
ಬಕ್ಕೆಮನೆ ಚಿಂತನೆ-
ನಮಗೆ ಅನಗತ್ಯವಾದ ಅನಿಲಗಳನ್ನು (ಅದು ಕಾರ್ಬನ್ ಡೈಆಕ್ಸೈಡ್ ಇರಲಿ, ನೈಟ್ರಸ್ ಆಕ್ಸೈಡ್ ಇರಲಿ ಅಥವಾ ಓಝೋನ್ ಪದರವನ್ನು ನಾಶ ಮಾಡಬಲ್ಲ ಕ್ಲೊರೊ-ಫ್ಲೊರೊ-ಕಾರ್ಬನ್ ಇರಲಿ)
ನಾವು ನಿಶ್ಚಿಂತೆಯಿಂದ ವಾಯುಮಂಡಲಕ್ಕೆ ಬಿಸಾಕುತ್ತಿರುವುದೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವು ನಮ್ಮ ಕಣ್ಣಿಗೆ ನೇರ ಕಾಣುತ್ತಿಲ್ಲ. ಹಾಗೂ ನಮ್ಮೆದುರು ಹೆಚ್ಚು ಕಾಲ ನಿಲ್ಲದೆಯೇ ವಾತಾವರಣದ ಮೇಲ್ಪದರಕ್ಕೆ ಸೋರಿ ಹೋಗುತ್ತದೆಂಬ ಕಾರಣದಿಂದ ನಾವು ಅವುಗಳನ್ನು ಉಪೇಕ್ಷೆ ಮಾಡುತ್ತ ಬಂದಿದ್ದೇವೆ. ವಾಯುಮಂಡಲವಷ್ಟೇ ಅಲ್ಲ, ನಮಗೆ ತೀರ ಹತ್ತಿರವಾದ, ಶಿಲಾಮಂಡಲ, ಜಲಮಂಡಲ ಹಾಗೂ ಜೀವಮಂಡಲವೂ ತ್ಯಾಜ್ಯ ವಸ್ತುಗಳ ಅವೈಜ್ಞಾನಿಕ ವಿಲೇವಾರಿಯಿಂದ ದೂಷಿತವಾಗುತ್ತಿವೆ. -ನಾಗೇಶ್ ಹೆಗಡೆ, ಬಕ್ಕೆಮನೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
