ಸಮಗ್ರಕೃಷಿಯ ಸಾಧಕ ಪ್ರಕಾಶ ಹೆಗಡೆ

ಸಮಗ್ರ ಕೃಷಿ ಚಿಕ್ಕ ಹಿಡುವಳಿದಾರರ ಲಾಭದಾಯಕ ವ್ಯವಸಾಯ.ಮಲೆನಾಡು,ಕರಾವಳಿಗಳಲ್ಲಿ ದೊಡ್ಡ ರೈತರಿಗಿಂತ ಚಿಕ್ಕ ಹಿಡುವಳಿದಾರರ ಸಂಖ್ಯೆಯೆ ಹೆಚ್ಚು. ಆಧುನಿಕ ಕೃಷಿ,ಕೃಷಿ ಪ್ರಯೋಗ ಮಾಡದೆ ಚಿಕ್ಕ ಹಿಡುವಳಿಯಲ್ಲಿ ಲಾಭಗಳಿಸುವುದು ಸುಲಭವಲ್ಲ ಆದರೆ ಚಿಕ್ಕ ಹಿಡುವಳಿಯಲ್ಲಿ ಲಾಭಮಾಡುವ ವಿರಳ ಸಾಧಕರಿಗೇನೂ ಕಡಿಮೆ ಇಲ್ಲ.
ನೀವಿಲ್ಲಿ ಓದುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಡ್ಡೇಕೊಪ್ಪದ ಪ್ರಕಾಶ ಹೆಗಡೆಯವರ ತೋಟದ ಬಗ್ಗೆ. ಅನಿಶ್ಚಿತ ಮಳೆ, ಅವೈಜ್ಞಾನಿಕ ಬೆಲೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಘೇಗಾರಿನ ಗುಡ್ಡೆಕೊಪ್ಪದ ಪ್ರಕಾಶ್‌ ಹೆಗಡೆ ತಮ್ಮ ವಯೋವೃದ್ಧ ತಂದೆಯೊಂದಿಗೆ ಚಿಕ್ಕ ಹಿಡುವಳಿಯಲ್ಲಿ ಕೃಷಿ ಪ್ರಯೋಗ,ಸಂಶೋಧನೆ ಪ್ರಾರಂಭಿಸಿದರು.

ತಮ್ಮ ೨.೫ ಎಕರೆ ಒಣ ಜಮೀನಿನಲ್ಲಿ ಅಡಿಕೆ,ತೆಂಗು ಬಾಳೆಯ ಜೊತೆಗೆ ಪ್ರತ್ಯೇಕವಾಗಿ ಏಲಕ್ಕಿ ಮತ್ತು ಕಬ್ಬನ್ನು ನಾಟಿ ಮಾಡಿದರು.
ಈ ಕೆಲಸದ ಜೊತೆಗೆ ಕೃಷಿ ಕೆಲಸಕ್ಕೆ ಬಳಸುವ ಚೂಳಿ, ಕಲ್ಲಿ ತಯಾರಿಸತೊಡಗಿದರು. ಮಾರುಕಟ್ಟೆಯಿಂದ ತಂತಿ-ರಬ್ಬರ್‌ ಪೈಪ್‌ ತರಿಸಿ ಚೂಳಿಬುಟ್ಟಿಯನ್ನು ತಯಾರಿಸಿದರು. ದಿನವೊಂದಕ್ಕೆ ಎರಡ್ಮೂರು ಚೂಳಿ ತಯಾರಿಸುವ ಹೆಗಡೆ ಈ ಸಿದ್ಧ ವಸ್ತುಗಳನ್ನು ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡುತ್ತಾರೆ. ರಬ್ಬರ್‌ ಚೂಳಿ, ಕಲ್ಲಿ ತಯಾರಿಸುವ ಪ್ರಕಾಶ್‌ ಹೆಗಡೆಯವರ ಹವ್ಯಾಸ ಇದಾದರೆ ಕೃಷಿ ಅವರ ವೃತ್ತಿ ಮತ್ತು ಅಭ್ಯಾಸ.

ಕಡಿಮೆ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಮಾಡಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುವ ಇವರು ಕೆಂಪಕ್ಕಿ ಸಣ್ಣಕ್ಕಿ ಬೆಳೆದು ಜಯಗಳಿಸಿದ್ದಾರೆ.
ಇವರ ಗದ್ದೆಯ ಕುಳಿ ಕಬ್ಬು ಕಡಿಮೆ ಕೆಲಸದಲ್ಲಿ ಹೆಚ್ಚು ಇಳುವರಿ ನೀಡುತ್ತಿದೆ.
ಮಲೆನಾಡಿನ ಕೃಷಿಕರು ಬಿಡುತ್ತಿರುವ ಏಲಕ್ಕಿ ಬೆಳೆಗೆ ಶೇಡ್‌ ನೆಟ್‌ ಮೂಲಕ ವಿನೂತನ ವಿಧಾನ ಪರಿಚಯಿಸಿರುವ ಪ್ರಕಾಶ್‌ ಹೆಗಡೆಯವರ ತೋಟದಲ್ಲಿ ಒಂದು ವರ್ಷದ ಏಲಕ್ಕಿ ಹಿಂಡುಗಳನ್ನು ನೋಡಿದರೆ ಹೀಗೂ ಉಂಟೆ ಎನಿಸದಿರದು.

ಭತ್ತ ಕಬ್ಬು, ಬಾಳೆ ಏಲಕ್ಕಿ ಜೊತೆಗೆ ಅಡಿಕೆ, ಕಾಳು ಮೆಣಸು ಬೆಳೆದಿರುವ ಪ್ರಕಾಶ ಹೆಗಡೆ ಸಮಗ್ರ ಕೃಷಿಯ ಸಾಧಕರಾಗಿ ಹೆಸರು ಮಾಡುತಿದ್ದಾರೆ. ಕೃಷಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಲಾಭದಾಯಕವಾಗದಿದ್ದರೆ ಹೊಸ ವಿಧಾನಗಳ ಮೂಲಕ ಲಾಭಗಳಿಸುವ ತಂತ್ರ ಹುಡಕಬೇಕು ಎನ್ನುವ ಹೆಗಡೆಯವರ ಬಹುಬೆಳೆಯ ಮಾದರಿ ಇತರರಿಗೂ ಅನುಕರಣೀಯವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *