ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ


ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ  ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್‌ ಎತ್ತರದಲ್ಲಿದೆ.


ಮಳೆಗಾಲದ ಪ್ರಾರಂಭದಿಂದ ಬೇಸಿಗೆ ಮುಗಿಯುವವರೆಗೆ ಎಲ್ಲಾ ಕಾಲಗಳಲ್ಲೂ ನೋಡಿ ಮೈಮರೆಯಬಹುದಾದ ಈ ಭೀಮನಗುಡ್ಡ ಸಿದ್ಧಾಪುರ ತಾಲೂಕಿನಿಂದ ನಾಲ್ವತ್ತು ಕಿಲೋ ಮೀಟರ್‌ ದೂರದ ನಿಲ್ಕುಂದ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ನೆರೆಯ ಶಿರಸಿ ತಾಲೂಕುಕೇಂದ್ರದಿಂದ ೩೦ ಕೀಲೋಮೀಟರ್‌ ದೂರದ ಈ ಭೀಮನಗುಡ್ಡ ಸಿದ್ಧಾಪುರ ಮತ್ತು ಕುಮಟಾ ತಾಲೂಕುಗಳ ಗಡಿಗಳಿಗೆ ಹೊಂದಿಕೊಂಡಿದೆ. ಹೆಗ್ಗರಣೆ ಶಿರಸಿ ರಸ್ತೆಇಂದ ಒಂದುಕಿಲೋಮೀಟರ್‌ ದೂರದ ಈ ಭೀಮನಗುಡ್ಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಮಳೆಗಾಲದ ನಂತರ ಇಲ್ಲಿಯ  ಪ್ರವಾಸ ಸುರಕ್ಷಿತ, ಅನುಕೂಲಕರವಾದರೂ ಮಲೆನಾಡ ಮಳೆಯ ಸುಬಗು ಕಾಣುವವರು ಮಳೆಯಲ್ಲೇ ಇಲ್ಲಿಗೆ ಬರುತ್ತಾರೆ. ಎತ್ತರದ ಭೀಮಣಗುಡ್ಡ ವೀಕ್ಷಣಾ ಕೇಂದ್ರದಿಂದ ಅಘನಾಶಿನಿ ನದಿ ಹರಿಯುವ ಪಶ್ಚಿಮಘಟ್ಟದ ಕಣಿವೆ ನೋಡಲು ಅದ್ಭುತ ಜಾಗದಂತಿರುವ ಈ ಭೀಮಣಗುಡ್ಡ ಮಂಜಿನಲ್ಲಿ ಮಲಗಿದಾಗ ಇದರ ಸೌಂದರ್ಯ ವರ್ಣಿಸಲಸಾಧ್ಯ ಊಟಿ,ಆಗುಂಬೆಯ ವಾತಾವರಣ ನೆನಪಿಸುವ ಇಲ್ಲಿಯ ಪ್ರಕೃತಿಯ ಸೊಬಗು ಈ ಯುವ ಜನರ ಆಯ್ಕೆಯಾಗಿ ಪ್ರಸಿದ್ಧವಾಗುತ್ತಿದೆ. ಅರಣ್ಯ ಇಲಾಖೆಯ ಕಣ್ಗಾವಲಿನ ರಕ್ಷಿತಾರಣ್ಯ ಪ್ರದೇಶದ ಈ ಭೀಮಣಗುಡ್ಡ ಏರಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅರಣ್ಯ ಇಲಾಖೆಯ ಪಾಸ್‌ ಪಡೆದು ನಿರ್ಬಂಧಗಳಿಗೊಳಪಟ್ಟು ವೀಕ್ಷಿಸಬೇಕಾದ ಈ ಪ್ರಕೃತಿಯ ಸೊಬಗನ್ನು ನೋಡಲು ಜನ ಸಾಗರದೋಪಾದಿಯಲ್ಲಿ ಬರುತ್ತಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ. ಪ್ರವಾಸಿಗರಿಗೆ ಅದರಷ್ಟವಿದ್ದರೆ ಈ ಪ್ರದೇಶದಲ್ಲಿ ವನ್ಯಮೃಗಗಳೂ ಕಾಣಿಸಿಕೊಳ್ಳಬಹುದು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *