ವಿಮಾ ಕಂಪನಿ ವಿರುದ್ಧ ಸಿದ್ಧಾಪುರ ರೈತರ ದಿಗ್ವಿಜಯ! ತ್ಯಾಗಲಿ ಸೊ ಸೈಟಿ ಸಾಧನೆ

# ರೈತರು ಕಂಪನಿಗೆ ಪಾವತಿಸಿದ ವಿಮಾ ಕಂತು ಗುಂಟೆಗೆ ರೂ.೬೫,

# ೨೩೨ ರೈತರು ಪ್ರತ್ಯೇಕವಾಗಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಗ್ರಾಹಕರ ನ್ಯಾಯಾಲಯ ವಿಮಾ ಕಂಪನಿಗಳ ಸೇವಾ ನ್ಯೂನ್ಯತೆ ಎತ್ತಿ ಹಿಡಿದಿದೆ.

# ಪಿರ್ಯಾದುದಾರರೆಲ್ಲರಿಗೂ ಗುಂಟೆಗೆ ೫೧೮ ರೂ ಗಳಿಗೆ ಶೇ,೬ ಬಡ್ಡಿದರ ಸೇರಿಸಿ ನೀಡಲು ತೀರ್ಪು.

# ಕಂಪನಿಯ ಸೇವಾನ್ಯೂನ್ಯತೆಗೆ ದಂಡವಾಗಿ ಪ್ರತಿರೈತರಿಗೆ ೨ ಸಾವಿರ ರೂ. ದಂಡವಾಗಿ ನೀಡಲು ಆದೇಶ.

ಭಾರತದ ಬೆನ್ನುಹುರಿ ರೈತರು ಅಸಂಘಟಿತ ಕಾರ್ಮಿಕರು. ರೈತರ ವಿಚಾರದಲ್ಲಿ ಎಲ್ಲರದೂ ಉಪೇಕ್ಷಿತ ದೃಷ್ಟಿ, ಆದರೆ ರೈತರಿರಲಿ ಯಾರೇ ಇರಲಿ ಛಲದಿಂದ ಹೋರಾಟಕ್ಕಿಳಿದರೆ ಯಶಸ್ಸು ಸಾಧ್ಯ ಎಂದು ತೋರಿಸಿಕೊಟ್ಟ ರೈತರ ಸಾಹಸಗಾಥೆಯೇ ಈ ವರದಿಯ ವಸ್ತು.

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಪ್ರತಿವರ್ಷ ಬೆಳೆವಿಮೆ ಎನ್ನುವುದು ಮರೀಚಿಕೆ. ಹಲವು ವರ್ಷಗಳಿಂದ ಬೆಳೆವಿಮೆ ಕಂತು ತುಂಬಿ ಮೋಸಹೋಗುವ ರೈತರಂತೆ ತ್ಯಾಗಲಿ ಸೇವಾ ಸಹಕಾರಿ ಸಂಘದ ಸದಸ್ಯರು ಪ್ರತಿವರ್ಷ ತಮ್ಮ ಬೆಳೆ ವಿಮೆ ತುಂಬಿ ಸುಮ್ಮನಾಗುತಿದ್ದರು. ಬೇಳೆವಿಮೆ ಮಾಡಿಸಿಕೊಳ್ಳುವ ಕಂಪನಿಗಳು ಪ್ರತಿವರ್ಷ ಒಂದಲ್ಲಾ ಒಂದು ಕಾರಣ ಹೇಳಿ ರೈತರಿಗೆ ಪಂಗನಾಮ ಹಾಕುತಿದ್ದರು.


ಈ ಬಗ್ಗೆ ಬೇಸತ್ತ ಸಿದ್ಧಾಪುರ ತ್ಯಾಗಲಿ ಭಾಗದ ನಾಣಿಕಟ್ಟಾ ಅಡಕೆ ರೈತರು ತಮ್ಮ ಸ್ಥಳಿಯ ತ್ಯಾಗಲಿ ಸೇವಾ ಸಹಕಾರಿ ಸಂಘದ ಮೂಲಕ ಪ್ರತಿಷ್ಟಿತ ಕಂಪನಿ ಬೆಳೆವಿಮೆ ಹಣ ತುಂಬಿಸಿಕೊಂಡು ತಮಗೆ ಮೋಸ ಮಾಡಿದೆ ಎಂದು ಗ್ರಾಹಕರ ವೇದಿಕೆಗೆ ದೂರುಕೊಟ್ಟರು. ೨೦೧೯ ನೇ ಇಸ್ವಿಯಲ್ಲಿ ತ್ಯಾಗಲಿ ಸೇವಾ ಸಹಕಾರಿ ಸಂಘದ ಎರಡು ನೂರಕ್ಕೂ ಹೆಚ್ಚು ರೈತರಿಂದ ಬೆಳೆವಿಮೆ ತುಂಬಿಸಿಕೊಂಡ ಕಂಪನಿ ಬೆಳೆಹಾನಿಗೆ ಪರಿಹಾರ ನೀಡಿರಲಿಲ್ಲ. ಈ ವಿಚಾರವನ್ನು ಗ್ರಾಹಕರ ನ್ಯಾಯಾಲಯಕ್ಕೆ ಒಯ್ದ ಸಂಘ ಬೆಳೆವಿಮೆ ಕಂಪನಿ ವಿರುದ್ಧ ಕಾರವಾರದ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆದಿದೆ.


ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರದ ಮೊತ್ತ ಗುಂಟೆಗೆ ೭೦೦ ರೂಪಾಯಿ ಜೊತೆಗೆ ರೈತರಿಗಾದ ಮಾನಸಿಕ ಹಾನಿಗೆ ತಲಾ ಎರಡು ಸಾವಿರ ದಂಡ ಕೊಡಬೇಕೆಂದು ಕಂಪನಿ ವಿರುದ್ಧ ತೀರ್ಪು ನೀಡಿರುವ ನ್ಯಾಯಾಲಯ ಒಂದು ತಿಂಗಳ ಅವಧಿ ಒಳಗೆ ಈ ಪ್ರಕ್ರೀಯೆ ಮುಗಿಸುವಂತೆ ಆದೇಶಿಸಿದೆ. ಭಾರತದಲ್ಲಿ ಬೆಳೆವಿಮೆ ಹೆಸರಲ್ಲಿ ಹಲವು ವರ್ಷಗಳಿಂದ ರೈತರಿಗೆ ಕಂಪನಿಗಳು ಮೋಸ ಮಾಡುತ್ತಿವೆ. ಈ ಮೋಸದ ಜಾಲದ ವಿರುದ್ಧ ಕೆಳಹಂತದಲ್ಲಿ ನ್ಯಾಯ ಪಡೆದಿರುವ ತ್ಯಾಗಲಿ ಸೇವಾ ಸಹಕಾರಿ ಸಂಘ ನಾಣಿಕಟ್ಟಾದ ರೈತರು ಸರ್ಕಾರ ಮತ್ತು ಖಾಸಗಿ ಕಂಪನಿಗಳ ಮೋಸದಾಟವನ್ನು ಬಯಲು ಮಾಡಿದ್ದಾರೆ.


ಈ ವಿಚಾರದಲ್ಲಿ ವಿಮಾ ಕಂಪನಿಯ ಮುಂದಿನ ಕಾರ್ಯತಂತ್ರಗಳ ವಿರುದ್ಧ ಹೋರಾಡುವುದಾಗಿಯೂ ತಿಳಿಸಿದ್ದಾರೆ. ರೈತರು ಸಾಮೂಹಿಕವಾಗಿ ಸಂಘಟಿತರಾಗಿ ತಮಗಾದ ಅನ್ಯಾಯದ ವಿರುದ್ಧ ಹೋರಾಟಮಾಡಿ ಗೆದ್ದ ದೃಷ್ಟಾಂತ ಬಲು ಅಪರೂಪ. ಈ ಸಾಹಸ ಮಾಡಿದ ತ್ಯಾಗಲಿ ಸೇವಾಸಹಕಾರಿ ಸಂಘದ ಎನ್.ಬಿ.ಹೆಗಡೆ ರೈತರ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಸ್ಥೆ ಸದಾ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಕ್ಕೆ ಇದೊಂದು ಉದಾಹರಣೆಯಷ್ಟೇ ಎಂದಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *