ಸ್ವಾತಂತ್ರ್ಯ ಅಮೃತಮಹೋತ್ಸವ-ಮರೆಯದ ಮರೆಯಾದ ರತ್ನಗಳು

ಉತ್ತರ ಕನ್ನಡ ಜಿಲ್ಲೆ ಹಲವು ವೈಶಿಷ್ಟ್ಯಗಳ ಜಿಲ್ಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಯ ಅಂಕೋಲಾದಲ್ಲಿ ರೈತ ಹೋರಾಟ ನಡೆಯಿತು.

ಸ್ವಾತಂತ್ರ್ಯ ಹೋರಾಟವಂತೂ ಈ ಜಿಲ್ಲೆಯ ಸಿದ್ಧಾಪುರ, ಅಂಕೋಲಾ ತಾಲೂಕುಗಳ ಉಸಿರಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಮೊಟ್ಟಮೊದಲು ಬಂಧಿತರಾದವರು ಸಿದ್ಧಾಪುರದ ಬೇಡ್ಕಣಿಯ ಚೌಡಾ ನಾಯ್ಕರು. ಚೌಡಾ ನಾಯ್ಕರ ತಂದೆ ಪೊಲೀಸ್ ಪಟೇಲ್ ಆಗಿದ್ದರು. ತಂದೆ ಮತ್ತು ಕುಟುಂಬದ ಬ್ರಟೀಷ್ ಸೇವೆಯ ವಿರುದ್ಧ ಸಿಡಿದೆದ್ದ ಚೌಡಾ ನಾಯ್ಕ ಸ್ವಾತಂತ್ರ್ಯ ಹೋರಾಟಕ್ಕಿಳಿದು ಬೀದಿಪಾಲಾದ ರೋಚಕ ಕಥೆ ಉತ್ತರ ಕನ್ನಡ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಧ್ಯಾಯ.

ಈ ಚೌಡಾ ನಾಯ್ಕರ ಕುಟುಂಬದ ಸಹೋದರ ಸಂಬಂಧಿ ಗಣಪತಿ ನಾಯ್ಕ, ಚೌಡಾ ನಾಯ್ಕರಂತೆಯೇ ಅಧ್ಯಯನ ಮಾಡಿ ಸ್ವಾತಂತ್ರ್ಯ ಚಳವಳಿಯ ಕಾರಣಕ್ಕೆ ಬ್ರಟೀಷ್ ಸರ್ಕಾರದ ನೌಕರಿ ತಿರಸ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕಿಳಿಯುತ್ತಾರೆ. ಸಿದ್ಧಾಪುರದ ಯುವಕ ಸಿದ್ಧಾಪುರದಿಂದ ಅಂಕೋಲಾ ವರೆಗೆ ಕಾಲ್ನಡಿಗೆಯ ಪ್ರವಾಸ ಮಾಡುತಿದ್ದಾಗ ಅಂಕೋಲಾದ ರೈತ ಹೋರಾಟ ಕಣ್ಣಿಗೆ ಗೋಚರಿಸುತ್ತದೆ. ಅಂಕೋಲಾದಲ್ಲಿ ಜಮೀನ್ಧಾರರು, ಶ್ರೀಮಂತರು ಆದ ಕೆಲವರು ಬ್ರಟೀಷರ ನೆರವು ಪಡೆದು ಬಡ ರೈತ ಗೇಣಿದಾರರನ್ನು ಹಿಂಸಿಸುತ್ತಿರುತ್ತಾರೆ.

ಈ ಪ್ರಭುತ್ವ ಪ್ರೇರಿತ ಹಿಂಸೆಯ ವಿರುದ್ಧ ಕರ್ಕಿಯ ನಾಯ್ಕರು, ಅಂಕೋಲಾದ ನಾಡಕರ್ಣಿ,ದಿನಕರದೇಸಾಯಿ ಸಂಘಟನೆ ಮಾಡುತಿದ್ದಾಗ ಹೋರಾಟದ ಕಿಚ್ಚು ಕಟ್ಟಿಕೊಂಡು ತಿರುಗಾಡುತಿದ್ದ ಹೊಸೂರಿನ ಗಣಪತಿ ಸ್ವಾತಂತ್ರ್ಯ ಹೋರಾಟಕ್ಕೆ ವರದಿ ಮುಟ್ಟಿಸುತ್ತಾ ಕರಪತ್ರ ಹಂಚುತಿದ್ದಾಗ ಕಂಪನಿ ಸರ್ಕಾರದ ಪೊಲೀಸರಿಂದ ಬಂಧನಕ್ಕೊಳಗಾಗುತ್ತಾರೆ.

ಹೀಗೆ ಬಂಧನ, ಬಂಧನದ ಭೀತಿಯಿಂದ ಮೈಸೂರು ರಾಜ್ಯದ ಗಡಿ ಶಿವಮೊಗ್ಗದ ಸಾಗರ ತಾಲೂಕು ಹಿರೆನೆಲ್ಲೂರಿನಲ್ಲಿ ಅಡಗಿದ್ದಾಗ ಅಲ್ಲಿಯ ಬಡರೈತರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಗಾಂವಟಿಶಾಲೆ ಮಾಸ್ತರ್ ಆಗಿ ರೈತರಿಗೆ ಶಿಕ್ಷಣ ಕೊಡುತ್ತಾ ಕಾಗೋಡು ರೈತ ಚಳವಳಿಗೆ ನಾಂದಿ ಹಾಡುತ್ತಾರೆ. ಅವರೇ ಮುಂದೆ ಎಚ್. ಗಣಪತಿಯಪ್ಪ ಎಂದು ಪ್ರಸಿದ್ಧರಾಗುತ್ತಾರೆ.

ಹೀಗೆ ಎಳೆವಯಸ್ಸಿನಲ್ಲಿ ಹೋರಾಟಕ್ಕಿಳಿದ ಎಚ್. ಗಣಪತಿಯಪ್ಪ ಸಿದ್ಧಾಪುರದ ಹೊಸೂರಿನ ಕುರವಂತೆಯವರ ಮನೆಯ ಗಣಪತಿ ಎನ್ನುವುದು ಈಗ ಚರಿತ್ರೆ.

ಉಳ್ಳವರು ಉಳ್ಳವರ ಅನುಕಂಪ ಪ್ರೇರಿತ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧೀರ ಹೋರಾಟಗಾರನೆಂದೇ ಕರೆಸಿಕೊಳ್ಳುತಿದ್ದ ಬೇಡ್ಕಣಿ ಚೌಡಾ ನಾಯ್ಕ, ಹೊಸೂರಿನ ಗಣಪತಿಯಪ್ಪ ಪ್ರಾಮುಖ್ಯತೆ ಪಡೆಯದಿದ್ದುದು ಈಗಿನ ಮತೀಯವಾದಿಗಳು ಹೇಳುವಂತೆ ಕಮ್ಯುನಿಸ್ಟ್ ಪ್ರೇರಿತ ಚರಿತ್ರೆಯ ಕಾರಣವಲ್ಲ.

ಆಗಿದ್ದುದು ಉಳ್ಳವರ ಪರವಾಗಿನ ಹೋರಾಟದ ಚರಿತ್ರೆ. ಈ ಚರಿತ್ರೆಯಲ್ಲಿ ಚೌಡಾ ನಾಯ್ಕ, ಗಣಪತಿಯಪ್ಪ ತೆರೆಮರೆಗೆ ಸರಿದದ್ದು ಕಾಕತಾಳೀಯವಲ್ಲ. ಬದಲಾಗಿ ಆರ್ಯರ ಬಲಪಂಥೀಯ ವೈಭವೀಕರಣದ ಉಳ್ಳವರ ಚರಿತ್ರೆಯ ತಾರತಮ್ಯದ ಗುಣವಿಶೇಷಗಳಿಂದ.

ಇಂಥ ವಸ್ತನಿಷ್ಟವಲ್ಲದ ಐತಿಹಾಸಿಕ ದಾಖಲೆಗಳಲ್ಲಿ ಸಿಗದ ಈ ವ್ಯಕ್ತಿಗಳು ಮರೆತವರ ಕತೆಯಂತೆ ಎಲ್ಲೆಲ್ಲೋ ಮರಳಿಮರಳಿ ಪ್ರಸ್ತಾಪವಾಗಿದ್ದಾರೆ. ಇಂಥ ಹಿನ್ನೆಲೆಯ ಎಚ್. ಗಣಪತಿಯಪ್ಪ ಈಗಿನ ವೈದಿಕ ಕುರುಡುಅನುಯಾಯಿಗಳ ಉಪೇಕ್ಷೆ ವಿರೋಧಕ್ಕೆ ಒಳಗಾಗಿ ಇತಿಹಾಸದ ಪುಟ ಸೇರಿದ್ದಾರೆ. ಇಂಥ ಗಣಪತಿಯಪ್ಪ ಅಂಕೋಲಾ ರೈತ ಚಳವಳಿ ಪ್ರೇರಣೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸ್ವಾತಂತ್ರ್ಯಾನಂತರ ಕಾಗೋಡು ಹೋರಾಟ ಕಟ್ಟುತ್ತಾರೆ.

ಕಾಗೋಡು ಹೋರಾಟದ ಪ್ರೇರಣೆ,ಫಲಶೃತಿಯಾಗಿ ರಾಜ್ಯದ ಬಡ ರೈತ ಗೇಣಿದಾರರಿಗೆ ಊಳುವವನೇ ಒಡೆಯನಾಗುವ ಹಕ್ಕು ದೊರೆತದ್ದು ಈಗ ಇತಿಹಾಸ.

ಈ ಹೋರಾಟ, ರೈತ ಚಳವಳಿಯ ನಾಯಕ ಎಚ್. ಗಣಪತಿಯಪ್ಪ ಸಾಗರವನ್ನು ಕೇಂದ್ರೀಕರಿಸಿಕೊಂಡು ನ್ಯಾಯ(ದ)ಪಥ ಎನ್ನುವ ಪತ್ರಿಕೆ ಹೊರತರುತಿದ್ದರು. ಹೋರಾಟ, ಪತ್ರಿಕೋದ್ಯಮ, ಸ್ವಾತಂತ್ರ್ಯ ಚಳವಳಿ, ಧಾರ್ಮಿಕ ಮೂಲಭೂತವಾದದ ವಿರುದ್ಧದ ಹೋರಾಟ ಹೀಗೆ ಜೀವನವನ್ನೇ ಹೋರಾಟವಾಗಿಸಿಕೊಂಡಿದ್ದ ಎಚ್. ಗಣಪತಿಯಪ್ಪ ಆಯಾ ಕಾಲದ ಪ್ರಭುತ್ವದ ವಿರೋಧ, ತುಳಿತಕ್ಕೆ ಸಿಕ್ಕು ನಲುಗಿರುವುದೂ ಒಂದು ವಿಸ್ತಾರ ಚರಿತ್ರೆಯೇ.

(ಇಂಥ ಗಣಪತಿಯಪ್ಪನವರನ್ನು ಸಿದ್ಧಾಪುರಕ್ಕೆ ಮತ್ತೆ ನೆನಪಿಸಿ, ಸನ್ಮಾನಿಸಿದ್ದು. ಅವರ ಬಗ್ಗೆ ಸಮಾಜಮುಖಿ ಬರೆದು ವಾಸ್ತವ ತಿಳಿಸಿದ್ದು ಇದರ ಮುಂದುವರಿದ ಭಾಗದಂತೆ ಸಿದ್ದಾಪುರದ ಸಾಹಿತ್ಯ ಪರಿಷತ್ತಿನ ಭವಿಷ್ಯದ ಯೋಜನೆಯಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸಲಹೆ ಸೂಚನೆ ನೀಡಿದ್ದು ಸಮಾಜಮುಖಿ ಒಂದು ಪತ್ರಿಕೆಯಷ್ಟೇ ಅಲ್ಲ ಇದೊಂದು ವಾಸ್ತವ, ಸತ್ಯ, ನಿಷ್ಠೂರತೆಗಳ ಪಕ್ಷಪಾತಿಯಾಗಿರುವ ಹೋರಾಟದ ಅಸ್ತ್ರ ಎನ್ನುವ ದಾಖಲೆಗೂ ದೃಷ್ಟಾಂತ.)

ಟಿ.ಕೆ. ಮಹಮೂದ್- ಉತ್ತರ ಕನ್ನಡ ಮಣ್ಣಿನಲ್ಲಿ ದಿನಕರ ದೇಸಾಯಿ, ಎಚ್. ಗಣಪತಿಯಪ್ಪ, ಜಿ.ದೇವರಾಯ ನಾಯಕ ಸೇರಿದಂತೆ ಅಸಂಖ್ಯ ಜನರು ರೈತ ಹೋರಾಟದಲ್ಲಿ ಪಾಲ್ಗೊಂಡ ಸವಿಸ್ತಾರ ಚರಿತ್ರೆಯೇ ಇದೆ. ( ವಿಷ್ಣು ನಾಯ್ಕರ ದುಡಿಯುವ ಕೈಗಳ ಹೋರಾಟದ ಕತೆ)

ಇಂಥ ಚರಿತ್ರೆಯ ಕೊಂಡಿ ಕಾಸರಗೋಡಿನ ಕೈಯ್ಯೂರಿನ ವರೆಗೆ ವಿಸ್ತರಿಸಿಕೊಂಡಿದೆ. ಪ್ರಾಯಶ: ಮೊದಲು ಅಂಕೋಲಾ, ನಂತರ ಸಾಗರ (ಕಾಗೋಡು) ಇವುಗಳ ನಡುವಿನ ಅವಧಿಯಲ್ಲಿ ಕೈಯ್ಯೂರಿನಲ್ಲಿ ರೈತ ಹೋರಾಟ ಪ್ರಾರಂಭವಾಗುತ್ತದೆ. ಇಂಥ ಹೋರಾಟಗಳಿಗೆ ಅಂದಿನ ದಿನಗಳಲ್ಲಿ ಪ್ರೇರಣೆಯಾದವರು ರಾಜಕೀಯ ಮುಂದಾಳುಗಳು, ಸ್ವಾತಂತ್ರ್ಯ ಹೋರಾಟದ ಸೇನಾನಿಗಳು ಮತ್ತು ಸಮಾಜವಾದಿ ಹೋರಾಟಗಾರರು. ಅಂಕೋಲಾ, ಕಾಗೋಡು, ಕೈಯ್ಯೂರುಗಳ ನಡುವೆ ಸಿದ್ದಾಪುರ ಸ್ವಾತಂತ್ರ್ಯ ಹೋರಾಟ, ಕಾಗೋಡು ಚಳವಳಿ ಸೇರಿದಂತೆ ಅನೇಕ ಹೋರಾಟಗಳ ತೌರೂರು.

ಆ ಅವಧಿಯಲ್ಲಿ ಕೇರಳಮೂಲದ ಮುಸ್ಲಿಂ ವ್ಯಕ್ತಿಯೊಬ್ಬ ಇಂಥ ಹೋರಾಟಗಳ ಬಗ್ಗೆ ಮಾತನಾಡುತ್ತಾ ಸಾಹಿತ್ಯ, ಸಾಂಸ್ಕೃ ತಿಕತೆ, ರಾಜಕಾರಣಗಳ ಮಧ್ಯೆ ಸಮಾಜವಾದದ ಕೆಲಸಮಾಡುತಿದ್ದ. ಈತ ವಲಸೆ ಮುಸ್ಲಿಂ ಬೇರೆ. ಸ್ವಾತಂತ್ರ್ಯ ಹೋರಾಟದ ಕೆಲವು ಮೇಲ್ವರ್ಗದವರು, ಕಾಗೋಡು ರೈತ ಚಳವಳಿಯ ಬಹುಸಂಖ್ಯಾತರ ನಡುವೆ ಮಲಿಯಾಳಿ ಮುಸ್ಲಿಂ ಸಿದ್ಧಾಪುರದಂಥ ಪ್ರಖರ ರಾಜಕೀಯದ ವಾತಾವರಣದಲ್ಲಿ ಸಮಾಜವಾದದ ಬಗ್ಗೆ ಮಾತನಾಡುತಿದ್ದ. ಲೋಹಿಯಾವಾದಿಗಳಾದ ಅನೇಕ ಹೋರಾಟಗಾರರ ಸಂಪರ್ಕ, ಸಂಬಂಧ ದಲ್ಲಿದ್ದ ಅವರೇ ಸಿದ್ಧಾಪುರದ ಟಿ.ಕೆ. ಮಹಮೂದ್.

ಸಮಾಜವಾದ, ಕಾಂಗ್ರೆಸ್ ರಾಜಕಾರಣಗಳ ನಡುವೆ ಎಸ್. ಎಂ. ಕೃಷ್ಣ, ಬಂಗಾರಪ್ಪ, ಗೋಪಾಲಗೌಡ, ಗಣಪತಿಯಪ್ಪನವರಂಥ ಅನೇಕ ಸಮಾಜವಾದಿ ಹಿನ್ನೆಲೆಯ, ಎಸ್.ಎಂ. ಯಾಹ್ಯಾ, ದೇವರಾಜ ಅರಸುರಂಥ ಅಧಿಕಾರರೂಢರ ಸ್ನೇಹದ ನಡುವೆ ಅಧಿಕಾರ, ಅಂತಸ್ತುಗಳ ವ್ಯಾಮೋಹ ತೊರೆದು ಸಮಾಜವಾದ, ಸಾಹಿತ್ಯ, ಸಾಂಸ್ಕೃ ತಿಕತೆಗಳೊಂದಿಗೆ ಸಿದ್ಧಾಪುರದಂಥ ಚಿಕ್ಕ ತಾಲೂಕಿನಲ್ಲಿ ಒಂಟಿ ಸಲಗದಂತೆ ಬದುಕಿ, ಬಾಳಿ ಹೋದವರು ಟಿ.ಕೆ.ಎಂ.

ಅವರು ಮನಸ್ಸು ಮಾಡಿದ್ದರೆ ಶಾಸಕರು, ಸಂಸದರು, ಸಚಿವರಾಗುವ ಅವಕಾಶವಿತ್ತು. ಆದರೆ ನೈಜ ಸಮಾಜವಾದಿಯಾಗಿ ಸಮಾಜದ ಅಂಕುಡೊಂಕುಗಳನ್ನು ವಿಮರ್ಶಿಸುತ್ತಾ, ಟೀಕಿಸುತ್ತಾ ಟೀಕೆ ಮಹಮದ್ ಎಂದು ಪ್ರಸಿದ್ಧರಾದರೂ ಕೊನೆಯವರೆಗೂ ಆರ್ಥಿಕ, ಸಾಮಾಜಿಕ ಸ್ಥಾ ನ ಮಾನಗಳಿಲ್ಲದೆ ನಿರ್ಗಮಿಸಿದ ಸಮಾಜವಾದಿ.ಅವರ ಹೋರಾಟದ ಬದುಕು, ಛಲ, ಬದ್ಧತೆ ಈಗಿನ ಜನಾಂಗಕ್ಕೆ ಮಾದರಿ, ಮಾರ್ಗದರ್ಶಿ. ಟಿ.ಕೆ. ಮಹಮದ್ ಉತ್ತರ ಕನ್ನಡ ವಿಶೇಶವಾಗಿ ಸಿದ್ದಾಪುರ ತಾಲೂಕು ಸದಾ ಸ್ಮರಿಸಬೇಕಾದ ಅಪರೂಪದ ಸಮತಾವಾದಿ. ಸಿದ್ದಾಪುರದ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃ ತಿಕ ಮನಸುಗಳಿಗೆ ಟಿ.ಕೆ. ಮಹಮದ್ ಸದಾ ಸ್ಮರಣೀಯ ವ್ಯಕ್ತಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *