿ ಜೊತೆಗೆ ಪಕ್ಷದಿಂದ ನೇರವಾಗಿ ಮತ ಯಾಚನೆಯನ್ನೇ ಮಾಡದಿರುವುದು ಅವರ ಗೆಲ್ಲುವ ಸಾಧ್ಯತೆಯನ್ನು ಕ್ಷೀಣಿಸಿದೆ ಎನ್ನಲಾಗಿದೆ. ಆದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ ಗೆಲುವು,ಬೆಳಗಾವಿ, ಹಾಸನಗಳಲ್ಲಿ ಕಾಂಗ್ರೆಸ್‌,ಬಿ.ಜೆ.ಪಿ.ಗೆ ಸೋಲು ಎನ್ನುವ ಗುಪ್ತಚರ ಇಲಾಖೆಯ ಮಾಹಿತಿ ರಾಜ್ಯದಲ್ಲಿ ಕಾಂಗ್ರೆಸ್‌ ಒಂದಂಕಿ ದಾಟುವ ಮುನ್ಸೂಚನೆ ನೀಡಿದೆ. ಬಿ.ಜೆ.ಪಿ. ಯ ಬಂಡಾಯ, ಭೀಮಣ್ಣ ಪಾಳೆಯದ ನ್ಯೂನ್ಯತೆಗಳ ನಡುವೆ ಕೂಡಾ ಭೀಮಣ್ಣ ಸಣ್ಣ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಸಮೀಕ್ಷೆ ನಿಜವಾಗಲು ನಾಲ್ಕು ದಿವಸ ಕಾಯಬೇಕಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *