ಮಳೆಹಾನಿಯಿಂದ ಕಂಗೆಟ್ಟ ರೈತ,ವಿಶೇಶ ಪ್ಯಾಕೇಜ್‌ ಗೆ ಆಗ್ರಹ

ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.

ತುಸು ಕಡಿಮೆಯಾದ ಕರಾವಳಿ,ಮಲೆನಾಡಿನ ಮಳೆ ಸ್ಥಳಿಯರಿಗೆ ಹಿತಾನುಭವ ನೀಡತೊಡಗಿದೆ. ಈ ವರ್ಷಾವಧಿಗೆ ಮೊದಲೇ ಪ್ರಾರಂಭವಾಗಿದ್ದ ಮುಂಗಾರು ಮಳೆ ಕೃಷಿಕರಿಗೆ ಗೊಂದಲ ಹುಟ್ಟಿಸಿತ್ತು. ಬಿತ್ತನೆಗೆ ಅನುಕೂಲವಾಗದೆ ನಂತರ ಮಳೆಯ ಆರ್ಭಟದಲ್ಲಿ ಕೃಷಿಕ್ಷೇತ್ರ ಹಸನು ಮಾಡಲಾರದೆ ಕಂಗೆಟ್ಟಿದ್ದ ರೈತನಿಗೆ ಜುಲೈ,ಆಗಸ್ಟ್‌ ನ ಮಳೆ ಸಂಕಷ್ಟ ತಂದಿಟ್ಟಿತ್ತು.ಜುಲೈ ತಿಂಗಳಲ್ಲಿ ಭತ್ತದ ಬಿತ್ತನೆ, ನಾಟಿ ಕೆಲಸ ಮಾಡುತಿದ್ದ ರೈತರಿಗೆ ಈ ವರ್ಷದ ಮಳೆ ಈ ಕೆಲಸಗಳಿಗೆ ಅನುಕೂಲ ಮಾಡಿಕೊಡಲಿಲ್ಲ.


ಇದೇ ಅವಧಿಯಲ್ಲಿ ಅಡಿಕೆ ಗೊನೆಗಳಿಗೆ ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರರಿಗೆ ಅವಶ್ಯ ಸಮಯದಲ್ಲಿ ಅಡಿಕೆಗೆ ಮದ್ದು ಸಿಂಪಡನೆ ಮಾಡಲು ಅನುಕೂಲವಾಗಲಿಲ್ಲ. ಆಗಸ್ಟ್‌ ತಿಂಗಳ ಮಧ್ಯಾಂತರದ ನಂತರ ನಿಂತು ನೋಡಿದರೆ ಈ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ೨೫ ಶೇ ಕಡಾ ಹೆಚ್ಚುವರಿ ಮಳೆ ಈಗಾಗಲೇ ಸುರಿದಿದೆ. ಪ್ರತಿವರ್ಷ ಈ ಅವಧಿಯಲ್ಲಿ ನೂರಕ್ಕೆ ಪ್ರತಿಶತ ೯೦ ರಷ್ಟು ಬಿತ್ತನೆಯಾಗುತಿದ್ದ ಭತ್ತದ ಬೆಳೆ ಪ್ರದೇಶದಲ್ಲಿ ಈ ವರ್ಷ ಅರ್ಧಕ್ಕರ್ಧ ಬಿತ್ತನೆ,ನಾಟಿ ಕೆಲಸ ಮುಗಿದಿಲ್ಲ.


ಆಗಷ್ಟ್‌ ತಿಂಗಳಲ್ಲಿ ನೂರಕ್ಕೆ ನೂರರಷ್ಟು ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರ ಈ ವರ್ಷ ಸೂಕ್ತ ಸಮಯದಲ್ಲಿ ಮದ್ದು ಸಿಂಪಡಣೆ ಮಾಡದೆ ಅಡಿಕೆಗೊನೆಗಳು ಕೊಳೆಗೆ ತುತ್ತಾಗಿವೆ.


ಅವಶ್ಯ,ಅಗತ್ಯ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡಿದ ಮಳೆ ಈಗ ತುಸು ನಿಂತಿದೆ. ಆದರೆ ವಿಳಂಬವಾದ ಕೃಷಿ ಚಟುವಟಿಕೆ ಈ ವರ್ಷಕ್ಕೆ ಹಾನಿಯ ಮುನ್ಸೂಚನೆ ನೀಡಿದೆ.
ಬಿತ್ತನೆಯಾಗದ ಭತ್ತ ದ ಗದ್ದೆಗಳು, ಮದ್ದು ಹೊಡೆಯದ  ಅಡಿಕೆ ತೋಟಗಳು ಈ ವರ್ಷ ರೈತನ ಕೈ ಹಿಡಿಯುವ ಸಾಧ್ಯತೆ ಕ್ಷೀಣಿಸಿದೆ.ಹಿಂಗಾರು ಮಳೆಯ ಈ ಅವಧಿಯಲ್ಲಿ ಪ್ರತಿವರ್ಷ ಖುಷಿಯಿಂದ ಇರುತಿದ್ದ ರೈತ ಈ ವರ್ಷ ಮುಂದೇನು ಎನ್ನುವ ಆತಂಕದಲ್ಲಿದ್ದಾನೆ. ವಾರ್ಷಿಕ ಕೃಷಿ ಚಟುವಟಿಕೆಗಳ ಸರಾಸರಿ ಪ್ರಗತಿ ಲೆಕ್ಕದಲ್ಲಿ ಕೂಡಾ ಸರ್ಕಾರದ ವರದಿ ನಿರಾಶಾದಾಯಕವಾಗಿದೆ.


ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ. ಆದರೆ ಈ ವಿಮಾ ಪರಿಹಾರಗಳು ಸಿಗುವುದು ಮುಂದಿನ ವರ್ಷಕ್ಕೆ ಈ ಅನಿವಾರ್ಯತೆಯಲ್ಲಿ ಸರ್ಕಾರ ಬೆಳೆನಷ್ಟದ ಸರ್ಕಾರದ ವಿಶೇಶ ಪ್ಯಾಕೇಜ್‌ ಗೆ ಆಗ್ರಹಿಸಿದ್ದಾನೆ.ಸರ್ಕಾರ ರೈತನ ಸಂಕಷ್ಟ ಅರಿತುಪ್ಯಾಕೇಜ್‌ ನ ಪರಿಹಾರದ ಭರವಸೆ ನೀಡುವುದೇ ಈಗಿರುವ ತಾತ್ಕಾಲಿಕ ಪರಿಹಾರವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *