![](https://i0.wp.com/samajamukhi.net/wp-content/uploads/2022/04/IMG-20220413-WA0028.jpg?resize=390%2C496&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ಧಾಪುರ ನಗರದ ಪ್ರಸಿದ್ಧ ವೈದ್ಯ ಡಾ.ಎಂ.ಪಿ.ಶೆಟ್ಟಿ ಇಂದು ನಿಧನರಾದರು. ಧೀರ್ಘ ಅವಧಿಯಿಂದ ವಯೋಸಹಜ ಅನಾರೋಗ್ಯದಿಂದ ಜರ್ಜರಿತರಾಗಿದ್ದ ಶೆಟ್ಟಿ ಇಂದು ಮುಂಜಾನೆ ಕೊನೆ ಉಸಿರೆಳೆದಿದ್ದಾರೆ.
![](https://i0.wp.com/samajamukhi.net/wp-content/uploads/2022/04/IMG-20220413-WA0028.jpg?resize=123%2C156&ssl=1)
ಮೂಲತ: ಉಡುಪಿ ತಾಲೂಕಿನವರಾಗಿದ್ದ ಪ್ರಭಾಕರ ಶೆಟ್ಟಿ ಹುಟ್ಟೂರಿನಲ್ಲಿ ಶಿಕ್ಷಣ ಪಡೆದು ನಂತರ ವೈದ್ಯರಾಗಿ ಸಿದ್ಧಾಪುರದಲ್ಲಿ ಸೇವೆ ಸಲ್ಲಿಸುತಿದ್ದರು. ಜಮೀನ್ಧಾರರಾಗಿದ್ದ ಎಂ.ಪಿ.ಶೆಟ್ಟಿ ೫೦ ವರ್ಷಗಳ ಕೆಳಗೆ ಸಿದ್ಧಾಪುರಕ್ಕೆ ವಲಸೆ ಬಂದು ತಾಲೂಕಿನ ಜನಪ್ರೀಯ ವೈದ್ಯರಾಗಿದ್ದರು. ಸಿದ್ಧಾಪುರ ಲಯನ್ಸ್ ಕ್ಲಬ್ ಸಂಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಜನಪರಸೇವೆಯಿಂದಲೂ ಗುರುತಿಸಿಕೊಂಡಿದ್ದ ಡಾ.ಶೆಟ್ಟಿ ತಮ್ಮ ೮೫ ನೇ ವಯಸ್ಸಿಗೆ ಅಸ್ತಂಗತರಾದಂತಾಗಿದೆ. ಡಾ.ಶೆಟ್ಟಿಯವರ ಅಂತ್ಯಕ್ರೀಯೆ ಅವರ ಹುಟ್ಟೂರು ಮೊದಲ್ತಾವ್ ನಲ್ಲಿ ನಡೆಯಲಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)