

ಸಮಾಜಸೇವೆ,ಸಾಮಾಜಿಕ ಕಾಳಜಿಗೆ ಹೆಸರಾಗಿದ್ದ ಸಿದ್ಧಾಪುರದ ಮೀರಾ ಸಾಬ್ ಇಂದು ನಿಧನರಾದರು. ೯೦ ವರ್ಷದ ಸುಧೀರ್ಘ ಬದುಕು ಬಾಳಿದ್ದ ಮೀರಾಸಾಬ್ ಪ್ರಾರಂಭದಲ್ಲಿ ಇಲ್ಲಿಯ ಸರ್ಕಾರಿ ನೌಕರರಾಗಿ ಹೊನ್ನಾವರದಿಂದ ವಲಸೆ ಬಂದಿದ್ದರು. ಸಿದ್ಧಾಪುರದಲ್ಲಿ ಅಂದಿನ ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿ ನಂತರ ಪಟ್ಟಣ ಪಂಚಾಯತ್ ಸದಸ್ಯರಾಗಿ ಕೆಲಸಮಾಡಿದ್ದರು.


ಪಟ್ಟಣ ಪಂಚಾಯತ್ ಕೆಳಹಂತದ ನೌಕರರ ಪರವಾಗಿ ಹರಿಜನ ಸಂಘ ಸ್ಥಾಪಿಸಿ ಅವರ ಪರವಾಗಿ ಕೆಲಸಮಾಡಿದ್ದರು. ಸಿದ್ದಾಪುರ ಬದ್ರಿಯಾ ಜಾಮಿಯಾ ಮಸೀದಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಮೀರಾಸಾಬ್ ಅಪ್ಪಟ ಧಾರ್ಮಿಕರಾಗಿ ಎಲ್ಲಾ ಸಮಾಜದವರೊಂದಿಗೆ ಬಾಂದವ್ಯ ಹೊಂದಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು. ಕೆಲಕಾಲದ ಅನಾರೋಗ್ಯದಿಂದ ಬಳಲಿದ ಮೀರಾಸಾಬ್ ಇಂದು ಮುಂಜಾನೆ ಕೊನೆಯ ಉಸಿರೆಳೆದಿದ್ದು ಇಬ್ಬರು ಮಕ್ಕಳು,ಸಮಾಜಬಾಂಧವರೊಂದಿಗೆಅಪಾರ ಹಿತೈಶಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮುನಾವರ್ ಗುರ್ಕಾರ್, ಟಿ.ಕೆ.ಎಂ. ಅಜಾದ್,ಇಲಿಯಾಸ್ ಶೇಖ್,ಮೆಹಬೂಬ್ ಅಲಿ,ನಾಶಿರ್ ಖಾನ್,ಕೆ.ಜಿ.ನಾಯ್ಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






