ಸಮಗ್ರಕೃಷಿಯ ಸಾಧಕ ಪ್ರಕಾಶ ಹೆಗಡೆ

ಸಮಗ್ರ ಕೃಷಿ ಚಿಕ್ಕ ಹಿಡುವಳಿದಾರರ ಲಾಭದಾಯಕ ವ್ಯವಸಾಯ.ಮಲೆನಾಡು,ಕರಾವಳಿಗಳಲ್ಲಿ ದೊಡ್ಡ ರೈತರಿಗಿಂತ ಚಿಕ್ಕ ಹಿಡುವಳಿದಾರರ ಸಂಖ್ಯೆಯೆ ಹೆಚ್ಚು. ಆಧುನಿಕ ಕೃಷಿ,ಕೃಷಿ ಪ್ರಯೋಗ ಮಾಡದೆ ಚಿಕ್ಕ ಹಿಡುವಳಿಯಲ್ಲಿ ಲಾಭಗಳಿಸುವುದು ಸುಲಭವಲ್ಲ ಆದರೆ ಚಿಕ್ಕ ಹಿಡುವಳಿಯಲ್ಲಿ ಲಾಭಮಾಡುವ ವಿರಳ ಸಾಧಕರಿಗೇನೂ ಕಡಿಮೆ ಇಲ್ಲ.
ನೀವಿಲ್ಲಿ ಓದುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಡ್ಡೇಕೊಪ್ಪದ ಪ್ರಕಾಶ ಹೆಗಡೆಯವರ ತೋಟದ ಬಗ್ಗೆ. ಅನಿಶ್ಚಿತ ಮಳೆ, ಅವೈಜ್ಞಾನಿಕ ಬೆಲೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಘೇಗಾರಿನ ಗುಡ್ಡೆಕೊಪ್ಪದ ಪ್ರಕಾಶ್‌ ಹೆಗಡೆ ತಮ್ಮ ವಯೋವೃದ್ಧ ತಂದೆಯೊಂದಿಗೆ ಚಿಕ್ಕ ಹಿಡುವಳಿಯಲ್ಲಿ ಕೃಷಿ ಪ್ರಯೋಗ,ಸಂಶೋಧನೆ ಪ್ರಾರಂಭಿಸಿದರು.

ತಮ್ಮ ೨.೫ ಎಕರೆ ಒಣ ಜಮೀನಿನಲ್ಲಿ ಅಡಿಕೆ,ತೆಂಗು ಬಾಳೆಯ ಜೊತೆಗೆ ಪ್ರತ್ಯೇಕವಾಗಿ ಏಲಕ್ಕಿ ಮತ್ತು ಕಬ್ಬನ್ನು ನಾಟಿ ಮಾಡಿದರು.
ಈ ಕೆಲಸದ ಜೊತೆಗೆ ಕೃಷಿ ಕೆಲಸಕ್ಕೆ ಬಳಸುವ ಚೂಳಿ, ಕಲ್ಲಿ ತಯಾರಿಸತೊಡಗಿದರು. ಮಾರುಕಟ್ಟೆಯಿಂದ ತಂತಿ-ರಬ್ಬರ್‌ ಪೈಪ್‌ ತರಿಸಿ ಚೂಳಿಬುಟ್ಟಿಯನ್ನು ತಯಾರಿಸಿದರು. ದಿನವೊಂದಕ್ಕೆ ಎರಡ್ಮೂರು ಚೂಳಿ ತಯಾರಿಸುವ ಹೆಗಡೆ ಈ ಸಿದ್ಧ ವಸ್ತುಗಳನ್ನು ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡುತ್ತಾರೆ. ರಬ್ಬರ್‌ ಚೂಳಿ, ಕಲ್ಲಿ ತಯಾರಿಸುವ ಪ್ರಕಾಶ್‌ ಹೆಗಡೆಯವರ ಹವ್ಯಾಸ ಇದಾದರೆ ಕೃಷಿ ಅವರ ವೃತ್ತಿ ಮತ್ತು ಅಭ್ಯಾಸ.

ಕಡಿಮೆ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಮಾಡಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುವ ಇವರು ಕೆಂಪಕ್ಕಿ ಸಣ್ಣಕ್ಕಿ ಬೆಳೆದು ಜಯಗಳಿಸಿದ್ದಾರೆ.
ಇವರ ಗದ್ದೆಯ ಕುಳಿ ಕಬ್ಬು ಕಡಿಮೆ ಕೆಲಸದಲ್ಲಿ ಹೆಚ್ಚು ಇಳುವರಿ ನೀಡುತ್ತಿದೆ.
ಮಲೆನಾಡಿನ ಕೃಷಿಕರು ಬಿಡುತ್ತಿರುವ ಏಲಕ್ಕಿ ಬೆಳೆಗೆ ಶೇಡ್‌ ನೆಟ್‌ ಮೂಲಕ ವಿನೂತನ ವಿಧಾನ ಪರಿಚಯಿಸಿರುವ ಪ್ರಕಾಶ್‌ ಹೆಗಡೆಯವರ ತೋಟದಲ್ಲಿ ಒಂದು ವರ್ಷದ ಏಲಕ್ಕಿ ಹಿಂಡುಗಳನ್ನು ನೋಡಿದರೆ ಹೀಗೂ ಉಂಟೆ ಎನಿಸದಿರದು.

ಭತ್ತ ಕಬ್ಬು, ಬಾಳೆ ಏಲಕ್ಕಿ ಜೊತೆಗೆ ಅಡಿಕೆ, ಕಾಳು ಮೆಣಸು ಬೆಳೆದಿರುವ ಪ್ರಕಾಶ ಹೆಗಡೆ ಸಮಗ್ರ ಕೃಷಿಯ ಸಾಧಕರಾಗಿ ಹೆಸರು ಮಾಡುತಿದ್ದಾರೆ. ಕೃಷಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಲಾಭದಾಯಕವಾಗದಿದ್ದರೆ ಹೊಸ ವಿಧಾನಗಳ ಮೂಲಕ ಲಾಭಗಳಿಸುವ ತಂತ್ರ ಹುಡಕಬೇಕು ಎನ್ನುವ ಹೆಗಡೆಯವರ ಬಹುಬೆಳೆಯ ಮಾದರಿ ಇತರರಿಗೂ ಅನುಕರಣೀಯವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *