ಕೃಷಿ ಸಂಸ್ಕೃತಿ ಒಂದು ಜೀವನ ವಿಧಾನ… ಅಲ್ಲಿ ಹಬ್ಬಗಳೇ ಪ್ರಧಾನ!

ಮಲೆನಾಡಿನ ಜನಜೀವನವೆಂದರೆ ಅದೊಂದು ಸಂಸ್ಕೃತಿ. ಕೃಷಿ,ವ್ಯವಸಾಯ ಮಾಡುವುದು ಬೇರೆ ಆದರೆ ವ್ಯವಸಾಯ ಸಂಸ್ಕೃತಿ ಅನುಸರಿಸುವುದಿದೆಯಲ್ಲ ಅದು ಒಂದು ಜೀವನ ಕ್ರಮ. ಇಂಡಿಯಾ ಬಹುತ್ವದ, ಬಹುಸಂಸ್ಕೃತಿಯ ತವರೂರು ಇಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬಂದ, ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದ ಜನ ಹೆಣ್ಣು ಮಾವನ ಮನೆಗೆ ಹೋಗುವಷ್ಟು ಸಹಜ ಆದರೆ ನಮ್ಮ ವಲಸೆಯಿಂದ ನಮ್ಮ ಭಾಷೆ,ಸಂಸ್ಕೃತಿ ಶಿಥಿಲಗೊಳ್ಳುವುದನ್ನು ಅಲ್ಲಗಳೆಯಲಾಗದು.

ಉತ್ತರ ಭಾರತದಿಂದ ವಲಸೆ ಬಂದವರು ನಮ್ಮ ಜನಜೀವನ, ಆಚರಣೆ,ರೂಢಿ-ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದ್ದಾರೆ. ಆದರೂ ನಮ್ಮ ಜನ ಸೈನಿಕರ ಹಬ್ಬವನ್ನು ಹನಿ ಹಬ್ಬ ಹುತ್ತರಿ ಹಬ್ಬವಾಗಿ ಆಚರಿಸುತ್ತಾರೆ. ದ್ರಾವಿಡ ಮೂಲದ ಎಲ್ಲರೂ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಗಣೇಶ ಚತುರ್ಥಿಯಲ್ಲಿ ಗೌರಿ ಪೂಜೆ ಮಾಡುವ ಜನ ಅಂತರರ್ಜಾತಿ ವಿವಾಹವಾಗಿ ಆದಿವಾಸಿಯೊಂದಿಗೆ ಬದುಕುತ್ತಿರುವ ಗೌರಿಯನ್ನು ಕರೆತಂದು ಪೂಜಿಸುತ್ತಾರೆ.!

ಬೌದ್ಧ ಧರ್ಮದ ಮೂಲ ನೆನಪಿಸಿಕೊಳ್ಳಲು ಸೀಗೆ ಹುಣ್ಣಿಮೆಯಲ್ಲಿ ಭೂಮಿ ಪೂಜೆ ಮಾಡುತ್ತಾರೆ. ನಮ್ಮ ಮಾರಿ-ಚೌಡಿ, ಬೀರಲು, ಭೂತ, ನಮ್ಮದೇ ಕುಟುಂಬದ ಮಹಾಸತಿ ಮಾಸ್ತಿಯಾಗಿ, ವೀರ ತ್ಯಾಗಿ ಕುಮಾರ ರಾಮ, ಬಾಹುಬಲಿ ನಮ್ಮಿಂದ ಪೂಜಿಸಲ್ಪಡುತ್ತಾರೆ. ಯಾಕೆಂದರೆ ಇದೊಂದು ಸಂಸ್ಕೃತಿ ಇಲ್ಲಿ ಕೃಷಿ ಕಾಯಕವೇ ಪ್ರಧಾನ ಉಳಿದಿದ್ದೆಲ್ಲಾ ನಗಣ್ಯ.

ಮಾಂಸಹಾರಿ ಶೂದ್ರರು ದೀಪಾವಳಿಯಲ್ಲಿ ಗೋ ಪೂಜೆ ಮಾಡುತ್ತಾರೆ. ಈ ಪೂಜೆ, ಆಚರಣೆ ರಾಜಕೀಯ ಸೋಂಕಿನಿಂದ ದೂರ. ನಾವೆಲ್ಲಾ ಚಿಕ್ಕವರಿರುವಾಗ ಬಲೀಂದ್ರನ ಬೂರೆ ನೀರು ಚುಮುಕಿಸಿ ಗೋವುಗಳನ್ನು ಊರು, ಕೇರಿ ಕೊಟ್ಟಿಗೆಯೊಳಕ್ಕೆ ಸ್ವಾಗತಿಸುತಿದ್ದೆವು. ಗೋವು ನಮ್ಮ ಸಹಚರ. ಗೋವು ಮಾನವರ ಮಾಂಸಕ್ಕೆ ಬಳಕೆಯಾಗಬಾರದೆಂದು ಆರ್ಯರು ಗೋವಿನಲ್ಲಿ ದೇವರುಗಳಿವೆ ಎಂದು ಸುಳ್ಳು ಹೇಳಿದರು. ಅದು ಚಪ್ಪಲಿ ಹಾಕಿ ನಾಗಬನದಲ್ಲಿ ತಿರುಗಬಾರದೆನ್ನುವಷ್ಟೇ ಶುದ್ಧ ಸುಳ್ಳು. ಅದರ ಹಿಂದೆ ಹಾವು ಪಾದದಡಿ ಸಿಗದಂತೆ ಮುನ್ನೆಚ್ಚರಿಕೆಯ ಜಾಗೃತಿಯೂ ಇರಬಹುದು.

ಇವೆಲ್ಲಾ ಆಚರಣೆಗಳನ್ನು ಜನಜೀವನದ ಭಾಗವಾಗಿ ಸಹಜವಾಗಿ ಸ್ವೀಕರಿಸಿದರೆ ಅದರಿಂದ ಅಪಾಯವಿಲ್ಲ ಆದರೆ ಎಲ್ಲದರಲ್ಲೂ ದೇವರು ಧರ್ಮ ಹುಡುಕಿ ರಾಜಕೀಯ ಮಾಡತೊಡಗಿದೆ ಅದು ನಮ್ಮ ಸಂಸ್ಕೃತಿಗಿಂತ ವಿಕೃತಿಯಾಗುವುದೇ ಹೆಚ್ಚು. ದೀಪಾವಳಿಯಲ್ಲಿ ಹೂವು, ಹೂವಿನಂಥ ಹೆಣ್ಣು ದೀಪಾವಳಿ ವಿಶೇಷಾಂಕದ ಮುಖಪುಟ ಅಲಂಕರಿಸುವುದು ರೂಢಿ, ಸಂಪ್ರದಾಯ, ಸಂಸ್ಕೃತಿ ಅಲ್ಲಿ ಕೇಸರಿಸ್ವಾಮಿ ಪ್ರತ್ಯಕ್ಷವಾಗುವುದು ವ್ಯಾಪಾರದ ವಿಕೃತಿ. ದೀಪಾವಳಿಯ ಸಡಗರದಲ್ಲಿ ಇವೆಲ್ಲಾ ನೆನಪಾದವು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *