ರೈತನ ಕಣ್ಣೀರು

ರೈತ ದೇಶದ ಬೆನ್ನೆಲುಬು
ಎಂದು ಭಾಷಣ ಬೀಗಿದರೆ ಸಾಕೆ|
ನೋವುಗಳೇ ಗುಡುಗಿ ರೈತನ ಕಣ್ಣೀರು
ಮಳೆಯಾಗಿ ಹರಿಯುವುದು ಯಾಕೆ||
ಮೂರು ಹೊತ್ತು ಅನ್ನವೇ ಬೇಕು
ಪ್ರತಿಯೊಬ್ಬರ ಬದುಕಿನ ನಾಳೆಗೆ|
ಧಾವಿಸಿ ಬನ್ನಿರಿ ಎಲ್ಲರೂ
ಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ||
ಮುಗಿಲು ಮುಟ್ಟುವವರೆಗೂ ಕಾವು
ಹೋರಾಡಿ ಶ್ರಮದ ಗೆಲುವಿಗೆ|
ಅನ್ಯಾಯ ದೌರ್ಜನ್ಯಗಳ ತಡೆಗೆ
ನಿಲ್ಲಿ ನೇಗಿಲ ಯೋಗಿಯ ನೆರವಿಗೆ…ಒಪ್ಪತ್ತು ಗಂಜಿಗೆ ದಿನವಿಡೀ ದುಡಿದು
ಬೆವರಲ್ಲಿ ಮೈ ಬಸಿಯುತ್ತಿರುವನು|
ಕೇಳುವವರಿಲ್ಲದೆ ಇವನ ಪಾಡು
ಹಾಡುಹಗಲೇ ಕುಸಿದು ಕುಳಿತಾನು||
ಕೀಟನಾಶಕ ರಸಗೊಬ್ಬರ
ವಿದ್ಯುತ್ ನೀರು ದುಬಾರಿ ಪರಿಕರ|
ಭರವಸೆ ನೀಡಿದ ಸರಕಾರ
ಸಹಾಯಧನ ಕಡಿತಗೊಳಿಸಿ ಹರೋಹರ||
ಕಷ್ಟ ನಷ್ಟಗಳ ಆಗರ
ಜೀವನವೇ ಇಲ್ಲಿ ಅತಿ ಭಾರ|
ಪ್ರತಿಭಟಿಸಿ ಸಿಡಿದೆದ್ದು ನಿಂತರೆ ರೈತ
ನಾಡಿಗೆ ನಾಡೇ ಹಾಹಾಕಾರ…ಅತಿವೃಷ್ಟಿ ಅನಾವೃಷ್ಟಿ|
ಬಡತನವೇ ಇಲ್ಲಿ ಪಿತ್ರಾರ್ಜಿತ ಆಸ್ತಿ ||
ಅಸ್ಥಿರ ಮಾರುಕಟ್ಟೆಯ ವಸತಿ
ವೈಜ್ಞಾನಿಕ ಸಂಸ್ಕರಣೆಯು ನಾಸ್ತಿ||
ಖರ್ಚು ವೆಚ್ಚವಾಗಿ ಅಗಣಿತ
ಬೆಂಬಲ ಬೆಲೆಯಿಲ್ಲದೆ ಅತ್ತಿತ್ತ|
ಮಧ್ಯವರ್ತಿಯ ಹಾವಳಿ ವಿಪರೀತ
ರಾಜಕೀಯ ಇಚ್ಛಾಶಕ್ತಿಗಿದೆ ಕೊರೆತ||
ಬರಗಾಲದ ಬರೆ
ತಾಳದ ಭಾದೆ ಸಾಲದ ಮೊರೆ|
ದೀರ್ಘಕಾಲ ಕಿರುಕುಳದ ಹೊರೆ
ಕೃಷಿ ಪ್ರಗತಿಗೆ ಓಗೊಡಲಿ ಈ ಕರೆ….*ಬಸವರಾಜ ಕಾಸೆ*
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಮೊಬೈಲ್ ಸಂಖ್ಯೆ 7829141150
ಮಿಂಚಂಚೆ pr***********@***il.comReplyForward

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *