ಸಿದ್ದಾಪುರ
ಆಶಾ ಕಿರಣ ಟ್ರಸ್ಟ ರಜತ ಮಹೋತ್ಸವ ಹಾಗೂ ಜಾನಪದ ಕಲೋತ್ಸವ ಫೆ.೩ ಮತ್ತು ೪ರಂದು ಜಗದ್ಗುರು ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಜರುಗಲಿದೆ ಎಂದು ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಫೆ.೩ರಂದು ಬೆಳಿಗ್ಗೆ ೧೦.೪೫ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಆಶಾಕಿರಣ ಟ್ರಸ್ಟನ ಬೆಳ್ಳಿಹಬ್ಬದ ಸಂಸ್ಮರಣಾ ಭವನದ ಶಂಕುಸ್ಥಾಪನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸುವರು. ಜಾನಪದ ಕಲೋತ್ಸವವನ್ನು ಸಚಿವ ಸುನೀಲಕುಮಾರ ಉದ್ಘಾಟಿಸುವರು. ದಿ|ಅರವಿಂದ ಪಿತ್ರೆ ಫೋಟೊದ ಅನಾವರಣವನ್ನು ಪ್ರಸಿದ್ಧ ನಟ ಶ್ರೀನಾಥ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್, ಪ್ರಸಿದ್ಧ ಚಲನಚಿತ್ರ ನಟ ನಿರ್ನಳ್ಳಿ ರಾಮಕೃಷ್ಣ ಪಾಲ್ಗೊಳ್ಳಲಿದ್ದು ಟ್ರಸ್ಟನ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆವಹಿಸುವರು. ಮಧ್ಯಾಹ್ನ ೩ರಿಂದ ಯಕ್ಷ ತರಂಗಿಣಿ ಕಲಾಸಂಘದಿಂದ ಮಕ್ಕಳ ಯಕ್ಷಗಾನ, ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಬಿ.ಆರ್.ಲಕ್ಷö್ಮಣರಾವ್, ಸ್ಥಳೀಯ ಜೆ.ಎಂ.ಎಪ್.ಸಿ.ನ್ಯಾಯಾಧೀಶ ತಿಮ್ಮಯ್ಯ ಜಿ.ಪಾಲ್ಗೊಳ್ಳುವರು.
ಫೆ.೪ರ ಸಂಜೆ ೪.೩೦ಕ್ಕೆ ಶಿರಳಗಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಉದ್ಯಮಿ ಮುರಳಿಧರ ಪ್ರಭು ಕುಮಟಾ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಪಾಲ್ಗೊಳ್ಳಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ| ರಾಮಚಂದ್ರ ಕೆ. ಗೌರವ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಡಾ|ರವಿ ಹೆಗಡೆ ಹೂವಿನಮನೆ ವಹಿಸುವರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗದ ಅಂಧ ಶಾಲಾ ಮಕ್ಕಳ ಜಾನಪದ ಕಲಾ ಸ್ಪರ್ಧೆ, ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಂಗೀತ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಟ್ರಸ್ಟಿನ ಉಪಾಧ್ಯಕ್ಷ ಸಿ.ಎಸ್.ಗೌಡರ್, ಪದಾಧಿಕಾರಿಗಳಾದ ವಾಸುದೇವ ಶೇಟ್, ಜಿ.ಜಿ.ಹೆಗಡೆ,ಉಮಾ ಉದಯ ನಾಯಕ, ಸುಧೀರ ಬೆಂಗ್ರೆ ಇದ್ದರು.