ಒಬ್ಬರೊಳಗೆ ಒಂದೊಂದು ಕತೆ! ಮನುಜನಿಗೇನಾಗಿದೆ? ಯಾರಲ್ಲಾದರೂ ಉತ್ತರವಿದೆಯಾ?

ಒಂದು ಫೋಟೋ ನೋಡಿದೆ! ಅದು ಪ್ಲೇಟೊನದೋ? ಚಾರ್ಲಿಯದೋ? ಉಹೂ ಇವರಿಬ್ಬರದೂ ಅಲ್ಲ ಅದು, ಅದೇ ಲಿಂಕನ್‌ ಅವರದು ನನಗೆ ಹೀಗೇಕಾಗುತ್ತಿದೆ? ಪ್ಲೇಟೋನ ಕನಸಿನ ರಾಜ್ಯ ಓದಿದ ನಮಗೆ ಪ್ಲೋಟೋ ಪಾಠವಾಗಿ ಕಾಡುವಷ್ಟು ಚಿತ್ರವಾಗಿ ಕಾಡಲಾರ?

ಆರ್ಕಿಮಿಡೀಸ್‌, ಸ್ಟೀಲಬರ್ಗ್‌, ಸೇಕ್ಸಫಿಯರ್‌, ಗೆಲಿಲಿಯೋ, ಮಾಂಟೋ? ಶೆಲ್ಲಿ,ಸೀಜರ್‌ ಒಬ್ಬರೂ ಚಿತ್ರಪಟ ವಾಗಿ ದಕ್ಕದವರೂ ಅವರ ಚಿಂತನೆಯಿಂದ ಎದೆಗಿಳಿಯುತ್ತಾರೆ. ಬಸವಣ್ಣನಂಥ ಬಸವಣ್ಣ ಆರೋಪಕ್ಕೆ ತುತ್ತಾಗಿರಲಿಲ್ಲವೆ? ಚನ್ನಬಸವಣ್ಣ ಉಳವಿಯತ್ತ ಓಡಿ ಬಂದು ಅಡಗಿಕೊಳ್ಳಲಿಲ್ಲವೆ? ಜೇಸಸ್‌, ಟಾಲ್ಸ್ಟಾಯ್‌,ಇಬ್ನತೂತ,ಮಾರ್ಕೆಜ್‌,ನೀಷೆ,ಬ್ರೆಕ್ಟ್‌ ಎಷ್ಟೊಂದು ಸಾಧಕರು ನಮ್ಮನ್ನು ಕಾಡಲೆಂದೇ ಬದುಕಿಹೋದರು.

ಅಮೇರಿಕಾದ ಸೆನೆಟ್‌ ನಲ್ಲಿ ಚಪ್ಪಲಿಹೊಲಿಯುವವನ ಮಗ ಎಂದು ಮೂದಲಿಸಿಕೊಂಡ ಲಿಂಕನ್‌ ಡೊಂಟ್‌ ಕೇರ್‌ ಮಾಡಿರಲಿಲ್ಲವೆ? ಇದೇ ಸಂಪ್ರದಾಯ,ಸಂಸ್ಕಾರಕ್ಕೆ.

ಒನ್ಸ ಅಗೇನ್… ನನಗೆ ಕಾಡುತ್ತಿರುವುದು ನಾನು ಹೇಳಹೊರಟಿರುವುದು ಒಬ್ಬರೊಳಗೆ ಒಂದಕ್ಕಿಂತ ಹೆಚ್ಚು ಕತೆಗಳಿರುತ್ತವೆ ಎಂಬುದನ್ನು.

ಕಿರಾಣಿ ಅಂಗಡಿಯ ಸ್ನೇಹಿತ ತಾನು ನಟ ದರ್ಶನ್‌ ಜೊತೆ ಜಿಮ್‌ ಮಾಡುತಿದ್ದುದನ್ನು ಹೇಳಿದ, ಹೋಟೆಲ್‌ ನ ಕುಮಾರ ತಾನು ಕುಡಿಯದಿರುವುದಕ್ಕೆ ಇರುವ ಪ್ರಬಲ ಕಾರಣ ಹೇಳಿದ.

ಗಾಂಧಿ ಹುಟ್ಟುಫಕೀರ ಎಂದು ಹೇಳಿಕೊಳ್ಳದೆ ಉಟ್ಟ ಬಟ್ಟೆ ಬಿಚ್ಚಿಟ್ಟು ಅರೆ ಬತ್ತಲೆ ಫಕೀರನಾಗಿ ದೇಶ ಸುತ್ತಿದನಲ್ಲ ಅದಕ್ಕೇನಾದರೂ ಸ್ವಾರ್ಥವಿತ್ತೆ? ಬೆತ್ತಲೆಫಕೀರ ಫೈಜ್‌ ಬರೆದು ತೀರಿದನಲ್ಲ ಅದಕ್ಕೆನಾದರೂ ಹಠವಿರದಿದ್ದರೆ ಸಾಧ್ಯವಿತ್ತೆ??

ಜನ ಪ್ರತಿಷ್ಠೆಗಾಗಿ, ಅಹಂಕಾರಕ್ಕಾಗಿ,ದ್ವೇಶ,ಹಠ-ಛಲಗಳಿಗಾಗಿ ಬದುಕುತ್ತಾರೆ ಎಂದರಲ್ಲ ಲಂಕೇಶ್‌ ಅವರ ಮಾತಿನಲ್ಲೇನಾದರೂ ಲವಲೇಶವಾದರೂ ಕಲ್ಮಶವಿತ್ತಾ?

ಬಡ ಜೋಗಿಯ ಹಾಡು,ಹಿತ್ತಲ ಹೂವು ಯಾರ ಹಂಗಿಗೆ ಹಂಬಲಿಸುತ್ತವೆಯಾ?

ತೇಜಸ್ವಿ,ಕುವೆಂಂಪು ಬಗ್ಗೆ ಅವರ ನೆರೆಹೊರೆಯವರೇ ಮೂಗು ಮುರಿದಿದ್ದರು ಈ ಅಪ್ಪ-ಮಗ ಕನ್ನಡಕ್ಕೆ ಕೊಟ್ಟದ್ದನ್ನು ಕನ್ನಡದ ಯಾವೊಬ್ಬ ಅಪ್ಪ ಮಗ ಕೊಟ್ಟಿದ್ದಾರೆಯೆ? ಕ್ಷಮಿಸಿ ರಾಜ್‌ ಕುಮಾರ ಮತ್ತವರ ಕುಟುಂಬ ಬಿಟ್ಟು.

ನನ್ನ ಕೋಲಶಿರ್ಸಿ ಕ್ರಾಸ್‌ ಗೂ ತೇಜಸ್ವಿಯವರ ಜುಗಾರಿಕ್ರಾಸ್‌ ಗೂ ಎಲ್ಲಿದೆಲ್ಲಿಯ ಸಂಬಂಧ? ಆದರೆ ನಾವೆಲ್ಲ ಚಿದಂಬರ ರಹಸ್ಯದಂತೆ ಒಟ್ಟಾಗಿ ಅಲ್ಲದಿದ್ದರೂ ಬಿಡಿಯಾಗಿ, ಇಡಿಯಾಗಿ ಕ್ರಾಂತಿ ಮಾಡಲು ಹೊರಟವರಲ್ಲವೆ?

ವ್ಯಾವಹಾರಿಕ ಬುದ್ಧಿವಂತರಿಗೆ ಇದು ಸಾಧ್ಯವೆ?

ಒಟ್ಟಾರೆ ಕ್ರಾಂತಿಯಾಗಬೇಕು ಅಷ್ಟೇ.

ತ್ಯಾಗಲಿ ಸೊಸೈಟಿಯ ರೈತರು ಸರ್ಕಾರದ ಏಜೆಂಟ್‌ ಗಳಾದ ವಿಮಾ ಕಂಪನಿಯನ್ನೇ ಹೆದರಿಸಿದರು. ನಮ್ಮ ಜನಪ್ರತಿನಿಧಿಗಳು ಮತದಾರರ ಕಷ್ಟಕ್ಕೆ ಮರಗದೆ ಅಂಬಾನಿ, ಅದಾನಿಗಳ ಸೇವಕರಾದರು! ಮದ್ದುಂಟೆ ಈ ಮಾರಕ ರೋಗಕ್ಕೆ?

ಗುಜರಾತಿನಲ್ಲಿ ಗೆದ್ದವರು ಹಿಮಾಚಲದಲ್ಲಿ ಮುಗ್ಗರಿಸಿದ್ದನ್ನು ಹೇಳುವ ಗಂಡೆದೆ ಇಲ್ಲದ ಮಾಧ್ಯಮಗಳು ಸರ್ಕಾರದ ಚಮಚಾಗಿರಿ ಮಾಡುತ್ತಾ ಜನದ್ರೋಹ ಮಾಡುತ್ತಿಲ್ಲವೆ?

ಮತಮಾರಿಕೊಳ್ಳುವ ಮತದಾರ ಶರಣಾದಾಗ ಈ ವಿಚಿತ್ರಗಳು ಸಂಭವಿಸುತ್ತವೆ. ಆಗ ನೆರವಿಗೆ ಬರುವವರೆ… ಮೊನಾಲಿಸಾ, ಕ್ಲಿಯೋಪಾತ್ರ, ಹೀರೋ-ರಾಂಜಾ, ಟಾಮ್‌ & ಜೆರ್ರಿ, ಲಿಂಕನ್.‌ ಪ್ಲೇಟೋ, ಗಾಂಧಿ, ಮಂಡೇಲಾ,ವಿವೇಕಾನಂದ.

ಕಸಿವಿಸಿಯಾಯಿತೆ?

ಇನ್ನೂ ಸಾಗುವುದಿದೆ ಹಿತ್ತಲ ಗಿಡ ಈಗಲೂ ಹೂ ಬಿಡುತ್ತಿದೆ. ನದಿ ತನ್ನ ಪಥದಲ್ಲೇ ಸಾಗುತ್ತಿದೆ. ಸಮುದ್ರ ಅಗಾಗ ಸ್ಥಮಿತ ಕಳೆದುಕೊಂಡರೂ ನಿಯಂತ್ರಣದಲ್ಲಿದೆ. ಗಾಳಿ, ಬೆಳಕು, ಮರ,ಬಿಸಿಲು ತಮ್ಮ ಪಥ ಬದಲಿಸಿಲ್ಲ. ಮನುಜನಿಗೇನಾಗಿದೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *