![](https://i0.wp.com/samajamukhi.net/wp-content/uploads/2022/08/IMG-20220811-WA0069.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![Thumbnail image](https://www.etvbharat.com/_next/image?url=https%3A%2F%2Fetvbharatimages.akamaized.net%2Fetvbharat%2Fprod-images%2F768-512-16418996-thumbnail-3x2-news.jpg&w=3840&q=75)
ಮುಳುಗುತ್ತಿದ್ದ ಬೋಟ್ನಿಂದ 30 ಮೀನುಗಾರರ ರಕ್ಷಣೆ: ಹಿಡಿದ ಮೀನು ಸಮುದ್ರಕ್ಕೆ!
30 ಜನ ಮೀನುಗಾರರನ್ನು ಒಳಗೊಂಡ ಬೋಟ್ ಮುಳುಗಿದ್ದು, ಮೀನುಗಾರರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, 30 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ಬೈತಖೋಲ ಬಂದರಿಗೆ ಕರೆತರಲಾಗಿದೆ.
ಹಿಡಿದ ಮೀನುಗಳನ್ನು ಸಮುದ್ರಕ್ಕೆ ಚೆಲ್ಲುತ್ತಿರುವ ಮೀನುಗಾರರು
ವಾಮನ ಹರಿಕಂತ್ರ ಎಂಬುವವರಿಗೆ ಸೇರಿದ ಜಲ ಪದ್ಮಾವತಿ ಬೋಟ್ ಮೀನುಗಾರಿಕೆ ನಡೆಸಿ ವಾಪಸ್ ಆಗುತ್ತಿದ್ದಾಗ ರಂಧ್ರ ಉಂಟಾಗಿ ನೀರು ತುಂಬಿದೆ. ಬೋಟ್ ಮುಳುಗುತ್ತಿರುವ ಕಾರಣ ಹಿಡಿದ ಮೀನುಗಳನ್ನು ಮೀನುಗಾರರು ಸಮುದ್ರಕ್ಕೆ ಚೆಲ್ಲಿದ್ದಾರೆ. ಅಂದಾಜು 30 ಟನ್ ಮೀನುಗಳನ್ನು ಹಿಡಿದು ವಾಪಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಇತರ ಬೋಟ್ಗಳ ಸಹಾಯದಿಂದ ಬಂದರಿಗೆ ಬೋಟ್ ಎಳೆದು ತಂದಿದ್ದಾರೆ. ಘಟನೆಯಿಂದ ಅಂದಾಜು ₹ 50 ಲಕ್ಷ ಹಾನಿಯಾಗಿದೆ ಎಂದು ಹೇಳಲಾಗಿದೆ. (ಈಟಿಬಿಕೆ)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)