ಇಲ್ಲಿವೆ ಪಶ್ಚಿಮಘಟ್ಟದ ನೂರಾರು ಪ್ರಭೇದ

ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ.
ಒಂದು ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟ್ರೀಪಾರ್ಕ್ ಅಭಿವೃದ್ಧಿಯಿಂದ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ರಾಕ್‍ಗಾರ್ಡನ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಈ ಉದ್ಯಾನವನ ಉದ್ಧಾರವಾದರೆ ಚಂದ್ರಗುತ್ತಿ,ಜೋಗ ಕ್ಕೆ ಬರುವ ಪ್ರವಾಸಿಗರಿಗೆ ವಿಶ್ರಾಂತಿ, ವಿಹಾರದ ತಾಣವಾಗಿಯೂ ಅನುಕೂಲವಾಗುತ್ತದೆ.
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್‍ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.
ಇದರ ನಿರ್ವಹಣೆ ಆ ಉದ್ಯಾವನದ ಉತ್ಫನ್ನದಲ್ಲೇ ನಡೆಯಬೇಕು ಎಂಬುದು ಸರ್ಕಾರದ ನೀತಿ-ನಿಯಮ.
ಆದರೆ ಈಗ ಈ ಉದ್ಯಾನವನದ ವೃಕ್ಷ ಸಂಕುಲ ಫಲ ನೀಡುವಷ್ಟು ಬೆಳೆದಿಲ್ಲ, ಪ್ರವಾಸಿಗರು, ಭೇಟಿ ನೀಡುವವರಿಗೆ ಪ್ರವೇಶ ಶುಲ್ಕ ಹಾಕಿದರೆ ಈಗ ಬರುವವರೂ ಬರಲಾರರೇನೋ ಎನ್ನುವ ಅನುಮಾನ ಅರಣ್ಯ ಇಲಾಖೆಗೆ. ಹಾಗಾಗಿ ಪಟ್ಟಣದ ಸಮೀಪ, ಜೋಗ ರಸ್ತೆಗೂ ಹತ್ತಿರ, ಜನಸಂಪರ್ಕದ ಕುಮಟಾ ರಸ್ತೆಗೆ ತಾಕಿಕೊಂಡಿದ್ದರೂ ಈ ಟ್ರೀಪಾರ್ಕ್ ಬಗ್ಗೆ ಜನರಿಗೆ ತಿಳಿದಿಲ್ಲ.
ಕೃತಕ ಕೆರೆಗಳು, ಕೃತಕ ಉದ್ಯಾನ ಜೊತೆಗೆ ನೂರಾರು ಜಾತಿಯ ಸಸ್ಯ ವೈವಿಧ್ಯ ಈ ಟ್ರೀಪಾರ್ಕ್ ನ ವಿಶೇಶ.
ಟ್ರೀಪಾರ್ಕ್ ಕಲ್ಫನೆಯಂತೆ ಅದನ್ನು ಅಭಿವೃದ್ಧಿಪಡಿಸಲು ಈಗ ಸಕಾಲ.
ಈ ಬಗ್ಗೆ ಸರ್ಕಾರಕ್ಕೆ ಹೊಸ ಪ್ರಸ್ತಾಪ ಒಂದನ್ನು ಕಳುಹಿಸುತ್ತೇವೆ. ಇಲಾಖೆ,ಸರ್ಕಾರದ ನಿರ್ದೇಶನ,ನಿಯಮದಂತೆ ಅದನ್ನು ಅಭಿವೃದ್ಧಿಪಡಿಸಿ ಪ್ರಚಾರ ನೀಡಿದರೆ ಅನುಕೂಲ.

  • ಅಬ್ದುಲ್‍ಅಜೀಜ್,
    -ಉಪ ಅರಣ್ಯ ಸಂರಕ್ಷಣಾಧಿಕಾರಿ
    ಸಿದ್ಧಾಪುರ ಒಂದು ಮಿನಿ ಇಂಡಿಯಾ. ಇಲ್ಲಿ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳೆಲ್ಲಾ ಆಗಿ ಹೋಗಿದ್ದಾರೆ.
    ಇತಿಹಾಸ, ಚರಿತ್ರೆ ಇಲ್ಲಿಯ ವೈಶಿಷ್ಟ್ಯ, ಜೀವವೈವಿಧ್ಯಗಳ ಒಟ್ಟಂದದ ಒಕ್ಕೂಟ ಆದರೆ ಹೊರಗಿನವರೊಂದಿಗೆ ಒಳಗಿನವರಿಗೆ ನಮ್ಮ ವಿಶೇಶ, ಅನನ್ಯತೆ, ಅಸ್ಮಿತೆಗಳನ್ನು ಪರಿಚಯಿಸಬಹುದು. ಇಲ್ಲಿಯ ಮುಂದಾಳುಗಳು ಇವೆಲ್ಲವನ್ನೂ ಒಂದೇ ಆವರಣದಲ್ಲಿ ತರುವ ಐತಿಹಾಸಿಕ ಮಹತ್ವದ ಕೆಲಸ ಮಾಡಬೇಕಿದೆ. ಅದಕ್ಕೆ ಸಾರ್ವಜನಿಕ ಸಹಕಾರವೂ ದೊರೆಯಬೇಕಿದೆ.
    -ಸುಬ್ರಾಯ ಮತ್ತೀಹಳ್ಳಿ, ಸಾಹಿತಿಗಳು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *