ಸ್ವ ಕ್ಷೇತ್ರದಲ್ಲಿ ವಿರೋಧ ಎದುರಿಸುತ್ತಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ!

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಾನೂ ರಾಜಕೀಯ ಪ್ರಾರಂಭಿಸುತ್ತೇನೆ ಎಂದು ಶಿರಸಿಯಲ್ಲಿ ಪ್ರಕಟಿಸಿದ ಮಾರನೇ ದಿನವೇ ಸಿದ್ಧಾಪುರದಲ್ಲಿ ಬೇಡ್ಕಣಿಯಲ್ಲಿ ನಡೆದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಸಾರ್ವಜನಿಕರ ವಿರೋಧ ಎದುರಿಸಿದ್ದಾರೆ.

ಮೂರು ಬಾರಿ ಅಂಕೋಲಾ ಕ್ಷೇತ್ರ, ಮೂರು ಬಾರಿ ಶಿರಸಿ ಒಟ್ಟೂ ಆರು ಬಾರಿ ವಿಧಾನಸಭಾ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರು, ಸಚಿವರು, ವಿಧಾನಸಭಾ ಅಧ್ಯಕ್ಷರಾಗಿ ಹೆಸರು ಮಾಡಿದವರು. ಆದರೆ ಈ ಬಾರಿ ಅವರ ನಾಗಾಲೋಟಕ್ಕೆ ಕಮಲ ಪಡೆಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಸಿದ್ಧಾಪುರದ ಸ್ಥಳೀಯ ಬಿ.ಜೆ.ಪಿ. ಚುನಾಯಿತ ಪ್ರತಿನಿಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರ ನೇರ ವಿರೋಧ ಮತ್ತು ಸ್ವಪಕ್ಷ,ಮುಖಂಡರುಗಳ ವಿರೋಧದಿಂದ ವಿಚಲಿತರಾದ ವಿಧಾನಸಭಾ ಅಧ್ಯಕ್ಷರಿಗೆ ಬೇಡ್ಕಣಿಯಲ್ಲಿ ವ್ಯಕ್ತವಾದ ವಿರೋಧ ನಿರೀಕ್ಷಿತ ಎನ್ನಲಾಗುತ್ತಿದೆ.

ಪ್ರತಿವರ್ಷದ ಯುಗಾದಿ ಉತ್ಸವ, ಕಾರ್ಯಕ್ರಮಗಳಲ್ಲಿ ಅನಾಯಾಸವಾಗಿ ಸನಾತನ ವೈದಿಕತೆಯನ್ನು ತುರುಕಿ ರಾಜಕೀಯ ಲಾಭ ಪಡೆಯುತಿದ್ದ ಉತ್ತರ ಕನ್ನಡ ಸಂಸದ ಮತ್ತು ಶಿರಸಿ ಶಾಸಕರು ಈ ಬಾರಿ ಸಿದ್ಧಾಪುರದ ಯುಗಾದಿ ಉತ್ಸವದಲ್ಲಿ ಕೂಡಾ ವೇದಿಕೆ ಏರಲು ವಿರೋಧ ವ್ಯಕ್ತವಾಗಿದೆ.

ಬಿ.ಜೆ.ಪಿ. ಪ್ರೇರಿತ ವೈದಿಕ ಸಂಘಟನೆಗಳು, ಹಿಂದೂ ಹೆಸರಿನ ರಾಜಕೀಯ ಲಾಭಾಕಾಂಕ್ಷಿಗಳೇ ಮುಂದೆ ನಿಂತು ಪ್ರತಿವರ್ಷ ಸಿದ್ಧಾಪುರದಲ್ಲಿ ನಡೆಸುತಿದ್ದ ಯುಗಾದಿ ಉತ್ಸವದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆಯವರನ್ನು ಆಹ್ವಾನಿಸುವ ಬಗ್ಗೆ ಚರ್ಚೆಯಾಗಿ ಬಿ.ಜೆ.ಪಿ.ಯ ಹಿರಿಯ ನಾಯಕರೊಬ್ಬರು ಮತ್ತು ಕಾಗೇರಿಯವರ ಆಪ್ತ ಉದ್ಯಮಿಗಳ ನಡುವೆ ವಾಗ್ವಾದವಾಗಿ ಅಂತಿಮವಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಸೇರಿದಂತೆ ಯಾವುದೇ ರಾಜಕಾರಣಿಗಳು ಯುಗಾದಿ ಉತ್ಸವದ ವೇದಿಕೆಯ ವಿಶೇಶ ಆಹ್ವಾನಿತರಾಗುವುದು ಬೇಡ ಎಂದು ತೀರ್ಮಾನವಾಗಿ ಶಾಸಕರು ಸಾಮಾನ್ಯ ಆಹ್ವಾನಿತರಾಗುವಂತಾಗಿದೆ.

ಈ ಎಲ್ಲಾ ಬೆಳವಣಿಗಳ ಹಿನ್ನೆಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಚುನಾವಣೆ ಎದುರಿಸುವುದಿಲ್ಲ, ಸ್ಫರ್ಧಿಸುವುದಾದರೂ ಅನ್ಯ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ ಎನ್ನುವ ವದಂತಿಗಳಿಗೆ ಪುಷ್ಠಿ ದೊರೆತಿದೆ. ಆದರೆ ಈ ಬೆಳವಣಿಗಳ ಬಗ್ಗೆ ತುಟಿ ಬಿಚ್ಚದ ಕಾಗೇರಿ ಈ ಬಾರಿಯೂ ನಾನೇ ಶಿರಸಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಕಾಗೇರಿಯವರಿಗೆ ಶಿರಸಿ ಕ್ಷೇತ್ರದಲ್ಲಿ ವಿರೋಧ, ಅಪಸ್ವರಗಳೇ ಹೆಚ್ಚಾಗಿವೆ. ಈ ನಡುವೆ ಉಪೇಂದ್ರ ಪೈ ಆರ್ಭಟ ಕಾಂಗ್ರೆಸ್‌ ನವರಿಗಿಂತ ಹೆಚ್ಚು ಬಿ.ಜೆ.ಪಿ.ಯವರನ್ನು ಕಂಗೆಡಿಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಕಾಗೇರಿ ಈ ಬಾರಿ ಚುನಾವಣೆ ಘೋಷಣೆ ಮೊದಲೇ ಸ್ವಕ್ಷೇತ್ರದಲ್ಲಿ ವ್ಯಾಪಕ ವಿರೋಧ ಎದುರಿಸುತ್ತಿರುವುದು ದಿನದಿಂದ ದಿನಕ್ಕೆ ಸ್ಫಷ್ಟವಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *