ನಾಯಕರ ಪ್ರತಿಷ್ಠೆಯಿಂದ ಕಾಂಗ್ರೆಸ್‌ ಮಂಕಾಗುತ್ತಿದೆಯೆ? ಭಾಗ-೦೧

ರಾಷ್ಟ್ರದಲ್ಲಿ ಮತೀಯವಾದಿ ಶಕ್ತಿಗಳ ಪ್ರಾಬಲ್ಯ, ಮನೋಪೊಲಿ ಎದುರು ಎದೆಒಡ್ಡಿ ನಿಲ್ಲಬಲ್ಲ ಬೆರಳೆಣಿಕೆಯ ನಾಯಕರನ್ನು ಅಧಿಕಾರದ ಬಲದಿಂದ ಸುಮ್ಮನಿರಿಸಲಾಗಿದೆ,ಕೆಲವರನ್ನು ಹೆದರಿಸಿ ಜೊತೆಗಿರಿಸಿಕೊಳ್ಳಲಾಗಿದೆ. ಕೆಲವರಿಗೆ ಜೈಲಿನೊಳಗೆ ಕೊಳೆಸಲಾಗುತ್ತಿದೆ. ಈ ಅಘೋಶಿತ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಬೆಳೆಸುತ್ತಿರುವ ಅಧಿಕಾರದಾಹಿ ನಕಲಿ ದೇಶಭಕ್ತರು ಎಲ್ಲರನ್ನೂ ಹೆದರಿಸಿ, ಬೆದರಿಸಿ ಬಾಯಿಮುಚ್ಚಿಸುತ್ತಿರುವ ಸಂದರ್ಭದಲ್ಲಿ ಸುಬ್ರಮಣ್ಯ ಸ್ವಾಮಿ ಕೆಲವೊಮ್ಮ ಕರ್ನಾಟಕದ ವಿಶ್ವನಾಥರಂತೆ ಸತ್ಯ ಹೇಳುತಿದ್ದಾರೆ.

ಯಶವಂತಸಿನ್ಹಾ,ಶರದ್‌ ಪವಾರ್‌ ಬಿಟ್ಟರೆ ದೇಶದಲ್ಲಿ ಈಗಲೂ ಎದೆಯುಬ್ಬಿಸಿ ಸತ್ಯ ಹೇಳುತ್ತಿರುವವರು ಇಬ್ಬರೇ ಅವರಲ್ಲಿ ಒಬ್ಬರು ಕಾಂಗ್ರೆಸ್‌ ನ ರಾಹುಲ್ಗಾಂಧಿ ಮತ್ತೊಬ್ಬರು ಬಿ.ಜೆ.ಪಿ.ಯ ವರುಣ್‌ ಗಾಂಧಿ! ಆದರೆ ಮತೀಯವಾದಿ ಅಧಿಕಾರದಾಹಿ ಕುತರ್ಕದ ರಾಷ್ಟ್ರೀಯವಾದಿಗಳು ಸುಬ್ರಮಣ್ಯ ಸ್ವಾಮಿ,ವರುಣ್‌ ಗಾಂಧಿ ಕಿಂತ ರಾಹುಲ್‌ ಬಗ್ಗೆ ತಲೆಕೆಡಿಸಿಕೊಳ್ಳಲು ಕಾರಣ ಅವರ ಧೈರ್ಯ ಮತ್ತು ನಾಯಕತ್ವ ಈ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಬಿಟ್ಟರೆ ಮತ್ತ್ಯಾರೂ ಮತಾಂಧ ಸುಳ್ಳುಕೋರರನ್ನು ಎದುರುಹಾಕಿಕೊಳ್ಳುತ್ತಿಲ್ಲ ಇದಕ್ಕೆ ಅನೇಕ ಕಾರಣಗಳಿವೆ. ಈ ದುಸ್ಥಿತಿಯಲ್ಲಿ ರಾಜ್ಯಕ್ಕೆ ಸಿಕ್ಕ ಇನ್ನೊಬ್ಬ ನೇರ ನುಡಿಯ ಸಮರ್ಥ ನಾಯಕ ಬಿ.ಕೆ. ಹರಿಪ್ರಸಾದ್.‌ ಈ ಹರಿಪ್ರಸಾದ್‌ ಈಗ ರಾಹುಲ್‌ ಗಾಂಧಿ ಟೀಮಿನ ಪ್ರಮುಖರಲ್ಲೊಬ್ಬರಾಗಿ ಮುಂದಿನ ದಿನಗಳಲ್ಲಿ ರಾಜ್ಯ ಅಥವಾ ಕೇಂದ್ರದಿಂದ ಪ್ರಮುಖ ಸಚಿವರಾಗುವ ಪಟ್ಟಿಯಲ್ಲಿದ್ದಾರೆ. ಹರಿಪ್ರಸಾದ್‌ ಈಗಲೇ ತಾವು ಉತ್ತರ ಕನ್ನಡದಿಂದ ಕಾಂಗ್ರೆಸ್‌ ನ ಲೋಕಸಭೆಯ ಅಭ್ಯರ್ಥಿ ಎಂದು ಹೇಳಿಕೊಂಡಿರುವುದರಿಂದ ಉತ್ತರ ಕನ್ನಡದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಬಲವರ್ಧನೆಗೆ ಶ್ರಮಿಸಲು ಹೆಣಗಾಡುತಿದ್ದಾರೆ.

ಹೀಗೆ ಕಾಂಗ್ರೆಸ್‌ ನಲ್ಲಿ ರಾಹುಲ್‌ ಗಾಂಧಿ ಟೀಮ್‌ ಬಂಡವಾಳಶಾಹಿ ಬಲಪಂಥೀಯ ಕಾಲಾಳುಗಳ ವಿರುದ್ಧ ಬಡವರ ಧ್ವನಿಯಾಗುತಿದ್ದರೆ ಕಾಂಗ್ರೆಸ್‌ ನ ಕೆಲವು ಪ್ರಮುಖ ಮೃಧು ಹಿಂದುತ್ವವಾದಿಗಳು ಕಾಂಗ್ರೆಸ್‌ ಗೇ ಕಂಟಕವಾಗಿ ಪರೋಕ್ಷವಾಗಿ ಮತಾಂಧರಿಗೆ ನೆರವಾಗುತ್ತಿರುವ ವಿದ್ಯಮಾನ ಹೊಸತೇನಲ್ಲ. ಕಾಂಗ್ರೆಸ್‌ ನಲ್ಲಿರುವ ಕೆಲವು ಮೇಲ್ವರ್ಗದ ನಾಯಕರಿಗೆ ಇ.ಡಿ.ಆಯ್.ಟಿ.ಗಳಿಂದ ವಿನಾಯಿತಿ ನೀಡಿರುವ ಬ್ರಷ್ಟ ಕೋಮುವಾದಿ ಪರಿವಾರದ ನಾಯಕರು ಕಾಂಗ್ರೆಸ್‌ ವಿರುದ್ಧ ಕಾಂಗ್ರೆಸ್‌ ನಲ್ಲೇ ಕೋಟೆ ಕಟ್ಟುತಿದ್ದಾರೆ. ಇದರ ಪರಿಣಾಮ ದೇಶ ಈಗ ಪ್ರಬಲ ವಿರೋಧ ಪಕ್ಷವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಸ್ಥಿತಿಯಲ್ಲಿ ರಾಜ್ಯದಲ್ಲಿ ಕೆಲವು ಕಡೆ ಕಾಂಗ್ರೆಸ್‌ ಪಕ್ಷಕ್ಕೆ ಕಾಂಗ್ರೆಸ್‌ ನಾಯಕರೇ ಮಾರಕವಾಗಿದ್ದಾರೆ ಅವರಲ್ಲಿ ಬಹುತೇಕರು ಹಳೆ ತಲೆಗಳಾಗಿರುವುದು ವಿಶೇಶ.

ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶಿವಮೊಗ್ಗ, ಮಂಗಳೂರು, ಉಡುಪಿಗಳಲ್ಲೂ ಹಿರಿಯ ಕಾಂಗ್ರೆಸ್‌ ಮುಖಂಡರೇ ಕಾಂಗ್ರೆಸ್‌ ಗೆ ಮಾರಕವಾಗಿದ್ದು ಇದರ ಲಾಭ ಮತೀಯವಾದಿ ಶಕ್ತಿಗಳಿಗಾಗುತ್ತಿದೆ ಎನ್ನುವ ಗುರುತರ ಆರೋಪಗಳಿವೆ ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ ಗೆ ಮಾರಕವಾಗಿರುವ ನಾಯಕರ್ಯಾರು? ಎನ್ನುವ ಪ್ರಶ್ನೆಗೆ ಉತ್ತರ ಮುಂದಿನ ಕಂತಿನಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *