ಒಂದು ಡಜನ್‌ ಹಿರಿಯರಿಗೆ ಟಿಕೆಟ್‌ ಇಲ್ಲ! ಕಂಗಾಲಾದರಾ ಕಾಗೇರಿ?

ರಾಜ್ಯ ಬಿ.ಜೆ.ಪಿ.ಯಲ್ಲಿ ಹಲವು ಬದಲಾವಣೆಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರನ್ನು ಸೈಡ್‌ ಲೈನ್‌ ಮಾಡಲಾಗುತ್ತಿದೆ.

ರೈತ ಮುಖಂಡರಾಗಿ ರಾಜ್ಯದಲ್ಲಿ ಬಿ.ಜೆ.ಪಿ. ಬೆಳೆಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ದಿಡೀರ್‌ ಕೆಳಗಿಳಿದಾಗಲೇ ಯಡಿಯೂರಪ್ಪ ಭವಿಷ್ಯ ಸ್ಪಷ್ಟವಿತ್ತು. ಈಗ ಚುನಾವಣಾ ಹೊಸ್ತಿಲಲ್ಲಿ ಯಡಿಯೂರಪ್ಪ ಸೇರಿದಂತೆ ಕೆಲವು ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರನ್ನು ಹಿಂದಿನ ಸಾಲಿನಲ್ಲಿ ಕೂಡ್ರಿಸಲಾಗಿದೆ. ಹೀಗೆ ದಿಢೀರನೇ ಹಿಂದಿನ ಸಾಲಿಗೆ ಸರಿದ ನಾಯಕರಲ್ಲಿ ಸದಾನಂದ ಗೌಡ,ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ ಹೆಗಡೆ ಸೇರಿದಂತೆ ಕೆಲವು ಪ್ರಮುಖರು ಎನ್ನುವುದು ಗಮನಾರ್ಹ ವಿಷಯ.

ಈ ವಿಚಾರ ಮುಖ್ಯ ಭೂಮಿಕೆಯಲ್ಲೇ ಚರ್ಚೆಯಾಗುತಿದ್ದರೆ ತೆರೆಮರೆಯಲ್ಲಿ ಅಡ್ಡದಾರಿಯ ನಾಯಕ ಸಂತೋಷ ಚಿತಾವಣೆಯಿಂದ ಬಿ.ಜೆ.ಪಿ.ಯ ಹಿರಿಯ ನಾಯಕರು ವಿಶೇಶವಾಗಿ ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನೇ ಗುರಿಯಾಗಿಸಿ ೨೦೨೩ ರ ವಿಧಾನಸಭೆ ಚುನಾವಣೆಗೆ ಹೊಸ ತಂಡ ಕಟ್ಟುವ ತಯಾರಿ ನಡೆದಿದೆ ಎನ್ನುವುದು ಸಧ್ಯದ ವಿಚಾರ.

ಈ ವಿಚಾರದ ಹಿನ್ನೆಲೆಯಲ್ಲಿ ಆರ್. ಎಸ್.ಎಸ್.‌ ಮತ್ತು ಬಿಜೆ.ಪಿ.ಯ ನಿಯಂತ್ರಣ ಮಾಡುವ ಮಲೆನಾಡು, ಕರಾವಳಿಯ ಕುಟಿಲ ಮತಾಂಧರ ತಂಡವೊಂದು ನಾನಾವೇಶದಲ್ಲಿ ಕೆಸರಿನ ರಾಜಕಾರಣ ಮಾಡುತ್ತ ಈ ಬಾರಿ ನೇರ ಅಖಾಡ ಎಂದು ಸಿದ್ಧವಾಗುತ್ತಿದೆಯಂತೆ!

ಈ ಕುಟಿಲ ಶಕುನಿಗಳ ತಂಡದಲ್ಲಿ ಆರ್.‌ ಎಸ್.‌ ಎಸ್.‌ ಪರಿವಾರದ ಹಿನ್ನೆಲೆಯ ಕುಂಡೆ ಬಳಗವಿದ್ದು, ಈ ಬಳಗ ಕುಮಟಾವಿಧಾನಸಭಾ ಕ್ಷೇತ್ರ, ಭಟ್ಕಳ, ಶಿರಸಿ, ಯಲ್ಲಾಪುರಗಳಲ್ಲಿ ತಮ್ಮ ಬಳಗಕ್ಕೇ ಬಿ.ಜೆ.ಪಿ. ಟಿಕೇಟ್‌ ಕೊಡಬೇಕೆಂದು ಪಟ್ಟು ಹಿಡಿದಿದೆಯಂತೆ. ಈ ಬಳಗದ ಪ್ರಮುಖನಾಗಿರುವ ಪತ್ರಿಕೆ ಸಂಪಾದಕನೊಬ್ಬ ಬಿ.ಜೆ.ಪಿ. ಮಾತ್ರವಲ್ಲ ಕಾಂಗ್ರೆಸ್‌ ಟಿಕೇಟುಗಳೂ ನನ್ನ ತೀರ್ಮಾನದಂತೇ ಹಂಚಿಕೆಯಾಗಲಿದ್ದು ಕುಮಟಾದಿಂದ ತನಗೆ ತಪ್ಪಿದರೆ ಶಶಿಭೂಷಣ ಹೆಗಡೆ, ಶಿರಸಿ ಕ್ಷೇತ್ರದ ಟಿಕೇಟ್‌ ತನ್ನ ಮಾವ ತಲೆಮಾಸಿದ ಮಾಜಿ ಪತ್ರಕರ್ತನಾಗಿರುವ ಮತಾಂಧ ಆಶಾಢಭೂತಿಗೆ ತಪ್ಪಿದರೆ ಶಶಿಭೂಷಣ ಹೆಗಡೆಯವರಿಗೆ ನಮ್ಮ ಬಳಗದ ಮೂರು ಜನರಿಗೆ ಟಿಕೇಟ್‌ ಸಂತೋಷದಿಂದಲೇ ಸಿಗಲಿದೆ. ನಮಗೆ ಬೇಕಾದವರಿಗೇ ಕಾಂಗ್ರೆಸ್‌ ಟಿಕೇಟೂ ಸಿಗಲಿದೆ ಎಂದು ಬೈಟಕ್‌ ನಲ್ಲಿ ಬಾಯಿ ಬಿಟ್ಟಿದ್ದಾನಂತೆ!

ಈ ಹೊಸ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ,ಚುನಾವಣಾ ವಿದ್ಯಮಾನಗಳಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಸುರೇಶ್‌ ಕುಮಾರ್‌ ಸೇರಿದಂತೆ ಕೆಲವು ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್‌ ಮುಖಂಡರನ್ನು ಹೊರಗಿಡಲಾಗಿದೆಯಂತೆ!

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಸಂಘಿಗಳು ಸ್ವಜನಪಕ್ಷಪಾತದ ಕುಟಿಲ ಬಳಗದ ಕುತಂತ್ರಿಗಳಿಗೆ ನೆರವಾಗಲು ಮೋದಿಯ ಹಿತ್ತಾಳೆ ಕಿವಿಗೂ ಹೂವು ಮುಡಿಸಿದ್ದಾರೆ ಎನ್ನಲಾಗಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಗಾಲಾಗಿರುವ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ, ಅರಗಜ್ಞಾನೇಂದ್ರ, ಸೇರಿದ ಕೆಲವು ಹಿರಿಯರ ತಂಡ ಬಿ.ಜೆ.ಪಿ.ಯ ಹೊಸ ವರಸೆ ತಮ್ಮ ಬುಡಕ್ಕೆ ಬಿಸಿ ನೀರು ಬಿಡುವ ಸಾಧ್ಯತೆ ಅರಿತು ಟಿಕೇಟ್‌ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಪ್ರಯಾಣ, ಪ್ರವಾಸ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಬಿ.ಜೆ.ಪಿ.ಯ ಸಿಂಪಥೈಸರ್‌ ಗಳಾಗಿ ಮಾಧ್ಯಮಗಳಲ್ಲಿ ಕೋಮುವಾದದ ರೋಗ ತುಂಬಿ ಸಂಘದ ಬಕೆಟ್‌ ಹಿಡಿದ ಲಾಭಕೋರ ಮತಾಂಧ ಬಳಗದ ಕುಟಿಲತೆ ಈಗ ಸ್ವಜಾತಿ,ಸ್ವಪರಿವಾರದ ನಾಯಕತ್ವ, ಮುಖಂಡತ್ವಕ್ಕೆ ಎರವಾಗಿರುವುದು ಸಾರ್ವಜನಿಕರ ವಿರೋಧಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *