


ಯುವಜನತೆ ಸ್ವಕೇಂದ್ರಿತ ಚಿಂತನೆಗಳಿಂದ ಹೊರಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಸಮಾಜದ ಆಗುಹೋಗುಗಳನ್ನು ಗಮನಿಸುತ್ತಿರಬೇಕು.ಇವುಗಳಿಗೆ ತಮ್ಮ ಮಿತಿಯಲ್ಲಿ ಸ್ಪಂದಿಸುತ್ತಿರಬೇಕು. ಕೇವಲ ಗಾಂಧಿಅಥವಾ ಲಾಲಬಹದ್ದೂರ ಶಾಸ್ತಿç ಜಯಂತಿಆಚರಿಸುವುದರಿಂದ, ಅವರಗುಣಗಾನ ಮಾಡುವುದರಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಸ್ವಚ್ಛತೆ, ಆರೋಗ್ಯ, ಮೂಢನಂಬಿಕೆ ನಿವಾರಣೆ, ಜಾತ್ಯತೀತ ತತ್ವಗಳ ಅನುಸರಣೆ ಮತ್ತು ಪ್ರಚಾರಇಂತಹ ಸಾಮಾಜಜಾಗೃತಿಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದೇ ನಾವು ಗಾಂಧಿಗೆಕೊಡುವ ನಿಜವಾದಗೌರವಎಂದುಸಮಾಜಸೇವಕರೂ, ಕಲಾವಿದರೂಆದ ಹಬೀಬ್.ಎ ಅಭಿಪ್ರಾಯಪಟ್ಟರು.

ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಕಾರ್ಯಕ್ರಮದಲ್ಲಿಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿಅವರು ಮಾತನಾಡುತ್ತಿದ್ದರು.ರಂಗಕರ್ಮಿ ಮ್ಯಾಥ್ಯೂ ಸುರಾನಿ ಮಾತನಾಡಿಗಾಂಧಿಯಎಲ್ಲಾ ತತ್ವಗಳನ್ನು ಎಲ್ಲರಿಗೂ ಪಾಲಿಸುವುದು ಕಷ್ಟವಾಗಬಹುದು. ಆದರೆ ಸರಳತೆ, ಅಹಿಂಸೆ, ಪ್ರಾಮಾಣಿಕತೆಗಳನ್ನು ಅಲವಡಿಸಿಕೊಳ್ಳುವುದು ನಮಗೆ ಕಷ್ಟವೇನೂ ಆಗುವುದಿಲ್ಲ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಕೈಗಾರಿಖಾರಸಾಯನಶಾಸ್ತç ವಿಭಾಗದಲ್ಲಿ ಪ್ರಥರ್ಯಾಂಕ್ ನೊಂದಿಗೆ ಮೂರುಚಿನ್ನದ ಪದಕಗಳನ್ನು ಪಡೆದ ಕು.ಅಂಕಿತ ಮತ್ತು ವಾಲಿಬಾಲ್ ಪಂದ್ಯದರಾಷ್ಟçಮಟ್ಟದ ಪಂದ್ಯಾವಳಿಗೆ ಕರ್ನಾಟಕತಂಡಕ್ಕೆಆಯ್ಕೆಯಾದ ಕು.ಸಮಿತ್ರನ್ನು ಸನ್ಮಾನಿಸಲಾಯಿತು.ನೀನಾಸಂ ರಂಗಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು.ಶಾಲಾವಿದ್ಯಾರ್ಥಿಗಳು ನೃತ್ಯ ಮತ್ತುಗಾಯನಕಾರ್ಯಕ್ರಮ ನಡೆಸಿಕೊಟ್ಟರು.
ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿಅಧ್ಯಕ್ಷರಾದಪ್ರಕಾಶ್ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಪ್ರತಿಮಾ, ಸಮಿತಿ ಸದಸ್ಯರಾದ ಸೌಮ್ಯ, ಶಾಹಿಯಾ ಬಾನು, ಜಲೀಲ್,ಗ್ರಾಮ ಪಂಚಾಯತಿಅಧ್ಯಕ್ಷರಾದಭಾರತಿ ಮೋಹನೇಶ್, ಸದಸ್ಯರಾದಇಂದಿರಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದಎಚ್.ಬಿ.ಪದ್ಮನಾಭ್, ಸಹಕಾರಿಧುರೀಣರಾದ ಪ್ರಹ್ಲಾದ್, ರಮೇಶ್,ಊರ ಪ್ರಮುಖರಾದ ಹೊನ್ನಾನಿ ದೇವರಾಜ್, ಇಮ್ರಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮುಖ್ಯೋಪಾಧ್ಯಾಯರಾದರಮೇಶ್ಸ್ವಾಗತಿಸಿದರು.ಹೊನ್ನಾನಿ ದೇವರಾಜ್ ನಿರೂಪಿಸಿದರು. ಶಿಕ್ಷಕರಾದ ಜಯಪ್ಪವಂದಿಸಿದರು.ಗ್ರಾಮದ ಮುಖಂಡರಾದ ಮುನೀರ್ ಸನ್ಮಾನಿತರಿಗೆ, ಬಹುಮಾನಿತ ಮಕ್ಕಳಿಗೆ ಅಪರೂಪದ ಹಣ್ಣಿನ ಗಿಡಗಳನ್ನು ಉಡುಗೋರೆಯಾಗಿ ನೀಡಿದರು.ಗ್ರಾಮದಯುವಕರುಗ್ರಾಮಸ್ಥರೆಲ್ಲರಿಗೆ ಮಧ್ಯಾಹ್ನದ ಸಾಮೂಹಿಕ ಊಟದ ವ್ಯವಸ್ಥೆ ಮಾಡಿದ್ದರು.
೫ನೇ ತರಗತಿಯಲ್ಲಿಆಯಿಷಾ ಫಾತಿಮಾ, ಮಾನ್ಯಕೆ.ಆರ್, ಆಕಾಶ ಪಿ,೧೦ನೇ ತರಗತಿಯಲ್ಲಿಪನ್ನಗಕೆ.ಯು ಮತ್ತು ಪ್ರಜ್ವಲ್ಕೆ.ಟಿ ೩೦ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
