ಕೃಷಿ ಸಂಸ್ಕೃತಿ ಒಂದು ಜೀವನ ವಿಧಾನ… ಅಲ್ಲಿ ಹಬ್ಬಗಳೇ ಪ್ರಧಾನ!

ಮಲೆನಾಡಿನ ಜನಜೀವನವೆಂದರೆ ಅದೊಂದು ಸಂಸ್ಕೃತಿ. ಕೃಷಿ,ವ್ಯವಸಾಯ ಮಾಡುವುದು ಬೇರೆ ಆದರೆ ವ್ಯವಸಾಯ ಸಂಸ್ಕೃತಿ ಅನುಸರಿಸುವುದಿದೆಯಲ್ಲ ಅದು ಒಂದು ಜೀವನ ಕ್ರಮ. ಇಂಡಿಯಾ ಬಹುತ್ವದ, ಬಹುಸಂಸ್ಕೃತಿಯ ತವರೂರು ಇಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬಂದ, ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದ ಜನ ಹೆಣ್ಣು ಮಾವನ ಮನೆಗೆ ಹೋಗುವಷ್ಟು ಸಹಜ ಆದರೆ ನಮ್ಮ ವಲಸೆಯಿಂದ ನಮ್ಮ ಭಾಷೆ,ಸಂಸ್ಕೃತಿ ಶಿಥಿಲಗೊಳ್ಳುವುದನ್ನು ಅಲ್ಲಗಳೆಯಲಾಗದು.

ಉತ್ತರ ಭಾರತದಿಂದ ವಲಸೆ ಬಂದವರು ನಮ್ಮ ಜನಜೀವನ, ಆಚರಣೆ,ರೂಢಿ-ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದ್ದಾರೆ. ಆದರೂ ನಮ್ಮ ಜನ ಸೈನಿಕರ ಹಬ್ಬವನ್ನು ಹನಿ ಹಬ್ಬ ಹುತ್ತರಿ ಹಬ್ಬವಾಗಿ ಆಚರಿಸುತ್ತಾರೆ. ದ್ರಾವಿಡ ಮೂಲದ ಎಲ್ಲರೂ ಬಲಿಚಕ್ರವರ್ತಿಯನ್ನು ಆರಾಧಿಸುತ್ತಾರೆ. ಗಣೇಶ ಚತುರ್ಥಿಯಲ್ಲಿ ಗೌರಿ ಪೂಜೆ ಮಾಡುವ ಜನ ಅಂತರರ್ಜಾತಿ ವಿವಾಹವಾಗಿ ಆದಿವಾಸಿಯೊಂದಿಗೆ ಬದುಕುತ್ತಿರುವ ಗೌರಿಯನ್ನು ಕರೆತಂದು ಪೂಜಿಸುತ್ತಾರೆ.!

ಬೌದ್ಧ ಧರ್ಮದ ಮೂಲ ನೆನಪಿಸಿಕೊಳ್ಳಲು ಸೀಗೆ ಹುಣ್ಣಿಮೆಯಲ್ಲಿ ಭೂಮಿ ಪೂಜೆ ಮಾಡುತ್ತಾರೆ. ನಮ್ಮ ಮಾರಿ-ಚೌಡಿ, ಬೀರಲು, ಭೂತ, ನಮ್ಮದೇ ಕುಟುಂಬದ ಮಹಾಸತಿ ಮಾಸ್ತಿಯಾಗಿ, ವೀರ ತ್ಯಾಗಿ ಕುಮಾರ ರಾಮ, ಬಾಹುಬಲಿ ನಮ್ಮಿಂದ ಪೂಜಿಸಲ್ಪಡುತ್ತಾರೆ. ಯಾಕೆಂದರೆ ಇದೊಂದು ಸಂಸ್ಕೃತಿ ಇಲ್ಲಿ ಕೃಷಿ ಕಾಯಕವೇ ಪ್ರಧಾನ ಉಳಿದಿದ್ದೆಲ್ಲಾ ನಗಣ್ಯ.

ಮಾಂಸಹಾರಿ ಶೂದ್ರರು ದೀಪಾವಳಿಯಲ್ಲಿ ಗೋ ಪೂಜೆ ಮಾಡುತ್ತಾರೆ. ಈ ಪೂಜೆ, ಆಚರಣೆ ರಾಜಕೀಯ ಸೋಂಕಿನಿಂದ ದೂರ. ನಾವೆಲ್ಲಾ ಚಿಕ್ಕವರಿರುವಾಗ ಬಲೀಂದ್ರನ ಬೂರೆ ನೀರು ಚುಮುಕಿಸಿ ಗೋವುಗಳನ್ನು ಊರು, ಕೇರಿ ಕೊಟ್ಟಿಗೆಯೊಳಕ್ಕೆ ಸ್ವಾಗತಿಸುತಿದ್ದೆವು. ಗೋವು ನಮ್ಮ ಸಹಚರ. ಗೋವು ಮಾನವರ ಮಾಂಸಕ್ಕೆ ಬಳಕೆಯಾಗಬಾರದೆಂದು ಆರ್ಯರು ಗೋವಿನಲ್ಲಿ ದೇವರುಗಳಿವೆ ಎಂದು ಸುಳ್ಳು ಹೇಳಿದರು. ಅದು ಚಪ್ಪಲಿ ಹಾಕಿ ನಾಗಬನದಲ್ಲಿ ತಿರುಗಬಾರದೆನ್ನುವಷ್ಟೇ ಶುದ್ಧ ಸುಳ್ಳು. ಅದರ ಹಿಂದೆ ಹಾವು ಪಾದದಡಿ ಸಿಗದಂತೆ ಮುನ್ನೆಚ್ಚರಿಕೆಯ ಜಾಗೃತಿಯೂ ಇರಬಹುದು.

ಇವೆಲ್ಲಾ ಆಚರಣೆಗಳನ್ನು ಜನಜೀವನದ ಭಾಗವಾಗಿ ಸಹಜವಾಗಿ ಸ್ವೀಕರಿಸಿದರೆ ಅದರಿಂದ ಅಪಾಯವಿಲ್ಲ ಆದರೆ ಎಲ್ಲದರಲ್ಲೂ ದೇವರು ಧರ್ಮ ಹುಡುಕಿ ರಾಜಕೀಯ ಮಾಡತೊಡಗಿದೆ ಅದು ನಮ್ಮ ಸಂಸ್ಕೃತಿಗಿಂತ ವಿಕೃತಿಯಾಗುವುದೇ ಹೆಚ್ಚು. ದೀಪಾವಳಿಯಲ್ಲಿ ಹೂವು, ಹೂವಿನಂಥ ಹೆಣ್ಣು ದೀಪಾವಳಿ ವಿಶೇಷಾಂಕದ ಮುಖಪುಟ ಅಲಂಕರಿಸುವುದು ರೂಢಿ, ಸಂಪ್ರದಾಯ, ಸಂಸ್ಕೃತಿ ಅಲ್ಲಿ ಕೇಸರಿಸ್ವಾಮಿ ಪ್ರತ್ಯಕ್ಷವಾಗುವುದು ವ್ಯಾಪಾರದ ವಿಕೃತಿ. ದೀಪಾವಳಿಯ ಸಡಗರದಲ್ಲಿ ಇವೆಲ್ಲಾ ನೆನಪಾದವು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *