ಒಂದು ಡಜನ್‌ ಹಿರಿಯರಿಗೆ ಟಿಕೆಟ್‌ ಇಲ್ಲ! ಕಂಗಾಲಾದರಾ ಕಾಗೇರಿ?

ರಾಜ್ಯ ಬಿ.ಜೆ.ಪಿ.ಯಲ್ಲಿ ಹಲವು ಬದಲಾವಣೆಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರನ್ನು ಸೈಡ್‌ ಲೈನ್‌ ಮಾಡಲಾಗುತ್ತಿದೆ.

ರೈತ ಮುಖಂಡರಾಗಿ ರಾಜ್ಯದಲ್ಲಿ ಬಿ.ಜೆ.ಪಿ. ಬೆಳೆಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ದಿಡೀರ್‌ ಕೆಳಗಿಳಿದಾಗಲೇ ಯಡಿಯೂರಪ್ಪ ಭವಿಷ್ಯ ಸ್ಪಷ್ಟವಿತ್ತು. ಈಗ ಚುನಾವಣಾ ಹೊಸ್ತಿಲಲ್ಲಿ ಯಡಿಯೂರಪ್ಪ ಸೇರಿದಂತೆ ಕೆಲವು ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರನ್ನು ಹಿಂದಿನ ಸಾಲಿನಲ್ಲಿ ಕೂಡ್ರಿಸಲಾಗಿದೆ. ಹೀಗೆ ದಿಢೀರನೇ ಹಿಂದಿನ ಸಾಲಿಗೆ ಸರಿದ ನಾಯಕರಲ್ಲಿ ಸದಾನಂದ ಗೌಡ,ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ ಹೆಗಡೆ ಸೇರಿದಂತೆ ಕೆಲವು ಪ್ರಮುಖರು ಎನ್ನುವುದು ಗಮನಾರ್ಹ ವಿಷಯ.

ಈ ವಿಚಾರ ಮುಖ್ಯ ಭೂಮಿಕೆಯಲ್ಲೇ ಚರ್ಚೆಯಾಗುತಿದ್ದರೆ ತೆರೆಮರೆಯಲ್ಲಿ ಅಡ್ಡದಾರಿಯ ನಾಯಕ ಸಂತೋಷ ಚಿತಾವಣೆಯಿಂದ ಬಿ.ಜೆ.ಪಿ.ಯ ಹಿರಿಯ ನಾಯಕರು ವಿಶೇಶವಾಗಿ ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನೇ ಗುರಿಯಾಗಿಸಿ ೨೦೨೩ ರ ವಿಧಾನಸಭೆ ಚುನಾವಣೆಗೆ ಹೊಸ ತಂಡ ಕಟ್ಟುವ ತಯಾರಿ ನಡೆದಿದೆ ಎನ್ನುವುದು ಸಧ್ಯದ ವಿಚಾರ.

ಈ ವಿಚಾರದ ಹಿನ್ನೆಲೆಯಲ್ಲಿ ಆರ್. ಎಸ್.ಎಸ್.‌ ಮತ್ತು ಬಿಜೆ.ಪಿ.ಯ ನಿಯಂತ್ರಣ ಮಾಡುವ ಮಲೆನಾಡು, ಕರಾವಳಿಯ ಕುಟಿಲ ಮತಾಂಧರ ತಂಡವೊಂದು ನಾನಾವೇಶದಲ್ಲಿ ಕೆಸರಿನ ರಾಜಕಾರಣ ಮಾಡುತ್ತ ಈ ಬಾರಿ ನೇರ ಅಖಾಡ ಎಂದು ಸಿದ್ಧವಾಗುತ್ತಿದೆಯಂತೆ!

ಈ ಕುಟಿಲ ಶಕುನಿಗಳ ತಂಡದಲ್ಲಿ ಆರ್.‌ ಎಸ್.‌ ಎಸ್.‌ ಪರಿವಾರದ ಹಿನ್ನೆಲೆಯ ಕುಂಡೆ ಬಳಗವಿದ್ದು, ಈ ಬಳಗ ಕುಮಟಾವಿಧಾನಸಭಾ ಕ್ಷೇತ್ರ, ಭಟ್ಕಳ, ಶಿರಸಿ, ಯಲ್ಲಾಪುರಗಳಲ್ಲಿ ತಮ್ಮ ಬಳಗಕ್ಕೇ ಬಿ.ಜೆ.ಪಿ. ಟಿಕೇಟ್‌ ಕೊಡಬೇಕೆಂದು ಪಟ್ಟು ಹಿಡಿದಿದೆಯಂತೆ. ಈ ಬಳಗದ ಪ್ರಮುಖನಾಗಿರುವ ಪತ್ರಿಕೆ ಸಂಪಾದಕನೊಬ್ಬ ಬಿ.ಜೆ.ಪಿ. ಮಾತ್ರವಲ್ಲ ಕಾಂಗ್ರೆಸ್‌ ಟಿಕೇಟುಗಳೂ ನನ್ನ ತೀರ್ಮಾನದಂತೇ ಹಂಚಿಕೆಯಾಗಲಿದ್ದು ಕುಮಟಾದಿಂದ ತನಗೆ ತಪ್ಪಿದರೆ ಶಶಿಭೂಷಣ ಹೆಗಡೆ, ಶಿರಸಿ ಕ್ಷೇತ್ರದ ಟಿಕೇಟ್‌ ತನ್ನ ಮಾವ ತಲೆಮಾಸಿದ ಮಾಜಿ ಪತ್ರಕರ್ತನಾಗಿರುವ ಮತಾಂಧ ಆಶಾಢಭೂತಿಗೆ ತಪ್ಪಿದರೆ ಶಶಿಭೂಷಣ ಹೆಗಡೆಯವರಿಗೆ ನಮ್ಮ ಬಳಗದ ಮೂರು ಜನರಿಗೆ ಟಿಕೇಟ್‌ ಸಂತೋಷದಿಂದಲೇ ಸಿಗಲಿದೆ. ನಮಗೆ ಬೇಕಾದವರಿಗೇ ಕಾಂಗ್ರೆಸ್‌ ಟಿಕೇಟೂ ಸಿಗಲಿದೆ ಎಂದು ಬೈಟಕ್‌ ನಲ್ಲಿ ಬಾಯಿ ಬಿಟ್ಟಿದ್ದಾನಂತೆ!

ಈ ಹೊಸ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ,ಚುನಾವಣಾ ವಿದ್ಯಮಾನಗಳಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಸುರೇಶ್‌ ಕುಮಾರ್‌ ಸೇರಿದಂತೆ ಕೆಲವು ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನು ಹೊರಗಿಡಲಾಗಿದೆಯಂತೆ!

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಸಂಘಿಗಳು ಸ್ವಜನಪಕ್ಷಪಾತದ ಕುಟಿಲ ಬಳಗದ ಕುತಂತ್ರಿಗಳಿಗೆ ನೆರವಾಗಲು ಮೋದಿಯ ಹಿತ್ತಾಳೆ ಕಿವಿಗೂ ಹೂವು ಮುಡಿಸಿದ್ದಾರೆ ಎನ್ನಲಾಗಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಗಾಲಾಗಿರುವ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ, ಅರಗಜ್ಞಾನೇಂದ್ರ, ಸೇರಿದ ಕೆಲವು ಹಿರಿಯರ ತಂಡ ಬಿ.ಜೆ.ಪಿ.ಯ ಹೊಸ ವರಸೆ ತಮ್ಮ ಬುಡಕ್ಕೆ ಬಿಸಿ ನೀರು ಬಿಡುವ ಸಾಧ್ಯತೆ ಅರಿತು ಟಿಕೇಟ್‌ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಪ್ರಯಾಣ, ಪ್ರವಾಸ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಬಿ.ಜೆ.ಪಿ.ಯ ಸಿಂಪಥೈಸರ್‌ ಗಳಾಗಿ ಮಾಧ್ಯಮಗಳಲ್ಲಿ ಕೋಮುವಾದದ ರೋಗ ತುಂಬಿ ಸಂಘದ ಬಕೆಟ್‌ ಹಿಡಿದ ಲಾಭಕೋರ ಮತಾಂಧ ಬಳಗದ ಕುಟಿಲತೆ ಈಗ ಸ್ವಜಾತಿ,ಸ್ವಪರಿವಾರದ ನಾಯಕತ್ವ, ಮುಖಂಡತ್ವಕ್ಕೆ ಎರವಾಗಿರುವುದು ಸಾರ್ವಜನಿಕರ ವಿರೋಧಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *