ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ

ಕರ್ನಾಟಕ ರತ್ನ, ಯುವರತ್ನ ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ ಸುದ್ದಿಯಾಗುತಿತ್ತು. ಈಗ ಪುನೀತ್‌ ನೆನಪಿಗೆ ಅವರ ಸಮಾಜಮುಖಿ ಬದುಕಿಗೆ ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಒಂದು ಸಿದ್ಧಾಪುರದಲ್ಲಿ ನಡೆಯಿತು.
ಸಿದ್ಧಾಪುರದ ಶಂಕರಮಠದಲ್ಲಿ ಪರಿವರ್ತನೆ ಟೀಮ್‌ ಮತ್ತು ರಾಜ್ಯ ಬಿ.ಎಸ್.ಎನ್.  .ಡಿ.ಪಿ.‌ ಗಳು ಸ್ಥಳಿಯರ ಜೊತೆಗೂಡಿ ಅಪ್ಪು ಸಮರ್ಪಣೆ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್‌ ರಿಗೆ ನುಡಿ ನಮನ, ಗೀತ ನಮನಗಳು ನಡೆದವು.

ನೇತ್ರದಾನ,ರಕ್ತದಾನಗಳು ನಡೆದದ್ದು ಈ ಕಾರ್ಯಕ್ರಮದ ವೈಶಿಷ್ಟ್ಯ


ಮನುಷ್ಯ ಬದುಕಿ ಹೋಗುವುದು ಸಾಮಾನ್ಯ ಆದರೆ ಪುನೀತ್‌ ರಾಜ್‌ ಕುಮಾರರಂತೆ ಮಾನವೀಯವಾಗಿ ಬದುಕಿ ಬಾಳುವುದು ಸುಲಭವಲ್ಲ. ಈ ಸಂದೇಶದ ಹಿನ್ನೆಲೆಯಲ್ಲಿ ನಡೆದ ಸಮರ್ಪಣೆಯಲ್ಲಿ ಸೇರಿದ ಅಭಿಮಾನಿಗಳು ಪುನೀತ್‌ ರನ್ನು ನೆನಪಿಸಿ,ಅವರ ಸಾಧನೆ,ಸೇವೆಗಳನ್ನು ಕೊಂಡಾಡಿದರು.
ದೊಡ್ಡ ಕಟೌಟ್‌ ಗಳನ್ನು ಹಾಕಿ, ಅನ್ನಸಂತರ್ಪಣೆ ನಡೆಸಿದ ಈ ವಿನೂತನ ಕಾರ್ಯಕ್ರಮದಲ್ಲಿ ಪುನೀತ್‌ ಬದುಕು ಇತರರಿಗೆ ಮಾದರಿಯಾಗಬೇಕೆಂದು ಆಶಿಸಲಾಯಿತು.
ಈ ಕಾರ್ಯಕ್ರಮದ ಮೊದಲು ಸ್ಥಳೀಯ ಆಡಳಿತಕ್ಕೆ ಸಿದ್ಧಾಪುರದ ಮುಖ್ಯ ರಸ್ತೆಗೆ ಪುನೀತ್‌ ರಾಜ್‌ ಕುಮಾರ ರಸ್ತೆ ಎಂದು ನಾಮಕರಣ ಮಾಡಲು ಮನವಿ ನೀಡಿ ಒತ್ತಾಯಿಸಲಾಯಿತು.


ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ಪುನೀತ್‌ ಸ್ಮರಿಸಿ,ಗೌರವ ಸೂಚಿಸಿದರು. ಬದುಕಿದ್ದಾಗ ಸುದ್ದಿ ಮಾಡದೆ ಬಂದು ತೆರಳುತಿದ್ದ ಪುನೀತ್‌ ಈಗ ಈ ಊರಿಗೆ ಬರದೆ ಸುದ್ದಿಮಾಡಿದ್ದು ವಿಶೇಶವೆನಿಸಿತು. ಪುನೀತ್‌ ರಾಜ್‌ ಕುಮಾರರ ಚಿತ್ರಪಟಗಳನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದು ಮಲೆನಾಡ ಸಿದ್ಧಾಪುರದಲ್ಲಿ ಪುನೀತ್‌ ಬಗ್ಗೆ ಹೊಂದಿದ ಅಭಿಮಾನಕ್ಕೆ ಸಾಕ್ಷಿ ಒದಗಿಸಿದಂತಿತ್ತು.ಪುನೀತ್‌ ಸಾವಿನ ನಂತರ ಇಲ್ಲಿಯ ಪ್ರಚಲಿತ ಅನಾಥಾಶ್ರಮವನ್ನು ಪುನೀತ್‌ ರಾಜ್‌ ಕುಮಾರ್‌ ಅನಾಥಾಶ್ರಮ ಎಂದು ನಾಮಕರಣ ಮಾಡಿದ್ದು ಕೂಡಾ ಈ ಕಾರ್ಯಕ್ರಮದ ಒಂದು ಭಾಗ ಎನ್ನುವುದು ವಿಶೇಶ.

ಪುನೀತ್‌ ಬದುಕಿನಿಂದ ಪ್ರೇರಣೆ ಪಡೆದು ಸಮಾಜದ ಪರವಾಗಿ ಕೆಲಸಮಾಡಲು ಈ ಸಮರ್ಪಣೆ ಅರ್ಪಣೆ. ಪುನೀತ್‌ ರ ಬದುಕು, ಸೇವೆಯ ಬಗ್ಗೆ ತಿಳಿದಷ್ಟೂ ಅವರ ಮೇಲೆ ಹೆಚ್ಚಿನ ಅಭಿಮಾನ ಉಕ್ಕುತ್ತದೆ. ಬದುಕಿದರೆ ಇವರಂತೆ ಬದುಕಿ ಎನ್ನುವುದನ್ನು ಹೇಳುವುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.-ಹಿತೇಂದ್ರ ನಾಯ್ಕ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *