goswarga of siddapur- ಭೂಮಿ ಮೇಲಿನ ಸ್ವರ್ಗ ಭಾನ್ಕುಳಿಮಠದ ಗೋಸ್ವರ್ಗ

ಸುಖ,ಶಾಂತಿ ಇದ್ದರೆ ಇಹಲೋಕವೇ ಸ್ವರ್ಗ, ಸ್ವರ್ಗದ ಕಲ್ಪನೆಯನ್ನು ಜನಸಾಮಾನ್ಯರೂ ಕೂಡಾ ಇದೇ ಮಾನದಂಡಗಳಿಂದ ನೋಡುತ್ತಾರೆ. ಕೆಲವರಿಗೆ ಈ ಲೋಕವೇ ಸ್ವರ್ಗವಾದರೆ, ಅನೇಕರಿಗೆ ಸ್ವರ್ಗ ಎನ್ನುವುದು ಒಂದು ಕಲ್ಪನೆ,ಭ್ರಮೆ. ಆದರೆ ನಾವಿಲ್ಲಿ  ನಿಮಗೆ ಭೂಮಿ ಮೇಲಿನ ಸ್ವರ್ಗವನ್ನು ತೋರಿಸುತಿದ್ದೇವೆ. ಇದು ಭ್ರಮೆ, ಕಾಲ್ಪನಿಕ ಸ್ವರ್ಗವಲ್ಲ. ಜಾನುವಾರುಗಳಿಗೆ ಮಠ ನಿರ್ಮಿಸಿಕೊಟ್ಟಿರುವ ಗೋಸ್ವರ್ಗ.
ಹೌದು ಗೋವಿನ ಬಗ್ಗೆ ಅನೇಕ ಕಾಲ್ಪನಿಕ, ಪೌರಾಣಿಕ ಮಿಥ್‌ ಗಳಿವೆ. ಗೋವಿನ ಕತೆ, ದಂತಕತೆ,ಪುರಾಣ,ಪ್ರವಚನಗಳಿಗೇನೂ ಕಡಿಮೆ ಇಲ್ಲ. ಆದರೆ ಈ  ಶಾಸ್ತ್ರಗಳನ್ನು ಮೀರಿದ ಗೋವಿನ ಸ್ವಚ್ಚಂದ ಬದುಕಿನ ವಾಸ್ತವದ ಗೋಸ್ವರ್ಗ ಒಂದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಸಿದ್ಧಾಪುರದ ಬಾನ್ಕುಳಿಯಲ್ಲಿ ಶ್ರೀ ರಾಮದೇವರ ಶಾಖಾ ಮಠವೊಂದಿದೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸ ವಿದೆಯಾದರೂ ಈಗ ಈ ಮಠವನ್ನು ನಿರ್ವಹಣೆಮಾಡುತ್ತಿರುವ ಹೊಸನಗರದ ರಾಮಚಂದ್ರಪುರ ಮಠ ಇಲ್ಲಿ ಗೋವುಗಳಿಗೆ ಗೋಸ್ವರ್ಗವೊಂದನ್ನು ನಿರ್ಮಿಸಿದೆ. ಈ ಗೋಸ್ವರ್ಗದಲ್ಲಿ ಜನರು ಕೊಟ್ಟ ಹಾಗೂ ಕಸಾಯಿಖಾನೆಗಳಿಗೆ ಸಾಗಣೆಯಾಗುವ ಜಾನುವಾರುಗಳನ್ನು ರಕ್ಷಿಸಿ ಸಾಕಲಾಗುತ್ತದೆ. ದೇಶೀ ಹಸುಗಳ ಅಭಿವೃದ್ಧಿ ಕೇಂದ್ರವನ್ನಾಗಿಸಿ ಜಾನುವಾರು ಪೋಷಣೆ ಮಾಡುತ್ತಿರುವ ಈ ಗೋಸ್ವರ್ಗದಲ್ಲಿ ಆರು ನೂರಕ್ಕೂ ಹೆಚ್ಚು ವೈವಿಧ್ಯಮಯ ಹಸುಗಳಿವೆ.


ದೇಶದ ೩೪ ದೇಶೀ ತಳಿಗಳಲ್ಲಿ ಅರ್ಧದಷ್ಟು ಪ್ರಬೇಧಗಳ ಹಸುಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಭಾನ್ಕು ಳಿ ಶಾಖೆ ಕಾಮಧುಗಾ ಎನ್ನುವ ಟ್ರಸ್ಟ ಒಂದನ್ನು ನಿರ್ಮಿಸಿಕೊಂಡಿದೆ.
ಹಾಲುಕೊಡುವ,ಕರು ಹಾಕುವ, ಕರುಹಾಕಿದ ಹೀಗೆ ಎಲ್ಲಾ ವಯೋಮಾನದ ನಾನಾ ತಳಿಗಳನ್ನು ರಕ್ಷಿಸಿ,ತಳಿ ಸಂವರ್ಧನೆ ಮಾಡುತ್ತಿರುವ ರಾಮಚಂದ್ರಪುರ ಮಠದ ಈ ಗೋಸ್ವರ್ಗ ಈಗ ಕೇವಲ ಗೋವುಗಳಿಗೆ ಮಾತ್ರ ಸ್ವರ್ಗವಲ್ಲ ಈ ಗೋಸ್ವರ್ಗವನ್ನು ನೋಡಿ ಆನಂದಿಸಲು ಪ್ರವಾಸಿಗರೂ ಬರುತಿದ್ದಾರೆ. ವಿಶಾಲ ಪ್ರದೇಶದಲ್ಲಿ ಮಲೆನಾಡ ಜಲಸಿರಿಯ ಕಾರಂಜಿಗಳ ಪಕ್ಕ ಪಕ್ಷ ಮಾಸಗಳ ಹಂಗಿಲ್ಲದೆ ಜಾನುವಾರುಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ನೋಡುವುದೇ ಚಂದ.
ಕಣ್ಮನಗಳಿಗೆ ಹಬ್ಬ ನೀಡುವ  ಮಠದ ಗೋಸ್ವರ್ಗದ ಕಲ್ಪನೆ ಮಠಕ್ಕೆ ಖರ್ಚಿನ ಬಾಬ್ತಾದರೂ ಸರ್ಕಾರ, ಸಾರ್ವಜನಿಕರ ನೆರವಿನಿಂದ ನಡೆಯುತ್ತಿರುವ ಈ ಗೋಸ್ವರ್ಗ ಮೂಖಪ್ರಾಣಿಗಳಿಗೆ ಅವುಗಳನ್ನು ನೋಡಲು ಬರುವ ಜನರಿಗೆ ಸ್ವರ್ಗಸದೃಶ ಅನುಭವ ನೀಡುವುದಂತೂ ಸತ್ಯ.

(ಕನ್ನೇಶ್ವರ ನಾಯ್ಕ, ಕೋಲಶಿರ್ಸಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *